ಮಾಜಿ ಸಿಎಂ ಬಿಎಸ್ ವೈ ಅವರ ತಮ್ಮ ವಿಧಾಯದ ಭಾಷಣ ರಾಜ್ಯದ ಜನತೆ ಭಾಷಣ ಕೇಳಿ ಭಾವುಕರಾದ್ರು ನಿಜ, ಅದ್ರೆ ಇಂದು ಕರ್ನಾಟಕದ ಪ್ರಭಾವಿ ರಾಜಕಾರಣಿ ಬಗ್ಗೆ ಕನ್ನಡದಲ್ಲಿ ಟ್ವೀಟ್ ಮಾಡಿ, ಬಿಎಸ್ವೈ ಭಾಷಣದ ವಿಡಿಯೊ ಹಂಚಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಮೋದಿ ಅವರು ಟ್ವೀಟ್ ಗೆ ಕರ್ನಾಟಕ ಬಿಜೆಪಿ ಘಟಕವು ಟ್ವೀಟ್ ಮಾಡಿದೆ. ಕೇಂದ್ರೀಯ ಸಂಸದ್ರೀಯ ಮಂಡಳಿ ಸದಸ್ಯರಾದ ಬಿಎಸ್ವೈ ನವರು ಮನದಾಳದ ಮಾತುಗಳ ಮೂಲಕ ಟ್ಟೀಟ್ ಮಾಡಿದ್ದಾರೆ.
ಬಿಜೆಪಿ ಪಕ್ಷದ ನಾಯಕರಾಗಲಿ ಕಾರ್ಯಕರ್ತರಾಗಲಿ ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಟ್ಟುಕೊಡುಬಾರದು ಪಕ್ಷಕ್ಕಾಗಿ ರಾಜ್ಯದ ಜನತೆಗಾಗಿ ನಿಷ್ಟೆಯಿಂದೆ ಕೆಲಸ ಮಾಡಬೇಕು ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ನನ್ನ ಉಸಿರು ಇರುವವರೆಗೂ ಬಿಜೆಪಿಯೊಂದಿಗೆ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ .
ಬಿಜೆಪಿ ಪಕ್ಷವಾಗಲಿ ನಮ್ಮ ನಾಯಕರಾದ ನರೇಂದ್ರ ಮೋದಿ ಅವರೇ ಅಗಲಿ ನನ್ನನ್ನು ಕಡೆಗಣಿಸಿಲ್ಲ ನಮ್ಮ ರಾಜ್ಯದಲ್ಲಿ ರಾಜಿಕೀಯ ವಲಯದಲ್ಲಿ ನನ್ನ ಬಗ್ಗೆ ಮಾತನಾಡುತ್ತಾರೆ . ಬಿಜೆಪಿ ಪಕ್ಷ ಹಾಗೂ ಮೋದಿ ಅವರು ಯಡಿಯೂರಪ್ಪನವರನ್ನು ಕಡೆಗಣಿಸಿದೆ ಎಂದು ಹೇಳುತ್ತಿದ್ದಾರೆ. ಇದೇ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷದವರು ದೊಡ್ಡ ಮಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನಾನು ಅವರಿಗೆ ಒಂದು ಮಾತು ಹೇಳ್ತಿನಿ ನಮ್ಮ ಬಿಜೆಪಿ ಅಗಲಿ ನಮ್ಮ ನಾಯಕರಾದ ಮೋದಿಯಾಗಲಿ ನನ್ನನ್ನು ಕಡೆಗಣಿಸಿಲ್ಲ ಎಂದು ಬಿಎಸ್ವೈ ಖಡಕ್ ಆಗಿ ವಿರೋಧ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.