• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಬಾಯಲ್ಲಿ ಬಾಯ್ಕಾಟ್ ಚೀನಾ, ಬಗಲಲ್ಲಿ ಸಾಲ: ಬಯಲಾಯ್ತು ಡಬ್ಬಲ್ ಸ್ಟ್ಯಾಂಡರ್ಡ್ !

by
September 17, 2020
in ಅಭಿಮತ
0
ಬಾಯಲ್ಲಿ ಬಾಯ್ಕಾಟ್ ಚೀನಾ
Share on WhatsAppShare on FacebookShare on Telegram

ಕಳೆದ ಕೆಲವು ತಿಂಗಳುಗಳಿಂದ ಪ್ರಧಾನಿ ಮೋದಿಯವರ ಸರ್ಕಾರ ದೇಶದಲ್ಲಿ 85 ಸಾವಿರ ಜನರನ್ನು ಬಲಿತೆಗೆದುಕೊಂಡಿರುವ ಕರೋನಾ ವಿರುದ್ಧದ ಸಮರಕ್ಕಿಂತಲೂ, ಹೆಚ್ಚು ತಲೆ ಕೆಡಿಸಿಕೊಂಡಿರುವುದು ಗಡಿ ತಂಟೆಕೋರ ಚೀನಾದ ವಿರುದ್ಧದ ಆನ್ ಲೈನ್ ಸಮರದ ವಿಷಯದಲ್ಲಿಯೇ. ಸುಮಾರು ಮೂರು ತಿಂಗಳ ಅವಧಿಯಲ್ಲಿ ಮೂರು ಕಂತುಗಳಲ್ಲಿ ಬಿಜೆಪಿ ಸರ್ಕಾರ ನಡೆಸಿದ ಡಿಜಿಟಲ್ ಸರ್ಜಿಕಲ್ ದಾಳಿಯಲ್ಲಿ ಚೀನಾದ ನೂರಾರು ಆ್ಯಪ್ ಮತ್ತು ವೆಬ್ ಸೈಟುಗಳ ದೇಶದಿಂದ ಕಾಲುಕಿತ್ತಿವೆ.

ADVERTISEMENT

ಇದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಚೀನಾ ವಿರುದ್ಧದ ದಿಗ್ವಿಜಯ ಎಂದೇ ಬಣ್ಣಿಸಲಾಗಿದ್ದು, ಅದಕ್ಕಾಗಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವನ್ನು ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಹಾಡಿಹೊಗಳಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜೂ.15ರಂದು ಚೀನಾ ಯೋಧರೊಂದಿಗೆ ಗಡಿ ಸಂಘರ್ಷದ ವೇಳೆ 20 ಮಂದಿ ಭಾರತೀಯ ಯೋಧರ ಹತ್ಯೆಯಾಗಿದ್ದರು. ಅದಾಗಿ ಕೇವಲ ಹದಿಮೂರು ದಿನದಲ್ಲೇ ಚೀನಾದ ವಿರುದ್ಧ ಕಿಡಿಕಾರಿದ್ದ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಚೀನಾ ಸರಕು ಬಹಿಷ್ಕರಿಸಲು ದೇಶದ ಜನತೆಗೆ ಬಹಿರಂಗ ಕರೆ ನೀಡಿದ್ದರು. “ಲಡಾಖ್ ನಲ್ಲಿ ತನ್ನ ಗಡಿ ಮೇಲೆ ಕಣ್ಣಿಟ್ಟಿದ್ದವರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಹೇಗೆ ಪರಸ್ಪರ ಸ್ನೇಹ, ವಿಶ್ವಾಸದಿಂದ ಇರಬೇಕು ಎಂಬುದನ್ನು ಬಲ್ಲ ಭಾರತ, ಸಂದರ್ಭ ಬಂದರೆ ಎಂಥ ಪ್ರತ್ಯುತ್ತರ ನೀಡಬೇಕು ಎಂಬುದನ್ನು ಬಲ್ಲದು. ಚೀನಾದ ಸರಕುಗಳನ್ನು ಬಹಿಷ್ಕರಿಸಲು ಭಾರತೀಯರು ಶಪಥ ಮಾಡಿದ್ದಾರೆ. ಇದು ಆ ದೇಶಕ್ಕೆ ಭಾರತೀಯರು ನೀಡುತ್ತಿರುವ ತಿರುಗೇಟು. ಇದು ಆತ್ಮನಿರ್ಭರ ಭಾರತದ ಪ್ರತ್ಯುತ್ತರ” ಎಂದು ಹೇಳಿದ್ದರು. ತಮ್ಮ ಪ್ರಸಿದ್ಧ ‘ವೋಕಲ್ ಫಾರ್ ಲೋಕಲ್’ ಘೋಷಣೆಯನ್ನೂ ಪುನರುಚ್ಛರಿಸಿದ್ದ ಮೋದಿ, ಅದಾಗಲೇ ತಮ್ಮ ಪಕ್ಷದವರು ಮತ್ತು ಸಂಘಪರಿವಾರದ ಮಂದಿ ಚೀನಾ ವಸ್ತು ಬಹಿಷ್ಕಾರಕ್ಕೆ ನೀಡಿದ್ದ ಕರೆಯನ್ನು ಕೊಂಡಾಡಿದ್ದರು.

ಆ ಮುನ್ನ, ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕ ದುಃಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಚೀನಾ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಬಹುದು ಎಂಬ ಯುರೋಪ್ ಮತ್ತು ಅಮೆರಿಕದಂತೆಯೇ, ಭಾರತ ಕೂಡ ಚೀನಾ ಹೂಡಿಕೆಗೆ ನಿರ್ಬಂಧ ಹೇರಿತ್ತು. ಏ.17ರಂದು ತನ್ನ ವಿದೇಶ ನೇರ ಬಂಡವಾಳ ಹೂಡಿಕೆ ಕಾನೂನಿಗೆ ತಿದ್ದುಪಡಿ ತಂದು, ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ಯಾವುದೇ ರಾಷ್ಟ್ರದ ಬಂಡವಾಳ ದೇಶದೊಳಗೆ ಬರಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂದು ಹೇಳಲಾಗಿತ್ತು.

ಹಾಗಾಗಿ ಒಂದು ಕಡೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಬ್ರೇಕ್, ಮತ್ತೊಂದು ಕಡೆ ಚೀನಾ ವಸ್ತುಗಳ ಬಹಿಷ್ಕಾರದ ಮೂಲಕ ದೇಶ ಆರ್ಥಿಕವಾಗಿ ಚೀನಾಕ್ಕೆ ಭರ್ಜರಿ ಪೆಟ್ಟುಕೊಟ್ಟಿದೆ ಎಂದು ಬೀಗುತ್ತಿರುವ ಹೊತ್ತಿಗೇ, ಜುಲೈ 29ರಂದು ಟಿಕ್ ಟಾಕ್ ಸೇರಿದಂತೆ ಬರೋಬ್ಬರಿ 59 ಮೊಬೈಲ್ ಆ್ಯಪ್ ನಿಷೇಧಿಸುವ ಮೂಲಕ ಮೋದಿಯವರ ಸರ್ಕಾರ ಚೀನಾದ ವಿರುದ್ಧ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು. ಆ ಬಳಿಕ ಮತ್ತೆ ಸೆ.2ರಂದು ಪಬ್ಜೀ ಸೇರಿದಂತೆ ಸುಮಾರು 118 ಆ್ಯಪ್ ಗಳನ್ನು ನಿಷೇಧಿಸಲಾಗಿತ್ತು. ಮೋದಿಯವರ ಈ ಹೊಡೆತವನ್ನಂತೂ ಚೀನಾದ ಪಾಲಿಗೆ ಮರ್ಮಾಘಾತದ ಪೆಟ್ಟು ಎಂದೇ ಸಾಮಾಜಿಕ ಜಾಲತಾಣ ಮತ್ತು ಬಹುತೇಕ ಮಾಧ್ಯಮಗಳು ಬಣ್ಣಿಸಿದ್ದವು. ಟಿವಿ ವಾಹಿನಿಗಳಂತೂ ದಿನಗಟ್ಟಲೆ ಈ ಡಿಜಿಟಲ್ ಸರ್ಜಿಕಲ್ ದಾಳಿಯ ಗುರಿ, ಪರಿಣಾಮ ಮತ್ತು ಚೀನಾದ ಇಡೀ ಅರ್ಥವ್ಯವಸ್ಥೆಗೆ ಹೇಗೆ ಇದು ಸುಧಾರಿಸಿಕೊಳ್ಳಲಾಗದ ಪೆಟ್ಟು ನೀಡಲಿದೆ ಎಂದು ಬಗೆಬಗೆಯಲ್ಲಿ ಬಣ್ಣಿಸಿದ್ದವು.

ಅಲ್ಲಿಗೆ ಚೀನಾದ ವಿರುದ್ಧ ಭಾರತ ಸಂಪೂರ್ಣ ದಿಗ್ವಿಜಯ ಸಾಧಿಸಿಯೇ ಬಿಟ್ಟಿತು. ಜಾಗತಿಕ ಮಟ್ಟದಲ್ಲಿ ಕೂಡ ಭಾರತದ ಈ ತಂತ್ರಗಾರಿಕೆಯಿಂದಾಗಿ ಚೀನಾಕ್ಕೆ ದೊಡ್ಡ ಹಿನ್ನೆಡೆಯಾಗಿದೆ ಎಂದೇ ಬಿಜೆಪಿ ಮತ್ತು ಸಂಘಪರಿವಾರ ದೇಶದ ಮನೆಮನೆಗೆ ಈ ಸಂಭ್ರಮದ ಸುದ್ದಿ ದಾಟಿಸಿದ್ದವು. ಸಂಭ್ರಮಿಸಿದ್ದವು.

ಆದರೆ,..ಈಗ ಬುಧವಾರ ತಾನೆ ಸಂಸತ್ತಿನಲ್ಲಿ ಅದೇ ಮೋದಿವರ ಸರ್ಕಾರ ಬಹಿರಂಗಪಡಿಸಿರುವ ಗುಟ್ಟೊಂದು ಹಾಗೆ ಸಂಭ್ರಮಿಸಿದವರು ಎದೆಯೊಡೆದುಕೊಳ್ಳುವಂತೆ ಮಾಡಿದೆ!

ಹೌದು, ಅತ್ತ ಗಡಿಯಲ್ಲಿ ಏಪ್ರಿಲ್ ನಿಂದಲೇ ಚೀನಾ ಗಡಿ ಉಲ್ಲಂಘನೆ, ಸೇನಾ ಜಮಾವಣೆ ನಡೆಸುತ್ತಿದ್ದರೆ, ಮೇ 8ರಂದು ಭಾರತ ಕರೋನಾ ನಿರ್ವಹಣೆಗಾಗಿ ಕಾಸಿಗಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು! ಇದು ಕರೋನಾ ಲಾಕ್ ಡೌನ್ ಅವಧಿಯಲ್ಲಿ ಚೀನಾದಿಂದ ಭಾರತ ಪಡೆದ ಮೊದಲ ಸಾಲದ ವಿಷಯ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಲಡಾಖ್ ಗಡಿಯಲ್ಲಿ ಚೀನಾ ತಂಟೆ ತೆಗೆದು, ನಮ್ಮ ಗಡಿಯೊಳಗೆ ನುಗ್ಗಿ, ನಮ್ಮ 20 ಮಂದಿ ಯೋಧರು ಆ ಸಂಘರ್ಷದಲ್ಲಿ ಸಾವು ಕಂಡಿದ್ದರೆ, ಆ ಬಗ್ಗೆ ಅಧಿಕೃತ ಹೇಳಿಕೆ ದಾಖಲಿಸುವ ಮುಂಚೆ ಭಾರತ ಚೀನಾದೊಂದಿಗೆ ಮತ್ತೊಂದು ಸಾಲಕ್ಕಾಗಿ ಎರಡನೇ ಒಪ್ಪಂದಕ್ಕೆ ಸಹು ಹಾಕಿದೆ. ಹೌದು ಗಡಿಯಲ್ಲಿ ಜೂ.15ರಂದು 20 ಮಂದಿ ಯೋಧರ ಹತರಾದರೆ, ಭಾರತ ಸರ್ಕಾರ ಜೂನ್ 19ರಂದು ಎರಡನೇ ಸಾಲಕ್ಕೆ ಸಹಿ ಹಾಕಿದೆ!

ಈ ವಿಷಯವನ್ನು ಬುಧವಾರ ಸಂಸತ್ತಿನಲ್ಲಿ ಸ್ವತಃ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರೇ ಬಹಿರಂಗಪಡಿಸಿದ್ದಾರೆ. ಚೀನಾದ ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ಪಡೆದ ಈ ಸಾಲದ ಜೊತೆಗೆ, ಕೋವಿಡ್ ನಿರ್ವಹಣೆಗಾಗಿ ಭಾರತ, ವಿಶ್ವಬ್ಯಾಂಕಿನಿಂದಲೂ ಒಟ್ಟು 18,386 ಕೋಟಿ ರೂ. ಮೊತ್ತದ ಮೂರು ಸಾಲಗಳನ್ನು ಪಡೆದಿದೆ ಎಂದು ಸಚಿವರು ವಿವರಿಸಿದ್ದಾರೆ.

ಅಂದರೆ; ಕ್ರಮವಾಗಿ ಮೇ 8 ಮತ್ತು ಜೂನ್ 19ರಂದು ಎರಡು ಸಾಲಗಳಿಗೆ ಸಹಿ ಮಾಡಿ, ಚೀನಾದಿಂದ ಒಟ್ಟು 9000 ಕೋಟಿ ರೂ. ಸಾಲ(3,676 ಕೋಟಿ ಮೊದಲ ಸಾಲ ಮತ್ತು 5,514 ಕೋಟಿ ರೂ. ಎರಡನೇ ಸಾಲ) ಪಡೆದ ಬಳಿಕ, ಜೂನ್ 28ರಂದು ಪ್ರಧಾನಿ ಮೋದಿಯವರು ಚೀನಾದ ವಿರುದ್ಧ ಗುಡುಗಿದ್ದರು! ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಭಾರತೀಯರು ಚೀನಾಕ್ಕೆ ಬೆಚ್ಚಿಬೀಳಿಸುವ ತಿರುಗೇಟು ನೀಡಿದ್ದಾರೆ ಎಂದು ಹೇಳಿದ್ದರು!

“ಹೇಳುವುದು ಒಂದು ಮಾಡುವುದು ಮತ್ತೊಂದು ನಂಬುವುದು ಹೇಗೋ ಕಾಣೆ…” ಎಂಬ ಸಾಲುಗಳನ್ನು ನೆನಪಿಸುವ ಮೋದಿ ಮತ್ತು ಅವರ ಸರ್ಕಾರದ ಸಾಂಪ್ರದಾಯಿಕ ವರಸೆಗೆ ಈ ಚೀನಾ ಸಾಲ ಪ್ರಕರಣ ಮತ್ತೊಂದು ಸೇರ್ಪಡೆಯಷ್ಟೇ. ಈ ಮೊದಲು ಪಾಕಿಸ್ತಾನದ ವಿಷಯದಲ್ಲಿ ಕೂಡ ಹಿಂದಿನ ಸರ್ಕಾರಗಳು ಮೃದುಧೋರಣೆ ಹೊಂದಿವೆ, ಶತ್ರುರಾಷ್ಟ್ರದೊಂದಿಗೆ ಕೈಕುಲುಕುತ್ತಿವೆ ಎಂದು ಹೇಳುತ್ತಲೆ ಚುನಾವಣೆಗಳನ್ನು ನಡೆಸಿದ್ದ ಮೋದಿಯವರು, ಸ್ವತಃ ತಾವೇ ಪ್ರಧಾನಿಯಾದ ಬಳಿಕ ಸದ್ದಿಲ್ಲದೆ ಪಾಕಿಸ್ತಾನಕ್ಕೆ ಹೋಗಿ(ಅದೂ ಅಧಿಕೃತ ಆಹ್ವಾನ ಕೂಡ ಇಲ್ಲದೆ) ಅಲ್ಲಿನ ಪ್ರಧಾನಿ ಕೈಕುಲುಕಿ ಭೋಜನ ಸವಿದು ಬಂದಿದ್ದರು. ಇನ್ನು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಪರಿಸರ ಕಾಯ್ದೆಗಳು, ಕಪ್ಪುಹಣ, ಬ್ಯಾಂಕಿಂಗ್ ವಂಚನೆ, ಖಾಸಗೀಕರಣ, ಜಿಡಿಪಿ ಬೆಳವಣಿಗೆ, ಆರ್ಥಿಕತೆ, ನಿರುದ್ಯೋಗ, .. ಸೇರಿದಂತೆ ಪ್ರತಿ ವಿಷಯದಲ್ಲಿಯೂ ಪ್ರಧಾನಿಯಾಗುವ ಮುಂಚೆ ಮತ್ತು ಆ ಬಳಿಕದ ಮೋದಿ ಅವರ ನಡೆ ಮತ್ತು ನುಡಿಗಳ ನಡುವೆ ತಾಳಮೇಳವೇ ಇಲ್ಲದ್ದನ್ನು ದೇಶ ಕಂಡಿದೆ.

ದೇಶವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಕಟ್ಟುತ್ತೇನೆ ಎನ್ನುತ್ತಲೇ ನೋಟು ರದ್ದತಿ, ಜಿಎಸ್ ಟಿಯಂತಹ ಅಪ್ರಾಯೋಗಿಕ ನೀತಿಗಳ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿದೆ. ಇದೀಗ ಚೀನಾದ ವಿಷಯದಲ್ಲಿ ಕೂಡ ಮೋದಿ ಮತ್ತು ಅವರ ಸರ್ಕಾರದ ಡಬ್ಬಲ್ ಸ್ಟ್ಯಾಂಡರ್ಡ್ ಬೀದಿಗೆ ಬಿದ್ದಿದೆ. ಅದೂ ಅವರದೇ ಸಂಪುಟದ ಸದಸ್ಯರೇ ಅಧಿಕೃತವಾಗಿ ಸಂಸತ್ತಿನ ಒಳಗೇ ಆ ಗುಟ್ಟನ್ನು ರಟ್ಟುಮಾಡಿದ್ದಾರೆ!

Tags: china-india border disputeಭಾರತ ಚೀನಾ ಒಪ್ಪಂದಭಾರತ-ಚೀನಾ ಗಡಿ ವಿವಾದ
Previous Post

ದೆಹಲಿ ಗಲಭೆ: ʼಸತ್ಯʼಶೋಧನಾ ವರದಿಯಲ್ಲಿ ಬುಡಮೇಲಾದ ಘಟನಾವಳಿಗಳ ವಿಶ್ಲೇಷಣೆ | ಭಾಗ-2

Next Post

ವೈಫಲ್ಯದ ಬೆನ್ನು ಬಿದ್ದಿರುವ ವಿಪಕ್ಷ- ಅಧಿಕಾರದಾಹಿ ಸ್ವಪಕ್ಷ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ವೈಫಲ್ಯದ ಬೆನ್ನು ಬಿದ್ದಿರುವ ವಿಪಕ್ಷ- ಅಧಿಕಾರದಾಹಿ ಸ್ವಪಕ್ಷ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ

ವೈಫಲ್ಯದ ಬೆನ್ನು ಬಿದ್ದಿರುವ ವಿಪಕ್ಷ- ಅಧಿಕಾರದಾಹಿ ಸ್ವಪಕ್ಷ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ

Please login to join discussion

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada