• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮೈಸೂರು ಭೂ ಮಾಫಿಯಾ ; ಸರ್ಕಾರ ಏಕೆ ತನಿಖೆಗೆ ಮುಂದಾಗುತ್ತಿಲ್ಲ ?

Any Mind by Any Mind
June 9, 2021
in ಕರ್ನಾಟಕ
0
ಮೈಸೂರು ಭೂ ಮಾಫಿಯಾ ; ಸರ್ಕಾರ ಏಕೆ ತನಿಖೆಗೆ ಮುಂದಾಗುತ್ತಿಲ್ಲ ?
Share on WhatsAppShare on FacebookShare on Telegram

ರೋಹಿಣಿ ಸಿಂಧೂರಿ ಮೈಸೂರಿಗೆ ವರ್ಗವಾಗಿ ಬಂದಾಗಿನಿಂದಲೂ ರಾಜಕೀಯ ಮುಖಂಡರು ಅವರ
ಬಗ್ಗೆ ಆಗಾಗ್ಗೆ ಒಂದಿಲ್ಲೊಂದು ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.
ಅವರುಗಳೆಷ್ಟೇ ಕಿಡಿಕಾರುತ್ತಿದ್ದರೂ ರೋಹಿಣಿ ಸಿಂಧೂರಿ ತಮ್ಮ ಈ ಹುದ್ದೆಯಲ್ಲೇ
ಮುಂದುವರಿಯುವಲ್ಲಿ ಯಶಸ್ಸು ಕಂಡಿದ್ದರು. ಬಹುಶಃ ಈ ಕಾರಣಕ್ಕಾಗಿಯೇ ರಾಜಕೀಯ ಮುಖಂಡರು
ಸಂಚು ಹೂಡಿ ಅವರಿಗಿಂತ ಕಿರಿಯ ಐಎಎಸ್ ಅಧಿಕಾರಿಯಾದ ಶಿಲ್ಪಾನಾಗ್ ಅವರನ್ನು
ನೆಪವೊಂದನ್ನಿಟ್ಟುಕೊಂಡು ದಾಳವಾಗಿ ಬಳಸಿಕೊಂಡಿರಬಹುದೆಂಬ ಅನುಮಾನ ಸಾರ್ವಜನಿಕ
ವಲಯದಲ್ಲೇ ವ್ಯಕ್ತವಾಗುತ್ತಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ನಡೆದ ಹಲವು ಪ್ರಮುಖ
ಕಾರ್ಯಕ್ರಮಗಳು ಹಾಗೂ ಕೋವಿಡ್ ಸಭೆಗಳಲ್ಲಿ ಜಿಲ್ಲಾಧಿಕಾರಿ ಗೈರುಹಾಜರಿ ಎದ್ದು
ಕಾಣುವಂತಿತ್ತು. ಬದಲಿಗೆ ಪಾಲಿಕೆ ಆಯುಕ್ತೆಯನ್ನಷ್ಟೇ ಆಹ್ವಾನಿಸಲಾಗುತ್ತಿತ್ತು. ಆ
ಬಳಿಕ ರಾಜಕೀಯ ಮುಖಂಡರು ಟಾಸ್ಕ್ ಫೋರ್ಸ್ ರಚಿಸಿದಾಗಲೂ ಪಾಲಿಕೆ ಆಯುಕ್ತೆ ಶಿಲ್ಪಾ
ನಾಗ್ ಅವರನ್ನಷ್ಟೇ ಆಹ್ವಾನಿಸಿ, ಜಿಲ್ಲಾಧಿಕಾರಿಯನ್ನು ದೂರವಿಟ್ಟಿದ್ದು ಕೂಡ ಎದ್ದು
ಕಾಣುವಂತಿತ್ತು.

ADVERTISEMENT
IAS ಅಧಿಕಾರಿಗಳ ವರ್ಗಾವಣೆಯಿಂದ ಬಯಲಿಗೆ ಬಂದ ರಿಯಲ್‌ ಎಸ್ಟೇಟ್‌ ಮಾಫಿಯಾ

ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ತಮ್ಮ
`ರಾಜಕೀಯ ಚದುರಂಗ ದಾಟ’ದಲ್ಲಿ ದಾಳವಾಗಿಸಿಕೊಂಡ ನಮ್ಮ ರಾಜಕಾರಣಿಗಳು ನಿಜಕ್ಕೂ
ಸಮಾಜಕ್ಕೆ ಮಾಡಿದ ಮೋಸ ಅಲ್ಲದೆ ಬೇರೇನಲ್ಲ. . ಕಳೆದ ತಿಂಗಳವರೆಗೂ ಪರಸ್ಪರ
ಸಾಮರಸ್ಯದಿಂದಲೇ ಕೆಲಸ ಮಾಡುತ್ತಾ ಬಂದಿದ್ದ ರೋಹಿಣಿ ಹಾಗೂ ಶಿಲ್ಪಾ ಅವರ ನಡುವೆ ಕಳೆದ
20 ದಿನಗಳಿಂದ ಮಾತ್ರ ಸಂಬಧ ಸಂಪೂರ್ಣ ಹದಗೆಟ್ಟಿತ್ತು. ರೋಹಿಣ ಸಿಂಧೂರಿ ವರ್ಗವಾಗಿ
ಹೋಗಲಿ ಎಂದು ಹಲವು ರಾಜಕೀಯ ಮುಖಂಡರು ಪ್ರಬಲ ಲಾಬಿ ಆರಂಭಿಸಿದ್ದರು. ಯಾವ
ಕಾರಣಕ್ಕೆ? ಇದನ್ನು ಯಾರೂ ಈಗಲೂ ಬಾಯಿ ಬಿಟ್ಟು ಹೇಳುತ್ತಿಲ್ಲ. ಚಾಮರಾಜನಗರದಲ್ಲಿ
ಕೋವಿಡ್-19 ಸೋಂಕಿತರಲ್ಲಿ 24 ಮಂದಿ ಆಮ್ಲಜನಕ ಕೊರತೆ ಯಿಂದ ಸಾವನ್ನಪ್ಪಿದರೂ ಅಲ್ಲಿನ
ಯಾವುದೇ ಅಧಿಕಾರಿ ಯನ್ನು ಅಮಾನತು ಮಾಡುವುದಿರಲಿ, ಎತ್ತಂಗಡಿ ಮಾಡು ವಂತೆಯೂ ಈ ಯಾವ
ರಾಜಕೀಯ ನಾಯಕರುಗಳೂ ಒತ್ತಾಯಿಸಲಿಲ್ಲ. ಆದರೆ ಮೈಸೂರಿನ ಜಿಲ್ಲಾಧಿಕಾರಿಯವರು ಮಾತ್ರ
ಹೊರಹೋದರೆ ಸಾಕು ಎಂದು ಒತ್ತಾಯಿಸಿದ್ದರು

ಜಿಲ್ಲಾಧಿಕಾರಿ ರೋಹಿಣಿ ಮತ್ತು ಕಮೀಷನರ್‌ ಶಿಲ್ಪಾ ಜಗಳಕ್ಕೆ ಕಾರಣವೇನು ಗೊತ್ತಾ?

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಅವರ ವಿರುದ್ಧ ಮಾಜಿ ಪಾಲಿಕೆ ಆಯುಕ್ತೆ ಶಿಲ್ಪಾ
ನಾಗ್ ಮಾಡಿರುವ ಆರೋಪಗಳು ಕೂಡ ಭಾವನಾತ್ಮಕ ಮಾತುಗಳಂತಿವೆಯೇ ಹೊರತು, ಅವರ ಪತ್ರದಲ್ಲಿ
ಯಾವುದೇ ನಿರ್ದಿಷ್ಟ ಕಾರಣಗಳ ಪ್ರಸ್ತಾಪವೇ ಇಲ್ಲ. ರೋಹಿಣಿ ಸಿಂಧೂರಿ ಅವರನ್ನಂತೂ
“ಮಹಾರಾಣಿ ,” “ಮಾಡೆಲ್” ಮುಂತಾದ ಪದಗಳನ್ನು ಬಳಸಿ ಪದೇ ಪದೆ ಸಾರ್ವಜನಿಕವಾಗಿ
ಅಪಹಾಸ್ಯ ಮಾಡಲಾಯಿತು. ಪಾರಂಪರಿಕ ಕಟ್ಟಡ ಹಾಳು ಮಾಡಿದರು ಎಂದು ಆರೋಪಿಸಿದರು.
ಸಭೆ-ಸಮಾರಂಭಗಳಲ್ಲಿ ಏರುದನಿಯಲ್ಲಿ ಅವರ ವಿರುದ್ಧ ಬೊಬ್ಬಿರಿದರು. ಕರ್ತವ್ಯಲೋಪ
ಎಸಗಿದ್ದಾರೆಂದು ಪತ್ರಿಕಾ ಗೋಷ್ಠಿ ಕರೆದು ಆರೋಪ ಮಾಡಿದ್ದಷ್ಟೇ ಅಲ್ಲದೆ ಮುಖ್ಯ
ಮಂತ್ರಿಗೂ ದೂರು ನೀಡಲಾಯಿತು.


ಹತ್ತು ಪಥದ ಮೈಸೂರು-ಬೆಂಗಳೂರು ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಸದ್ಯದಲ್ಲೇ ಮುಗಿಯಲಿದೆ. ಐದು ಹೊಸ ಬೃಹತ್ ಕೈಗಾರಿಕೆಗಳು ಜಿಲ್ಲೆಯಲ್ಲಿ ಆರಂಭ
ಗೊಳ್ಳಲಿದ್ದು, ಐಟಿ ಕ್ಷೇತ್ರದ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನಲ್ಲಿ
ನೆಲೆ ನಿಲ್ಲಲು ಮುಂದಾಗಲಿದ್ದಾರೆ. ಕೋವಿಡ್ ಸಾಂಕ್ರಾಮಿಕ ತಹಬಂದಿಗೆ ಬಂದ ಕೂಡಲೇ ಈ
ಎಲ್ಲ ಕಾರಣಗಳಿಂದಾಗಿ ಮೈಸೂರು ನಗರ-ಜಿಲ್ಲೆಯ ರಿಯಲ್ ಎಸ್ಟೇಟ್ ವಹಿವಾಟೂ
ಉತ್ತುಂಗಕ್ಕೇರಲಿದೆ.ಈ ಪರಿಸ್ಥಿತಿಯ`ಸಂಪೂರ್ಣ ಲಾಭ’ ಪಡೆಯಲು ಭೂ ಮಾಫಿಯಾ ಈಗಾಗಲೇ
ಸಾಕಷ್ಟು ಸಜ್ಜಾಗಿದ್ದು, ರಿಂಗ್ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ
ಹೊಂಚುಹಾಕಿ ನಿಂತಿದೆ.

ಪಾಲಿಕೆ ಆಯುಕ್ತರ ರಾಜೀನಾಮೆಯ ಹಿಂದಿದ್ಯಾ ಭೂ ಮಾಫಿಯಾ ಸಂಚು ಸಂಚು..?


ಮೈಸೂರು ಹೊರವಲಯದಲ್ಲಿ ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವ
ಭೂಗಳ್ಳರು ತಮ್ಮ ತಂಟೆಗೆ ಯಾರೂ ಬರಬಾರದು ತಾವು ನೀಡಿದ ಹಣವನ್ನು ತೆಗೆದುಕೊಂಡು
ಅಧಿಕಾರಿಗಳು ಸುಮ್ಮನಿರಬೇಕು ಎಂದು ಬಯಸುತಿದ್ದಾರೆ. ಇವರು ಒತ್ತುವರಿ ಮಾಡಿಕೊಂಡಿರುವ
ಭೂಮಿಯಲ್ಲಿ ಖರಾಬು , ಗೋಮಾಳ ಮತ್ತು ಕೆರೆ ಜಾಗವೂ ಸೇರಿದೆ. ಇಲ್ಲಿ ಬಹುಮುಖ್ಯ
ಸಂಗತಿಯೆಂದರೆ ಒತ್ತುವರಿ ಮಾಡಿಕೊಂಡಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳಲ್ಲಿ
ಕಾಂಗ್ರೆಸ್‌ , ಜೆಡಿಎಸ್‌ ಮತ್ತು ಅಧಿಕಾರಾರೂಢ ಬಿಜೆಪಿ ಪಕ್ಷದವರೂ ಇದ್ದಾರೆ. ಇವರದು
ಒಂದು ರೀತಿಯಲ್ಲಿ ಅಪವಿತ್ರ ಮೈತ್ರಿ. ಯಾವುದೇ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ
ಬಂದರೂ ಇವರು ಆಯಕಟ್ಟಿನ ಸ್ಥಳಗಳಿಗೆ ತಂದು ಕೂರಿಸಲು ಯತ್ನಿಸೋದು ಮಾತ್ರ ಭ್ರಷ್ಟ
ಅಧಿಕಾರಿಗಳನ್ನೇ.

ನಮ್ಮನ್ನು ಆಳುವ ಸರ್ಕಾರಗಳೂ ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದಿವೆ. ಈಗ ಓರ್ವ ದಕ್ಷ
ಅಧಿಕಾರಿ ಭೂಗಳ್ಳರ ವಿರುದ್ದ ಸಮರ ಸಾರಿದರೆ ಅವನನ್ನು ಹಣಿಯಲ್ಲು ಎಲ್ಲಾ ಪಕ್ಷಗಳ
ಭೂಗಳ್ಳರೂ ಒಂದಾಗುತ್ತಾರೆ. ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಅವರ ವಿಷಯದಲ್ಲಿ
ಆಗಿರೋದೂ ಕೂಡ ಇದೆ. ಹೀಗಾಗಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗುವುದಿಲ್ಲ. ಮುಂದಾದರೆ
ಇದನ್ನು ಪಕ್ಷದೊಳಗೇ ಇರುವ ಕಾಣದ ಕೈಗಳು ತಡೆಯೊಡ್ಡುತ್ತವೆ.

Previous Post

ಭಾರತದ ಚುನಾವಣಾ ಆಯುಕ್ತರಾಗಿ ನೇಮಕಗೊಂಡ ಅನೂಪ್ ಚಂದ್ರ ಪಾಂಡೆ

Next Post

ಭೂಗಳ್ಳರ ವಿರುದ್ದ ಕ್ರಮಕ್ಕೆ ಮುಂದಾಗಿದ್ದ ರೋಹಿಣಿ ಸಿಂಧೂರಿ ಕೊನೆದಾಗಿ ಹೇಳಿದ್ದೇನು ಗೊತ್ತಾ ?

Related Posts

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
0

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada Season 12) ಇದೀಗ ಅಂತಿಮ ಹಂತದತ್ತ ಸಾಗುತ್ತಿದೆ. ಫಿನಾಲೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ...

Read moreDetails
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್..ಟೆಕ್ಕಿ ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್..ಟೆಕ್ಕಿ ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
Next Post
ಭೂಗಳ್ಳರ ವಿರುದ್ದ ಕ್ರಮಕ್ಕೆ ಮುಂದಾಗಿದ್ದ   ರೋಹಿಣಿ ಸಿಂಧೂರಿ ಕೊನೆದಾಗಿ ಹೇಳಿದ್ದೇನು ಗೊತ್ತಾ ?

ಭೂಗಳ್ಳರ ವಿರುದ್ದ ಕ್ರಮಕ್ಕೆ ಮುಂದಾಗಿದ್ದ ರೋಹಿಣಿ ಸಿಂಧೂರಿ ಕೊನೆದಾಗಿ ಹೇಳಿದ್ದೇನು ಗೊತ್ತಾ ?

Please login to join discussion

Recent News

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!
Top Story

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

by ಪ್ರತಿಧ್ವನಿ
January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada