ಸತತ ಎರಡನೇ ಬಾರಿ ಭಾರೀ ಜನಮತದೊಂದಿಗೆ ಆಯ್ಕೆಯಾಗಿ ಬಂದ ಮೋದಿ, ತನ್ನ ಮೊದಲಿನ ಅವಧಿಯಂತೆಯೇ ಭಾರತದ ಆರ್ಥಿಕತೆ ಮೇಲೇಳುವಂತೆ ಯಾವ ಗಹನವಾದ ಯೋಜನೆಗಳನ್ನು ತರಲಿಲ್ಲ. ಬದಲಾಗಿ ಮುಂದುವರೆಯುವ ದೇಶಗಳ ಪಟ್ಟಿಯಲ್ಲಿದ್ದ ಭಾರತವನ್ನು ತನ್ನ ವಿಫಲ ಆರ್ಥಿಕ ನೀತಿಯಿಂದ ಹಿಂದಕ್ಕೆ ತಂದಿದ್ದು ನಿಜಕ್ಕೂ ವಿಪರ್ಯಾಸ.
ಭಾರತ ಸದ್ಯ ಕರೋನಾ, ಅದರ ಹಿನ್ನಲೆಯಲ್ಲಿ ಜಾರಿಗೆ ತಂದ ಲಾಕ್ಡೌನ್ ದೇಶದ ಆರ್ಥಿಕ ಕುಸಿತಕ್ಕೆ ಕಾರಣವೆಂದು ಮೋದಿ ಹಾಗೂ ಪಟಾಲಂ ಜಾರಿಕೊಳ್ಳಬಹುದು. ಆದರೆ ಭಾರತದ ಆರ್ಥಿಕತೆ ಕರೋನಾ ಬರುವ ಹಿಂದೆಯೆ ಕುಸಿತ ಕಾಣಲು ತೊಡಗಿತ್ತು.
ಯಾವುದೇ ಪಕ್ಷವಾದ ಸರ್ಕಾರವಿರಲಿ, ಪತ್ರಿಕೋದ್ಯಮವು ದೇಶದ ಜನರ ಪರ ನಿಂತು ವಿರೋಧ ಪಕ್ಷದಂತೆ ವರ್ತಿಸಬೇಕು ಎಂಬ ನಿಲುವಿರುವ “ಪ್ರತಿಧ್ವನಿ” ಮೋದಿ ನೇತೃತ್ವದ ಸರ್ಕಾರ ಮಾಡಿರುವ ವಿಫಲ ಆರ್ಥಿಕ ನೀತಿಯ ಕುರಿತು ಸಂಧರ್ಭಕ್ಕನುಸಾರವಾಗಿ ವಿಮರ್ಷಿಸುತ್ತಾ ಬಂದಿದೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗುತ್ತಿರುವ ಹಿನ್ನಲೆಯಲ್ಲಿ, ಸರ್ಕಾರ ಆರ್ಥಿಕ ನೀತಿಯ ಕುರಿತು ಮಾಡಿರುವ ವರದಿಗಳಲ್ಲಿ ಮುಖ್ಯವಾದುದನ್ನು ಮತ್ತೆ ನಿಮ್ಮ ಮುಂದೆ ಇಡುತ್ತಿದ್ದೇವೆ.
ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮೋದಿ ವಿಫಲವಾಗಿರುವುದು ಏಕೆ ಗೊತ್ತಾ?
ಸರಕಾರ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ರಿಸರ್ವ್ ಬ್ಯಾಂಕಿನ ಮೊರೆ ಹೋಗಿದ್ದು ಸಾಲ ಮಾರುಕಟ್ಟೆಗೆ ಹಣದ ಹರಿವನ್ನು ಹೆಚ್ಚಿಸಲು ಸರಕಾರ ಬಿಡುಗಡೆ ಮಾಡುವ ಬಾಂಡ್ ಗಳ ಖರೀದಿಗೆ ಮುಂದಾಗಬೇಕೆಂದು ಕೋರಿದೆ. ಈಗ ಸರಕಾರವು ತನ್ನ ಹಣಕಾಸು ಪರಿಸ್ಥಿತಿಯನ್ನು ಉತ್ತಮಗೊಳಿಸುವುದರ ಜತೆಗೇ ದೇಶದ ಆರ್ಥಿಕತೆ, ಉತ್ಪಾದನೆ, ಜಿಡಿಪಿ ಬೆಳವಣಿಗೆ ಮತ್ತು ಆದಾಯನ್ನೂ ಹೆಚ್ಚಿಸುವತ್ತ ಚಿಂತೆ ಮಾಡಬೇಕಿದೆ.
ನರೇಂದ್ರ ಮೋದಿ ದುಸ್ಸಾಹಸಕ್ಕೆ ಮತ್ತೊಮ್ಮೆ ನಲುಗಲಿದೆಯೇ ದೇಶದ ಆರ್ಥಿಕತೆ?
ಪೌರತ್ವ ತಿದ್ದುಪಡಿ ಕಾನೂನು ಸಾಮಾಜಿಕ ಸಮಸ್ಯೆ ಆದರೂ, ಆಳದಲ್ಲಿ ಇದು ಆರ್ಥಿಕ ಸಮಸ್ಯೆಯೂ ಹೌದು. ಈಗಾಗಲೇ ನಲುಗಿರುವ ಆರ್ಥಿಕತೆಯು ಮತ್ತಷ್ಟು ನಲುಗಲಿದೆ. ಪ್ರತಿಭಟನೆಯ ವಿಷವರ್ತುಲವನ್ನು ನರೇಂದ್ರ ಮೋದಿಯಾಗಲೀ ,ಅಮಿತ್ ಶಾ ಆಗಲೀ ಅರಿತಂತಿಲ್ಲ.
ವಿತ್ತೀಯ ಸಂಕಟವನ್ನು ಎದುರಿಸಲು ಪ್ರಕಟಿಸಿದ ಕ್ರಮಗಳು ಕೇವಲ ತೇಪೆಯ ಸ್ವರೂಪದವು. ಸಮೂಹ ಮಾಧ್ಯಮಗಳ ತಲೆಬರೆಹಗಳನ್ನು ಮೆದುಗೊಳಿಸಿ ನಿರ್ವಹಿಸುವ ಕಸರತ್ತು ಅಷ್ಟೇ.
ಮೋದಿ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲಾ, ರುಪಾಯಿ ಮೌಲ್ಯವೂ ಕುಸಿತ!
2014ರಲ್ಲಿನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ರುಪಾಯಿ ಮೌಲ್ಯವು ಪ್ರತಿ ಡಾಲರ್ ಗೆ 58.52 ಇದ್ದದ್ದುಪ್ರಸ್ತುತ (ನವೆಂಬರ್ 26 ರಂದು) 71.62ಕ್ಕೆ ಕುಸಿದಿದೆ. ಈ ಅವಧಿಯಲ್ಲಿ 13.2746 ರುಪಾಯಿಗಳಷ್ಟುಮೌಲ್ಯ ಕುಸಿದಿದೆ.