• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ತಡೆಯಲು ತಮಿಳುನಾಡು ಸರ್ಕಾರದ ಉಡಾಫೆ: ಇತರೆ ರಾಜ್ಯಗಳಲ್ಲಿ ಆತಂಕ

by
March 17, 2020
in ದೇಶ
0
ಕರೋನಾ ತಡೆಯಲು ತಮಿಳುನಾಡು ಸರ್ಕಾರದ ಉಡಾಫೆ: ಇತರೆ ರಾಜ್ಯಗಳಲ್ಲಿ ಆತಂಕ
Share on WhatsAppShare on FacebookShare on Telegram

ಕರೋನಾ ತರಹದ ವೈರಸ್‌ ಹರಡುವುದನ್ನು ತಡೆಯಬೇಕು ಎಂದರೆ ವಿಶೇಷವಾದ ಕಾಳಜಿ ವಹಿಸುವುದು ಅಗತ್ಯ. ಆದರೆ ಕರ್ನಾಟಕ, ಕೇರಳದಂತಹ ರಾಜ್ಯಗಳು ತೋರುತ್ತಿರುವ ಕಾಳಜಿ ಬೇರೆ ರಾಜ್ಯಗಳಲ್ಲಿಲ್ಲ. ಕರೋನಾ ಕುರಿತು ಶಿಷ್ಟಾಚಾರ ಪಾಲಿಸಬೇಕಿದ್ದ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ. ಅದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ಕರೋನಾ ರೋಗಿಗಳ ಸಂಖ್ಯೆ 33ಕ್ಕೆ ಏರಿದೆ. ಇದಕ್ಕೆ ಕಾರಣ ತಮಿಳುನಾಡನ್ನ ನೋಡಿ ತಿಳಿದುಕೊಳ್ಳಬಹುದು. ತಮಿಳುನಾಡಿನಲ್ಲಿ ಇದುವರೆಗೆ ಕೇವಲ 72 ಜನರನ್ನ ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲೂ ಒಬ್ಬನಿಗೆ ಮಾತ್ರ ರೋಗ ಇರುವಿಕೆ ದೃಢಪಟ್ಟಿದೆ. ಈ ತರಹದ ಉಡಾಫೆಯ ರಾಜ್ಯ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ಮಧ್ಯೆ ಸ್ವಸ್ಥ ಸಮಾಜ ಹೇಗೆ ಸಾಧ್ಯ.

ADVERTISEMENT

ಭಾರತದಲ್ಲಿ ಕರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎರಡನೇ ವಾರಕ್ಕೆ ಒಟ್ಟು 114 ಜನರಲ್ಲಿ ರೋಗ ದೃಢಪಟ್ಟಿದೆ. 13 ಜನರು ರೋಗದಿಂದ ಗುಣಮುಖರಾಗಿದ್ದಾರೆ. ಹಾಗೂ ಇಬ್ಬರು ಮೃತಪಟ್ಟಿದ್ದಾರೆ. ಪ್ರತಿದಿನ ನೂರಾರು ಭಾರತೀಯರು ವೈರಸ್‌ ಪೀಡಿತ ರಾಷ್ಟ್ರಗಳಿಂದ ಸ್ವದೇಶಕ್ಕೆ ಆಗಮಿಸುತ್ತಿದ್ದಾರೆ. ಯುದ್ಧಪರಿಸ್ಥಿತಿಯಲ್ಲಿ ಸಂತ್ರಸ್ತರ ರಕ್ಷಣೆ ಮಾಡುವ ರೀತಿ ಕೇಂದ್ರ ಸರ್ಕಾರ ಅವರನ್ನೆಲ್ಲಾ ಕರೆತಂದು ಹದಿನಾಲ್ಕು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿರಿಸಲು ಏರ್ಪಾಡು ಮಾಡಿದೆ. ಮೂರನೇ ವಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)‌ ವೈರಸ್‌ ತಪಾಸಣೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುತ್ತಿದೆ. ವಿದೇಶದಿಂದ ಮರಳಿದವರನ್ನಷ್ಟೇ ತಪಾಸಣೆ ಮಾಡುವುದಲ್ಲ, ಕರೋನ ವೈರಸ್‌ ಸಮುದಾಯದೊಳಗೆ ಪ್ರಸರಣವಾಗುತ್ತಿದ್ದರೆ ಅದರ ಮೇಲೂ ನಿಗಾ ಇಡಲು ಮುಂದಾಗಿದೆ. ಕರೋನಾ ದಾಳಿಗೆ ತುತ್ತಾದ ದೇಶಗಳೆಲ್ಲಾ ರೋಗ ಲಕ್ಷಣಗಳು ಕಂಡು ಬರುವ ಎಲ್ಲರನ್ನ ತಪಾಸಣೆ ಮಾಡುತ್ತಿವೆ.

ನಮ್ಮ ದೇಶದಲ್ಲಿ ಮಾರ್ಚ್‌ 15ರಿಂದ ಸಮುದಾಯಲ್ಲಿ ವೈರಸ್‌ಪ್ರಸರಣ ತಡೆಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಕೆಲಸ ಆರಂಭವಾಗಿದೆ. ಭಾರತದಲ್ಲಿ 60ರಿಂದ 70 ತಪಾಸಣಾ ಕೇಂದ್ರಗಳಲ್ಲಿ ಕರೋನಾ ರೋಗ ಚರ್ಯೆಯನ್ನ ಪರೀಕ್ಷೆ ಮಾಡಲಾಗುತ್ತಿದೆ. ಪ್ರತೀ ಪ್ರಯೋಗಾಲಯದಲ್ಲಿ ದಿನಕ್ಕೆ ಸುಮಾರು ತೊಂಭತ್ತು ಮಾದರಿಗಳನ್ನ ಪರೀಕ್ಷೆ ಮಾಡಬಹುದು ಆದರೆ ಎಲ್ಲಾ ಪ್ರಯೋಗಾಲಗಳಿಂದ ಕೇವಲ ಐವತ್ತೊಂದು ಮಾದರಿಗಳನ್ನಷ್ಟೇ ಪರೀಕ್ಷೆ ನಡೆಸಲಾಗಿದೆ. ಅಂದರೆ ವಿದೇಶದಿಂದ ಬಂದವರದ್ದೆಲ್ಲಾ ಗಂಟಲ ದ್ರವ ಹಾಗೂ ರಕ್ತ ಮಾದರಿಯನ್ನ ಪರೀಕ್ಷೆ ಮಾಡಲಾಗಿಲ್ಲ ಎಂದರ್ಥ..!

ಸಮುದಾಯದೊಳಗೆ ರೋಗ ಪ್ರಸರಣದ ಆತಂಕಕ್ಕೊಳಗಾಗಿರುವ ಭಾರತ ತನ್ನ ತಪಾಸಣಾ ಸಾಮರ್ಥ್ಯವನ್ನ ಹೆಚ್ಚು ಮಾಡಿಕೊಂಡಿದೆ. ಶೈವಾವಸ್ಥೆಯಲ್ಲಿದ್ದ ರೋಗವನ್ನ ಗುರುತಿಸಲಾಗದೇ ಅಥವಾ ಬೇಜವಾಬ್ದಾರಿತನದಿಂದ ಜನನಿಬಿಡ ಪ್ರದೇಶದಲ್ಲಿ ರೋಗಿ ಓಡಾಡಿದರೆ ತಡೆಗಟ್ಟುವುದು ಹೇಗೆ. ಐಸೋಲೇಷನ್‌ ವಾರ್ಡ್‌ನಿಂದಲೇ ಇಬ್ಬರು ತಪ್ಪಿಸಿಕೊಂಡು ಹೋದ ಘಟನೆಗಳೂ ನಮ್ಮ ಕಣ್ಣಮುಂದೆ ಇದೆ. ಇಂತಹ ಸಮಯದಲ್ಲಿ ಎಲ್ಲರೂ ಜಾಗೃತರಾಗಿರಬೇಕು. ಆದರೆ ತಮಿಳುನಾಡಿನ ಮನಸ್ಥಿತಿ ಮಾತ್ರ ವ್ಯತಿರಿಕ್ತವಾಗಿದೆ. ವಿದೇಶದಿಂದ ಬಂದಿರುವ ಹಾಗೂ ರೋಗ ಲಕ್ಷಣಗಳಿರುವವರನ್ನ ಪರೀಕ್ಷೆ ಮಾಡದೇ ಮನೆಗೆ ಕಳಿಸುತ್ತಿದ್ದಾರೆ. ಈ ಕುರಿತು ಗಾಯತ್ರಿ ಎಂಬ ಮಹಿಳೆ ಆಕ್ರೋಶಭರಿತವಾಗಿ ಟ್ವೀಟ್‌ ಮಾಡಿದ್ದಾಳೆ. ರೋಗ ಲಕ್ಷಣಗಳಿವೆ ಎಂದು ಸರ್ಕಾರಿ ಆಸ್ಪತ್ರೆಗೆ ಹೋದರೂ ಸಹ ಯಾವುದೇ ಪರೀಕ್ಷೆ ನಡೆಸದೇ ರಕ್ತದ ಮಾದರಿ ಸಂಗ್ರಹಿಸಿಲ್ಲ, ಬದಲಿಗೆ ರೋಗ ಉಲ್ಭಣಗೊಂಡರೆ ಮಾತ್ರ ಬನ್ನಿ ಎಂದು ಹೇಳಿ ಕಳಿಸಿದ್ದಾರಂತೆ..! ಇದು ಒಬ್ಬ ಮಹಿಳೆಯ ದೂರಲ್ಲ, ಕೇವಲ ಎಪ್ಪತ್ತೆರಡು ಜನರನ್ನ ಪರೀಕ್ಷೆ ಮಾಡಿ ಒಬ್ಬರಿಗೆ ಕರೋನಾ ಸೋಂಕಿದೆ ಎಂದು ಸರ್ಕಾರವೇ ಅಧಿಕೃತವಾಗಿ ಹೇಳಿಕೊಂಡಿದೆ. ತಮಿಳುನಾಡು ಸರ್ಕಾರವೇ ಈ ತರಹ ನಿರ್ಲಕ್ಷ ತೋರಿದರೆ ಉಳಿದ ರಾಜ್ಯಗಳ ಕಥೆ ಏನು..?

ಅಕ್ಕಪಕ್ಕದ ರಾಜ್ಯಗಳೆಲ್ಲಾ ನೂರಾರು ಮಾದರಿಯನ್ನ ಪರೀಕ್ಷೆ ಮಾಡಿದ್ದು ಕರ್ನಾಟಕದಲ್ಲಿ ಏಳು ಜನ ಹಾಗೂ ಕೇರಳದಲ್ಲಿ 24 ಜನರು ಸೋಂಕಿತರಾಗಿದ್ದಾರೆ. ತಮಿಳುನಾಡಿನಲ್ಲಿ ಮಾತ್ರ ಒಬ್ಬರೇ ಸೋಂಕಿತರಾಗಿರೋದಕ್ಕೆ ಹೇಗೆ ಸಾಧ್ಯ. ತಮಿಳುನಾಡಿನ ಆರೋಗ್ಯ ಇಲಾಖೆ ಆಯುಕ್ತ ಕೆ.ಕೊಲಾಂಡಸ್ವಾಮಿ ಪ್ರಕಾರ ಅಕ್ಕಪಕ್ಕದ ರಾಜ್ಯಗಳ ಜನರು ಕರೋನಾ ಸೋಂಕಿತ ರಾಜ್ಯಗಳಿಂದ ಬಂದಿದ್ದಾರಂತೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಹೆಚ್ಚೆಚ್ಚು ಜನರನ್ನ ತಪಾಸಣೆ ಮಾಡಿದ್ದಕ್ಕಾಗಿ ಹೆಚ್ಚು ಸೋಂಕಿತರನ್ನ ಗುರುತಿಸಿಕೊಂಡಿದ್ದಾರೆ ಆದರೆ ತಮಿಳುನಾಡು ಕೇವಲ ಎಪ್ಪತ್ತೆರಡೇ ಜನರಿಗೆ ಸೀಮಿತವಾಯ್ತಲ್ಲ ಅಂದರೆ ಅದಕ್ಕೆ ಉತ್ತರವಿಲ್ಲ. ತಮಿಳುನಾಡಿನಲ್ಲಿ ನಾಲ್ಕು ವೈರಾಣು ಪ್ರಯೋಗಾಲಯಗಳಿವೆ ಆದರೂ ಅಲ್ಲಿನ ಸರ್ಕಾರ ತಪಾಸಣೆ ನಡೆಸುವ ಗೋಜಿಗೆ ಹೋಗಿಲ್ಲ ಆದರೂ ಶಿಷ್ಟಾಚಾರ ಪರಿಪಾಲನೆ ಆಗುತ್ತೆ ಎಂದು ಕೊಲಾಂಡಸ್ವಾಮಿ ಸಮಜಾಯಿಷಿ ಕೊಡ್ತಾರೆ. ಕೆಮ್ಮು ಕಫ ಬಂದವರೆಲ್ಲಾ ಪರೀಕ್ಷೆ ಮಾಡಿ ಅಂತ ಹೇಳಿದರೆ ಕಷ್ಟ ಎನ್ನುವುದು ಅವರ ಅಭಿಪ್ರಾಯ.

ಈಗಾಗಲೇ ಮಹಾರಾಷ್ಟ್ರ ಹೊಣೆಗೇಡಿತನಕ್ಕೆ ಮೂವತ್ತೆರಡು ಜನ ಸೋಂಕಿತರನ್ನ ಪಡೆದುಕೊಂಡಿದೆ. ಇತ್ತ ತಮಿಳುನಾಡಿನಂತಹ ರಾಜ್ಯಗಳು ಇದರ ಪರಿವೆಯೇ ಇಲ್ಲದಂತೆ ಉಡಾಫೆ ವರ್ತನೆ ತೋರುತ್ತಿವೆ. ಸದ್ಯ ಕರ್ನಾಟಕ ರಾಜ್ಯ ಚುರುಕಾಗಿದ್ದು ತಮಿಳುನಾಡು ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲೇಬೇಕಾದ ಪರಿಸ್ಥಿತಿ ಇದೆ. ಸಾಧ್ಯವಾದರೆ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಗಡಿಯಲ್ಲಿ ತಾತ್ಕಾಲಿಕ ನಿಷೇಧ ಹೇರುವುದೇ ಒಳಿತು. ಕೇವಲ ವಿದೇಶದಿಂದ ಸೋಂಕು ಹೊತ್ತು ತಂದವರನ್ನ ತಪಾಸಣೆ ಮಾಡುತ್ತಿದ್ದೇವೆ. ಆದರೆ ಸಮುದಾಯದೊಳಗೆ ರೋಗ ಪ್ರಸರಣ ತಡೆಯಲು ಯಾವುದೇ ಪ್ರಯತ್ನಗಳಾಗುತ್ತಿಲ್ಲ ಎನ್ನುವ ಆತಂಕ ಎದುರಾಗಿದೆ.

Tags: Corona TestingcoronavirusGovernment of Tamil NaduKarnatakaಕರೋನಾತಮಿಳುನಾಡು
Previous Post

ಒಕ್ಕಲಿಗ ಸಚಿವರ ಪೈಪೋಟಿ ಮಧ್ಯೆ ಇತರೆ ಸಚಿವರು ಹೈರಾಣ

Next Post

ಕರೋನಾ ವೈರಸ್ ಉಪಟಳಕ್ಕೆ ಚಿನ್ನ-ಬೆಳ್ಳಿ ಕೂಡಾ ಕಂಗಾಲು!

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಕರೋನಾ ವೈರಸ್ ಉಪಟಳಕ್ಕೆ  ಚಿನ್ನ-ಬೆಳ್ಳಿ ಕೂಡಾ ಕಂಗಾಲು!

ಕರೋನಾ ವೈರಸ್ ಉಪಟಳಕ್ಕೆ ಚಿನ್ನ-ಬೆಳ್ಳಿ ಕೂಡಾ ಕಂಗಾಲು!

Please login to join discussion

Recent News

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada