• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಉಪಚುನಾವಣೆಗೇ ತಡೆಯಾಜ್ಞೆ ನೀಡಿತು ಅನರ್ಹತೆಯ ಜಟಿಲತೆ

by
September 26, 2019
in ಕರ್ನಾಟಕ
0
ಉಪಚುನಾವಣೆಗೇ ತಡೆಯಾಜ್ಞೆ ನೀಡಿತು ಅನರ್ಹತೆಯ ಜಟಿಲತೆ
Share on WhatsAppShare on FacebookShare on Telegram

ಶಾಸಕರ ಅನರ್ಹತೆ ಪ್ರಕರಣ ಇದೀಗ ವಿಧಾನಸಭೆ ಉಪ ಚುನಾವಣೆಯನ್ನೇ ಮುಂದೂಡಿದೆ. ಅನರ್ಹತೆ ಕುರಿತಂತೆ ಇತರೆ ಪ್ರಕರಣಗಳಿಗೂ ಈ ಪ್ರಕರಣಕ್ಕೂ ಸಾಕಷ್ಟು ಭಿನ್ನತೆ ಇರುವುದರಿಂದ ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ಹೇಳಿರುವ ನ್ಯಾ. ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಅಕ್ಟೋಬರ್ 21ಕ್ಕೆ ನಿಗದಿಯಾಗಿದ್ದ ಉಪ ಚುನಾವಣೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ಅಲ್ಲಿಗೆ ಉಪ ಚುನಾವಣೆ ವಿಚಾರದಲ್ಲಿ ಅನರ್ಹ ಶಾಸಕರು ಮಾತ್ರವಲ್ಲ, ಆಡಳಿತಾರೂಢ ಬಿಜೆಪಿ ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ADVERTISEMENT

ಈ ಪ್ರಕರಣದಲ್ಲಿ ನ್ಯಾಯಾಂಗ ಕೂಡ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದೆ. ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದ ಸಂವಿಧಾನದ 10ನೇ ಷಡ್ಯೂಲ್ ಮತ್ತು ಸ್ಪೀಕರ್ ಅವರ ಪರಮಾಧಿಕಾರದ ವಿಚಾರದಲ್ಲಿ ನೀಡಿದ ತೀರ್ಪು ಮುಂದೆ ಸ್ಪೀಕರ್ ಹುದ್ದೆ ಮತ್ತು ಸಂವಿಧಾನಕ್ಕೆ ಅಪಚಾರವಾಗುವಂತಾಗಬಾರದು. ಹೇಗೂ ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶವಿದೆ. ಅಂದರೆ, ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಿದರೆ ಸಾಕು. ಹೀಗಾಗಿ ಚುನಾವಣೆಗೆ ತಡೆಯಾಜ್ಞೆ ನೀಡಿದರೆ ಸಮಸ್ಯೆ ಏನೂ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಚುನಾವಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ.

ಈ ಪ್ರಕರಣದಲ್ಲಿ ಕೇವಲ ಶಾಸಕರ ಅನರ್ಹತೆ ವಿಚಾರ ಮಾತ್ರವಾಗಿದ್ದರೆ ತ್ರಿಸದಸ್ಯ ಪೀಠ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುತ್ತಿತ್ತು. ಸಾಂವಿಧಾನಿಕ ಪೀಠದ ಮುಂದೆ ಈಗಾಗಲೇ ಎರಡು ಅರ್ಜಿಗಳಿವೆ. ಅವುಗಳ ಜತೆ ಈ ಅರ್ಜಿಯನ್ನೂ ಇತ್ಯರ್ಥಗೊಳಿಸಬಹುದಿತ್ತು. ಆದರೆ, ಇಲ್ಲಿ 17 ಶಾಸಕರ ಅನರ್ಹತೆಗಿಂತ ಶಾಸಕರ ರಾಜಿನಾಮೆ ಮತ್ತು ಇಂತಿಷ್ಟು ಅವಧಿಗೆ (15ನೇ ವಿಧಾನಸಭೆ ಅವಧಿಗೆ ) ಅನರ್ಹತೆ ಮಾಡಿರುವ ಸ್ಪೀಕರ್ ಆದೇಶ ಕಾನೂನಾತ್ಮಕವಾಗಿ ಹೆಚ್ಚು ಜಟಿಲವಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಕೋರ್ಟ್ ಹೇಳಲು ಇದುವೇ ಮುಖ್ಯ ಕಾರಣ.

ರಾಜಿನಾಮೆ ಮೊದಲೋ, ಅನರ್ಹತೆ ದೂರು ಮೊದಲೋ

ಅನರ್ಹಗೊಂಡಿರುವ 17 ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮುಟಳ್ಳಿ ವಿರುದ್ಧ ಅವರು ಶಾಸಕರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮೊದಲೇ ಅನರ್ಹತೆ ದೂರು ದಾಖಲಾಗಿತ್ತು. ಆದರೆ, ನಂತರದಲ್ಲಿ ಆ ಕುರಿತು ವಿಚಾರಣೆ ನಡೆಸದೆ ಸ್ಪೀಕರ್ ಅದನ್ನು ಬದಿಗಿಟ್ಟಿದ್ದರು. ಇನ್ನುಳಿದಂತೆ 15 ಶಾಸಕರು ರಾಜಿನಾಮೆ ಸಲ್ಲಿಸಿದ ಬಳಿಕ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿತ್ತು. ಈ ಪೈಕಿ 10 ಮಂದಿಯ ರಾಜಿನಾಮೆ ಸಮರ್ಪಕವಾಗಿಲ್ಲ ಎಂದು ಹೇಳಿದ್ದ ಸ್ಪೀಕರ್ ಸಮರ್ಪಕ ರೀತಿಯಲ್ಲಿ ರಾಜಿನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಹೀಗಾಗಿ ಅವರು ಮೊದಲು ಸಲ್ಲಿಸಿದ್ದ ರಾಜಿನಾಮೆ ಮತ್ತು ಎರಡನೇ ಬಾರಿ ರಾಜಿನಾಮೆ ಸಲ್ಲಿಸುವುದರ ಮಧ್ಯೆ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ದಾಖಲಾಗಿತ್ತು.

Also Read: ಉಪಚುನಾವಣೆ: ಚುನಾವಣಾ ಆಯೋಗದ ನಿರ್ಧಾರ ಸರಿಯೇ?

ಈ ಕುರಿತು ಶಾಸಕರ ವಾದ ಏನೆಂದರೆ, ಸ್ಪೀಕರ್ ಇಲ್ಲದ ಕಾರಣ ನಾವು ರಾಜಿನಾಮೆ ಪತ್ರಗಳನ್ನು ಸ್ಪೀಕರ್ ಕಚೇರಿಯ ಕಾರ್ಯದರ್ಶಿಯವರಿಗೆ ಸಲ್ಲಿಸಿ ಅವರಿಂದ ಸ್ವೀಕೃತಿ ಪತ್ರ ಪಡೆದಿದ್ದೆವು. ಅಂದರೆ, ರಾಜಿನಾಮೆ ಪತ್ರ ಸ್ಪೀಕರ್ ಕಚೇರಿ ಸೇರಿದೆ. ಅದು ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿ ಎಂದು ಸ್ಪೀಕರ್ ಸೂಚನೆ ಬಂದಿತ್ತೇ ಹೊರತು ಮೊದಲು ಸಲ್ಲಿಸಿದ್ದ ರಾಜಿನಾಮೆ ಪತ್ರಗಳನ್ನು ಅವರು ತಿರಸ್ಕರಿಸಿರಲಿಲ್ಲ. ಹೀಗಾಗಿ ರಾಜಿನಾಮೆ ಸಲ್ಲಿಸಿದ ಬಳಿಕ ನಮ್ಮ ವಿರುದ್ಧ ಅನರ್ಹತೆ ದೂರು ದಾಖಲಾಗಿದೆ. ಆದರೆ, ಸ್ಪೀಕರ್ ಅವರು ಮೊದಲು ನಾವು ನೀಡಿದ್ದ ರಾಜಿನಾಮೆ ಪತ್ರದ ಬಗ್ಗೆ ತೀರ್ಮಾನ ಕೈಗೊಳ್ಳದೆ ನಂತರ ಬಂದ ಅನರ್ಹತೆ ದೂರು ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ಇದು ಸಾಮಾಜಿಕ ನ್ಯಾಯದ ಉಲ್ಲಂಘನೆ ಎಂಬುದು ಅನರ್ಹ ಶಾಸಕರ ವಾದ.

ಅದೇ ರೀತಿ ಅನರ್ಹತೆ ದೂರಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಏಳು ದಿನಗಳ ಕಾಲಾವಕಾಶ ಬೇಕು. ಆದರೆ, ಸ್ಪೀಕರ್ ಅವರು ನಮಗೆ ಮೂರು ದಿನ ಮಾತ್ರ ಕಾಲಾವಕಾಶ ನೀಡಿದ್ದಾರೆ. ಅದರ ಮಧ್ಯೆಯೇ ಹೆಚ್ಚು ದಿನ ಕಾಲಾವಕಾಶ ನೀಡುವಂತೆ ಕೋರಿದ್ದರೂ ಅದನ್ನು ಕೂಡ ಪರಿಗಣಿಸದೆ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಇಲ್ಲೂ ಸಾಮಾಜಿಕ ನ್ಯಾಯ ಪಾಲಿಸದ ಸ್ಪೀಕರ್ ಉದ್ದೇಶಪೂರ್ವಕವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ ಎಂಬುದು ಅವರ ಮತ್ತೊಂದು ವಾದ. ಹೀಗಾಗಿ ಇಲ್ಲಿ ಅನರ್ಹತೆ ಮತ್ತು ರಾಜಿನಾಮೆ ಕುರಿತು ಸಮಗ್ರ ವಿಚಾರಣೆ ಅಗತ್ಯವಿದೆ ಎಂಬುದು ನ್ಯಾಯಾಲಯದ ಅಭಿಪ್ರಾಯ.

ಸ್ಪೀಕರ್ ಅನರ್ಹತೆಗೆ ಕಾಲಮಿತಿ ನಿಗದಿಪಡಿಸಬಹುದೇ?

ಇದರ ಜತೆಗೆ ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿರುವುದು ಕೂಡ ಇತ್ಯರ್ಥಗೊಳಿಸಲು ಜಟಿಲವಾದ ವಿಷಯವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಅವರಿಗೆ ಇದೆಯಾದರೂ ಅದಕ್ಕೆ ಕಾಲಮಿತಿ ನಿಗದಿಪಡಿಸುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ, 17 ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಒಂದು ಕಾಲಮಿತಿ ನಿಗದಿಪಡಿಸಿದ್ದಾರೆ. ಅರೆ ನ್ಯಾಯಾಂಗ ಅಧಿಕಾರ ಹೊಂದಿರುವವರು ವಿವೇಚನಾಧಿಕಾರ ಬಳಸಿ ನಿರ್ಧಾರ ಕೈಗೊಳ್ಳಬಹುದು. ಅದರಂತೆ ಸ್ಪೀಕರ್ ಇಂತಿಷ್ಟು ಅವಧಿಗೆ ಎಂದು ಅನರ್ಹತೆ ಆದೇಶ ಹೊರಡಿಸಿದ್ದಾರೆ.

ಸಮಸ್ಯೆ ಉದ್ಭವವಾಗಿದ್ದೇ ಇಲ್ಲಿ. ಸ್ಪೀಕರ್ ಅವರ ಆದೇಶದ ಪ್ರಕಾರ ಅನರ್ಹಗೊಂಡಿರುವ 17 ಮಂದಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆ ಪ್ರವೇಶಿಸುವಂತಿಲ್ಲ. ಚುನಾವಣಾ ಆಯೋಗದ ಪ್ರಕಾರ ಅನರ್ಹತೆಗೆ ಒಳಗಾದವರು ಉಪ ಚುನಾವಣೆಗೆ ಸ್ಪರ್ಧಿಸಬಹುದು. ಈ ವಿರೋಧಾಭಾಸದಿಂದಾಗಿ 17 ಶಾಸಕರು ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದು. ಆದರೆ, ವಿಧಾನಸಭೆ ಪ್ರವೇಶಿಸುವಂತಿಲ್ಲ ಎನ್ನುವಂತಾಗುತ್ತದೆ. ಚುನಾವಣೆಗೆ ಸ್ಪರ್ಧಿಸಬಹುದು ಎಂದಾದರೆ ಗೆದ್ದು ವಿಧಾನಸಭೆ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಲು ಸಾಧ್ಯವೇ? ಇಲ್ಲಿ ಸ್ಪೀಕರ್ ಆದೇಶವನ್ನು ಪಾಲಿಸಬೇಕೋ? ಚುನಾವಣಾ ಆಯೋಗದ ನಿಯಮ ಪಾಲಿಸಬೇಕೋ? ಎಂಬ ಪ್ರಶ್ನೆ ಎದುರಾಗುತ್ತದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದ ಬಳಿಕವೇ ಅನರ್ಹತೆ ಪ್ರಕರಣದ ಕುರಿತು ತೀರ್ಪು ನೀಡಬೇಕಾಗಿರುವುದರಿಂದಲೇ ಸುಪ್ರೀಂ ಕೋರ್ಟ್ ಉಪ ಚುನಾವಣೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ಅಕ್ಟೋಬರ್ 22ರಿಂದ ಮತ್ತೆ ವಿಚಾರಣೆ ನಡೆಯಲಿದ್ದು, ಅದು ಮುಗಿದು ಅಂತಿಮ ಆದೇಶ ಹೊರಬೀಳುವವರೆಗೆ 17 ಶಾಸಕರ ಕ್ಷೇತ್ರಗಳಿಗೆ ಚುನಾವಣೆ ನಡೆಸುವಂತಿಲ್ಲ. ಅಷ್ಟರ ಮಟ್ಟಿಗೆ ಅನರ್ಹ ಶಾಸಕರು ಬಚಾವ್. ಆದರೆ, ವಿಚಾರಣೆ, ಚುನಾವಣೆ ಮುಂದಕ್ಕೆ ಹೋಗುತ್ತಿದ್ದಂತೆ ಅವರ ಅಧಿಕಾರದ ಅವರ ಕನಸನ್ನು ಕೂಡ ಮುಂದೂಡುತ್ತಾ ಹೋಗಬೇಕಾಗುತ್ತದೆ.

Tags: B S YediyurappaBJPCentral Election CommissionCoalition GovernmentDisqualification of MLAsGovernment of Karnatakaoffice of the speakerSupreme Court of Indiaಕರ್ನಾಟಕ ಸರ್ಕಾರಕೇಂದ್ರ ಚುನಾವಣಾ ಆಯೋಗಬಿ ಎಸ್ ಯಡಿಯೂರಪ್ಪಬಿಜೆಪಿಶಾಸಕರ ಅನರ್ಹತೆಸಮ್ಮಿಶ್ರ ಸರ್ಕಾರಸುಪ್ರೀಂ ಕೋರ್ಟ್ಸ್ಪೀಕರ್ ಕಚೇರಿ
Previous Post

ಅರಿಂದಮ್ ಚೌಧರಿ ಎಂಬ ‘ಮೋಸದ ಬೆಕ್ಕಿಗೆ’ ಗಂಟೆ ಕಟ್ಟಿದ ಕತೆ

Next Post

ಮಣ್ಣುಗೂಡಿದ ಗಣಿ ಕಾರ್ಮಿಕರ ಜೀವನ, ನಿಂತಲ್ಲೇ ಇರುವ ಪುನರುಜ್ಜೀವನ

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಮಣ್ಣುಗೂಡಿದ ಗಣಿ ಕಾರ್ಮಿಕರ ಜೀವನ

ಮಣ್ಣುಗೂಡಿದ ಗಣಿ ಕಾರ್ಮಿಕರ ಜೀವನ, ನಿಂತಲ್ಲೇ ಇರುವ ಪುನರುಜ್ಜೀವನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada