ಭಾನುವಾರ ಅಂದರೆ ಸರ್ಕಾರಿ ಕಚೇರಿಗಳು ಬಂದ್ ಇರೋದು ಸರ್ವೇ ಸಾಮಾನ್ಯ, ಆದರೆ ಇಂದು ಬೆಸ್ಕಾಂ ಹಾಗೂ ನಾಡಕಚೇರಿ ಓಪನ್ ಇರಲಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬೆಸ್ಕಾಂ ಹಾಗೂ ನಾಡಕಚೇರಿ ಓಪನ್ ಮಾಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಬೆಸ್ಕಾಂ ಹಾಗೂ ನಾಡಕಚೇರಿ ಸಿಬ್ಬಂದಿಗೆ ಈ ದಿನವೂ ಕರ್ತವ್ಯ ನಿರ್ವಹಿಸಲಿದೆ.
ಬೆಳಗ್ಗೆ 11 ಗಂಟೆಯಿಂದ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಕಚೇರಿಗೆ ಬಂದು ಜನತೆ ಫ್ರೀ ವಿದ್ಯುತ್ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಉಚಿತ ವಿದ್ಯುತ್ ಸೌಕರ್ಯಕ್ಕೆ ನೋಂದಣಿ ಮಾಡಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಎಂಜಿ ರಸ್ತೆಯ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ಎರಡು ಕೌಂಟರ್ಗಳನ್ನು ತೆರೆಯಲಾಗಿದೆ.