ಚಾಮರಾಜನಗರ : ರಾಮನನ್ನು (Ramamandira) ಗುಡಿ ಕಟ್ಟಿ ತೋರಿಸ ಬೇಕಾಗಿಲ್ಲ, ರಾಮನ ಆದರ್ಶವನ್ನ ಅಳವಡಿಸಿಕೊಂಡ್ರೆ ಸಾಕು. ರಾಮ ಯಾರಿಗೆ ಬೇಡವಾಗಿದ್ದಾನೆ. ?? ರಾಮ ಇದ್ದಾನೆ ಅಂತಾನೆ ಎಲ್ಲರು ರಾಮನ ಆದರ್ಶದ ಮೇಲೆ ಬದುಕುತ್ತಿದ್ದೇವೆ. ಬರಿ ರಾಮ ಮಂದಿರ ಕಟ್ಟೋಕೆ ಅಯೋಧ್ಯೆಯಲ್ಲಿ 80ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಇದರ ಬಗ್ಗೆ ಚರ್ಚೆ ಮಾಡ್ತಾಯಿಲ್ಲ, ಅಲ್ಲಿನ ರಸ್ತೆ ನೀರು ಲೈಟ್ ಏರ್ ಪೋರ್ಟ್ ಅಂತ 80 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ (Shivananda patil) ಹೇಳಿದರು.
ಎಲ್ಲ ದೇವರ ದೇವಸ್ಥಾನವನ್ನು ಕಟ್ಟ ಬೇಕಲ್ಲ .
32 ಕೋಟಿ ದೇವರನ್ನ ನೆನಸಿಕೊಳ್ಳುತ್ತೇವೆ, ಎಲ್ಲ ದೇವರು ಆದರ್ಶ ದೇವರೇ. ಚುನಾವಣೆ ಬಂದ ಸಂದರ್ಭದಲ್ಲಿ ರಾಮ ಮಂದಿರ ವಿಷಯ ಬರಬಾರ್ದು.ಇದನ್ನ ನಾನು ಹೇಳ್ತಾಯಿಲ್ಲ ಶಂಕರಚಾರ್ಯ ಮಠದವರು ಹೇಳ್ತಾಯಾದ್ದಾರೆ.
ಚುನಾವಣೆ ಮುಗಿದ ಮೇಲೆ ಉದ್ಘಾಟನೆ ಮಾಡಿ ಅಪೂರ್ಣಗೊಂಡ ರಾಮ ಮಂದಿರವನ್ನ ಉಧ್ಘಾಟನೆ ಮಾಡ್ಬೇಡಿ ಎಂದು ಹೇಳ್ತಾಯಿದ್ದಾರೆ.
ನಾನು ಬಿಜೆಪಿ ಕಾಂಗ್ರೆಸ್ ಪರ ಅಂತ ಹೇಳ್ತಾಯಿಲ್ಲ ದೇವರು ಅನ್ನೋದು ಚುನಾವಣೆಯ ವಿಷಯ ಆಗಬಾರ್ದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ರಾಜ್ಯದಲ್ಲಿ 3 ಡಿಸಿಎಂ ವಿಚಾರ ಮುಗಿದು ಹೋದ ಅದ್ಯಾಯ ಈ ಕುರಿತು ರಾಹುಲ್ ಗಾಂಧಿಯವರೆ ಸ್ಪಷ್ಟನೆ ನೀಡಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಇಂದು ಹಿರಿಯ ನಾಯಕರ ಜತೆ ಸಭೆಯಿದೆ ಸಭೆಯಲ್ಲಿ ನಿರ್ಧಾರ ಆಗುತ್ತೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು