ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renuka swamy murder case) ಸದ್ಯ ಬಳ್ಳಾರಿ ಜೈಲಿನಲ್ಲಿರೋ ಆಗಿರೋ ಆರೋಪಿ ನಟ ದರ್ಶನ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ (radhika kumaraswamy) ಮಾತನಾಡಿದ್ದಾರೆ.ದಿಢೀರ್ ಅಂತ ದರ್ಶನ್ (Actor darshan) ಅವರು ಅರೆಸ್ಟ್ ಆಗಿರೋ ಸುದ್ದಿ ಕೇಳಿ ಶಾಕ್ ಆಯ್ತು ಎಂದು ಹೇಳಿದ್ದಾರೆ.
ದರ್ಶನ್ ಓರ್ವ ಸೂಪರ್ ಸ್ಟಾರ್.ನಮ್ಮ ಕನ್ನಡ ಇಂಡಸ್ಟ್ರಿಗೆ ಅವರ ಅವಶ್ಯಕತೆಯಿದೆ. ದರ್ಶನ್ ಅವರ ಖಾಸಗಿ ಬದುಕಲ್ಲಿ ಏನು ನಡೆದಿದೆ ಅನ್ನೋದು ಅವರಿಗೆ ಮಾತ್ರ ಗೊತ್ತು.ಕಾನೂನಿನ ಬಗ್ಗೆಯಾಗಲಿ, ಅಧಿಕಾರಿಗಳ ಬಗ್ಗೆಯಾಗಲಿ ಮಾತನಾಡುವಷ್ಟು ನಾನು ದೊಡ್ಡವಳಲ್ಲ ಎಂದು ರಾಧಿಕಾ ಹೇಳಿದ್ದಾರೆ.
ದರ್ಶನ್ರಿಗೆ ಸದ್ಯ ಏನೆಲ್ಲಾ ಕಷ್ಟಗಳು ಬಂದಿದೆ ಅದೆಲ್ಲವೂ ದೂರಾಗ್ಲಿ. ಆದಷ್ಟು ಬೇಗ ಒಳ್ಳೆಯದಾಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತನಾಡಿದ್ದಾರೆ.