• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮತ್ತೆ ಸಕ್ರಿಯ ಸೂಚನೆ ನೀಡಿದ BSY : ಈ ಬಾರಿ ಪ್ರವಾಸದ ಗುರಿ ಯಾವುದು?

Shivakumar by Shivakumar
February 28, 2022
in Top Story, ಕರ್ನಾಟಕ
0
ಮತ್ತೆ ಸಕ್ರಿಯ ಸೂಚನೆ ನೀಡಿದ BSY : ಈ ಬಾರಿ ಪ್ರವಾಸದ ಗುರಿ ಯಾವುದು?
Share on WhatsAppShare on FacebookShare on Telegram

ರಾಜ್ಯ ಬಿಜೆಪಿಯಲ್ಲಿ (Karnataka BJP) ಕಳೆದ ಆರೇಳು ತಿಂಗಳುಗಳಿಂದ ಬಹುತೇಕ ತೆರೆಮರೆಗೆ ಸರಿದಿದ್ದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (Ex CM B.S Yediyurappa) ಮತ್ತೆ ರಂಗಪ್ರವೇಶದ ಸೂಚನೆ ನೀಡಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ (Bengaluru) ತಮ್ಮ ನಿವಾಸದಲ್ಲಿ ಹುಟ್ಟುಹುಬ್ಬ ಆಚರಿಸಿಕೊಂಡ ಅವರು ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾತನಾಡುತ್ತಾ, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ (State tour) ಮಾಡುವ ತಮ್ಮ ಮಾತನ್ನು ಪುನರುಚ್ಛರಿಸಿದ್ದಾರೆ. ಮತ್ತೊಮ್ಮೆ ರಾಜ್ಯವನ್ನು ಸುತ್ತುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಜನ ನಮಗೆ ನಿಶ್ಚಿತವಾಗಿಯೂ ಅಧಿಕಾರದ ಆಶೀರ್ವಾದ ಮಾಡಲಿದ್ದಾರೆ ಎಂಬ ಭರವಸೆ ಇದೆ. ಈ ಕಾಂಗ್ರೆಸ್ (Congress) ನವರ ಬೂಟಾಟಿಕೆ ನಡೆಯೋದಿಲ್ಲ. ವಿಧಾನಮಂಡಲನದ ಬಜೆಟ್ ಅಧಿವೇಶನದ (Budget Session) ನಂತರ ರಾಜ್ಯ ಪ್ರವೇಶ ಆರಂಭಿಸುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ!

ಬಿಟ್ ಕಾಯಿನ್ (Bit Coin), ನಲವತ್ತು ಪರ್ಸೆಂಟ್ ಕಮೀಷನ್ ಸೇರಿದಂತೆ ಭಾರೀ ಹಗರಣಗಳ ನಡುವೆ ಕೋಮು ಗಲಭೆ (communal violence) ಮತ್ತು ಸಚಿವ ಈಶ್ವರಪ್ಪ (Eshwarappa) ರಾಷ್ಟ್ರದ್ರೋಹಿ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯ ವಿರುದ್ಧದ ಆಡಳಿತ ವಿರೋಧಿ ಅಲೆ ಮಡುಗಟ್ಟುತ್ತಿರುವ ಹೊತ್ತಿನಲ್ಲಿ ಆಪತ್ಬಾಂಧವನಂತೆ ಯಡಿಯೂರಪ್ಪ ಅವರು ಮತ್ತೆ ರಂಗ ಪ್ರವೇಶ ಮಾಡುವ ಮಾತುಗಳನ್ನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Also Read : ಸಿದ್ದರಾಮಯ್ಯ- ಯಡಿಯೂರಪ್ಪ ಭೇಟಿ: ಎಚ್ಡಿಕೆ ಹೇಳಿಕೆಯ ಹಿಂದಿನ ಲಾಜಿಕ್ ಏನು?

ಏಕೆಂದರೆ, ಕಳೆದ ಜುಲೈನಲ್ಲಿ ಅವರ ಪದಚ್ಯುತಿಯ ಬಳಿಕ ಕೂಡ ಯಡಿಯೂರಪ್ಪ ರಾಜ್ಯಪ್ರವಾಸ ಮಾಡುವುದಾಗಿಯೂ ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿಯೂ ಹೇಳಿದ್ದರು. ಅಷ್ಟೇ ಅಲ್ಲ; ಸುಮಾರು ಮೂರು ತಿಂಗಳ ಕಾಲ ನಿರಂತರವಾಗಿ ರಾಜ್ಯ ಪ್ರವಾಸದ ಕುರಿತು ಪದೇಪದೆ ಹೇಳಿಕೆ ನೀಡುತ್ತಲೇ ಇದ್ದರು. ಮತ್ತೊಂದು ಕಡೆ ಯಡಿಯೂರಪ್ಪ ರಾಜ್ಯಪ್ರವಾಸಕ್ಕೆ ತಯಾರಿಗಳು ನಡೆಯುತ್ತಿದ್ದವು ಕೂಡ. ಆದರೆ, ಅವರು ಏಕಾಂಗಿಯಾಗಿ ರಾಜ್ಯಪ್ರವಾಸ ಮಾಡುವುದಕ್ಕೆ ಬಿಜೆಪಿ ವರಿಷ್ಠರು ಅಡ್ಡಗಾಲು ಹಾಕಿದ್ದರು. ಪ್ರವಾಸ ಮಾಡುವುದೇ ಆದರೆ ಪಕ್ಷದ ರಾಜ್ಯ ನಾಯಕರೊಂದಿಗೆ ಸಮಾಲೋಚಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷದ ಅಧಿಕೃತ ಕಾರ್ಯಕ್ರಮವಾಗಿ ಮಾಡಲಿ ಎನ್ನುವ ಮೂಲಕ ಅವರು ರಾಜಕೀಯವಾಗಿ ಸಕ್ರಿಯವಾಗಿರುವುದು ಪಕ್ಷಕ್ಕೆ ಅಗತ್ಯವಿಲ್ಲ ಎಂಬ ಸಂದೇಶವನ್ನು ದೆಹಲಿಯ ವರಿಷ್ಠರು ರವಾನಿಸಿದ್ದರು.

ವರಿಷ್ಠರು ತಮ್ಮ ಯೋಜನೆಗೆ ಹಸಿರು ನಿಶಾನೆ ತೋರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಅವರಿಗೆ, ಅವರ ಆಪ್ತರ ಮೇಲೆ ಇಡಿ-ಐಟಿ ದಾಳಿಯ (ED-IT) ಮೂಲಕ ದೆಹಲಿಯ ವರಿಷ್ಠರು (Delhi HIghCommand) ಬೇರೆಯದೇ ಸಂದೇಶ ರವಾನಿಸಿದ್ದರು. ಆ ಸಂದೇಶ ಬರುತ್ತಲೇ ತಮ್ಮ ರಾಜ್ಯಪ್ರವಾಸವನ್ನಷ್ಟೇ ಅಲ್ಲದೆ, ಪಕ್ಷದೊಂದಿಗಿನ ಒಡನಾಟವನ್ನೂ ಮೊಟಕುಗೊಳಿಸಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಯಡಿಯೂರಪ್ಪ ತೆರೆಮರೆಗೆ ಸರಿದಿದ್ದರು. ಅಷ್ಟೇ ಅಲ್ಲ, ಅವರ ಪುತ್ರ ಬಿ ವೈ ವಿಜಯೇಂದ್ರ (BS Vijayendra) ಕೂಡ ಪಕ್ಷದೊಳಗೆ ಸಕ್ರಿಯವಾಗಿರಲಿಲ್ಲ.

ಆ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಮುನ್ನ ಯಡಿಯೂರಪ್ಪ ತಮ್ಮ ಬೆಂಬಲಿಗರೊಂದಿಗೆ ಪಕ್ಷ ತೊರೆದು ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿದ್ದಾರೆ. ಮುಖ್ಯಮಂತ್ರಿಯಾಗಿರುವಾಗಲೇ ಪಕ್ಷದ ಒಂದು ಬಣ ಆರ್ ಎಸ್ ಎಸ್ (RSS) ಹಿನ್ನೆಲೆಯ ವರಿಷ್ಠ ನಾಯಕರೊಬ್ಬರ ಚಿತಾವಣೆಯಿಂದ ತಮ್ಮನ್ನು ಕೆಳಗಿಳಿಸಲು ನಿರಂತರ ಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಗಲೇ ಪರ್ಯಾಯ ರಾಜಕೀಯ ವೇದಿಕೆ (Altranative Politics) ಕಟ್ಟುವ ನಿಟ್ಟಿನಲ್ಲಿ ವಿಜಯೇಂದ್ರ ಮೂಲಕ ವೇದಿಕೆ ಸಜ್ಜುಗೊಳಿಸಿದ್ದರು. ಆದರೆ, ಇಡಿ ದಾಳಿ, ಐಟಿ ದಾಳಿ ಮತ್ತು ಪಿಎ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಂತಹ ಅಸ್ತ್ರಗಳನ್ನು ಪ್ರಯೋಗಿಸಿ ಬಿಜೆಪಿ ವರಿಷ್ಠರು ಯಡಿಯೂರಪ್ಪ ಮತ್ತು ವಿಜಯೇಂದ್ರ ವೇಗಕ್ಕೆ ಕಡಿವಾಣ ಹಾಕಿದ್ದರು.

ಆ ಹಿನ್ನೆಲೆಯಲ್ಲಿಯೇ ವರಿಷ್ಠರ ತಂತ್ರಗಳಿಗೆ ಮಣಿದ ಯಡಿಯೂರಪ್ಪ ತೆರೆಮರೆಗೆ ಸರಿದಿದ್ದರು ಮತ್ತು ಪ್ರಾದೇಶಿಕ ಪಕ್ಷ ಕಟ್ಟುವ ನಿಟ್ಟಿನಲ್ಲಿ ಕಾದುನೋಡುವಂತೆ ತಮ್ಮ ಪುತ್ರ ವಿಜಯೇಂದ್ರ ಅವರಿಗೂ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಂಪುಟ ಪುನರ್ ರಚನೆಯ ಪ್ರಸ್ತಾಪದ ಮೂಲಕ ಯಡಿಯೂರಪ್ಪ ಬೆಂಬಲಿಗ ಶಾಸಕರು ಬಿಜೆಪಿ ವರಿಷ್ಠರ ಪ್ರತಿಕ್ರಿಯೆ ನೋಡುವ ಪ್ರಯತ್ನ ಮಾಡಿದ್ದರು. ಆ ವೇಳೆ ದೆಹಲಿಗೆ ಭೇಟಿ ನೀಡಿದ್ದ ಬೆಂಬಲಿಗರಿಗೆ ಉತ್ತರಪ್ರದೇಶ (Uttar Pradesh) ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಕಾಯುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿಯೇ ಬಿಟ್ ಕಾಯಿನ್ ಹಗರಣ ಮತ್ತು ಶೇ.40ರಷ್ಟು ಲಂಚದ ವಿಷಯದಲ್ಲಿ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರೇ ಕೇಳಿಬಂದಾಗಲಾಗಲೀ, ಅದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಿರಂತರ ಆರೋಪಗಳನ್ನು ಮಾಡಿದಾಗಲಾಗಲೀ ಯಡಿಯೂರಪ್ಪ ತುಟಿ ಬಿಚ್ಚಿರಲಿಲ್ಲ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಕೆ ಎಸ್ ಈಶ್ವರಪ್ಪ ಹೇಳಿಕೆಯ ವಿಷಯದಲ್ಲಾಗಲೀ, ಅಥವಾ ತಮ್ಮ ತವರು ಜಿಲ್ಲೆಯ ಶಿವಮೊಗ್ಗ (Shivamogga) ಕೋಮುದಳ್ಳುರಿಯಲ್ಲಿ ಹೊತ್ತಿ ಉರಿದ ಬಗ್ಗೆಯಾಗಲೀ, ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವರ ಆಡಳಿತ ವೈಫಲ್ಯದಿಂದಾಗಿ ನಿರಂತರವಾಗಿ ರಾಜ್ಯಾದ್ಯಂತ ಮರುಕಳಿಸುತ್ತಲೇ ಇರುವ ಕಾನೂನು ಮತ್ತು ಸುವ್ಯವಸ್ಥೆಯ ಬಿಕ್ಕಟ್ಟಿನ ಬಗ್ಗೆಯಾಗಲೀ ಯಡಿಯೂರಪ್ಪ ಮಾತನಾಡಿರಲೇ ಇಲ್ಲ!

Also Read : ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!

ಆದರೆ, ಇದೀಗ ದಿಢೀರನೆ ಯಡಿಯೂರಪ್ಪ ರಾಜ್ಯಪ್ರವಾಸದ ಮಾತನಾಡಿದ್ದಾರೆ. ಈ ನಡುವೆ, ಇಷ್ಟು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದ ವಿಜಯೇಂದ್ರ ಮೊನ್ನೆ ತಾನೇ ಶಿವಮೊಗ್ಗದ ಮೃತ ಹರ್ಷನ ಮನೆಗೆ ಭೇಟಿ ಮಾಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅದಾದ ಬೆನ್ನಲ್ಲೇ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮಾತನಾಡಿದ್ದಾರೆ.

ಆದರೆ, ಈ ಬಾರಿ ತಮ್ಮ ಪುತ್ರನ ರಾಜಕೀಯ ಭವಿಷ್ಯ ಭದ್ರ ಮಾಡುವ ನಿಟ್ಟಿನಲ್ಲಿ ನಿಜವಾಗಿಯೂ ಬಿಜೆಪಿಯೊಂದಿಗೆ ಹೆಜ್ಜೆ ಹಾಕಲು ಯೋಚಿಸಿದ್ದಾರೆಯೇ? ಅಥವಾ ಪುತ್ರನ ರಾಜಕೀಯ ಮಹತ್ವಾಕಾಂಕ್ಷೆಯಾದ ಪರ್ಯಾಯ ರಾಜಕೀಯ ವೇದಿಕೆಗೆ ಅಡಿಪಾಯ ಹಾಕಲು ಯೋಜಿಸಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Tags: Altranative PoliticsB Y Vijayendrabengalurubit coinBudjet SessionCommunal ViolenceDelhi HIghCommandED-ITK S EshwarappaRSSShivamoggaState tourUttar Pradeshಆರಗ ಜ್ಞಾನೇಂದ್ರಕಾಂಗ್ರೆಸ್ಕೆ ಎಸ್ ಈಶ್ವರಪ್ಪಬಸವರಾಜ ಬೊಮ್ಮಾಯಿಬಿ ಎಸ್ ಯಡಿಯೂರಪ್ಪಬಿ ವೈ ವಿಜಯೇಂದ್ರಬಿಜೆಪಿಬಿಟ್ ಕಾಯಿನ್ ಹಗರಣ
Previous Post

ಹಿಜಾಬ್ ಧರಿಸಿ ಪ್ರಾಯೋಗಿಕ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರು; ಅವಕಾಶ ನಿರಾಕರಿಸಿದ ಕಾಲೇಜು ಮಂಡಳಿ !

Next Post

Uttarakhand | ರುದ್ರಪ್ರಯಾಗದ ಸರಿಯಲ್ಲಿ ಭಾರೀ ಭೂ ಕುಸಿತ; ತೀವ್ರಗೊಂಡ ರಕ್ಷಣಾ ಕಾರ್ಯಚರಣೆ

Related Posts

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
Serial

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

by ಪ್ರತಿಧ್ವನಿ
October 13, 2025
0

ಸಾಮಾಜಿಕ  ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ  ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ,...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post
Uttarakhand | ರುದ್ರಪ್ರಯಾಗದ ಸರಿಯಲ್ಲಿ ಭಾರೀ ಭೂ ಕುಸಿತ; ತೀವ್ರಗೊಂಡ ರಕ್ಷಣಾ ಕಾರ್ಯಚರಣೆ

Uttarakhand | ರುದ್ರಪ್ರಯಾಗದ ಸರಿಯಲ್ಲಿ ಭಾರೀ ಭೂ ಕುಸಿತ; ತೀವ್ರಗೊಂಡ ರಕ್ಷಣಾ ಕಾರ್ಯಚರಣೆ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada