ಕಿಡ್ನಾಪ್ ಕೇಸ್ನಲ್ಲಿ (kidnap) ಅರೆಸ್ಟ್ ಆಗಿದ್ದ ರೇವಣ್ಣ (Revanna) ಕಳೆದ 4 ದಿನಗಳಿಂದ ಎಸ್ಐಟಿ (SIT) ಕಸ್ಟಡಿಯಲ್ಲಿದ್ದಾರೆ.ಇವತ್ತಿಗೆ ಹೆಚ್.ಡಿ. ರೇವಣ್ಣ (HD Revanna) ಎಸ್ಐಟಿ ಕಸ್ಟಡಿ ಅಂತ್ಯಗೊಳ್ಳಲಿದ್ದು, ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನೂ ಎಸ್ಐಟಿ ಅಧಿಕಾರಿಗಳ ವಿಚಾರಣೆ ಇನ್ನೂ ಮುಂದುವರಿಯಬೇಕಿದೆ.
ಎಸ್ಐಟಿ ವಿಚಾರಣೆಯಲ್ಲಿ ರೇವಣ್ಣ ಏನನ್ನೂ ಹೇಳದೇ ಕೇವಲ ನನಗೇನು ಗೊತ್ತಿಲ್ಲ ಅಂತಾ ಒಂದೇ ಪದವನ್ನೇ ಹೇಳುತ್ತಿದ್ದಾರೆ.ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ 3 ದಿನ ಕಸ್ಟಡಿಗೆ ಕೊಡುವಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ (court) ಮನವಿ ಮಾಡುವ ಸಾಧ್ಯತೆ ಇದೆ.
ನಿನ್ನೆ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೆಚ್.ಡಿ.ರೇವಣ್ಣ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ (C.V Nagesh) ವಾದ ಮಂಡಿಸಿದ್ರು. ಒಂದು ವೇಳೆ ಬೇಲ್ ನೀಡಿದರೆ ಪೊಲೀಸ್ ಕಸ್ಟಡಿ ಹೇಗೆ ಮುಂದುವರೆಸಲು ಸಾಧ್ಯ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಜಾಮೀನು ನೀಡಬಹುದು ಎಂದು ವಕೀಲರು ಹೇಳಿದ್ದಾರೆ.