Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಶಿವಮೊಗ್ಗ ತುಂಗಾ ತೀರದ ಚಿತಾಗಾರದಲ್ಲಿ, ದೇಹಗಳಿಗೆ ಮುಕ್ತಿ ನೀಡುತ್ತಿರುವುದು ಓರ್ವ ಮಹಿಳೆ

ಶಿವಮೊಗ್ಗ ತುಂಗಾ ತೀರದ ಚಿತಾಗಾರದಲ್ಲಿ, ದೇಹಗಳಿಗೆ ಮುಕ್ತಿ ನೀಡುತ್ತಿರುವುದು ಓರ್ವ ಮಹಿಳೆ
ಶಿವಮೊಗ್ಗ ತುಂಗಾ ತೀರದ ಚಿತಾಗಾರದಲ್ಲಿ

March 8, 2020
Share on FacebookShare on Twitter

ರೋಟರಿ ಚಿತಾಗಾರದ ಬಾಗಿಲಲ್ಲಿ ಹರಿಶ್ಚಂದ್ರನ ಬೃಹತ್‌ ಪ್ರತಿಮೆ. ಪಕ್ಕದಲ್ಲಿ ಚಿಕ್ಕದಾದ ಮನೆ ಇದೆ. ಅಲ್ಲಿ ಎಪ್ಪತ್ತು ದಾಟಿದ ಎರಡು ಮೂರು ಅಜ್ಜಿಯಂದಿರು ಕಾಲು ಚಾಚಿಕೊಂಡು ಕೂತಿರುತ್ತಾರೆ. ಅನುಸೂಯಮ್ಮ ಎಂದು ಕೂಗಿದರೆ ಸಾಕು ಬಾಡಿದ ಮುಖ, ಸೊರಗಿದ ಕಣ್ಣುಗಳ ಮಹಿಳೆ ಹೊರಗೆ ಇಣುಕಿ ನೋಡಿ ಮೃತ ದೇಹದ ಕಡೆಯವರೇನೋ ಎಂದು ತಡಬಡಾಯಿಸುತ್ತಾ ಬರುತ್ತಾರೆ.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಶಿವಮೊಗ್ಗದ ತುಂಗಾ ತೀರದಲ್ಲಿರುವ ರೋಟರಿ ಸಂಸ್ಥೆಯ ಚಿತಾಗರದಲ್ಲಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವುದು ಒಬ್ಬ ಬ್ರಾಹ್ಮಣ ಮಹಿಳೆ, ಆಕೆಯ ಹೆಸರು ಅನಸೂಯ, ರೂಢಿಯಲ್ಲಿ ಅನುಸೂಯಮ್ಮ ಎನ್ನುತ್ತಾರೆ. ಸುಮಾರು ಐವತ್ತು ವರ್ಷ ಆಗಿರಬಹುದು, ಹುಟ್ಟಿದ ಇಸವಿ ಆಕೆಗೂ ಸರಿಯಾಗಿ ಗೊತ್ತಿಲ್ಲ, ಹಿಂದೆ ಸಂಸಾರ ಅಂದ ಒಂದಿತ್ತು, ತಂದೆ-ತಾಯಿ ಹಾಗೂ ಪತಿ ಇದ್ದರು, ದೇವರು ಎಲ್ಲಾ ದೂರ ಮಾಡಿ ಒಂಟಿ ಮಾಡಿಬಿಟ್ಟ ಎಂಬುದಷ್ಟೇ ಅನುಸೂಯಮ್ಮನಿಗೆ ಗೊತ್ತು.

ಚಿತಾಗಾರದಲ್ಲಿ ಒಂದು ಕಡೆ ದೇಹ ದಹಿಸುತ್ತಿದ್ದರೆ, ಪಕ್ಕದಲ್ಲಿ ಅರ್ಧ ಬೆಂದ ದೇಹಕ್ಕೆ ಮರುಉರುವಲು ಕೂಡಬೇಕು. ಪೂರ್ಣ ದಹಿಸಿದ ಮೇಲೆ ಪುನಃ ಸಂಬಂಧಿಕರಿಗೆ ಅದರ ಚಿತಾಭಸ್ಮ ನೀಡಬೇಕು, ಹೀಗೆ ದಿನವಿಡೀ ಅನುಸೂಯಮ್ಮ ಇದೇ ಕಾಯಕದಲ್ಲಿ ನಿರತವಾಗಿರುತ್ತಾರೆ. ರೋಟರಿ ಚಿತಾಗರದೆಲ್ಲೆಡೆ ಶವದ ಉರಿಯ ಹೊಗೆ ಆವರಿಸಿರುತ್ತೆ, ಎಷ್ಟೇ ತುಪ್ಪ, ಗಂಧಗಳನ್ನಿಟ್ಟರೂ ಸುಟ್ಟ ವಾಸನೆ ಪಸರಿಸಿರುತ್ತೆ, ಈ ಪ್ರತಿಕೂಲ ಪರಿಸರದಲ್ಲಿ ಅನುಸೂಯಮ್ಮ ೧೮ ವರ್ಷ ಕಳೆದಿದ್ದಾರೆ. ಮಾಧ್ಯಮಗಳನ್ನ ನೋಡಿದರೆ ಆಕೆಗೆ ಸಂಕೋಚ, ತನ್ನ ಸ್ಥಿತಿ ಜಗತ್ತಿಗೆಲ್ಲಾ ತಿಳಿದರೆ ಎಂಬ ಭಯ..! ಹಾಗಾದರೆ ಅನುಸೂಯಮ್ಮಗೆ ಯಾರಾದದೂ ಸಂಬಂಧಿಕರಿದ್ದಾರೆಯೇ ಎಂಬುದು ಕೂಡಾ ತಿಳಿದಿಲ್ಲ.

ಆಕೆ ಯಾರ ಬಳಿಯೂ ಅನವಶ್ಯಕವಾಗಿ ಮಾತನಾಡುತ್ತಿರಲಿಲ್ಲ..! ನಿಧಾನವಾಗಿ ಮಾತಿಗಿಳಿದ ಅನುಸೂಯಮ್ಮ ನಾನೂ ಕೂಡ ದೈವಜ್ಞ ಬ್ರಾಹ್ಮಣ ಕುಲದವಳು ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತ ತನ್ನ ಬಗ್ಗೆ ಹೇಳುತ್ತಾ ಹೋದಳು. ನಾವೆಲ್ಲ ಚಿಕ್ಕವರಿದ್ದಾಗ ಗೋಕರ್ಣದ ಬಳಿಯಲ್ಲಿ ಹಳ್ಳಿಯೊಂದರಲ್ಲಿ ನೆಲೆಸಿದ್ದೆವು, ಬಡತನ ಹೆಚ್ಚಿದ್ದ ಕಾರಣ ಸಾಕಷ್ಟು ಕುಟುಂಬಗಳು ಶಿವಮೊಗ್ಗಕ್ಕೆ ಗುಳೇ ಬಂದವು. ನನ್ನನ್ನ ಶಿವಮೊಗ್ಗದಲ್ಲೇ ಮದುವೆ ಮಾಡಿಕೊಟ್ಟರು. ನನ್ನ ತಂದೆ ತಾಯಿ ಕೆಲವು ವರ್ಷಗಳಲ್ಲಿ ಮೃತರಾದರು. ಪತಿ ಕೆಲಸ ಮಾಡುತ್ತಿರಲಿಲ್ಲ, ಹಣವನ್ನ ಕುಡಿತಕ್ಕಾಗಿ ಖಾಲಿ ಮಾಡುತ್ತಿದ್ದರು, ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು, ಮೈ ತುಂಬ ಸಾಲ ಮಾಡಿಕೊಂಡು ಮೃತರಾದರು. ನನಗೆ ಮಕ್ಕಳಿಲ್ಲ, ಸಂಬಂಧಿಕರೂ ಆಸರೆಯಾಗಲಿಲ್ಲ, ಒಂಟಿಯಾದೆ. ಜೀವನ ಸಾಗಿಸಲು ಮಾರ್ಗವಿಲ್ಲದಂತಾಯ್ತು ಗಂಡ ಬಿಟ್ಟು ಹೋದ ಕಾಯಕವನ್ನೇ ಮುಂದುವರಿಸಿಕೊಂಡು ಬಂದೆ ಎನ್ನುತ್ತಾ ಕ್ಷಣಕಾಲ ಸುಮ್ಮನೇ ಕೂತುಬಿಟ್ಟರು.

ಅನುಸೂಯಮ್ಮನವರ ಜೀವನವನ್ನ ಮತ್ತಷ್ಟು ಕೆದುಕುವುದು ಬೇಡ ಎನಿಸಿತು. ಅನುಸೂಯಮ್ಮ ನಿಮಗೆ ಏನು ಆಗಬೇಕಿದೆ..? ನಿಮ್ಮವರು ಅಂತ ಯಾರಾದರೂ ಶಿವಮೊಗ್ಗದಲ್ಲಿದ್ದಾರ ಎಂದು ಕೇಳಿದೆ. ಇಲ್ಲ ಅವರ್ಯಾರೂ ಇಲ್ಲಿಲ್ಲ, ಆದರೆ ಟಿವಿಯಲ್ಲೊಮ್ಮೆ ಹೀರೋ ಆಗಿ ನಾನು ಕಾಣಿಸಿಕೊಂಡಿದ್ದೆ, ಅದು ಸಂಬಂಧಿಕರಿಗೆ ಇಷ್ಟವಾಗಿಲ್ಲ, ಅದೇ ಟಿವಿಯಲ್ಲಿ ರೋಟರಿಯವರು ನನಗೊಂದು ಸ್ವಂತ ಸೂರು ಮಾಡಿಕೊಡಲಿ ಎಂದಿದ್ದೆ ಅದೂ ಅಗಲಿಲ್ಲ ಎಂದರು. ಅನುಸೂಯಮ್ಮ ಎರಡು ದಶಕ ಇದೇ ಗಾಳಿ ಕುಡಿದು ನಿಸ್ತೇಜವಾಗಿದ್ದಾರೆ, ಅವರಿಗೆ ಕೊನೆದಿನಗಳಲ್ಲಾದರೂ ಬೇರೆ ವಾತಾವರಣದಲ್ಲಿ ಜೀವನ ಮಾಡಬೇಕೆಂಬ ಆಸೆ ಇದೆ, ಆದರೆ ಎಲ್ಲಾ ಕ್ಷೇತ್ರದಂತೆ ಈಕೆಯ ಸಾಧನೆಯನ್ನ ಪರಿಗಣಿಸುವರ್ಯಾರು..?

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

SIDDARAMAIAH : ಆಪ್ತ ಸ್ನೇಹಿತ ಧ್ರುವ ನಾರಯಾಣ್‌ ಬಗ್ಗೆ ಸಿದ್ದು ಭಾವುಕ ನುಡಿ | DHRUVA NARAYAN | DARSHAN |
ಇದೀಗ

SIDDARAMAIAH : ಆಪ್ತ ಸ್ನೇಹಿತ ಧ್ರುವ ನಾರಯಾಣ್‌ ಬಗ್ಗೆ ಸಿದ್ದು ಭಾವುಕ ನುಡಿ | DHRUVA NARAYAN | DARSHAN |

by ಪ್ರತಿಧ್ವನಿ
March 29, 2023
D.K Shivkumar : ಮೀಸಲಾತಿ ವಿರೋಧಿಸಿ ಬಿಜೆಪಿ ವಿರುದ್ಧ ಗುಡಿಗಿದ ಕಾಂಗ್ರೆಸ್ ನಾಯಕರು #Pratidhvani
ಇದೀಗ

D.K Shivkumar : ಮೀಸಲಾತಿ ವಿರೋಧಿಸಿ ಬಿಜೆಪಿ ವಿರುದ್ಧ ಗುಡಿಗಿದ ಕಾಂಗ್ರೆಸ್ ನಾಯಕರು #Pratidhvani

by ಪ್ರತಿಧ್ವನಿ
March 26, 2023
ಅಂಬಿ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ..!
ಸಿನಿಮಾ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬಿ ಹೆಸರು ನಾಮಕರಣ

by ಪ್ರತಿಧ್ವನಿ
March 27, 2023
ಶಿಕಾರಿಪುರದಲ್ಲೇ ವಿಜಯೇಂದ್ರ ಸ್ಪರ್ಧೆ.. ಹೈಕಮಾಂಡ್​ಗೆ ಯಡಿಯೂರಪ್ಪ ಗುನ್ನಾ.. ಕಾರಣ ಇಲ್ಲಿದೆ..
Top Story

ಶಿಕಾರಿಪುರದಲ್ಲೇ ವಿಜಯೇಂದ್ರ ಸ್ಪರ್ಧೆ.. ಹೈಕಮಾಂಡ್​ಗೆ ಯಡಿಯೂರಪ್ಪ ಗುನ್ನಾ.. ಕಾರಣ ಇಲ್ಲಿದೆ..

by ಕೃಷ್ಣ ಮಣಿ
April 1, 2023
ಬಂಗಾರಪ್ಪ ಅವರ ಮಗನಾಗಿʼಬಗರ್ ಹುಕುಂʼ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕು..!
Top Story

ಬಂಗಾರಪ್ಪ ಅವರ ಮಗನಾಗಿʼಬಗರ್ ಹುಕುಂʼ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕು..!

by ಪ್ರತಿಧ್ವನಿ
March 27, 2023
Next Post
ಸಾಧನೆಯ ಹಾದಿಯಲ್ಲಿ  ಕೊಡಗಿನ  ಬಹುಮುಖ ಪ್ರತಿಭೆ  ಮಿಲನ ಭರತ್‌

ಸಾಧನೆಯ ಹಾದಿಯಲ್ಲಿ ಕೊಡಗಿನ ಬಹುಮುಖ ಪ್ರತಿಭೆ ಮಿಲನ ಭರತ್‌

ಗಂಭಿರ ಸಮಸ್ಯೆಯ ಕುರಿತು ಅರಿವು ಮೂಡಿಸುತ್ತಿರುವ 8ರ ಪುಟ್ಟ ಬಾಲಕಿ

ಗಂಭಿರ ಸಮಸ್ಯೆಯ ಕುರಿತು ಅರಿವು ಮೂಡಿಸುತ್ತಿರುವ 8ರ ಪುಟ್ಟ ಬಾಲಕಿ

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಂಧನ; ₹10

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಂಧನ; ₹10,000 ಕೋಟಿ ಹೂಡಿಕೆಗೆ ‘YES’ ಅಂದ ಎಸ್‌ಬಿಐ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist