
ಸಿಎಂ ರಾಜೀನಾಮೆ ಬಗ್ಗೆ ವಿಜಯೇಂದ್ರ ಕನಸು ಕಾಣ್ತಿದ್ದಾರೆ.ಇವರು ಮೊದಲು ಯತ್ನಾಳ್ ಬಾಯಿ ಮುಚ್ಚಿಸಲಿ.ಸಿಎಂ ರಾಜೀನಾಮೆಗೆ ಬಿವೈ ವಿಜಯೇಂದ್ರ ಆಗ್ರಹ ಮಾಡುತ್ತಿರುವುದು ಸರಿಯಲ್ಲ.

ರಾತ್ರಿಯೆಲ್ಲ ಕನಸು ಕಂಡು ಬೆಳಿಗ್ಗೆ ಎದ್ದು ಮಾತನಾಡುತ್ತಾರೆ. ಯತ್ನಾಳ್, ರಮೇಶ್ ಜಾರಾಕಿಹೊಳಿ ಅವರು ಅಧ್ಯಕ್ಷರೇ ಇಲ್ಲ ಅಂತಾ ಇದ್ದಾರೆ.ವಿಜಯೇಂದ್ರ ಅವರೇ ನೀವು ಮೊದಲು ಅವರ ಬಾಯಿ ಮುಚ್ಚಿಸಿ ಅಮೇಲೆ ನಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡಿ ಎಂದು ಗಣಿಗ ರವಿಕುಮಾರ್ ಬಿವೈ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.