• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತದಲ್ಲಿ ಕರೋನಾ ವೈರಸ್ ನ ಟ್ರಿಪಲ್ ಮ್ಯೂಟಂಟ್ ಪತ್ತೆ :ವಿಜ್ಞಾನಿ ವಿನೋದ್ ಸ್ಕರಿಯಾ

ಫಾತಿಮಾ by ಫಾತಿಮಾ
May 3, 2021
in ದೇಶ
0
ಭಾರತದಲ್ಲಿ ಕರೋನಾ ವೈರಸ್ ನ ಟ್ರಿಪಲ್ ಮ್ಯೂಟಂಟ್ ಪತ್ತೆ :ವಿಜ್ಞಾನಿ ವಿನೋದ್ ಸ್ಕರಿಯಾ
Share on WhatsAppShare on FacebookShare on Telegram

ADVERTISEMENT

ಬುಧವಾರ ನವದೆಹಲಿಯ ‘ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಸಿಎಸ್ಐಆರ್‌ಐಜಿಐಬಿ) ಯ ವಿಜ್ಞಾನಿ ವಿನೋದ್ ಸ್ಕರಿಯಾ ಅವರು ಹೊಸ ರೂಪಾಂತರಿತ ವಿಶಿಷ್ಟವಾದ ಆನುವಂಶಿಕ ಗುಂಪಿನೊಂದಿಗೆ ರೋಗನಿರೋಧಕಗಳಿಂದ ಪಾರಾಗುವ ರೂಪಾಂತರಿ ಕರೋನವೈರಸ್ ಪತ್ತೆಯಾಗಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ‌. ಹೊಸ ರೂಪಾಂತರಿ ವೈರಸನ್ನು ಬಿ.1.618 ಎಂದು‌ ಗುರುತಿಸಲಾಗಿದ್ದು ಆರಂಭಿಕ ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿದೆ.

ದೆಹಲಿ, ಮಹಾರಾಷ್ಟ್ರ ಮತ್ತು ಇತರ ಕೆಲವು ಸ್ಥಳಗಳಲ್ಲಿ ವ್ಯಾಪಕವಾಗಿ ಹೊಸ “ಡಬಲ್ ಮ್ಯೂಟಂಟ್” ಬಿ.1.617 ಪತ್ತೆಯಾದ ಬೆನ್ನಲ್ಲೇ ಈ ಪ್ರಕಟಣೆ ಬಂದಿದೆ. ಡಬಲ್ ಮ್ಯೂಟಂಟ್ ವೈರಸ್ ಹೆಚ್ಚಿನ ಪ್ರಸಾರ ಮತ್ತು ನಿರೋಧಕ ಪ್ರಕ್ರಿಯೆಯನ್ನು ಬೈಪಾಸ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.

ಡಬಲ್ ಮ್ಯೂಟಂಟ್ ಭಾರತದಲ್ಲಿ ಪ್ಯಾಥೋಜನ್ (pathogen)ನ ಸ್ಪೈಕ್ ಪ್ರೊಟೀನ್ ಭಾಗದಲ್ಲಿ E484Q ಮತ್ತು L452R ರೂಪಾಂತರಗಳನ್ನು ಹೊಂದಿತ್ತು. ಈ ಎರಡೂ ರೂಪಾಂತರಗಳು ಹೆಚ್ಚಿನ ಬೈಂಡಿಂಗ್ ಸಾಮರ್ಥ್ಯ ಮತ್ತು‌ ರೋಗನಿರೋಧಕಗಳನ್ನು ಪ್ರತಿರೋಧಿಸುವ ಸಾಮರ್ಥ್ಯ ಹೊಂದಿವೆ.

ಸ್ಕೇರಿಯಾ ಅವರು ತನ್ನ ಟ್ವಿಟರ್ ಥ್ರೆಡ್ ‌ನಲ್ಲಿ ಹೊಸ ಸ್ಟ್ರೈನ್ ಎರಡು ಅಮೈನೊ ಆಮ್ಲಗಳಾದ H146del Y145del ಡಿಲೀಷನ್‌ನಿಂದ ಉಂಟಾಗುತ್ತದೆ ಮತ್ತು ಇದು ಸ್ಪೈಕ್ ಪ್ರೊಟೀನ್ ಭಾಗದಲ್ಲಿ E484k D614G ರೂಪಾಂತರಗಳನ್ನು ಹೊದಿರುತ್ತದೆ. ಅವರ ಪ್ರಕಾರ ಅಮೈನೋ ಆಮ್ಲದಲ್ಲಿನ ಬದಲಾವಣೆಗಳು ಸಾಂಕ್ರಾಮಿಕದ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

B.1.618 – a new lineage of SARS-CoV-2 predominnatly found in India and characterized by a distinct set of genetic variants including E484K , a major immune escape variant. pic.twitter.com/dtfQJp2S2B

— Vinod Scaria (@vinodscaria) April 20, 2021

ತಜ್ಞರೊಂದಿಗೆ ಮಾತನಾಡಿದ ಎನ್‌ಡಿಟಿವಿ ಹೊಸ ರೂಪಾಂತರವನ್ನು “ಟ್ರಿಪಲ್ ಮ್ಯೂಟಂಟ್” ಎಂದು ಬಣ್ಣಿಸಿದೆ, ಇದರರ್ಥ ಮೂರು ವಿಭಿನ್ನ ಕೋವಿಡ್ ತಳಿಗಳು ಸೇರಿ ಹೊಸ ರೂಪಾಂತರವನ್ನು ರೂಪಿಸುತ್ತವೆ. “ಇದು ಹೆಚ್ಚು ಹರಡುವ ರೂಪಾಂತರವಾಗಿದೆ, ಇದು ಸಾಕಷ್ಟು ಜನರನ್ನು ಶೀಘ್ರವಾಗಿ ರೋಗಿಗಳನ್ನಾಗಿ ಮಾಡುತ್ತಿದೆ” ಎಂದು ಮೆಕ್‌ಗಿಲ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಮಧುಕರ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ನಾವು ಟ್ವೀಕಿಂಗ್ ಲಸಿಕೆಗಳನ್ನು ಇಟ್ಟುಕೊಳ್ಳಬೇಕು. ಅದಕ್ಕಾಗಿ ನಾವು ರೋಗವನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ ಸಂಗ್ರಹಿಸಿರುವ ಸ್ಯಾಂಪಲ್‌ಗಳಲ್ಲಿ ಟ್ರಿಪಲ್ ವೇರಿಯಂಟ್ ಕಂಡು ಬಂದಿದೆ ಎಂದು ಸ್ಕೇರಿಯಾ ತಿಳಿಸಿದ್ದಾರೆ.

ಕಳೆದ ವಾರ ಹೇಳಿಕೆ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯವು “ಈ ರೂಪಾಂತರಗಳು ಹೆಚ್ಚಿನ ಪ್ರಸರಣವನ್ನು ಹೊಂದಿವೆ. ಯುಕೆ ರೂಪಾಂತರವು ಇಂಗ್ಲಡ್ ಮತ್ತು ಯುರೋಪಿನಾದ್ಯಂತ ವ್ಯಾಪಕವಾಗಿ ಕಂಡುಬಂದಿದೆ ಮತ್ತು ನಂತರ ಇದು ಏಷ್ಯಾ ಮತ್ತು ಅಮೆರಿಕಕ್ಕೆ ಹರಡಿತು. ಡಬಲ್ ಮ್ಯುಟೇಷನ್ ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಐರ್ಲೆಂಡ್, ನಮೀಬಿಯಾ, ನ್ಯೂಜಿಲೆಂಡ್, ಸಿಂಗಾಪುರ್, ಯುನೈಟೆಡ್ ಕಿಂಗ್‌ಡಮ್, ಯುಎಸ್ಎ ಮುಂತಾದ ಹಲವಾರು ದೇಶಗಳಲ್ಲಿ ಕಂಡುಬಂದಿದೆ” ಎಂದು ತಿಳಿಸಿದೆ.

Previous Post

ಕೋವಿಡ್‌ ಸಂಕಷ್ಟ: ಭಾರತಕ್ಕೆ ಬ್ರಿಟನ್‌ನಿಂದ 1000 ಹೆಚ್ಚುವರಿ ವೆಂಟಿಲೇಟರ್‌

Next Post

ನಂದಿಗ್ರಾಮ: ಮತ ಮರು ಎಣಿಕೆಯ ಬೇಡಿಕೆಯನ್ನು ನಿರಾಕರಿಸಿದ ಚುನಾವಣಾ ಆಯೋಗ- TMCಗೆ ಹಿನ್ನಡೆ

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ನಂದಿಗ್ರಾಮ: ಮತ ಮರು ಎಣಿಕೆಯ  ಬೇಡಿಕೆಯನ್ನು ನಿರಾಕರಿಸಿದ ಚುನಾವಣಾ ಆಯೋಗ- TMCಗೆ ಹಿನ್ನಡೆ

ನಂದಿಗ್ರಾಮ: ಮತ ಮರು ಎಣಿಕೆಯ ಬೇಡಿಕೆಯನ್ನು ನಿರಾಕರಿಸಿದ ಚುನಾವಣಾ ಆಯೋಗ- TMCಗೆ ಹಿನ್ನಡೆ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada