• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ಸೋಂಕು; ಕೇಂದ್ರ ಆರೋಗ್ಯ ಮಂತ್ರಿ ಮೇಲೆ ಹರಿಹಾಯ್ದ ಜನತೆ

by
March 30, 2020
in ದೇಶ
0
ಕರೋನಾ ಸೋಂಕು; ಕೇಂದ್ರ ಆರೋಗ್ಯ ಮಂತ್ರಿ ಮೇಲೆ ಹರಿಹಾಯ್ದ ಜನತೆ
Share on WhatsAppShare on FacebookShare on Telegram

ಕೇಂದ್ರ ಸರ್ಕಾರ ಕರೋನಾ ವೈರಸ್ ಸೋಂಕು ತಡೆಗಟ್ಟುವಲ್ಲಿ ಸಾಕಷ್ಟು ಮುತುರ್ಜಿ ವಹಿಸಿದ್ಯಾ ಅಂದರೆ ಜನಸಾಮಾನ್ಯರು ಕೊಡುವ ಉತ್ತರ ಇಲ್ಲ ಎಂದು. ಕರೋನಾ ಸೋಂಕು ನಮ್ಮ ದೇಶದಲ್ಲಿ ಕಾಣಿಸಿಕೊಂಡ ಮೇಲೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ಸೂಕ್ತವಾಗಿ ಇವೆಯಾ ಎಂದರೆ ಜನರ ಉತ್ತರ ಇಲ್ಲ. ಸರೀ, ಮೊದಲಿಗೆ ಎಡವಿದ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸೋಂಕು ಹರಡುತ್ತಿರುವ ವೇಗಕ್ಕೆ ಕಡಿವಾಣ ಹಾಕಲು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿವೆಯಾ? ಚಿಕಿತ್ಸೆ ಸರಿಯಾಗಿ ಸಿಗುತ್ತಿದ್ಯಾ? ಶಂಕಿತರ ತಪಾಸಣೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ಯಾ ಎಂದಾಗಲು ಜನರಿಂದ ಬರುವ ಉತ್ತರ ಇಲ್ಲ ಎಂದು. ಒಟ್ಟಾರೆ, ವಿಶ್ವದ ಬೇರೆಲ್ಲಾ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಸರ್ಕಾರ ತೆಗೆದುಕೊಂಡ ನಿಲುವುಗಳು ಅಷ್ಟಕಷ್ಟೆ. ಭಾರತ ಸರ್ಕಾರ ಮಾಡಿದ ಏಕೈಕ ಕ್ರಮ ಎಂದರೆ ಇಡೀ ದೇಶವನ್ನು ಲಾಕ್ ಡೌನ್ ಮಾಡಿದ್ದು ಅಷ್ಟೇ. ಇದೀಗ ಕೇಂದ್ರ ಸರ್ಕಾರದ ಕೆಲಸಗಳು ಟೀಕಾಕಾರರ ಬಾಯಿಗೆ ಶರಬತ್ತಾಗಿದೆ ಎಂದರೆ ತಪ್ಪಲ್ಲ.

ಕೇಂದ್ರದ ಆರೋಗ್ಯ ಸಚಿವರು ತುಂಬಾ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರಾ ಎಂದರೆ ಅದೂ ಇಲ್ಲ. ಕರೋನಾ ದೇಶಕ್ಕೆ ಕಾಲಿಟ್ಟ ದಿನದಿಂದಲೂ ಆರೋಗ್ಯ ಸಚಿವರು ಎಲ್ಲಿದ್ದಾರೆ ಎನ್ನುವುದೇ ದೇಶಕ್ಕೆ ತಿಳಿಯದಾಗಿದೆ. ಕರೋನಾ ಬಗ್ಗೆ ಏನೇ ಘೋಷಣೆ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡುತ್ತಿದ್ದಾರೆ. ಯಾವುದೇ ಮಾಹಿತಿ ಇದ್ದರೂ ಪ್ರಧಾನಿಯೇ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ಡಾ. ಹರ್ಷವರ್ಧನ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ದೇಶದ ನಾಗರಿಕರನ್ನು ಕಾಡುತ್ತಿದೆ. ಡಾ. ಹರ್ಷವರ್ಧನ್ ತಮ್ಮ ಪತ್ನಿ ಜೊತೆ ಕುಳಿತು ಪಗಡೆ ಆಡುತ್ತಿರುವ ಚಿತ್ರವನ್ನು ಹಿಡಿದು ಟ್ವಿಟರ್ ನಲ್ಲಿ ಪರ ವಿರೋಧ ಟೀಕೆಗಳು ವ್ಯಕ್ಯವಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರೇ ಎಲ್ಲಾ ವಿಚಾರಗಳನ್ನು ನೋಡಿಕೊಳ್ಳುವುದಾದರೆ ಆರೋಗ್ಯ ಇಲಾಖೆಗೆ ಮಂತ್ರಿ ಎಂದು ಇರಬೇಕಾ? ಎನ್ನುವ ಪ್ರಶ್ನೆಯನ್ನೂ ಕೇಳುವಂತಾಗಿದೆ.

India’s health minister rn.

Let that sink in.. #CoronavirusPandemic pic.twitter.com/3j8R3LIC2I

— Raksha Ramaiah (@RakshaRamaiah) March 29, 2020


ADVERTISEMENT

ಪ್ರತಿಧ್ವನಿ ಕೆಲವು ದಿನಗಳ ಹಿಂದೆ ಒಂದು ವರದಿ ಮಾಡಿತ್ತು ‘ವಿಪಕ್ಷ ನಾಯಕರ ಟೀಕೆಯನ್ನು ನಿರ್ಲಕ್ಷಿಸಿದ್ದೇ ದೇಶಕ್ಕೆ ದುಬಾರಿ ಆಯಿತೇ?’ ಎಂದು. ಹೌದು ಜನವರಿ 30 ರಂದು ಕರೋನಾ ಮಹಾಮಾರಿ ಬಾಗಿಲು ತೆರೆದು ದೇಶದ ಒಳಕ್ಕೆ ಬಂದಾಗಲೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 12 ದಿನಗಳ ಬಳಿಕ ಸಣ್ಣದೊಂದು ಟ್ವೀಟ್ ಮಾಡಿದ್ದರು. ಕರೋನಾ ವೈರಸ್ ತುಂಬಾ ಡೇಂಜರ್
ಎನಿಸುತ್ತಿದೆ. ನಮ್ಮ ದೇಶದ ಜನರು ಹಾಗೂ ಆರ್ಥಿಕತೆಗೆ ಬೆದರಿಕೆ ಹಾಕುವಂತಿದೆ. ಆದರೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದರು. ಈ ಟ್ವೀಟ್ ಗೆ ಕೇಂದ್ರ ಸರ್ಕಾರ ಕಿಂಚಿತ್ತು ಬೆಲೆ ಕೊಡಲಿಲ್ಲ. ಮಾರ್ಚ್ 15ರಿಂದ ವಿದೇಶಿ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರ್ಕಾರ, ಮಾರ್ಚ್ 18ರಂದು ವಿದೇಶಗಳಿಗೆ ರಫ್ತಾಗುತ್ತಿದ್ದ ಮಾಸ್ಕ್ ಹಾಗೂ ವೆಂಟಿಲೇಟರ್ ಗಳ ಮೇಲೆ ನಿರ್ಬಂಧ ಹೇರಿತ್ತು. ಇದೀಗ ಲಾಕ್ ಡೌನ್ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ದೇಶದ ಜನರ ಎದುರು ಪ್ರಧಾನಿ ನರೇಂದ್ರ ಮೋದಿ ಕ್ಷಮಾಪಣೆ ಕೇಳುತ್ತಿದ್ದಾರೆ.

Also Read: ‘ಲಾಕ್ ಡೌನ್’ ಸಂಕಷ್ಟ ನಿವಾರಣೆಗೆ ಸೋನಿಯಾಗಾಂಧಿ ಮತ್ತು ಚಿದಂಬರಂ ಪ್ರಧಾನಿಗೆ ನೀಡಿದ ಸಲಹೆಗಳೇನು ಗೊತ್ತಾ?

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೇಶವನ್ನು ಲಾಕ್ ಡೌನ್
ಮಾಡಿರುವ ಕಾರಣ ಲಕ್ಷಾಂತರ ಮಂದಿಗೆ ಉಣ್ಣಲು ಅನ್ನ ಸಿಗುತ್ತಿಲ್ಲ. ಹಸಿವಿನಿಂದ ಜೀವನ ನಡೆಸುವಂತಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 3 ರೂಪಾಯಿ ದರದ ಅಕ್ಕಿ ಇನ್ನು ಜನಸಾಮಾನ್ಯರ ಕೈ ಸೇರಿಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಮುಂದಿನ 2 ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ಕೊಡುವ ನಿರ್ಧಾರವೂ ಇನ್ನೂ ಜಾರಿಯಾಗಿಲ್ಲ. ಆದರೆ ನಮ್ಮ ದೇಶದಿಂದ ಮಾಲ್ಡೀವ್ಸ್ ಗೆ ಪ್ರಮುಖ ಆಹಾರ ಹಾಗೂ ಔಷಧಿಗಳನ್ನು ರಫ್ತು ಮಾಡಲಾಗಿದೆ. ಇದಕ್ಕೆ ಸಾಕ್ಷಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ನಷೀದ್ ಮಾಡಿರುವ ಫೋಟೋ ಟ್ವೀಟ್. ಜೊತೆಗೆ ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ಭಾರತ ನಮಗೆ ನೆರವು ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಮಾಲ್ಡೀವ್ಸ್
ನಲ್ಲಿ ಇಲ್ಲೀವರೆಗೂ ಪತ್ತೆಯಾಗಿರುವ ಕರೋನಾ ವೈರಸ್

ಸೋಂಕಿನ ಸಂಖ್ಯೆ ಕೇವಲ 17, ಅದರಲ್ಲಿ 13 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಉಳಿದಿದ್ದು ಕೇವಲ 4 ಜನರು ಮಾತ್ರ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಅಂದರೆ ನಮ್ಮ ದೇಶಕ್ಕಿಂತಲೂ ಮಾಲ್ಡೀವ್ಸ್ ತುಂಬಾ ಉತ್ತಮ ಪರಿಸ್ಥಿತಿಯಲ್ಲಿದೆ. ನಮ್ಮ ದೇಶದಲ್ಲೇ ಪರಿಸ್ಥಿತಿ ಹದಗೆಟ್ಟಿರುವಾಗ ಬೇರೆ ದೇಶಕ್ಕೆ ಸಹಾಯ ಹಸ್ತ ಚಾಚಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿದೆ. ಸಹಾಯ ಮಾಡುವುದು ಮಾನವೀಯ ಧರ್ಮ. ಅದರಲ್ಲೂ ನಮ್ಮ ಭಾರತದ ಸಂಸ್ಕೃತಿ. ಆದರೆ ನಮಗೇ ತಿನ್ನಲು ಅನ್ನ ಇಲ್ಲದಿರುವಾಗ ಎನ್ನುವುದು ಯೋಚಿಸಬೇಕಾದ ವಿಚಾರ.

ಸಹಾಯದ ವಿಚಾರ ಒಂದು ಕಡೆಗೆ ಇರಲಿ. ಕರೋನಾ ವೈರಸ್ ರಾಜ್ಯಕ್ಕೆ ದಾಂಗುಡಿ ಇಟ್ಟ ಕೂಡಲೇ ಆರೋಗ್ಯ ಸಚಿವರು ನಾಪತ್ತೆಯಾಗಿದ್ದರು. ಮಾಧ್ಯಮಗಳು ಆರೋಗ್ಯ ಸಚಿವರು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಸಿಕ್ಕಿದ್ದು, ಮಗಳ ಮದುವೆಯಲ್ಲಿ ಬ್ಯುಸಿ ಎನ್ನುವ ಉತ್ತರ. ಆರೋಗ್ಯ ಸಚಿವರು ಕರೋನಾ ವೈರಸ್ ಪತ್ತೆಯಾದ ಮೇಲೂ ಮದುವೆ ತುಂಬಾ ಸರಳವಾಗಿರಲಿ, ನೂರು ಜನರ ಸಂಖ್ಯೆ ಮೀರುವುದು ಬೇಡ ಎಂದು ಸಿಎಂ ಆದೇಶ ಮಾಡಿದ ಬಳಿಕವೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ನಡೀತು. ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿದ್ದರೂ ವಾರದ ಕಾಲ ಆರೋಗ್ಯ ಸಚಿವರು ತಿರುಗಿಯೂ ನೋಡಲಿಲ್ಲ. ಆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ನಾನು ನೋಡಿಕೊಳ್ತಿದ್ದೇನೆ, ಎಂದು ಬಂದರು. ಆಗ ಯಾವ ಇಲಾಖೆ ಕರೋನಾ ವೈರಸ್
ಸೋಂಕಿನ ಬಗ್ಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಚಿವರು ಕಿತ್ತಾಡಿಕೊಂಡರು. ಆರೋಗ್ಯ ಇಲಾಖೆ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ಜವಾಬ್ದಾರಿ, ವೈದ್ಯಕೀಯ ಶಿಕ್ಷಣ ಇಲಾಖೆ ಬೆಂಗಳೂರು ಜಿಲ್ಲಾ ಉಸ್ತುವಾರಿ ಎಂದು ವಿಂಗಡಿಸಿದ್ದು, ಇನ್ನೂ ಕೂಡ ಗೊಂದಲ ಬಗೆಹರಿದಿಲ್ಲ.

ಯಾರೂ ಹೇಗಾದರೂ ಕೆಲಸ ಮಾಡಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜವಾಬ್ದಾರಿಯುತವಾಗಿ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಜನರೇ ನೀವು ಮಾತ್ರ ಮನೆಯಿಂದ ಹೊರಕ್ಕೆ ಬರದಿರಿ. ಕರೋನಾ ವೈರಸ್ ನಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು. ಸರ್ಕಾರಗಳು ಸತ್ತ ಮೇಲೆ ಲೆಕ್ಕಕ್ಕೆ ಬರುವಂತಿದೆ.

Tags: Central Health MinisterCorona VirusDr harshwardhanPM Narendra Modiಕರೋನಾ ಸೋಂಕುಕೇಂದ್ರ ಆರೋಗ್ಯ ಮಂತ್ರಿ
Previous Post

ಕರೋನಾ ಕಾಲದಲ್ಲೂ ವರ್ಚಸ್ಸು ವೃದ್ಧಿಯ ಖಯಾಲಿಗೆ ‘ಪಿಎಂ ಕೇರ್ಸ್’?

Next Post

ʼವರ್ಕ್‌ ಫ್ರಂ ಹೋಮ್‌ʼ – ʼವರ್ಕ್‌ ಫಾರ್‌ ಹೋಮ್‌ʼ ; ಉದ್ಯೋಗಸ್ಥ ಗೃಹಿಣಿಯರಿಗೆ ಕರೋನಾ ತಂದಿಟ್ಟ ಫಜೀತಿ..!

Related Posts

Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
0

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ರುವ ನಾಡಪ್ರಭು ಕೆಂಪೇಗೌಡ...

Read moreDetails
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025

Tiger: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಸೇರಿ ಮೂರು ಹುಲಿ ಮರಿಗಳ ಅಸಹಜ ಸಾವು ತನಿಖೆಗೆ ಸಚಿವರ ಆದೇಶ

June 26, 2025

Santosh Lad: ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025
Next Post
ʼವರ್ಕ್‌ ಫ್ರಂ ಹೋಮ್‌ʼ - ʼವರ್ಕ್‌ ಫಾರ್‌ ಹೋಮ್‌ʼ ; ಉದ್ಯೋಗಸ್ಥ ಗೃಹಿಣಿಯರಿಗೆ ಕರೋನಾ ತಂದಿಟ್ಟ ಫಜೀತಿ..!

ʼವರ್ಕ್‌ ಫ್ರಂ ಹೋಮ್‌ʼ - ʼವರ್ಕ್‌ ಫಾರ್‌ ಹೋಮ್‌ʼ ; ಉದ್ಯೋಗಸ್ಥ ಗೃಹಿಣಿಯರಿಗೆ ಕರೋನಾ ತಂದಿಟ್ಟ ಫಜೀತಿ..!

Please login to join discussion

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada