• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಷಾನಿಲದ ನಡುವೆ ಕನಸು ಕಟ್ಟಿಕೊಳ್ಳುವ ಒಂದು ಜಗತ್ತು

ನಾ ದಿವಾಕರ by ನಾ ದಿವಾಕರ
October 12, 2023
in Top Story, ಅಂಕಣ, ಅಭಿಮತ
0
ವಿಷಾನಿಲದ ನಡುವೆ ಕನಸು ಕಟ್ಟಿಕೊಳ್ಳುವ ಒಂದು ಜಗತ್ತು
Share on WhatsAppShare on FacebookShare on Telegram

ಅತ್ತಿಬೆಲೆಯ ಪಟಾಕಿ ದುರಂತದ ಮೂಲ ಇರುವುದು ಶಿವಕಾಶಿಯ ಮಾರುಕಟ್ಟೆಯ ಜಗುಲಿಯಲ್ಲಿ

ADVERTISEMENT

ನಾ ದಿವಾಕರ ಅವರ ಬರಹ- ಭಾಗ – 2

ಅಗ್ಗದ ಕೂಲಿ ಲಾಭದ ಮಾರುಕಟ್ಟೆ

ತಮ್ಮ ಕಠಿಣ ದುಡಿಮೆಗೆ 290 ರೂಗಳಿಂದ 500-570 ರೂಗಳವರೆಗೆ ದಿನಗೂಲಿ ಪಡೆಯುವ ಇಲ್ಲಿನ ಕಾರ್ಮಿಕರು ವರ್ಷಕ್ಕೆ ಶೇ 20 ರಿಂದ 27ರಷ್ಟು ಬೋನಸ್‌ ಮತು ಭವಿಷ್ಯನಿಧಿ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಇದು ಅನ್ವಯವಾಗುವುದು ಪರವಾನಗಿ ಹೊಂದಿದ ಉದ್ಯಮಗಳಿಗೆ ಮತ್ತು ಸಂಘಟಿತ ಕಾರ್ಮಿಕರು ಇರುವಲ್ಲಿ ಮಾತ್ರ. ಶೇ 55ರಷ್ಟು ದುಡಿಮೆಯಲ್ಲಿ ಮಹಿಳೆಯರೇ ಕಂಡುಬರುತ್ತಾರೆ. ಅನೇಕ ಉದ್ದಿಮೆಗಳಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕೂಲಿಯ ದರ ಹೆಚ್ಚಿಸಲಾಗಿಲ್ಲ ಎಂಬ ಆರೋಪಗಳೂ ಇವೆ. ಪರವಾನಗಿ ಪಡೆ ಕಾರ್ಖಾನೆಗಳಲ್ಲಿ ಕಾನೂನು ನಿಬಂಧನೆಗಳು ಮತ್ತು ನಿರ್ಬಂಧಗಳು ಇರುವುದರಿಂದ ಅಲ್ಲಿ ದುಡಿಯುವ ಕಾರ್ಮಿಕರು ಕೊಂಚಮಟ್ಟಿಗೆ ಸುರಕ್ಷಿತ ವಲಯದಲ್ಲಿರುತ್ತಾರೆ. ಆದರೆ ಪರವಾನಗಿ ಇಲ್ಲದ ಅನಧಿಕೃತ ಮಳಿಗೆ ಮತ್ತು ಕಾರ್ಖಾನೆಗಳಲ್ಲಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕಳೆದ ಮೂರು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಅವಘಡಗಳು ಸಂಭವಿಸಿವೆ.

ಅಷ್ಟೇ ಅಲ್ಲದೆ ಕೆಲವು ಮನೆಗಳಲ್ಲೂ ಯಾವುದೇ ಅನುಮತಿ ಪಡೆಯದೆ ಪಟಾಕಿ ತಯಾರಿಸಲಾಗುತ್ತದೆ. ಅಕ್ರಮ ಘಟಕಗಳು ಮೂಲ ಪರವಾನಗಿ ಹೊಂದಿರುವವರೊಡನೆ ಒಳಒಪ್ಪಂದ ಮಾಡಿಕೊಂಡು ತಯಾರಿಕೆಯಲ್ಲಿ ತೊಡಗಿರುತ್ತಾರೆ. ತಮಿಳುನಾಡಿನ ತಾಯಲ್‌ಪಟ್ಟಿ ಮುಂತಾದ ಹಳ್ಳಿಗಳಲ್ಲಿ ಮನೆಯಲ್ಲೇ ಪಟಾಕಿ ತಯಾರಿಸುವುದು ವ್ಯಾಪಕವಾಗಿದ್ದು, ತಮ್ಮ ಅಪಾಯಗಳ ಅರಿವಿದ್ದರೂ ಕಾರ್ಮಿಕರು ಇಲ್ಲಿ ಕೂಲಿಗಾಗಿ ದುಡಿಯುತ್ತಾರೆ. ಕಳೆದ ಫೆಬ್ರವರಿಯಲ್ಲಿ ಅಚಂಕುಲಂ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಮೃತರ ಪೈಕಿ ಗರ್ಭಿಣಿ ಮಹಿಳೆಯೂ ಇದ್ದುದು ಇಲ್ಲಿನ ಕರಾಳ ಸನ್ನಿವೇಶವನ್ನು ಪರಿಚಯಿಸುತ್ತದೆ.

ಈ ಅಕ್ರಮ ಪಟಾಕಿ ಘಟಕಗಳು ಕೆಲವು ವ್ಯಾಪಾರಿಗಳಿಗೆ ಲಾಭದಾಯಕ ಮಾರುಕಟ್ಟೆ ಒದಗಿಸಿದರೆ ಅಪಾಯಗಳನ್ನೂ ಲೆಕ್ಕಿಸದ ಅಮಾಯಕ ಶ್ರಮಿಕರಿಗೆ ದುಡಿಮೆಯ ಮಾರ್ಗವಾಗಿ ಪರಿಣಮಿಸುತ್ತದೆ. ಗುತ್ತಿಗೆ, ಉಪ ಗುತ್ತಿಗೆ, ಭೋಗ್ಯ ಹೀಗೆ ಹಲವು ವಿಧಾನಗಳ ಮೂಲಕ ತಯಾರಿಕೆಯಲ್ಲಿ ತೊಡಗುವ ಈ ಘಟಕಗಳು ಮೂಲ ಉದ್ಯಮಿಗಳಿಗೆ ಅಪಾರ ಲಾಭದಾಯಕವಾಗಿರುತ್ತದೆ. ಇಲ್ಲಿ ಕಾಣಬಹುದಾದ ಮತ್ತೊಂದು ವಿಚಿತ್ರ ಸನ್ನಿವೇಶ ಎಂದರೆ ಅನೇಕ ಕಾರ್ಮಿಕರು ಭವಿಷ್ಯನಿಧಿ, ಇಎಸ್‌ಐ ಸೌಲಭ್ಯಗಳನ್ನೂ ಕಳೆದುಕೊಂಡು, ಒಂದೇ ಸಮಯದಲ್ಲಿ ಹಲವು ಪಟಾಕಿ ಘಟಕಗಳಲ್ಲಿ ದುಡಿಮೆ ಮಾಡುವ ಮೂಲಕ ಹೆಚ್ಚಿನ ಆದಾಯಕ್ಕಾಗಿ ಪರದಾಡುತ್ತಾರೆ. ಈ ಸಾಮಾಜಿಕ-ಆರ್ಥಿಕ ಆಯಾಮವನ್ನು ಸೂಕ್ಷ್ಮವಾಗಿ ಪರಿಶೋಧಿಸಬೇಕಿದೆ. ಶಿವಕಾಶಿಗೆ 70 ಕಿಲೋಮೀಟರ್‌ ದೂರದಿಂದ ನೌಕರಿಗಾಗಿ ದಿನವೂ ಓಡಾಡುವ ಹಲವು ಕುಟುಂಬಗಳನ್ನು ಕಾಣಬಹುದು. ಬಹುತೇಕ ಕಾರ್ಮಿಕರು ವೃದ್ಧಾಪ್ಯದವರೆಗೂ ಕುಟುಂಬ ಸಮೇತರಾಗಿ ಈ ಕಾರ್ಖಾನೆಗಳಲ್ಲೇ ಬದುಕು ಸವೆಸುತ್ತಾರೆ. ಕೆಲವರೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಂದಿನ ಪೀಳಿಗೆಗೆ ಹೊಸ ದಾರಿ ತೋರುವ ಶಕ್ತಿ ಪಡೆದಿದ್ದಾರೆ.

ಪಟಾಕಿ ಉದ್ಯಮದ ಈ ಕರಾಳ ಜಗತ್ತಿನಲ್ಲಿ ತಮ್ಮ ಜೀವನವನ್ನೇ ಒತ್ತೆ ಇಟ್ಟು ದುಡಿಯುವ ಲಕ್ಷಾಂತರ ಕಾರ್ಮಿಕರ ಬಗ್ಗೆ ಯೋಚಿಸುವಾಗ, ಹಿತವಲಯದ ಅಥವಾ ಉಳ್ಳವರ ವಾರ್ಷಿಕ ಆಚರಣೆ-ಕಾಲಿಕ ಮೋಜು ಮಸ್ತಿಗೆ, ಸಂಭ್ರಮ ವಿಜೃಂಭಣೆಗೆ ಬಲಿಯಾಗುತ್ತಿರುವ ಒಂದು ಇಡೀ ತಲೆಮಾರು ನಮ್ಮ ಮುಂದೆ ಕಾಣಬೇಕಲ್ಲವೇ ? ಅತ್ತಿಬೆಲೆ ಘಟನೆಯ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈವರೆಗೂ ಯಾವುದೇ ಸರ್ಕಾರಗಳು ಕೈಗೊಳ್ಳದ ಕೆಲವು ಕ್ರಮಗಳಿಗೆ ಮುಂದಾಗಿರುವುದು ಸ್ವಾಗತಾರ್ಹ. ರಾಜಕೀಯ ಸಮಾವೇಶ, ಮದುವೆ ಇತ್ಯಾದಿ  ಸಂದರ್ಭಗಳಲ್ಲಿ, ಮೆರವಣಿಗೆಗಳಲ್ಲಿ ಪಟಾಕಿ ನಿಷೇಧಿಸಿರುವುದು ಸ್ತುತ್ಯಾರ್ಹ ಕ್ರಮ. ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವವರು ಯಾರು ಎಂಬುದೇ ಪ್ರಶ್ನೆ. ಪಟಾಕಿ ಉದ್ಯಮ ಅತ್ಯಂತ ಲಾಭದಾಯಕವಾಗಿರುವುದಕ್ಕೆ ಕಾರಣ ಕಡಿಮೆ ಕೂಲಿಯಲ್ಲಿ ದುಡಿಯುವ ಶ್ರಮಿಕರು ಹಾಗೂ ಅತ್ಯಂತ ಕಡಿಮೆ ಮೂಲ ಬಂಡವಾಳದೊಂದಿಗೆ ತಯಾರಿಕೆಯ ಸಾಧ್ಯತೆ. ಈ ಎರಡೂ ಪ್ರಕ್ರಿಯೆಗಳಿಗೆ ಪೂರಕವಾಗಿ ಅಧಿಕಾರಶಾಹಿಗಳು ಅಕ್ರಮ ವಹಿವಾಟುಗಳಿಗೆ ನೆರವಾಗುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಎರಡೂ ರಾಜ್ಯಗಳಲ್ಲಿನ ಅಧಿಕಾರಶಾಹಿಯ ಭ್ರಷ್ಟಾಚಾರವನ್ನು ನಿಗ್ರಹಿಸದಿದ್ದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ.

ಮಾಲಿನ್ಯರಹಿತ ಪರಿಸರದ ಕಡೆಗೆ

ಕಳೆದ ಹತ್ತು ವರ್ಷಗಳಲ್ಲಿ ಶಾಲಾ ಮಕ್ಕಳೂ ಸಹ ಪಟಾಕಿಯನ್ನು ವರ್ಜಿಸಲು ನಿರ್ಧರಿಸುತ್ತಿರುವ ಒಂದು ಆಶಾದಾಯಕ ಬೆಳವಣಿಗೆಯೊಂದಿಗೆ ಸಾರ್ವಜನಿಕ ಸಂಸ್ಥೆಗಳು, ಸಂಘಟನೆಗಳು ಸಹ ರಸ್ತೆಗಳಲ್ಲಿ, ಜನನಿಬಿಡ ಸ್ಥಳಗಳಲ್ಲಿ ತಮ್ಮ ನಾಯಕರನ್ನು, ದೇವರುಗಳನ್ನು ತೃಪ್ತಿಪಡಿಸಲು ಪಟಾಕಿ ಸಿಡಿಸುವ ಧೋರಣೆಯನ್ನು ವರ್ಜಿಸಬೇಕು. ಮನೆಗಳಲ್ಲೂ ಸಹ ಪೋಷಕರು ತಮ್ಮ ಅಂತಸ್ತು ತೋರಿಸಿಕೊಳ್ಳಲು ಅತಿ ಹೆಚ್ಚಿನ ಪಟಾಕಿ ಸಿಡಿಸುವ ಪ್ರವೃತ್ತಿಯಿಂದ ಹೊರಬರಬೇಕು. ಇದರಿಂದ ಹಾನಿಯಾಗುವುದು ಮಕ್ಕಳ ಆರೋಗ್ಯ ಮತ್ತು ಪರಿಸರ ಮಾತ್ರ. ಪಟಾಕಿ ಇಲ್ಲದೆಯೂ ದೀಪಾವಳಿ ಸಾಧ್ಯ ಎಂಬ ಸಾಮಾನ್ಯ ಅರಿವು ಜನರಲ್ಲಿ ಮೂಡಬೇಕು. ಪಟಾಕಿಯ ತಯಾರಿಕೆಯನ್ನೇ ಸಂಪೂರ್ಣ ನಿಷೇಧಿಸುವುದರಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂಬ ಆತಂಕದ ನಡುವೆಯೇ ಈ ವಿಷಾನಿಲದ ಪ್ರಸರಣವನ್ನು ಹೇಗೆ ತಡೆಗಟ್ಟುವುದು ಎಂದು ಸರ್ಕಾರ ಮಾತ್ರ ಅಲ್ಲದೆ ನಾಗರಿಕರೂ ಯೋಚಿಸಬೇಕಿದೆ. ಹಸಿರು ಪಟಾಕಿ ಒಂದು ಉತ್ತಮ ಪರ್ಯಾಯ ಎನ್ನಲಾಗುತ್ತದೆ.

ಅತ್ತಿಬೆಲೆಯ ಘಟನೆಯತ್ತ ನೋಡಿದಾಗ ಅಲ್ಲಿ ಮೃತಪಟ್ಟಿರುವ ಹತ್ತು ವಿದ್ಯಾರ್ಥಿಗಳು ನಮ್ಮ ಆರ್ಥಿಕತೆಯಲ್ಲಿ ನವ ಉದಾರವಾದ ಸೃಷ್ಟಿಸಿರುವ ತಲ್ಲಣಗಳ ದುರಂತ ಸಂಕೇತವಾಗಿ ಕಾಣುತ್ತಾರೆ. 600 ರೂಗಳ ದಿನಗೂಲಿಗಾಗಿ ಅನ್ಯ ರಾಜ್ಯಕ್ಕೆ ವಲಸೆ ಬಂದು ಅಪಾಯಕಾರಿ ದುಡಿಮೆಯನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರೆ ಆ ವಿದ್ಯಾರ್ಥಿಗಳ ಕೌಟುಂಬಿಕ ಆದಾಯ ಜೀವನೋಪಾಯಕ್ಕೆ ಪೂರಕವಾಗಿಲ್ಲ ಎಂದೇ ಅರ್ಥಮಾಡಿಕೊಳ್ಳಬೇಕಿದೆ. ಈ ಮಡಿದ ವಿದ್ಯಾರ್ಥಿಗಳು ಒಮ್ಮೆಲೆ ಜೀವತ್ಯಾಗ ಮಾಡಿದ್ದಾರೆ. ಆದರೆ ಶಿವಕಾಶಿಯ ಪಟಾಕಿ ಕಾರ್ಖಾನೆಗಳಲ್ಲಿ ಹಂತಹಂತವಾಗಿ, ನಿಧಾನವಾಗಿ ಜೀವ ತೆರುತ್ತಿರುವ ಲಕ್ಷಾಂತರ ಶ್ರಮಿಕರು ನಮಗೆ ಕಾಣುತ್ತಾರೆ. ಈ ಶ್ರಮಜೀವಿಗಳ ಬದುಕು, ಬವಣೆ, ಜೀವನ, ಜೀವನೋಪಾಯ ಹಾಗೂ ಘನತೆಯ ಬಾಳ್ವೆಯ ಅನಿವಾರ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ನಾಗರಿಕತೆಯ ನೈತಿಕ ಕರ್ತವ್ಯ. ಈ ನಿಟ್ಟಿನಲ್ಲಿ ಎಡಪಕ್ಷಗಳು, ಕಾರ್ಮಿಕ ಸಂಘಟನೆಗಳು ಹೆಚ್ಚಿನ ಪರಿಶೋಧನೆ ನಡೆಸುವ ಮೂಲಕ ಸಾವಿನ ಅಂಚಿನಲ್ಲೇ ಬದುಕು ಸವೆಸುವ ಲಕ್ಷಾಂತರ ಕಾಯಕ ಜೀವಿಗಳಿಗೆ ಕಾಯಕಲ್ಪ ಒದಗಿಸಲು ಶ್ರಮಿಸಬೇಕಿದೆ. ಧಾರ್ಮಿಕ ಆಚರಣೆಗಳು ಮತ್ತು ಉಳ್ಳವರ ಡಂಭಾಚಾರದ ಹೊರತಾಗಿ ಪಟಾಕಿ ಔದ್ಯಮಿಕವಾಗಿ ಲಾಭದಾಯಕ ಆದರೆ ಮಾನವ ಸಮಾಜಕ್ಕೆ ಹಾನಿಕಾರಕ. ಆಯ್ಕೆ ನಾಗರಿಕತೆಯ ಮುಂದಿದೆ.

-೦-೦-೦-೦-

Tags: attibeleBanglorefireworksworkers
Previous Post

ಅಮೆರಿಕ ಕಂಪನಿಗಳಿಂದ ರಾಜ್ಯದಲ್ಲಿ ₹25,000 ಕೋಟಿ ಹೂಡಿಕೆಗೆ ಆಸಕ್ತಿ!

Next Post

ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ : ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ : ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ

ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ : ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada