ಮೈಸೂರು : ಅಯೋಧ್ಯಾದಲ್ಲಿ ನಡೆಯುತ್ತಿರುವ ರಾಮವಿಗ್ರಹ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ದೇಶಾದ್ಯಂತ ರಾಮ ಜಪ ಆರಂಭವಾಗಿದೆ ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದಲ್ಲಿ ಬಾಲಕನೋರ್ವ ರೂಬಿಕ್ ಕ್ಯೂಬ್ ನಲ್ಲಿ ರಾಮನ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ಧಾನೆ.
![](https://pratidhvani.com/wp-content/uploads/2024/01/IMG-20240119-WA0150.jpg)
ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯ ನಿವಾಸಿ ಮೃದುಲಾ ಮತ್ತು ಪಿ.ಎನ್. ವಿನಯ್ ದಂಪತಿಗಳ ಪುತ್ರ ಪ್ರಣವ್ ಪಿ.ವಿನಯ್ ಈ ಸಾಧನೆ ಮಾಡಿದ ಬಾಲಕನಾಗಿದ್ಧಾನೆ.12 ವರ್ಷದ ಬಾಲಕ ಪುಷ್ಪ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು ರೂಬ್ಯೂಕ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತ. ಈತ 22 ವಿವಿಧ ರೀತಿ ಕ್ಯೂಬ್ ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್ ರೇಕಾರ್ಡ್ ದಾಖಲೆ ಮಾಡಿದ್ಧಾನೆ. ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಈತನ ಸಾಧನೆ ದಾಖಲಾಗಿದೆ. ಮೊಲದು 400 ಕ್ಯೂಬ್ ಬಳಸಿ ಶೀಕೃಷ್ಣನ ರಚಿಸಿದ್ದ ಈತ ಈಗ ಬರೋಬ್ಬರಿ 498 ಕ್ಯೂಬ್ ಗಳನ್ನು ಬಳಿಸಿ ಶ್ರೀರಾಮನ ಚಿತ್ರ ಬಿಡಿಸಿದ್ಧಾನೆ. ಈ ಮೂಲಕ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ತನ್ನದೆ ಆದ ಸೇವೆ ಸಲ್ಲಿಸಿದ್ದಾನೆ.
![](https://pratidhvani.com/wp-content/uploads/2024/01/IMG-20240119-WA0151.jpg)
ಈ ಹಿಂದೆಯೂ ಪ್ರಣವ್ ಪಿ.ವಿನಯ್ ಶ್ರೀಕೃಷ್ಣ, ವಿರಾಟ್ ಕೊಯ್ಲಿ, ರಾಹುಲ್ ದ್ರಾವಿಡ್, ಶಿವಕುಮಾರಸ್ವಾಮೀಜಿ ಮುಂತಾದ ಮಹನೀಯರ ಚಿತ್ರಗಳನ್ನು ರುಬಿಕ್ ಕ್ಯೂಬ್ ನಲ್ಲಿ ರಚಿಸಿದ್ದು ಪ್ರಧಾನಿ ಮೋದಿಯವರ ಜನ್ಮ ದಿನಾಚರಣೆಗೆ ಮೋದಿ ಅವರ ಭಾವಚಿತ್ರವನ್ನು ರುಬಿಕ್ ಕ್ಯೂಬ್ ಬಳಸಿ ರಚಿಸಿದ್ದ. ಹೀಗೆ ಪಿಯಾನೋ ನುಡಿಸುವುದು, ಸ್ಕೇಟಿಂಗ್ ತರಬೇತಿ, ಪಡೆದುಕೊಂಡಿದ್ದಾನೆ.ಈತನ ಈ ಸಾಧನೆಗೆ ಪುಪ್ಪ ಶಾಲೆಯ ಆಡಳಿತ ಮಂಡಳಿ ಹಾಗೂ ಮತ್ತಿತರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಎಂವೈಎಸ್ 18ಪಿವೈಪಿ1 : ಪಿರಿಯಾಪಟ್ಟಣದ ಮೃದುಲ ವಿನಯ್ ದಂಪತಿಗಳ ಪುತ್ರ ಪ್ರಣವ್ ಪಿ.ವಿನಯ್ 498 ರೂಬ್ಯೂಕ್ ಕ್ಯೂಬ್ ಗಳನ್ನು ಬಳಸಿ ಶ್ರೀರಾಮನ ಚಿತ್ರ ರಚಿಸಿರುವುದು.