• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

2022 ರ ಹಿನ್ನೋಟ: ಕೋಮು ರಾಜಕಾರಣ, ಧ್ವೇಷದ ಆಡಳಿತ, ಲೂಟಿಕೋರ ಸರ್ಕಾರಕ್ಕೆ ನಲುಗಿದ ಕರ್ನಾಟಕ

Shivakumar A by Shivakumar A
December 31, 2022
in Top Story, ಕರ್ನಾಟಕ
0
2022 ರ ಹಿನ್ನೋಟ: ಕೋಮು ರಾಜಕಾರಣ, ಧ್ವೇಷದ ಆಡಳಿತ, ಲೂಟಿಕೋರ ಸರ್ಕಾರಕ್ಕೆ ನಲುಗಿದ ಕರ್ನಾಟಕ
Share on WhatsAppShare on FacebookShare on Telegram



2022 ನೇ ವರ್ಷದ ಕೊನೆಯ ದಿನದಲ್ಲಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ತೀವ್ರಗೊಂಡ ಧ್ವೇಷದ ರಾಜಕೀಯ ಕರ್ನಾಟಕದಲ್ಲಂತೂ ವಿಪರೀತ ಅನ್ನಿಸುವಷ್ಟರ ಮಟ್ಟಿಗೆ ತಲುಪಿದವು. ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕುಗಳ ನಿರಾಕರಣೆ, ಮುಸ್ಲಿಂ ವ್ಯಾಪಾರಿಗಳ ಮೇಲಿನ ದಾಳಿಗಳು, ಪಠ್ಯ ಪುಸ್ತಕದಲ್ಲಿ ನುಸುಳಿದ ಕೋಮು ಧ್ರುವೀಕರಣ, ಹಲಾಲ್‌-ಜಟ್ಕಾ ವಿವಾದಗಳು, ಈದ್ಗಾ ಮೈದಾನದ ವಿವಾದ, ಕೋಮು ರಾಜಕಾರಣಕ್ಕೆ ಸರಣಿ ಹತ್ಯೆಗಳು, ಮಳಲಿ ಮಸೀದಿ, ಮೈಸೂರು ಬಸ್‌ ನಿಲ್ದಾಣದ ಗುಂಬಜ್‌ ವಿವಾದ, ಶ್ರೀರಂಗಪಟ್ಟಣ ಮಸೀದಿ ವಿರುದ್ಧದ ನಡೆವಳಿಗಳು ಹೀಗೆ ಹತ್ತು ಹಲವು ವಿವಾದಗಳು ಕರ್ನಾಟಕವನ್ನು ದೇಶಮಟ್ಟದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಿತು.

ADVERTISEMENT

ಇನ್ನು ಇತರೆ ಹಗರಣಗಳೂ ಭಾರೀ ಸದ್ದನ್ನೇ ಮಾಡಿದವು.  ಬಿಜೆಪಿ ಸಚಿವ ಈಶ್ವರಪ್ಪ ವಿರುದ್ಧ ಲಂಚದ ಆರೋಪ ಮಾಡಿ ಆತ್ಮಹತ್ಯೆ ಮಾಡಿದ ಗುತ್ತಿಗೆದಾರ, 40% ಕಮಿಷನ್‌, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಅನರ್ಹರ ನೇಮಕ, ಮತದಾರರ ಮಾಹಿತಿ ಕಳ್ಳತನ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸೇರಿದಂತೆ ಸಮವಸ್ತ್ರಗಳ ಕೊರತೆ, ಸರ್ಕಾರಿ ಶಾಲೆಗೆ ಪೋಷಕರಿಂದ ದೇಣಿಗೆ ಸಂಗ್ರಹ, ಪಿಎಸ್‌ಐ ನೇಮಕಾತಿ ಹಗರಣ ಹೀಗೆ ಸಾಲು ಸಾಲು ಹಗರಣಗಳು ಕರ್ನಾಟಕ ಸರ್ಕಾರನ್ನು ತೀವ್ರ ಮುಜುಗರಕ್ಕೆ ಈಡಾಗಿಸಿದವು.

ಮುಂದಿನ ವರ್ಷ ವಿಧಾನಸಭೆ ಚುನಾವಣೆಯೂ ಇರಲಿರುವುದರಿಂದ 2022 ರಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳೂ ನಡೆದವು. ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡಿದ ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆ, ಜೆಡಿಎಸ್‌ನ ಪಂಚರತ್ನ ರಥಯಾತ್ರೆ, ಜನತಾ ಜಲಧಾರೆ, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ, ಮೇಕೆದಾಟು ಯಾತ್ರೆ, ಬಿಜೆಪಿಯ ಜನಸಂಕಲ್ಪ ರಥಯಾತ್ರೆ, ಎಎಪಿ, ಕೆಆರ್‌ಎಸ್‌ ಮೊದಲಾದ ಪಕ್ಷಗಳ ರಾಜಕೀಯ ಚಟುವಟಿಕೆಗಳು ರಾಜ್ಯ ರಾಜಕಾರಣವನ್ನು ರಂಗು ರಂಗಾಗಿಸಿದವು. ಸಿದ್ಧರಾಮೋತ್ಸವ, ನೇಪಥ್ಯಕ್ಕೆ ಸರಿದ ಬಿಎಸ್‌ವೈ, ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ, ಮುಸ್ಲಿಂ ಓಲೈಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡ ಜೆಡಿಎಸ್‌, ಪೇಸಿಎಂ ಅಭಿಯಾನ ಹೀಗೆ ಹಲವು ಕುತೂಹಲಕಾರಿ ಘಟನೆಗಳು ಜರುಗಿದವು.

ಅದಲ್ಲದೆ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ರೇಣುಕಾಚಾರ್ಯರ ಅಣ್ಣನ ಪುತ್ರನ ಅಸಹಜ ಸಾವು, ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ, ಡಿ.ಕೆ ಸುರೇಶ್ ನಡುವಿನ ಜಟಾಪಟಿ, ಸಚಿವ ಎಂಟಿಬಿ ನಾಗರಾಜ್‌, ಶರತ್‌ ಬಚ್ಚೇಗೌಡರ ನಡುವಿನ ಜಟಾಪಟಿ, ಈಶ್ವರಪ್ಪ ರಾಜಿನಾಮೆ, ರೇಣುಕಾಚಾರ್ಯ ಪುತ್ರಿಯ ನಕಲಿ ಜಾತಿ ಪ್ರಮಾಣ ಪತ್ರ,  ಅಂಬೇಡ್ಕರ್‌ ಅವರಿಗೆ ಅವಮಾನ, ದಲಿತರ ಮಹಾ ಪ್ರತಿಭಟನೆ, ಒಳಮೀಸಲಾತಿಗಾಗಿ ಹೆಚ್ಚಾದ ಬೇಡಿಕೆ, ಪ್ರಬಲ ಜಾತಿಗಳ ಮೀಸಲಾತಿ ಪ್ರತಿಭಟನೆ ಹೀಗೆ ಹಲವು ಬೆಳವಣಿಗೆಗಳು ಸದಾ ಚರ್ಚೆಗಳನ್ನು ಜೀವಂತವಾಗಿರಿಸಿದವು.

ಬೆಂಗಳೂರು ಸೇರಿದಂತೆ ಹಲವೆಡೆ ನೆರೆ ಪರಿಸ್ಥಿತಿ, ಮಾನವ vs ಕಾಡುಪ್ರಾಣಿಗಳ ನಡುವಿನ ಸಂಘರ್ಷಗಳು, ಚಿರತೆ, ಆನೆ, ಕರಡಿ ಸೇರಿದಂತೆ ಕಾಡುಪ್ರಾಣಿಗಳಿಂದ ಬೇಸತ್ತ ಜನತೆ, ಮೊದಲಾದ ಸಮಸ್ಯೆಗಳನ್ನೂ ಕರ್ನಾಟಕದ ಜನತೆ ಅನುಭವಿಸಿದರು.

ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ, ದರ್ಶನ್‌ ಮೇಲಿನ ಚಪ್ಪಲಿ ಎಸೆತ ಪ್ರಕರಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಾರ್‌ ಮೇಲೆ ಮುತ್ತಿಗೆ ಸೇರಿದಂತೆ ಹಲವು ಘಟನೆಗಳು ಚರ್ಚೆಗಳನ್ನು ಎಬ್ಬಿಸಿದವು.

ಕಾಂತಾರ ಚಿತ್ರ ವಿಶ್ವದ ಗಮನ ಸೆಳೆದರೆ, ಕೆಜಿಎಫ್-2, ಚಾರ್ಲಿ777 ವಿಕ್ರಾಂತ್‌ ರೋಣ, ಜೇಮ್ಸ್‌ ಮೊದಲಾದ ಚಿತ್ರಗಳು ಕನ್ನಡ ಚಿತ್ರರಂಗದ ದಿಕ್ಕನ್ನು ಇನ್ನಷ್ಟು ವಿಶಾಲವಾಗಿಸಿದವು. ರಿಷಬ್‌ ಶೆಟ್ಟಿಯಂತೂ ದೇಶಾದ್ಯಂತ ಮನೆ ಮಾತಾದರು.

Previous Post

ಅಮುಲ್‌ – ನಂದಿನಿ ವಿಲೀನದ ಸುಳಿವು ನೀಡಿದ ಅಮಿತ್‌ ಶಾ? ಕನ್ನಡಿಗರಿಂದ ವ್ಯಾಪಕ ಆಕ್ರೋಶ

Next Post

ಇವತ್ತು ವರ್ಷದ ಕೊನೆಯ ದಿನ.. ನೀವು ಏನ್​ ಮಾಡ್ಬೇಕು..? ಏನ್​ ಮಾಡ್ಬಾರ್ದು..?

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

April 17, 2026
ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

April 16, 2026
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
Next Post
ಇವತ್ತು ವರ್ಷದ ಕೊನೆಯ ದಿನ.. ನೀವು ಏನ್​ ಮಾಡ್ಬೇಕು..? ಏನ್​ ಮಾಡ್ಬಾರ್ದು..?

ಇವತ್ತು ವರ್ಷದ ಕೊನೆಯ ದಿನ.. ನೀವು ಏನ್​ ಮಾಡ್ಬೇಕು..? ಏನ್​ ಮಾಡ್ಬಾರ್ದು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada