• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕರೋನಾ ಸೋಂಕು: ಫೆಬ್ರವರಿ 2021ರ ವೇಳೆಗೆ ಭಾರತದಲ್ಲಿ ಒಂದು ಕೋಟಿ ದಾಟಲಿರುವ ಸೋಂಕಿತರ ಸಂಖ್ಯೆ

by
October 19, 2020
in ದೇಶ
0
ಕರೋನಾ ಸೋಂಕು: ಫೆಬ್ರವರಿ 2021ರ ವೇಳೆಗೆ ಭಾರತದಲ್ಲಿ ಒಂದು ಕೋಟಿ ದಾಟಲಿರುವ ಸೋಂಕಿತರ ಸಂಖ್ಯೆ
Share on WhatsAppShare on FacebookShare on Telegram

ಭಾರತದಲ್ಲಿ ಕರೋನಾ ಸೋಂಕು ಇನ್ನೂ ತೀವ್ರಗತಿಯಲ್ಲೇ ಹಬ್ಬುತ್ತಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಈ ಹಿಂದೆ ಇದ್ದಂತಹ ಉಚ್ರಾಯ ಸ್ಥಿತಿ ಇನ್ನೊಮ್ಮೆ ನಿರ್ಮಾನವಾಗುವುದಿಲ್ಲ. ಇದು ಭಾರತೀಯರಿಗೆ ಸಮಾಧಾನವಾಗುವಂತಹ ವಿಚಾರವಾದರೂ, ತಜ್ಞರ ಸಮಿತಿ ಬಹಿರಂಗ ಪಡಿಸಿದ ಇನ್ನೊಂದು ವಿಷಯ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ADVERTISEMENT

ಭಾರತದಲ್ಲಿ ಕೋವಿಡ್‌ನ ರೋಗಲಕ್ಷಣ ಇರುವ ಸೋಂಕಿತರ ಸಂಖ್ಯೆ ಸಪ್ಟೆಂಬರ್‌ ತಿಂಗಳಲ್ಲಿಯೇ 10 ಲಕ್ಷದ ಗಡಿ ದಾಟಿದೆ. ಈಗ ಆ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಫೆಬ್ರುವರಿ 2021ರ ವೇಳೆಗೆ ಭಾರತದಲ್ಲಿ ಸುಮಾರು 1.06 ಕೋಟಿಯಷ್ಟು ಕರೋನಾ ಸೋಂಕಿತರು ಇರಲಿದ್ದಾರೆ ಎಂದು ತಜ್ಞರ ಸಮಿತಿ ಹೇಳಿದೆ. ಈ ವೇಳೆಗೆ ಸೋಂಕಿತರಲ್ಲಿ ರೋಗದ ಗುಣಲಕ್ಷಣಗಳು ಕಡಿಮೆಯಾಗಲಿವೆ ಎಂದು ಸಮಿತಿ ಅಂದಾಜಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಐಐಟಿ ಹೈದರಾಬಾದ್‌ನ ಸದಸ್ಯರಾದ ಎಂ ವಿದ್ಯಾಸಾಗರ್‌ ನೇತೃತ್ವದ ತಜ್ಞರ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಸಮಿತಿಯಲ್ಲಿ IIT, IISc, ISI Kolkata ಮತ್ತು CMC Velloreನ ಪ್ರಮುಖ ವಿಜ್ಞಾನಿಗಳು ಅಧ್ಯಯವನ್ನು ಮಾಡಿದ್ದರು.

ವರದಿಯ ಪ್ರಕಾರ, ದೇಶದ 30% ಜನರಲ್ಲಿ ಈಗಾಗಲೇ ಕರೋನಾ ಸೋಂಕಿನ ವಿರುದ್ದ ಹೋರಾಡುವ Antibodyಗಳು ಉತ್ಪಾದನೆಯಾಗಿವೆ. ಆಗಸ್ಟ್‌ನಲ್ಲಿ ಈ ಪ್ರಮಾಣ ಕೇವಲ 14% ಇತ್ತು. “ದೇಶದ ನಾಗರಿಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಿರುವುದು ನಿಜಕ್ಕೂ ಸಂತೋಷಕರವಾದ ವಿಚಾರ. ಕರೋನಾ ಸೋಂಕಿತರ ಒಟ್ಟು ಸಂಖ್ಯೆಯನ್ನು ಕಲೆ ಹಾಕಿದರೆ, ಭಾರತದಲ್ಲಿ ಮರಣ ಪ್ರಮಾಣ ಕೇವಲ 0.04%ದಷ್ಟು ಮಾತ್ರ ಇದೆ,” ಎಂದು ವಿದ್ಯಾಸಾಗರ್‌ ಹೇಳಿದ್ದಾರೆ.

ಇನ್ನು ಭಾರತದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಅನ್ನು ಹೊಗಳಿರುವ ವರದಿಯು, ಸಕಾಲಕ್ಕೆ ಆಭರತದಲ್ಲಿ ಲಾಕ್‌ಡೌ ಹೇರಲಾಗಿದೆ. ಒಂದು ವೇಳೆ, ಲಾಕ್‌ಡೌನ್‌ ಅನ್ನು ತಡವಾಗಿ ಹೇರಿದ್ದಲ್ಲಿ, ಜೂನ್‌ ಕೊನೆಯ ವೇಳೆಗೆ ಸುಮಾರು 50 ಲಕ್ಷ ಕೋವಿಡ್‌ ಸೋಂಕಿತರು ಇರುತ್ತಿದ್ದರು. ಆಗ ಪರಿಸ್ಥಿತಿ ನಿಜವಾಗಿಯೂ ಕೈಮೀರಿ ಹೋಗುತ್ತಿತ್ತು, ಎಂದು ಹೇಳಿದೆ.

ಲಾಕ್‌ಡೌನ್‌ನ ನಿಯಮಗಳ ಪಾಲನೆ ಹಾಗೂ ಕಟ್ಟುನಿಟ್ಟಿನ ಕ್ವಾರೆಂಟೈನ್‌ ನಿಯಮಗಳಿಂದಾಗಿ ವಲಸೆ ಕಾರ್ಮಿಕರು ಹೆಚ್ಚಾಗಿ ಮರಳಿರುವ ರಾಜ್ಯಗಳಾದ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಕರೋನಾ ಸೋಂಕು ಕಡಿಮೆ ಪ್ರಮಾಣದಲ್ಲಿ ಹಬ್ಬಿದೆ.

ಭಾರತದಲ್ಲಿ ಜಾರಿಗೊಳಿಸಿದಂತಹ ಲಾಕ್‌ಡೌನ್‌ ಅನ್ನು ಎಲ್ಲಾ ತಜ್ಞರೂ ಟೀಕಿಸಿರುವಾಗ, ಈ ಒಂದು ವರದಿ ಮಾತ್ರ ಲಾಕ್‌ಡೌನ್‌ ಸಮರ್ಪಕ ಸಮಯದಲ್ಲಿ ಅನುಷ್ಟಾನವಾಗಿದೆ ಎಂದು ಹೇಳಿದೆ. 500ರ ಆಸುಪಾಸಿನಲ್ಲಿ ಕರೋನಾ ಸೋಂಕಿತರಿದ್ದಾಗ ಹೇರಲಾಗಿದ್ದ ಲಾಕ್‌ಡೌನ್‌ ತೆರವುಗೊಳಿಸುವಾಗ ಭಾರತದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅದರಲ್ಲಿಯೂ, ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಪಟ್ಟ ಪಾಡು ನಿಜಕ್ಕೂ ಹೇಳತೀರದಾಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಈ ವರದಿಯನ್ನು ಬಹಿರಂಗಗೊಳಿಸಿದೆ ಎಂಬ ಟೀಕೆ ಕೂಡಾ ಕೇಳಿ ಬಂದಿದೆ.

Tags: coronaviruscovid19CovidPeak
Previous Post

ಬಿಹಾರ ಚುನಾವಣೆ: ಬಿಜೆಪಿ ನಾಯಕರಿಗೆ ಮಗ್ಗುಲ ಮುಳ್ಳಾದ ಚಿರಾಗ್‌ ಪಾಸ್ವಾನ್‌

Next Post

ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada