ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಜೈಲಲ್ಲಿದ್ದಾರೆ. ಇತ್ತೀಚೆಗೆ ಜಾಮೀನು ಕೋರಿದ್ದರು. ಆದರೆ, ವಿಚಾರಣೆ ಮುಗಿಯುವ ತನಕ ಜಾಮೀನು ಇಲ್ಲ ಎಂದು ಕೋರ್ಟ್ ತೀರ್ಪು ಕೊಟ್ಟಿತು. ಹೆಚ್ಚು ಕಮ್ಮಿ ಒಂದು ವರ್ಷ ಜೈಲು ವಾಸ ಗತಿ.

ಒಂದು ವೇಳೆ ಒಂದು ವರ್ಷದ ಒಳಗೆ ವಿಚಾರಣೆ ನಡೆಸದಿದ್ದರೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಅದೆಲ್ಲಾ ಇರಲಿ, ಇದೀಗ ದರ್ಶನ್ ಜಾಮೀನು ಸಿಗದಿದ್ದರಿಂದ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಜೈಲು ಆಡಳಿತ ವಾರಕ್ಕೆ ಕೊಡುವ ಮೂರು ಪುಸ್ತಕಗಳನ್ನು ಓದುವುದರತ್ತ ತಮ್ಮ ಚಿತ್ತ ಹರಿಸಿದ್ದಾರೆ. ಈ ಮೂಲಕ ದಿನಗಳನ್ನು ಕಳೆಯುತ್ತಿದ್ದಾರೆ. ಅತ್ತ ಪವಿತ್ರಾಗೌಡ ಕೂಡ ತಮ್ಮ ಆತ್ಮ ಚರಿತ್ರೆ ಬರೆಯುತ್ತಿದ್ದಾರೆ ಎನ್ನಲಾಗಿದೆ.

ಇದರಿಂದ ಜೈಲಿನಲ್ಲಿರುವ ಇವರಿಬ್ಬರ ಜೈಲು ದಿನಚರಿ ಸಂಪೂರ್ಣ ವಿಭಿನ್ನವಾಗಿದೆ. ಅತ್ತ ದರ್ಶನ್ ಬೇಸರಗೊಂಡು ಯಾರ ಜೊತೆಗೂ ಮಾತಾಡುತ್ತಿಲ್ಲ. ಇನ್ನು ಪವಿತ್ರಾ ಗೌಡ ಅವರು ಪೆನ್ನು, ಹಾಳೆ ಹಿಡಿದು ಗೀಚಲು ಶುರುಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಪವಿತ್ರಾಗೌಡ ಜೈಲಿನಲ್ಲಿ ಬರೆಯಲು ಬಿಳಿ ಹಾಳೆ ಮತ್ತು ಪೆನ್ಸಿಲ್ ತಮ್ಮ ಕುರಿತು ಬರೆಯಲು ಶುರುಮಾಡಿದ್ದಾರೆ ಎನ್ನಲಾಗಿದೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು ಹಾಗೂ ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಜೈಲಿನಲ್ಲಿ ನಡೆದ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬರದೇ ಜೈಲು ಕೋಣೆಯಲ್ಲಿ ಬರೆಯುವುದರಲ್ಲೇ ಮೌನವಾಗಿ ಕಾಲ ಕಳೆದಿದ್ದಾರೆ ಎಂದು ಹೇಳಲಾಗಿದೆ.







