ನಟ ಸೋನು ಸೂದ್ ಗೆ ಸಂಬಂಧಿಸಿದ ಕಛೇರಿಗಳಲ್ಲಿ ಶೋಧ ಕಾರ್ಯ ನಡೆಸಿದ ಒಂದು ದಿನದ ನಂತರ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮುಂಬೈನ ಜುಹುವಿನಲ್ಲಿರುವ ಅವರ ಮನೆ ಮೇಲೆ ಸೆಪ್ಟೆಂಬರ್ 16, ಗುರುವಾರದಂದು ದಾಳಿ ನಡೆಸಿದ್ದಾರೆ.
ಲಕ್ನೋ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದಿಗೆ ನಡೆಸಿದ ಆಸ್ತಿ ಒಪ್ಪಂದದ ತನಿಖೆಗಾಗಿ ದಾಳಿ ನಡೆದಿರಬಹುದು ಎಂದು ವರದಿಯಾಗಿದೆ. ಸೋನು ಸೂದ್ ಮನೆಯಲ್ಲಿ ನಡೆಸುತ್ತಿರುವ ತನಿಖೆಯು, ತೆರಿಗೆ ವಂಚನೆಯ ಆರೋಪಗಳನ್ನು ಆಧರಿಸಿ ಮತ್ತು ಆಸ್ತಿ ಸಂಬಂಧಿತ ವ್ಯವಹಾರ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಐಟಿ ದಾಳಿಯು (ಅಧಿಕಾರಿಗಳು ಹೇಳುವ ಪ್ರಕಾರ ದಾಖಲೆ ಪರಿಶೀಲನೆ) 2020ರ ಮಾರ್ಚ್ ಲಾಕ್ಡೌನ್ ಸಮಯದಲ್ಲಿ ಹಲವಾರು ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಅವರಿಗೆ “Messiah Of Migrants” ಎಂಬ ಬಿರುದನ್ನು ನೀಡಲಾಗಿತ್ತು. 2020ರ ಲಾಕ್ಡೌನ್ ಸಮಯದಲ್ಲಿ ದೇಶದ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ ವಲಸಿಗರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸಲು ಅವರು ಬಸ್ ಮತ್ತು ವಿಮಾನಗಳನ್ನು ಕಾಯ್ದಿರಿಸಿದ್ದರು.
ಈ ದಾಳಿಯು ದೆಹಲಿ ಸರ್ಕಾರವು ಸೋನು ಸೂದ್ರವರನ್ನು ಶಾಲಾ ವಿದ್ಯಾರ್ಥಿಗಳಿಗಾಗಿ “ದೇಶ್ ಕಾ ಮೆಂಟರ್ಸ್” ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದ ಸೋನು ಸೂದ್, ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಬಹುದೆಂಬ ಉಹಾಪೋಹಗಳು ಎದ್ದಿದವು ಆದರೆ, ನಟ ಸೋನು ಸೂದ್ ಈ ಎಲ್ಲಾ ಉಹಾಪೋಹಗಳನ್ನು ನಿರಾಕರಿಸಿದರು.
ಸೂದ್ ಅವರು ಕೇವಲ ವಲಸೆ ಕಾರ್ಮಿಕರ ಸಹಾಯಕ್ಕೆ ಸೀಮಿತವಾಗಿರಲಿಲ್ಲ ಅವರನ್ನು, ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಕ್ಕೆ ಸಂಪರ್ಕಿಸಿದವರೆಲ್ಲರಿಗು ಅವರು ಸಹಾಯವನ್ನ ಮಾಡಿದರು. ಭವಿಷ್ಯದಲ್ಲಿ ಹೆಚ್ಚಿನ ಜನರನ್ನು ತಲುಪಲು ಅವರು ಇತ್ತೀಚಿಗೆ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ತಾವು ಮಾಡಿದ ಸೇವೆಗಳಿಗೆ ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರದ ಜನರಿಂದ ಅವರಿಗೆ ಪ್ರಶಂಸೆ ವ್ಯಕ್ತವಾಗಿದ್ದವು. ಆದರೆ, ತಮ್ಮ ಕೆಲಸ ರಾಜಕೀಯದೊಂದಿಗೆ ಬೆಸೆದುಕೊಂಡಿಲ್ಲ ಎಂದು ಸೋನು ಸೂದ್ ಸಮರ್ಥಿಸಿಕೊಂಡಿದ್ದರು.
ಏತನ್ಮಧ್ಯೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆಯ ಜೊತೆಗೆ ಸರ್ಕಾರಿ ಸಂಸ್ಥೆಗಳಾದ ಸಿಬಿಐ, ಎನ್ಐಎ ಮತ್ತು ಇಡಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೆ ಎಂಬ ಅಪಖ್ಯಾತಿ ಗಳಿಸಿದೆ.