• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಣ್ಣೆ ತಿಂದ ಕೋತಿ ಮೇಕೆ ಮೂತಿಗೆ ಒರೆಸಿತು – ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕ ಶಾಮೀಲು?

ಫೈಝ್ by ಫೈಝ್
May 6, 2021
in ಕರ್ನಾಟಕ
0
ಬೆಣ್ಣೆ ತಿಂದ ಕೋತಿ ಮೇಕೆ ಮೂತಿಗೆ ಒರೆಸಿತು – ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕ ಶಾಮೀಲು?
Share on WhatsAppShare on FacebookShare on Telegram

ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ  ಬೆಡ್‌ ಬುಕಿಂಗ್‌ ದಂಧೆಯಲ್ಲಿ ಇದೀಗ ಬಿಜೆಪಿ ಶಾಸಕರ ಪಾತ್ರದ ಕುರಿತು ಆರೋಪ ಎದ್ದಿದೆ. ಅವ್ಯವಹಾರ ಬಯಲಿಗೆಳೆಯುವ ವೇಳೆ  ತೇಜಸ್ವಿ ಸೂರ್ಯ ಅವರ ತಂಡದಲ್ಲಿದ್ದ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಅವರ ಹೆಸರೇ ದಂಧೆಯಲ್ಲಿ ಕೇಳಿಬಂದಿದೆ.

ADVERTISEMENT
ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ

ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಮ್‌ಗೆ ಮಂಗಳವಾರ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್‌ ರೆಡ್ಡಿ, ಎಲ್‌.ಎ.ರವಿ ಸುಬ್ರಹ್ಮಣ್ಯ ಹಾಗೂ ಉದಯ್‌ ಗರುಡಾಚಾರ್‌ ಅವರ ತಂಡವು ವಾರ್‌ ರೂಂನಲ್ಲಿ ಮುಸ್ಲಿಂ ಸಿಬ್ಬಂದಿಯನ್ನು ನೇಮಿಸಿಕೊಂಡ ಬಗ್ಗೆ ಪ್ರಶ್ನೆ ಮಾಡಿತ್ತು. 206 ಸಿಬ್ಬಂದಿಗಳಿರುವ ವಾರ್‌ರೂಮಿನಲ್ಲಿ ಕೇವಲ 17 ಮುಸ್ಲಿಂ ಸಿಬ್ಬಂದಿಯ ಹೆಸರುಗಳನ್ನು ಓದಿದ್ದ ತೇಜಸ್ವಿ ಸೂರ್ಯ, ‘ಇವರನ್ನೆಲ್ಲ ಹೇಗೆ ನೇಮಿಸಿಕೊಂಡಿರಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಂಡದಲ್ಲಿದ್ದ ರವಿಸುಬ್ರಹ್ಮಣ್ಯ ಅವರಂತೂ ‘ನೀವೇನು ಮದರಸಾ ನಡೆಸುತ್ತಿದ್ದೀರಾ, ಕಾರ್ಪೊರೇಷನ್‌ ನಡೆಸುತ್ತಿದ್ದೀರಾ’ ಎಂದೂ ಪ್ರಶ್ನಿಸಿದ್ದರು.

ಅದಾದ ಬೆನ್ನಿಗೆ, ಬಿಜೆಪಿ ಐಟಿ ಸೆಲ್‌ ʼಜಿಹಾದಿ, ಉಗ್ರರುʼ ಎಂದು ವಾರ್‌ ರೂಮಿನ ಮುಸ್ಲಿಂ ಸಿಬ್ಬಂದಿಗಳ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿತ್ತು. ಬಿಜೆಪಿಯ ಅದೀಕೃತ ಟ್ವಿಟರ್‌ ಖಾತೆಯಲ್ಲಿ ಬೆಂಗಳೂರಿನ ಬುಕಿಂಗ್‌ ಮಾಫಿಯಾ  ಜಾಗತಿಕ ಭಯೋತ್ಪಾದನೆಯ ಹೊಸ ರೂಪ ಎಂದು ಟ್ವೀಟ್‌ ಮಾಡಿತ್ತು.

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ʼಸೇವೆಯ ಹೆಸರಿನಲ್ಲಿ ವ್ಯವಸ್ಥೆಯ ಒಳನುಸುಳಿರುವ ಉಗ್ರರು ಬಾಂಬ್‌ ಸ್ಪೋಟಿಸದೆ ಜನರ ಪ್ರಾಣ ತೆಗೆದಿದ್ದಾರೆʼ ಎಂದು ಬಿಜೆಪಿ ಆರೋಪಿಸಿ ಕೋವಿಡ್‌ ಸಂಕಷ್ಟದ ಸಂಧರ್ಭದಲ್ಲಿ ಸೇವೆ ಮಾಡಿದ ಸಮಸ್ತ ಮುಸ್ಲಿಮರನ್ನು ಪರೋಕ್ಷವಾಗಿ  ಅವಮಾನಗೊಳಿಸಿತ್ತು. ಅವರ ಸೇವೆಯನ್ನು ಉಗ್ರಗಾಮಿ ಚಟುವಟಿಕೆಗೆ ಹೋಲಿಸಿತ್ತು.

ಬಿಜೆಪಿ ಐಟಿ ಸೆಲ್‌ ಮಾತ್ರವಲ್ಲದೆ, ಬಿಜೆಪಿ ಹಿರಿಯ ನಾಯಕ, ಸಚಿವ ಕೆ ಎಸ್‌ ಈಶ್ವರಪ್ಪ ಕೂಡಾ ಬೆಡ್‌ ಬುಕಿಂಗ್‌ ದಂಧೆಯಲ್ಲಿ ಮುಸ್ಲಿಂ ಸಂಘಟನೆಯ ಕೈವಾಡವಿದೆಯೆಂದು ಅನುಮಾನ ವ್ಯಕ್ತಪಡಿಸಿದ್ದರು. ಸರ್ಕಾರಕ್ಕೆ ಕಳಂಕ ತರಲು ಮುಸ್ಲಿಂ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದೆಯೆಂದು ಆರೋಪಿಸಿದ್ದರು.

ಬಿಜೆಪಿಯ ಈ ವರಸೆ ಹೊಸದಲ್ಲದ್ದರಿಂದ ತೇಜಸ್ವಿ ಸೂರ್ಯನ ʼಬೆಡ್‌ ಬುಕಿಂಗ್‌ ದಂಧೆʼ ಬಯಲಿಗೆಳೆಯುವ ಪ್ರಹಸನದ ಆರಂಭದಲ್ಲೇ ಅನುಮಾನ ಮೂಡಿಸುವಂತಿದ್ದವು. ಅಲ್ಪಸಂಖ್ಯಾತ ಸಮುದಾಯದ ಸಿಬ್ಬಂದಿಗಳನ್ನೇ ಗುರಿ ಮಾಡಿಕೊಂಡ ತೇಜಸ್ವಿ ಮತ್ತು ಪಟಾಲಂ, ಕ್ರೈಸ್ತ ಸಮುದಾಯದ ವೈದ್ಯರ ಹೆಸರನ್ನೂ ಉಲ್ಲೇಖಿಸಿತ್ತು. ಆ ಮೂಲಕ ಅದುವರೆಗೂ ಚರ್ಚೆಯಾಗುತ್ತಿದ್ದ, ಚಾಮರಾಜನಗರ ಆಮ್ಲಜನಕ ಕೊರತೆಯಿಂದ 28 ಮಂದಿ ಮೃತಪಟ್ಟ ಸುದ್ದಿ ತಣ್ಣಗಾಗಿ ಚರ್ಚಾ ವಿಷಯವೇ ತಿರುವು ಪಡೆಯಿತು.

ಇದರ ಜೊತೆಗೆ ಆಮ್ಲಜನಕ, ರೆಮಿಡಿಸಿವಿರ್‌, ಕರೋನಾ ಲಸಿಕೆ ಕೊರತೆ, ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯ, ಕೇರಳ-ಬಂಗಾಳ-ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಅವಮಾನ ಮೊದಲಾದ ಎಲ್ಲವನ್ನೂ ಬಿಜೆಪಿ ಯಶಸ್ವಿಯಾಗಿ ಮರೆ ಮಾಚಿತು. ತೇಜಸ್ವಿಯ ಒಂದೇ ಒಂದು ಪ್ರಹಸನದ ಮೂಲಕ ಬಿಜೆಪಿ ಹಲವಾರು ಲಾಭಗಳನ್ನು ಪಡೆದುಕೊಂಡಿತು.

‘ಎಳೆ ಸಂಸದ’ ಈ ಸಮಾಜಕ್ಕೆ ಅಂಟಿದ ಕರೋನಾಗಿಂತಲೂ ಭೀಕರ ವೈರಸ್ –ಕಾಂಗ್ರೆಸ್

ಮೊದಲಿಗೆ ಮುಸ್ಲಿಮರ ಮೇಲೆ ಬೆಡ್‌ ಬುಕಿಂಗ್‌ ದಂಧೆಯ ಆರೋಪವನ್ನು ಬಿಜೆಪಿ ಹೊರಿಸಿದರೂ, ಬಂಧನಕ್ಕೊಳಗಾದವರೆಲ್ಲಾ ಮುಸ್ಲಿಮೇತರರು ಎಂದು ತಿಳಿಯುತ್ತಿದ್ದಂತೆಯೇ ಈ ದಂಧೆಯ ಆರೋಪವನ್ನು ಕಾಂಗ್ರೆಸ್‌ ಮೇಲೆ ಹೊರಿಸಿತು. ಕಾಂಗ್ರೆಸ್‌ ನಾಯಕರೇ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಐಟಿ ಸೆಲ್‌ ಪ್ರಚಾರ ಮಾಡಿತು.

ಆದರೆ ಇದೀಗ, ತನ್ನ ಉರುಳಿನಲ್ಲಿ ತನ್ನದೇ ಸಾಕು ಸಿಲುಕಿಕೊಂಡಂತ ಪರಿಸ್ಥಿತಿಗೆ ಬಿಜೆಪಿ ಬಂದಿದೆ. ಹಾಸಿಗೆ ದಂಧೆ ಪ್ರಕರಣದಲ್ಲಿ ತನ್ನ ಶಾಸಕನೇ, ಅದರಲ್ಲೂ ದಂಧೆ ಬಯಲಿಗೆಳೆಯುವ ನಾಟಕದ ತಂಡದಲ್ಲಿದ್ದ ಶಾಸಕನ ಹೆಸರೇ ಕೇಳಿ ಬರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

BBMP ಕೋವಿಡ್ ಅವ್ಯವಹಾರ: ಅಧಿಕಾರಿಗಳ ಬೆವರಿಳಿಸಿದ ತೇಜಸ್ವಿ ಸೂರ್ಯ | Tejasvi Surya | Bengaluru  Covid19 Corona

ತೇಜಸ್ವಿ ಸೂರ್ಯಗಿಂತಲೂ ಜೋರಾಗಿ ಆಟೋಟೋಪ ಪ್ರದರ್ಶಿಸಿದ್ದ ಶಾಸಕ ಸತೀಶ್‌ ರೆಡ್ಡಿಯೇ ತನ್ನ ಬೆಂಬಲಿಗರ ಮೂಲಕ ಅಕ್ರಮವಾಗಿ ಬೆಡ್‌ ಬುಕಿಂಗ್‌ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿವೆ. ಬಿಬಿಎಂಪಿ ಅಧಿಕಾರಿಗಳು ಪಾರದರ್ಶಕವಾಗಿ ಬೆಡ್ ಹಂಚಲು ಸತೀಶ್ ರೆಡ್ಡಿಯವರೇ ದೊಡ್ಡ ತೊಡಕಾಗಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಸತೀಶ್ ರೆಡ್ಡಿ ಬೆಡ್ ಹಂಚಿಕೆ ಮಾಡುತ್ತಿದ್ದರು. ಇದಕ್ಕೆ ಅಡ್ಡಿಯಾದರೆ, ವಾರ್ ರೂಂನವರ ಜೊತೆ ಜಗಳವಾಡುತ್ತಿದ್ದರು ಎನ್ನುವ ಮಾಹಿತಿ ಹೊರಬಂದಿದೆ.

ಅಷ್ಟೇ ಅಲ್ಲದೆ, ಬೊಮ್ಮನಹಳ್ಳಿ ವಲಯದ ಉಸ್ತುವಾರಿ ವಹಿಸಿಕೊಂಡಿರುವ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಇತ್ತೀಚೆಗೆ ವಾರ್‌ ರೂಂಗೆ ಭೇಟಿ ನೀಡಿದಾಗ ಅನ್ಯ ವ್ಯಕ್ತಿಯೊಬ್ಬರು ಹಾಸಿಗೆಗಳನ್ನು ಬ್ಲಾಕ್‌ ಮಾಡಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಆ ವ್ಯಕ್ತಿಯನ್ನು ವಾರ್‌ ರೂಂನಿಂದ ಹೊರ ಹಾಕಲಾಗಿದೆ. ಈ ವಿಷಯ ತಿಳಿದ ಶಾಸಕರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ವಾರ್‌ ರೂಮ್‌ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ವಾರ್‌ ರೂಂನಲ್ಲಿ ತಮ್ಮವರು ಇರಲೇಬೇಕು ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜತೆ ಜಗಳ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ʼವಿಜಯ ಕರ್ನಾಟಕʼ ವರದಿ ಮಾಡಿದೆ.

ಸಣ್ಣ ಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಿಲಗಳ ರಕ್ಷಣೆಗಾ..? ತೇಜಸ್ವಿ ಪ್ರಹಸನಕ್ಕೆ ಸಿದ್ದರಾಮಯ್ಯ ತಿರುಗೇಟು

ಆದರೆ, ಯಥಾಪ್ರಕಾರ ಈ ಆರೋಪವನ್ನು ನಿರಾಕರಿಸಿದ ಸತೀಶ್‌ ರೆಡ್ಡಿ, ತನ್ನ ಕ್ಷೇತ್ರದ ಜನತೆಗೆ ಬೆಡ್‌ ಸಿಗುತ್ತಿರಲಿಲ್ಲ. ಆಂಬ್ಯುಲೆನ್ಸ್‌ ಇಲ್ಲದೆ ಎರಡು ದಿನಗಳ ಕಾಲ ಶವವನ್ನು ಮನೆಯಲ್ಲಿಯೇ ಇಡುವ ಪರಿಸ್ಥಿತಿ ಬಂದಿತ್ತು, ಹೀಗಾಗಿ, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.  ಸಹಾಯವಾಣಿಗೆ ಸಂಪರ್ಕ ಸಿಗದ ಸಂದರ್ಭದಲ್ಲಿ ನನಗೆ ಮತ್ತು ಕಚೇರಿಗೆ ಕರೆ ಮಾಡಿ ಸೋಂಕಿತರ ಸಂಬಂಧಿಕರು ಹಾಸಿಗೆ ಒದಗಿಸುವಂತೆ ಮನವಿ ಮಾಡಿಕೊಂಡವರಿಗೆ ಆದ್ಯತೆ ಮೇಲೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ನಮ್ಮ ಕಚೇರಿ ಸಿಬ್ಬಂದಿಯು ವಾರ್‌ ರೂಂಗೆ ಹೋಗಿ ಕೋರಿಕೊಂಡಿದ್ದಾರೆ, ಆದರೆ, ಬೆಡ್‌ಗಳನ್ನು ಕಾಯ್ದಿರಿಸಿಕೊಂಡಿಲ್ಲ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.  ‌

It was a journalist, @KiranParashar21 from The Times of India (Bengaluru), who first exposed it and an inquiry was also ordered. The theatrics by the young MP started following that. pic.twitter.com/MIbXJtEmJA

— Rakesh Prakash (@rakeshprakash1) May 6, 2021

ಇನ್ನೊಂದು ಮೂಲದ ಪ್ರಕಾರ, ತೇಜಸ್ವಿ ಸೂರ್ಯ ಹಾಗೂ ತಂಡ ನಡೆಸಿದ ಕಾರ್ಯಾಚರಣೆ ಸಂಪೂರ್ಣ ಪೂರ್ವ ಯೋಜಿತ. ತೇಜಸ್ವಿ ತಂಡ ಬೆಡ್‌ ಬುಕಿಂಗ್‌ ಮಾಡುವ ಮೊದಲೇ ʼಟೈಮ್ಸ್‌ ಆಫ್‌ ಇಂಡಿಯಾʼದಲ್ಲಿ ಬೆಡ್‌ ಬುಕಿಂಗ್‌ ದಂಧೆಯ ಕುರಿತಂತೆ ವರದಿ ಪ್ರಕಟವಾಗಿತ್ತು. ಬೆಡ್ ಬ್ಲಾಕಿಂಗ್ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಸಂಪರ್ಕಿಸಿ ಬಿಬಿಎಂಪಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂದು ವಿಚಾರಣೆ ನಡೆಸಿ ಎಂದು ಕಮಲ್ ಪಂಥ್ ಅವರಿಗೆ ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್‌ ರೂಮ್‌ ಕಚೇರಿಗೆ ದಾಳಿ ನಡೆಸುವ ಮುನ್ನ ನಡೆದಿರುವುದು.!

ಹಾಗೆ ನೋಡುವುದಾದರೆ, ಬೆಡ್‌ ಬುಕಿಂಗ್‌ ದಂಧೆ ತೇಜಸ್ವಿ ಸೂರ್ಯ ಬಯಲಿಗೆಳೆಯದಿದ್ದರೂ ದೊಡ್ಡ ಸುದ್ದಿಯಾಗುತ್ತಿತ್ತು. ವಿಚಾರಣೆ ನಡೆದ ಬಳಿಕ ದಂಧೆಯ ಕರಿನೆರಳು ತನ್ನ ಕಾಲ ಬುಡಕ್ಕೂ ಬರಬಹುದೆಂಬ ಆತಂಕ ಬಿಜೆಪಿ ನಾಯಕರಲ್ಲೂ ಇತ್ತು. ಆ ಕಾರಣಕ್ಕೇ, ದಂಧೆ ಬಯಲಿಗೆಳೆಯುವ ಪ್ರಹಸನ ನಡೆಸಿ ಮುಸ್ಲಿಮರ ತಲೆಗೆ ಎಲ್ಲಾ ಕಳಂಕವನ್ನು ಹೊರಿಸಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಹೇಳಿದಂತೆ, ದೊಡ್ಡ ಮಿಕಗಳನ್ನು ಉಳಿಸಲು ಸಣ್ಣ ಮಿಕಗಳ ಬಲಿ ನಡೆಯಿತೆ ಎನ್ನುವುದು ವಿಚಾರಣೆಯಿಂದಷ್ಟೇ ತಿಳಿದು ಬರಬೇಕಿದೆ.

Previous Post

ಕೋವಿಡ್‌ ಸಂಕಷ್ಟ: ಕೇಂದ್ರದಿಂದ ಆಗುತ್ತಿರುವ ತಾರತಮ್ಯ ಮನುಷ್ಯತ್ವ ವಿರೋಧಿ –ಹೆಚ್‌ಡಿಕೆ

Next Post

ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post
ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?

ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada