• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜನಾಗ್ರಹ ಮತ್ತು ಬಿಬಿಎಂಪಿ ವತಿಯಿಂದ “ನನ್ನ ನಗರ ನನ್ನ ಬಜೆಟ್ʼʼ ಅಭಿಯಾನ

by
December 21, 2020
in ಕರ್ನಾಟಕ
0
ಜನಾಗ್ರಹ  ಮತ್ತು ಬಿಬಿಎಂಪಿ ವತಿಯಿಂದ "ನನ್ನ ನಗರ ನನ್ನ ಬಜೆಟ್ʼʼ ಅಭಿಯಾನ
Share on WhatsAppShare on FacebookShare on Telegram

ಸ್ವಚ್ಚತೆಗೆ ಸಂಬಂಧಿಸಿದಂತೆ ಮತ್ತು ನಗರಕ್ಕೆ ಯಾವ ಸೌಲಭ್ಯ ಬೇಕು-ಬೇಡಾ ಎಂಬುವುದರ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಭಿಯಾನ #ಮೈ ಸಿಟಿ ಮೈ ಬಜೆಟ್ ಎಂಬ ಅಭಿಯಾನವನ್ನು ಈಗಾಗಲೇ ಪ್ರಾರಂಭಗೊಂಡಿದೆ.

ಬಿಬಿಎಂಪಿ ಸಹಯೋಗದೊಂದಿಗೆ ಅಭಿಯಾನ ನಡೆಸುವ ಜನಾಗ್ರಹ ಸಮಿತಿಯು ʼನನ್ನ ನಗರ ನನ್ನ ಬಜೆಟ್ ಬಿಬಿಎಂಪಿ ಸಹಯೋಗದೊಂದಿಗೆ ಜನಾಗ್ರಹ ನಡೆಸುವ ವಾರ್ಷಿಕ ಬಜೆಟ್ ನಲ್ಲಿ ನಾಗರಿಕರು ಭಾಗವಹಿಸುವಿಕೆಯ ಅಭಿಯಾನವಾಗಿದೆ. ಈ ವರ್ಷ ಅಭಿಯಾನವು ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತೊಡೆದುಹಾಕಲು ಮತ್ತು ಪಾದಚಾರಿ ಸುರಕ್ಷತೆಯನ್ನು ಸುಧಾರಿಸಲು ಕೇಂದ್ರೀಕರಿಸಿದೆ!ʼ ಎಂದು ಹೇಳಿತ್ತು.

2021/2022 ರ ಬಜೆಟ್ ಮಂಡನೆಗೆ ಬಿಬಿಎಂಪಿ ತಯಾರಿ ನಡೆಸುತ್ತಿದ್ದು, ಇದೀಗ ಈ ಅಭಿಯಾನದ ಮೂಲಕ ನಗರಕ್ಕೆ ಏನು ಬೇಕು ಏನು ಬೇಡಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಕಲೆಹಾಕುತ್ತಿದೆ. ಅಂದರೆ ಬಜೆಟ್ ಸಿದ್ಧತೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಈ ಅಭಿಯಾನದಲ್ಲಿ ನಾಗರೀಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬಹುದು. ಈಗಾಗಲೆ ನಾಗರಿಕರಿಂದ ಪ್ರತಿಕ್ರಿಯೆಗಳು ಬಂದಿದ್ದು, ಉತ್ತಮ ಫುಟ್ಬಾತ್, ಶೌಚಾಲಯ, ರಸ್ತೆಗಳ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವರ್ಷದ ಬಜೆಟ್ನಲ್ಲಿ ಶೌಚಾಲಯ ಮತ್ತು ಫುಟ್ಬಾತ್ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮುರಿದ ಪಾದಾಚಾರಿ ಮಾರ್ಗ ಸರಿಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ‌ ವಿಸರ್ಜನೆ ನಿರ್ಭಂಧಿಸುವುದು, ಸ್ವಚ್ಚ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಒಂದು ತಿಂಗಳ ಕಾಲ ಅಭಿಯಾನ ನಡೆಯುತ್ತಿದ್ದು, ವಾಹನಕ್ಕೆ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕನಕಪುರ ರಸ್ತೆಯ ಹಲವು ವಾರ್ಡ್ಗಳಲ್ಲಿ ಅಭಿಯಾನ ನಡೆಸಲಾಗುತ್ತಿದ್ದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಚಾಲನೆ ನೀಡಿದ್ದಾರೆ.

We are working with @Janaagraha1 and @BBMPCOMM to stop public urination in #yellowspots & reclaim our #footpaths through the #mycitymybudget campaign. The vehicle will be in CMKR wards for 3 days starting from today to generate awareness #Bengaluru #BengaluruMission2022 pic.twitter.com/JIJn6HMjEk

— ChangeMakers of Kanakapura Road (CMKR) (@_kanakapuraroad) December 21, 2020


ಪಾಲಿಕೆಯೊಂದಿಗೆ ಜೊತೆಯಾದ ಜನಾಗ್ರಹ ಸಂಘವು ಹಲವು ಅಂಶಗಳನ್ನು ಮುಂದಿಟ್ಟುಕೊಂಡಿದೆ. ನಗರದ ಸ್ವಚ್ಚತೆ, ಪರಿಸರ ಸಂರಕ್ಷಣೆ ಮತ್ತು ಕೆಲವೊಂದು ಸಮಸ್ಯೆಯನ್ನು ಪರಿಹರಿಸಲು ಸಾರ್ವಜನಿಕರ ಸಲಹೆ ಸಹಕಾರ ಅತೀ ಮುಖ್ಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಇದನ್ನು ಸಂಪೂರ್ಣ ತೊಲಗಿಸುವಂತಹ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಶೌಚಾಲಯಗಳ ದುರಸ್ಥಿ ಮತ್ತು ನಿರ್ಮಾಣದ ಕುರಿತು ಹೆಚ್ಚು ಗಮನಹರಿಸುವುದು. ದುರಸ್ಥಿಕೊಂಡ ಫುಟ್ಬಾತ್ ರಸ್ತೆಗಳ ಮರುನಿರ್ಮಾಣಕ್ಕೆ ಗಮನಹರಿಸುವುದು. ಇಂತಹ ಸಮಸ್ಯೆಗಳಿದ್ದಲ್ಲಿ ಪಾಲಿಕೆಯೊಂದಿಗೆ ನೇರವಾಗಿ ಮಾಹಿತಿ ಹಂಚಿಕೊಂಡು ಅಭಿಯಾನಕ್ಕೆ ಭಾಗಿಯಾಗ ಬಹುದೆಂದು ಜನಾಗ್ರಹಾ ಸಿವಿಕ್ ಮುಖ್ಯಸ್ಥೆ ಸಪ್ನಾ ಕರೀಮ್ ಹೇಳಿದ್ದಾರೆ.

Citizens of Bengaluru, The #MyCityMyBudget Bus is now live! Keep a look for it in your area, fill the form & together we can make Bengaluru pedestrian-friendly & free of #yellowspots!
You can also share inputs on https://t.co/5yKNGTL9gY@BBMPCOMM https://t.co/FxGrZjkRNf

— Janaagraha (@Janaagraha1) December 21, 2020


ADVERTISEMENT
Tags: #mycitymybudgetBBMPಬಿಬಿಎಂಪಿ
Previous Post

ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ವೊಡಾಫೊನ್-ಐಡಿಯಾ (Vi) ಟೆಲಿಕಾಂ ಸಂಸ್ಥೆ

Next Post

ಕರೋನಾದಿಂದ ಚೇತರಿಸುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗ: ಕೇರಳದಲ್ಲಿ ಮೊದಲ ಬಲಿ

Related Posts

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
ಕರ್ನಾಟಕ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

by ಪ್ರತಿಧ್ವನಿ
April 30, 2026
0

ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರುನಲ್ಲಿ ಮಳೆಯ ಪರಿಣಾಮ ಉಂಟಾದ...

Read moreDetails
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
Next Post
ಕರೋನಾದಿಂದ ಚೇತರಿಸುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗ: ಕೇರಳದಲ್ಲಿ ಮೊದಲ ಬಲಿ

ಕರೋನಾದಿಂದ ಚೇತರಿಸುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗ: ಕೇರಳದಲ್ಲಿ ಮೊದಲ ಬಲಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada