• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಲೆ ಶ್ರೇಷ್ಠ, ಕಾಲು ಕನಿಷ್ಠವೇ? ವಿವಿಧ ಆಯಾಮಗಳ ಚರ್ಚೆಗೆ ಕಾರಣವಾದ ʼಮಿಚೆಲ್‌ʼ ಚಿತ್ರ.!

ಪ್ರತಿಧ್ವನಿ by ಪ್ರತಿಧ್ವನಿ
November 21, 2023
in Top Story, ಕರ್ನಾಟಕ, ಕ್ರೀಡೆ, ದೇಶ
0
ತಲೆ ಶ್ರೇಷ್ಠ, ಕಾಲು ಕನಿಷ್ಠವೇ? ವಿವಿಧ ಆಯಾಮಗಳ ಚರ್ಚೆಗೆ ಕಾರಣವಾದ ʼಮಿಚೆಲ್‌ʼ ಚಿತ್ರ.!
Share on WhatsAppShare on FacebookShare on Telegram

ವಿಶ್ವಕಪ್‌ ಸರಣಿಯ ಫೈನಲ್‌ನಲ್ಲಿ ಭಾರತವನ್ನು ಅನಾಯಾಸವಾಗಿ ಮಣಿಸಿರುವ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ವಿಶ್ವಕಪ್‌ ಅನ್ನು ಎತ್ತಿದೆ. ಆದರೆ, ಪಂದ್ಯದ ವಿಜಯದ ಬಳಿಕ ಆಸ್ಟ್ರೇಲಿಯಾದ ಆಲ್​ರೌಂಡರ್ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಚಿತ್ರ ವೈರಲ್‌ ಆಗಿದ್ದು, ಭಾರತೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಭಾರತೀಯ ನಂಬಿಕೆಗಳಲ್ಲಿ ನಿರ್ಜೀವ ವಸ್ತುಗಳಿಗೂ ಗೌರವ ಕೊಡುವ ಸಂಪ್ರದಾಯವಿದ್ದು, ಕಾಲಿನಿಂದ ಒದೆಯುವುದು ಮತ್ತು ಮೆಟ್ಟಿ ನಿಲ್ಲುವುದನ್ನೆಲ್ಲಾ ಅಗೌರವ ಎಂದೇ ಪರಿಗಣಿಸಲಾಗುತ್ತದೆ. ಅದೇ ದೃಷ್ಟಿ ಕೋನದ ಆಧಾರದ ಮೇಲೆ ಮಿಚೆಲ್‌ ಮಾರ್ಷ್‌ ನಡೆಗೆ ತೀವ್ರ ವಿಮರ್ಷೆಗಳು ಬರುತ್ತಿವೆ. ಕೆಲವರು ಮಿಚೆಲ್‌ ನಡೆ ಅಹಂಕಾರದ್ದು ಎಂದು ಪ್ರತಿಪಾದಿಸಿದ್ದರೆ, ಇನ್ನು ಕೆಲವರು ಟ್ರೋಫಿಗೆ ನೀಡಿದ ಅಗೌರವ ಎಂದು ಹೇಳಿದ್ದಾರೆ.

ಟ್ರೋಫಿಗಳಿಗೆ ಪೂಜೆ ಮಾಡುವ ಸಂಪ್ರದಾಯವೂ ನಮ್ಮಲ್ಲಿದೆ, ಆದರೆ, ಗೆದ್ದ ತಂಡದವರು ಅದರ ಮೇಲೆ ಕಾಲಿಟ್ಟು ಅಗೌರವ ತೋರಿಸಿದ್ದು ಸರಿಯಲ್ಲ ಎನ್ನುವುದು ಹಲವರ ಅಂಬೋಣ.

https://twitter.com/_avahgar_/status/1726468003943092681

ಆದರೆ, ಇನ್ನು ಕೆಲವರು ಆಸಿಸ್‌ ಆಟಗಾರರದ್ದು ಅಗೌರವದ ನಡೆಯಲ್ಲ ಎಂದು ಹೇಳಿದ್ದಾರೆ. ಭಾರತೀಯರಿಗೆ ಮಾತ್ರ ಕಾಲು ಕನಿಷ್ಠ, ತಲೆ ಶ್ರೇಷ್ಠ, ಕಣ್ಣು-ಎದೆಗೆ ಒತ್ತಿಕೊಂಡರೆ ಪಾವನ ಎಂಬ ಮೂಢ ನಂಬಿಕೆಗಳಿವೆ. ಬೇರೆ ದೇಶದವರಿಗೂ ಇಂತಹದ್ದೇ ಭಾವನೆ ಇರಬೇಕಾಗಿಲ್ಲ. ನಮ್ಮ ನಂಬಿಕೆಗಳನ್ನು ಅವರ ಮೇಳೆ ಹೇರಬಾರದು ಎಂದು ಹೇಳಿದ್ದಾರೆ.

ಪತ್ರಕರ್ತ ಯತಿರಾಜ್‌ ಬ್ಯಾಲಹಳ್ಳಿ ಅವರು ಈ ಬಗ್ಗೆ ಬರೆದಿದ್ದು, “ಬೆಳಿಗ್ಗೆಯಿಂದ ಈ ಫೋಟೋ ನೋಡಿ ನೋಡಿ ತಲೆ ಸುತ್ತು ಬಂತು…”ಆಸ್ಟ್ರೇಲಿಯಾ ಆಟಗಾರನ ಅಹಂಕಾರ” – ಹಾಗೆ ಹೀಗೆ ಎಂದೆಲ್ಲ ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿರುವ ಜನರನ್ನು ನೋಡಿ ನಗುವೂ ಬಂತು…ಇದು ಎಡಿಟೆಡ್‌ ಫೋಟೋವೋ, ಅಸಲಿ ಫೋಟೋವೋ ಎಂಬುದು ಬೇರೆಯೇ ಪ್ರಶ್ನೆ. ಆದರೆ ಆಸ್ಟ್ರೇಲಿಯಾ ಆಟಗಾರನೊಬ್ಬ ಟ್ರೋಫಿಯ ಮೇಲೆ ಕಾಲಿಟ್ಟರೆ ಇಲ್ಲಿನ ಜನರು ಉರ್ಕೊಳ್ಳುತ್ತಿರುವುದು ಏಕೆ? ಭಾರತದಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯು ತಲೆ, ಭುಜ, ಹೊಟ್ಟೆ, ಕಾಲು- ಇವುಗಳನ್ನು ಜನನಾಂಗಗಳನ್ನಾಗಿ ಮಾಡಿತು. ತಲೆ ಶ್ರೇಷ್ಠ, ಕಾಲು ಕನಿಷ್ಠ ಎಂಬ ಅಜ್ಞಾನವನ್ನು ತುಂಬಲಾಯಿತು. ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ ಎಂದು ತಾರತಮ್ಯ ಬೆಳೆಸಲಾಯಿತು. ಹೀಗಾಗಿ ಕಾಲು ತಾಕಿದರೆ ಅಸ್ಪೃಶ್ಯತೆಯನ್ನು ಆಚರಿಸುವ ಸಮಾಜವಿದು. ಕಾಲು ಮೇಲೆ ಕಾಲು ಹಾಕಿದರೆ ಅಹಂಕಾರದ ಸಂಕೇತವಾಗಿ ಇಲ್ಲಿ ಕಾಣುತ್ತದೆ. ಆದರೆ ಕಾಲು ದೇಹದ ಒಂದು ಭಾಗ ಅಷ್ಟೇ. ಅದನ್ನು ಟ್ರೋಫಿಯ ಮೇಲೆ ಇಟ್ಟು ಸಂಭ್ರಮಿಸಿದರೆ ಆಸ್ಟ್ರೇಲಿಯನ್ನರನ್ನು ಬೈಯುವುದರಲ್ಲಿ ಅರ್ಥವಿಲ್ಲ. ನಿಮ್ಮ ಅಜ್ಞಾನವನ್ನು ಇನ್ನೊಂದು ಪರಿಸರದ ಜನರ ಮೇಲೆ ಹೇರುವುದು ತಪ್ಪಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಕಾಲು ಕನಿಷ್ಠ ತಲೆ ಮಾತ್ರ ಶ್ರೇಷ್ಠ ಎಂಬ ಧಾರ್ಮಿಕ ವ್ಯಸನಿಗಳು ನಾವು. ‘ದೇಹವೇ ದೇಗುಲ’ ಎಂದು ಬಸವಣ್ಣ ಹೇಳಿರುವಾಗ ನಮ್ಮ ದೇಹದ ಯಾವ ಅಂಗವೂ ಕನಿಷ್ಠವಲ್ಲ ಎಂದು ಹಿರಿಯ ಚಿಂತಕ ವಡ್ಡಗೆರೆ ನಾಗರಾಜಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಮಿಚೆಲ್‌ ಟ್ರೋಫಿ ಮೇಲೆ ಕಾಲಿಟ್ಟಿರುವ ಚಿತ್ರಗಳು ಭಾರತದಲ್ಲಿ ಹೊಸ ಚರ್ಚೆಯನ್ನು ಸೃಷ್ಟಿಸಿದ್ದು, ಕಾಲು ಕನಿಷ್ಠ, ತಲೆ ಶ್ರೇಷ್ಠ ಎಂಬ ನಂಬಿಕೆಯನ್ನು ಮರುಪರಿಶೀಲಿಸುವ, ವಿಮರ್ಷೆಗಳು ನಡೆಯಲಾರಂಭಿಸಿವೆ.

Tags: AustraliaCricketMitchell MarshWorld Cup
Previous Post

ದೃಶ್ಯ ಮಾಧ್ಯಮಗಳು ಮತ್ತು TRP ತಿರುಚುವಿಕೆ : ಡಾ. ಜೆ ಎಸ್ ಪಾಟೀಲ ಅವರ ಬರಹ

Next Post

ಕಂಬಳಕ್ಕೆ ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷನ್ ಸಿಂಗ್ ಸರಿಯಾದ ಆಯ್ಕೆ !

Related Posts

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌
Top Story

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

by ಪ್ರತಿಧ್ವನಿ
May 13, 2026
0

ಚೆನೈ : ನೂತನವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ನಟ ಜೋಸೆಫ್‌ ವಿಜಯ್‌ ತಮ್ಮ ಮಿತ್ರಪಕ್ಷಗಳ ಮನವಿಗೆ ಸ್ಪಂದಿಸಿ, ತಮ್ಮ ಓಎಸ್‌ಡಿಯಾಗಿದ್ದ ಜ್ಯೋತಿಷ್ಯಿಯ ನೇಮಕವನ್ನು ವಾಪಸ್‌ ಪಡೆದಿದ್ದಾರೆ. ವಿಜಯ್‌ ಪ್ರಮಾಣ ವಚನ...

Read moreDetails
Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
Next Post
ಕಂಬಳಕ್ಕೆ ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷನ್ ಸಿಂಗ್ ಸರಿಯಾದ ಆಯ್ಕೆ !

ಕಂಬಳಕ್ಕೆ ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷನ್ ಸಿಂಗ್ ಸರಿಯಾದ ಆಯ್ಕೆ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada