ಕೇಂದ್ರ ಸರ್ಕಾರದ ಬಾಕಿ ಅನುದಾನಗಳ ಬಿಡುಗಡೆ ಕುರಿತಾಗಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಶೀಘ್ರವೇ ಭೇಟಿಯಾಗುತ್ತೇನೆ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯದಿಂದ ಜಿಎಸ್ಟಿ ಸಂಗ್ರಹಿಸಿದೆ ಆದರೂ ಸಕಾಲಕ್ಕೆ ಅನುದಾನಗಳನ್ನು ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಡಿಸೆಂಬರ್ 18 ರಿಂದ 20 ನೇ ತಾರೀಖಿನವರೆಗೆ ಮಧ್ಯದಲ್ಲಿ ಯಾವುದಾದರೂ ಒಂದು ದಿನ ತಮ್ಮ ಭೇಟಿಗೆ ಅವಕಾಶ ನೀಡುವಂತೆ ಪ್ರಧಾನಿಗೆ ಕೋರಿದ್ದೇನೆ. ಪಕ್ಷದ ಕೆಲ ಸಂಸದರೊಂದಿಗೆ ತೆರಳಿ ಅವರೊಂದಿಗೆ ಬಾಕಿ ಉಳಿಸಿಕೊಂಡಿರುವ ಅನುದಾನದ ಬಗ್ಗೆ ಚರ್ಚಿಸುವೆ ಅಂತ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ರು.