ಬೆಂಗಳೂರು: ರಾಜ್ಯ ಬಿಜೆಪಿ ತಂಡಕ್ಕೆ ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮುಂದುವರಿದಿದ್ದು, ರಾಜ್ಯ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
![](https://pratidhvani.com/wp-content/uploads/2024/01/WhatsApp-Image-2024-01-16-at-21.45.35-693x1024.webp)
ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಶಿಲ್ಪಾ ಜಿ.ಸುವರ್ಣ ಹಾಗೂ ಡಾ. ಶೋಭಾ ಸಂಗನಗೌಡ, ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಪೂಂಜಾ ಹಾಗೂ ಸಂದೀಪ್ ರವಿ, ಎಸ್ಟಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಕೃಷ್ಣಾ ನಾಯಕ್ ಹಾಗೂ ಬಸವರಾಜ ಹುಂದ್ರಿ, ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಕಾರಜೋಳ ಹಾಗೂ ಮಹೇಂದ್ರ ಕೌತಾಳ, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಅವ್ವಣ್ಣ ಮ್ಯಾಕೇರಿ ಹಾಗೂ ಸೋಮಶೇಖರ್, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಡಾ.ಬಿ.ಸಿ. ನವೀನ್ಕುಮಾರ್ ಹಾಗೂ ಕಲ್ಮುರುಡಪ್ಪ ಹಾಗೂ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಇಂದ್ರಕುಮಾರ್ ಹಾಗೂ ರೌಫುದ್ದೀನ್ ಕಛೇರಿವಾಲೆ ನೇಮಕಗೊಂಡಿದ್ದಾರೆ.