• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?

by
June 13, 2020
in ದೇಶ
0
ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?
Share on WhatsAppShare on FacebookShare on Telegram

ಶುಕ್ರವಾರದಂದು ತಮಿಳುನಾಡಿನ ಮಟ್ಟಿಗೆ ದಾಖಲೆ ಮಟ್ಟದ ಕರೋನಾ ಪಾಸಿಟಿವ್ ಕಂಡುಬಂದಿದೆ. ಒಂದೇ ದಿನ 1,982 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 40,698 ತಲುಪಿದೆ. ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೂ ತಮಿಳುನಾಡಿನಲ್ಲಿ ಕರೋನಾ ಮಾರಣಾಂತಿವಾಗಿ ಪರಿಣಮಿಸಿಲ್ಲ. ನಿನ್ನೆಯವರೆಗೂ ಕರೋನಾ ಪತ್ತೆಯಾದವರಲ್ಲಿ ಶೇಕಡಾ 54 ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಶೇಕಡಾವಾರು ಅಂಕಿಅಂಶದಲ್ಲಿ ಮರಣ ಪ್ರಮಾಣವು ಕರ್ಣಾಟಕಕ್ಕಿಂತ ಕಡಿಮೆಯಿದೆ. ವಿಪರೀತ ಪ್ರಮಾಣದಲ್ಲಿ ಕರೋನಾ ಪ್ರಕರಣ ಇರುವ ತಮಿಳುನಾಡಿನಲ್ಲಿ ಕರೋನಾದಿಂದ ಮರಣ ಹೊಂದಿದವರು 0.92% ಮಾತ್ರ.

ADVERTISEMENT

ಇನ್ನು ಗುಜರಾತಿನಲ್ಲಿ ನಿನ್ನೆ ಸಂಜೆಯ ವೇಳೆಗಾಗುವಾಗ ಹೊಸದಾಗಿ 495 ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 22,562 ತಲುಪಿದೆ. ಮೋದಿ ತವರು ರಾಜ್ಯದಲ್ಲಿ ಕರೋನಾ ಮರಣ ಪ್ರಮಾಣ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚಿದೆ. ಅದೇ ವೇಳೆಗೆ ಚೇತರಿಸುವವರ ಪ್ರಮಾಣವು ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳಿಗಿಂತ ಹೆಚ್ಚೇ ಇದೆ. ಇದುವರೆಗೂ ಗುಜರಾತಿನಲ್ಲಿ 15,501 ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದು ರಾಜ್ಯದ ಒಟ್ಟು ಕರೋನಾ ಸೋಂಕಿತರ 68.7 ಶೇಕಡಾದಷ್ಟು. ಚೇತರಿಕೆಯಲ್ಲಿ ಈ ಪ್ರಗತಿಯು ಗಣನೀಯವಾದದ್ದೆ. ಆದರೆ ಚೇತರಿಕೆಯ ಪ್ರಮಾಣಕ್ಕೆ ಸೆಡ್ಡು ಹೊಡೆಯುವಂತೆ ಅಸುನೀಗುವವರ ಪ್ರಮಾಣ ಹೆಚ್ಚುತ್ತಲಿದೆ. ಶುಕ್ರವಾರ 31 ಮಂದಿ ಕರೋನಾದಿಂದಾಗಿ ಅಸುನೀಗಿದ್ದು ಒಟ್ಟು 1416 ಮಂದಿ ಅಸುನೀಗಿದ್ದಾರೆ. ಇದು ಒಟ್ಟು ಸೋಂಕಿತರ 6.2 ಶೇಕಡಾದಷ್ಟಾಗುತ್ತದೆ. ಇಡೀ ದೇಶದಲ್ಲಿ ಕರೋನಾ ಸೋಂಕಿತರ ಮರಣ ಪ್ರಮಾಣ 2.85 ಇದೆ. ಇಡೀ ದೇಶಕ್ಕೆ ಹೋಲಿಸಿಕೊಂಡರೆ ಗುಜರಾತಿನ ಮರಣ ಪ್ರಮಾಣವು ದೇಶದ ಮರಣ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಿದೆ.

ಭಾರತದ ಒಟ್ಟು ಕರೋನಾ ಪ್ರಕರಣಗಳಲ್ಲಿ 1/3 ಭಾಗ ಪ್ರಕರಣವು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಇದೆ. ಮುಂಬೈ ಭಾರತದ ವಾಣಿಜ್ಯ ನಗರಿಯಾಗಿರುವುದರಿಂದ ಹಾಗೂ ಉಳಿದೆಲ್ಲಾ ಕಡೆಗಳಿಂತ ಚಟುವಟಿಕೆಗಳು ಹೆಚ್ಚಿರುವುದು ಅಲ್ಲಿ ದೊಡ್ಡ ಪ್ರಮಾಣದ ಸೋಂಕು ಹರಡಲು ಕಾರಣವೆಂದು ಅಂದಾಜಿಸಲಾಗಿದೆ. ನಿನ್ನೆ ಒಟ್ಟು 3,717 ಹೊಸ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಇದುವರೆಗೂ 47,793 ಮಂದಿ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಂದರೆ ಶೇಕಡಾ 47.2 ಸೋಂಕಿತರು ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಿನ್ನೆ ದಿನ 127 ಮಂದಿ ಸೋಂಕು ತಗುಲಿದವರು ಅಸುನೀಗಿದ್ದಾರೆ. ಹಾಗಾಗಿ ಒಟ್ಟು ಮೃತಪಟ್ಟವರ ಸಂಖ್ಯೆ 3,493 ತಲುಪಿದೆ. ಒಟ್ಟು ಸೋಂಕಿತರಲ್ಲಿ ಇದುವರೆಗೂ ಶೇಕಡಾ 3.43 ರಷ್ಟು ಮಂದಿ ಮೃತಪಟ್ಟಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 34,687 ಪ್ರಕರಣಗಳು ದಾಖಲಾಗಿದೆ. ಇದುವರೆಗೂ 12,731 ಜನರಷ್ಟೇ ಸೋಂಕಿನಿಂದ ಚೇತರಿಕೊಂಡಿದ್ದಾರೆ. ದೆಹಲಿಯಲ್ಲಿ ಚೇತರಿಕೆ ಕಂಡುಬರುತ್ತಿರುವವರ ಪ್ರಮಾಣ ನಿರಾಶೆ ಮೂಡಿಸುವಷ್ಟು ಕಡಿಮೆಯಿದೆ. ದೇಶದಲ್ಲಿ 49.32 ಶೇಕಡಾ ಮಂದಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದರೆ, ಆದರೆ ದೆಹಲಿಯಲ್ಲಿ ಚೇತರಿಸಿಕೊಳ್ಳುವವರ ಪ್ರಮಾಣ 36.7 ಅಷ್ಟೇ ಇದೆ. ಇದಕ್ಕೆ ಕಾರಣವೂ ಇದೆ. ಭಾರತದಲ್ಲಿ ದೆಹಲಿಯಷ್ಟು ವಾತಾವರಣ ಹದಗೆಟ್ಟಿರುವ ನಗರ ಬೇರಾವುದು ಇಲ್ಲ. ಕಳೆದ ವರುಷ ವಾತಾವರಣದಲ್ಲಿ ಶುದ್ಧ ಗಾಳಿ ಇಲ್ಲದ ಕಾರಣ ದೆಹಲಿ ಶಾಲೆಗಳೆಲ್ಲಾ ಮುಚ್ಚಿತ್ತು. ದೆಹಲಿ ಗಾಳಿ ಅಷ್ಟೊಂದು ಕಲುಷಿತಗೊಂಡಿದೆ. ಸಹಜವಾಗಿಯೇ ದೊಡ್ಡ ಪ್ರಮಾಣದ ದೆಹಲಿ ನಿವಾಸಿಗಳಿಗೆ ಶ್ವಾಸಕೋಶ ಸಂಬಂಧಿತ ರೋಗಗಳಿವೆ.

ಕರೋನಾ ಸೋಂಕು ಕೂಡ ಶ್ವಾಸಕೋಶವನ್ನು ಹಾನಿಗೊಳಿಸುವುದರಿಂದ ಅಲ್ಲಿ ಚೇತರಿಸಿಕೊಳ್ಳುವವರ ಪ್ರಮಾಣ ಕಡಿಮೆಯಿದೆ ಎಂದು ಅಂದಾಜಿಸಲಾಗಿದೆ. ದೆಹಲಿಯಲ್ಲಿ ನಿನ್ನೆಯವರೆಗೂ 1,085 ಮಂದಿ ಮರಣ ಹೊಂದಿದ್ದರು. ಇದು ಒಟ್ಟು ಸೋಂಕಿತರ ಶೇಕಡಾ 3.12 ಇದೆ. ಕರೋನಾ ಎದುರಿಸಲು ದೆಹಲಿಗಿರುವ ಸವಾಲುಗಳು ಉಳಿದ ರಾಜ್ಯಗಳಿಗಿಂತ ಹೆಚ್ಚೇ ಇದೆ. ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಧಿಕಾರದ ಮಿತಿಯು ಕಡಿಮೆಯಿದೆ. ಉಳಿದ ರಾಜ್ಯಗಳಿಗಿರುವಷ್ಟು ಸ್ವಾತಂತ್ರ್ಯ ದೆಹಲಿ ಆಡಳಿತಕ್ಕಿಲ್ಲದಿರುವುದೂ ಕೂಡ ಸವಾಲಾಗುವ ಸಾಧ್ಯತೆ ಇದೆ. ಮುಖ್ಯವಾಗಿ ದೆಹಲಿಯ ವಾತಾವರಣ ಕಲುಷಿತದಿಂದಾಗಿ ಕಾರಣದಿಂದಾಗಿ ಪ್ರಜೆಗಳಲ್ಲಿ ಹೆಚ್ಚಿನವರಲ್ಲಿ ಮೊದಲೇ ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿವೆ.

ದೇಶದಾದ್ಯಂತ ಕರೋನಾ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕಳೆದ ಒಂದು ವಾರದಿಂದ ಸರಾಸರಿ ಸುಮಾರು 9.5 ಸಾವಿರದಂತೆ ಪ್ರಕರಣಗಳು ದಿನವೊಂದಕ್ಕೆ ಕಂಡು ಬರುತ್ತಿದೆ. ಅದೃಷ್ಟವಶಾತ್ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ಜೂನ್ 12ರ ಸಂಜೆ ವೇಳೆಗೆ 1,47,195 ಮಂದಿ ಚೇತರಿಸಿಕೊಂಡರೆ, 1,41,842 ಪ್ರಕರಣಗಳು ಇನ್ನೂ ಸಕ್ರಿಯವಾಗಿವೆ. ಚೇತರಿಸಿಕೊಳ್ಳುವವರ ಪ್ರಮಾಣ 49.32 ಶೇಕಡಾ ಇದೆ. ಇದುವರೆಗೂ 8,498 ಮಂದಿ ಕರೋನಾದಿಂದಾಗಿ ಅಸುನೀಗಿದ್ದಾರೆ. ಕರೋನಾ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಇದುವರೆಗೂ 2.85 ಶೇಕಡಾ ಜನರಷ್ಟೇ ಅಸುನೀಗಿದ್ದಾರೆ.

ಈ ಎಲ್ಲಾ ಅಂಕಿಅಂಶಗಳನ್ನು ಗಮನಿಸಿದರೆ ಹಾಗೂ ಹಿಂದೆ ಬಂದಿರುವಂತಹ ಸಾಂಕ್ರಾಮಿಕ ರೋಗಗಳಿಗೆ ಹೋಲಿಸಿದರೆ ಕರೋನಾ ಅಷ್ಟೇನೂ ಮಾರಣಾಂತಿಕವಲ್ಲ. ಅಲ್ಲದೆ ಕರೋನಾದಿಂದಾಗಿ ಮರಣ ಹೊಂದಿದವರಲ್ಲಿ ಈಗಾಗಲೇ ಉಳಿದ ರೋಗಗಳಿಂದ ಬಳಲುತ್ತಿದ್ದವರು ಹಾಗೂ ಹಿರಿಯ ನಾಗರಿಕರ ಸಂಖ್ಯೆಯೇ ಅಧಿಕ ಎಂದು ಅಂಕಿ ಅಂಶಗಳು ಹೇಳುತ್ತವೆ. ಚೀನಾ, ಇಂಗ್ಲಂಡ್ ಸೇರಿದಂತೆ ಹಲವು ರಾಷ್ಟ್ರಗಳ ತಜ್ಞರು ಹಾಗೂ ವೈರಾಲಜಿ ಸಂಶೋಧನಾಲಯಗಳು ಇದನ್ನೇ ಹೇಳುತ್ತಾ ಬಂದಿದ್ದಾರೆ. ಕರೋನಾ ಸೋಂಕಿತರ ಮರಣ ಪ್ರಮಾಣ, ಚೇತರಿಕೆ ಪ್ರಮಾಣ ಹಾಗೂ ಹರಡುವಿಕೆಯ ವೇಗ ದೇಶದ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯಾಗಿ ಇದೆ. ಹಾಗೆಂದು ಇದು ಕರೋನಾ ವೈರಸ್ ಭೌಗೋಳಿಕ ವಿಭಿನ್ನತೆಗೆ ತಕ್ಕಂತೆ ವರ್ತಿಸುತ್ತದೆ ಎಂದರ್ಥವಲ್ಲ. ಮುಖ್ಯವಾಗಿ ಜನರ ಜೀವನಮಟ್ಟ, ಆಡಳಿತದ ಸಾಮರ್ಥ್ಯ, ಆರೋಗ್ಯ ಕ್ಷೇತ್ರದ ಸಾಮರ್ಥ್ಯ ಎಲ್ಲವೂ ಸೇರುತ್ತದೆ. ಇಡೀ ದೇಶೀಯ ಮಟ್ಟದಲ್ಲಿ ಗಮನಿಸುವುದಾದರೆ ಕರೋನಾ ಭೀತಿಗೊಂಡಷ್ಟು ಮಾರಣಾಂತಿಕ ಸೋಂಕು ಅಲ್ಲ. ಮಹಾಮಾರಿಯಂತೂ ಅಲ್ಲವೇ ಅಲ್ಲ.

Tags: covid19DelhiIndiaಕೋವಿಡ್-19ದೆಹಲಿಭಾರತ
Previous Post

ನೇಪಾಳ ಪಡೆಯಿಂದ ಅಪ್ರಚೋದಿತ ಗುಂಡಿನ ದಾಳಿ- ಓರ್ವ ಭಾರತೀಯ ಬಲಿ

Next Post

ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್

Related Posts

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
0

ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಆರೋಗ್ಯ, ಸಂತೋಷ ಸಿಗಲಿ: ಜನ್ಮದಿನ ಹಿನ್ನೆಲೆಯಲ್ಲಿ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್ ಬಿ.ವಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರಿಂದ...

Read moreDetails
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 15, 2025
Next Post
ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್

ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada