• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಿವಮೊಗ್ಗ ತುಂಗಾ ತೀರದ ಚಿತಾಗಾರದಲ್ಲಿ, ದೇಹಗಳಿಗೆ ಮುಕ್ತಿ ನೀಡುತ್ತಿರುವುದು ಓರ್ವ ಮಹಿಳೆ

by
March 8, 2020
in ಕರ್ನಾಟಕ
0
ಶಿವಮೊಗ್ಗ ತುಂಗಾ ತೀರದ ಚಿತಾಗಾರದಲ್ಲಿ
Share on WhatsAppShare on FacebookShare on Telegram

ರೋಟರಿ ಚಿತಾಗಾರದ ಬಾಗಿಲಲ್ಲಿ ಹರಿಶ್ಚಂದ್ರನ ಬೃಹತ್‌ ಪ್ರತಿಮೆ. ಪಕ್ಕದಲ್ಲಿ ಚಿಕ್ಕದಾದ ಮನೆ ಇದೆ. ಅಲ್ಲಿ ಎಪ್ಪತ್ತು ದಾಟಿದ ಎರಡು ಮೂರು ಅಜ್ಜಿಯಂದಿರು ಕಾಲು ಚಾಚಿಕೊಂಡು ಕೂತಿರುತ್ತಾರೆ. ಅನುಸೂಯಮ್ಮ ಎಂದು ಕೂಗಿದರೆ ಸಾಕು ಬಾಡಿದ ಮುಖ, ಸೊರಗಿದ ಕಣ್ಣುಗಳ ಮಹಿಳೆ ಹೊರಗೆ ಇಣುಕಿ ನೋಡಿ ಮೃತ ದೇಹದ ಕಡೆಯವರೇನೋ ಎಂದು ತಡಬಡಾಯಿಸುತ್ತಾ ಬರುತ್ತಾರೆ.

ADVERTISEMENT

ಶಿವಮೊಗ್ಗದ ತುಂಗಾ ತೀರದಲ್ಲಿರುವ ರೋಟರಿ ಸಂಸ್ಥೆಯ ಚಿತಾಗರದಲ್ಲಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವುದು ಒಬ್ಬ ಬ್ರಾಹ್ಮಣ ಮಹಿಳೆ, ಆಕೆಯ ಹೆಸರು ಅನಸೂಯ, ರೂಢಿಯಲ್ಲಿ ಅನುಸೂಯಮ್ಮ ಎನ್ನುತ್ತಾರೆ. ಸುಮಾರು ಐವತ್ತು ವರ್ಷ ಆಗಿರಬಹುದು, ಹುಟ್ಟಿದ ಇಸವಿ ಆಕೆಗೂ ಸರಿಯಾಗಿ ಗೊತ್ತಿಲ್ಲ, ಹಿಂದೆ ಸಂಸಾರ ಅಂದ ಒಂದಿತ್ತು, ತಂದೆ-ತಾಯಿ ಹಾಗೂ ಪತಿ ಇದ್ದರು, ದೇವರು ಎಲ್ಲಾ ದೂರ ಮಾಡಿ ಒಂಟಿ ಮಾಡಿಬಿಟ್ಟ ಎಂಬುದಷ್ಟೇ ಅನುಸೂಯಮ್ಮನಿಗೆ ಗೊತ್ತು.

ಚಿತಾಗಾರದಲ್ಲಿ ಒಂದು ಕಡೆ ದೇಹ ದಹಿಸುತ್ತಿದ್ದರೆ, ಪಕ್ಕದಲ್ಲಿ ಅರ್ಧ ಬೆಂದ ದೇಹಕ್ಕೆ ಮರುಉರುವಲು ಕೂಡಬೇಕು. ಪೂರ್ಣ ದಹಿಸಿದ ಮೇಲೆ ಪುನಃ ಸಂಬಂಧಿಕರಿಗೆ ಅದರ ಚಿತಾಭಸ್ಮ ನೀಡಬೇಕು, ಹೀಗೆ ದಿನವಿಡೀ ಅನುಸೂಯಮ್ಮ ಇದೇ ಕಾಯಕದಲ್ಲಿ ನಿರತವಾಗಿರುತ್ತಾರೆ. ರೋಟರಿ ಚಿತಾಗರದೆಲ್ಲೆಡೆ ಶವದ ಉರಿಯ ಹೊಗೆ ಆವರಿಸಿರುತ್ತೆ, ಎಷ್ಟೇ ತುಪ್ಪ, ಗಂಧಗಳನ್ನಿಟ್ಟರೂ ಸುಟ್ಟ ವಾಸನೆ ಪಸರಿಸಿರುತ್ತೆ, ಈ ಪ್ರತಿಕೂಲ ಪರಿಸರದಲ್ಲಿ ಅನುಸೂಯಮ್ಮ ೧೮ ವರ್ಷ ಕಳೆದಿದ್ದಾರೆ. ಮಾಧ್ಯಮಗಳನ್ನ ನೋಡಿದರೆ ಆಕೆಗೆ ಸಂಕೋಚ, ತನ್ನ ಸ್ಥಿತಿ ಜಗತ್ತಿಗೆಲ್ಲಾ ತಿಳಿದರೆ ಎಂಬ ಭಯ..! ಹಾಗಾದರೆ ಅನುಸೂಯಮ್ಮಗೆ ಯಾರಾದದೂ ಸಂಬಂಧಿಕರಿದ್ದಾರೆಯೇ ಎಂಬುದು ಕೂಡಾ ತಿಳಿದಿಲ್ಲ.

ಆಕೆ ಯಾರ ಬಳಿಯೂ ಅನವಶ್ಯಕವಾಗಿ ಮಾತನಾಡುತ್ತಿರಲಿಲ್ಲ..! ನಿಧಾನವಾಗಿ ಮಾತಿಗಿಳಿದ ಅನುಸೂಯಮ್ಮ ನಾನೂ ಕೂಡ ದೈವಜ್ಞ ಬ್ರಾಹ್ಮಣ ಕುಲದವಳು ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತ ತನ್ನ ಬಗ್ಗೆ ಹೇಳುತ್ತಾ ಹೋದಳು. ನಾವೆಲ್ಲ ಚಿಕ್ಕವರಿದ್ದಾಗ ಗೋಕರ್ಣದ ಬಳಿಯಲ್ಲಿ ಹಳ್ಳಿಯೊಂದರಲ್ಲಿ ನೆಲೆಸಿದ್ದೆವು, ಬಡತನ ಹೆಚ್ಚಿದ್ದ ಕಾರಣ ಸಾಕಷ್ಟು ಕುಟುಂಬಗಳು ಶಿವಮೊಗ್ಗಕ್ಕೆ ಗುಳೇ ಬಂದವು. ನನ್ನನ್ನ ಶಿವಮೊಗ್ಗದಲ್ಲೇ ಮದುವೆ ಮಾಡಿಕೊಟ್ಟರು. ನನ್ನ ತಂದೆ ತಾಯಿ ಕೆಲವು ವರ್ಷಗಳಲ್ಲಿ ಮೃತರಾದರು. ಪತಿ ಕೆಲಸ ಮಾಡುತ್ತಿರಲಿಲ್ಲ, ಹಣವನ್ನ ಕುಡಿತಕ್ಕಾಗಿ ಖಾಲಿ ಮಾಡುತ್ತಿದ್ದರು, ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು, ಮೈ ತುಂಬ ಸಾಲ ಮಾಡಿಕೊಂಡು ಮೃತರಾದರು. ನನಗೆ ಮಕ್ಕಳಿಲ್ಲ, ಸಂಬಂಧಿಕರೂ ಆಸರೆಯಾಗಲಿಲ್ಲ, ಒಂಟಿಯಾದೆ. ಜೀವನ ಸಾಗಿಸಲು ಮಾರ್ಗವಿಲ್ಲದಂತಾಯ್ತು ಗಂಡ ಬಿಟ್ಟು ಹೋದ ಕಾಯಕವನ್ನೇ ಮುಂದುವರಿಸಿಕೊಂಡು ಬಂದೆ ಎನ್ನುತ್ತಾ ಕ್ಷಣಕಾಲ ಸುಮ್ಮನೇ ಕೂತುಬಿಟ್ಟರು.

ಅನುಸೂಯಮ್ಮನವರ ಜೀವನವನ್ನ ಮತ್ತಷ್ಟು ಕೆದುಕುವುದು ಬೇಡ ಎನಿಸಿತು. ಅನುಸೂಯಮ್ಮ ನಿಮಗೆ ಏನು ಆಗಬೇಕಿದೆ..? ನಿಮ್ಮವರು ಅಂತ ಯಾರಾದರೂ ಶಿವಮೊಗ್ಗದಲ್ಲಿದ್ದಾರ ಎಂದು ಕೇಳಿದೆ. ಇಲ್ಲ ಅವರ್ಯಾರೂ ಇಲ್ಲಿಲ್ಲ, ಆದರೆ ಟಿವಿಯಲ್ಲೊಮ್ಮೆ ಹೀರೋ ಆಗಿ ನಾನು ಕಾಣಿಸಿಕೊಂಡಿದ್ದೆ, ಅದು ಸಂಬಂಧಿಕರಿಗೆ ಇಷ್ಟವಾಗಿಲ್ಲ, ಅದೇ ಟಿವಿಯಲ್ಲಿ ರೋಟರಿಯವರು ನನಗೊಂದು ಸ್ವಂತ ಸೂರು ಮಾಡಿಕೊಡಲಿ ಎಂದಿದ್ದೆ ಅದೂ ಅಗಲಿಲ್ಲ ಎಂದರು. ಅನುಸೂಯಮ್ಮ ಎರಡು ದಶಕ ಇದೇ ಗಾಳಿ ಕುಡಿದು ನಿಸ್ತೇಜವಾಗಿದ್ದಾರೆ, ಅವರಿಗೆ ಕೊನೆದಿನಗಳಲ್ಲಾದರೂ ಬೇರೆ ವಾತಾವರಣದಲ್ಲಿ ಜೀವನ ಮಾಡಬೇಕೆಂಬ ಆಸೆ ಇದೆ, ಆದರೆ ಎಲ್ಲಾ ಕ್ಷೇತ್ರದಂತೆ ಈಕೆಯ ಸಾಧನೆಯನ್ನ ಪರಿಗಣಿಸುವರ್ಯಾರು..?

Tags: International Women's DayShivamoggaWomen Empowermentತುಂಗಾ ತೀರಮಹಿಳಾ ದಿನಾಚರಣೆಶವಾಗಾರ
Previous Post

ಮೀಸಲಾತಿಗಷ್ಟೆ ಮೀಸಲಾಗಬಾರದು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

Next Post

ಸಾಧನೆಯ ಹಾದಿಯಲ್ಲಿ ಕೊಡಗಿನ ಬಹುಮುಖ ಪ್ರತಿಭೆ ಮಿಲನ ಭರತ್‌

Related Posts

ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ
Top Story

ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ

by ಪ್ರತಿಧ್ವನಿ
August 19, 2026
0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಫಾರ್ಮ್‌ಹೌಸ್‌ ಒಂದರಲ್ಲಿ ನಕಲಿ ಔಷಧಿಗಳನ್ನು ಮರುಪ್ಯಾಕ್‌ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ...

Read moreDetails
ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

August 19, 2026
ಎರಡನೇ ಮುದ್ರಣಕ್ಕೆ ಸಜ್ಜಾದ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ವಿಶೇಷತೆಯೇನು..?

ಎರಡನೇ ಮುದ್ರಣಕ್ಕೆ ಸಜ್ಜಾದ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ವಿಶೇಷತೆಯೇನು..?

August 19, 2026
ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

August 19, 2026
ನಕಲಿ ಪಿಂಚಣಿದಾರರಿಗೆ ಸರ್ಕಾರದ ಬಿಗ್‌ ಶಾಕ್: ರಾಜ್ಯದಲ್ಲಿ 18 ಲಕ್ಷ ಖಾತೆಗಳು ಸ್ಥಗಿತ

ನಕಲಿ ಪಿಂಚಣಿದಾರರಿಗೆ ಸರ್ಕಾರದ ಬಿಗ್‌ ಶಾಕ್: ರಾಜ್ಯದಲ್ಲಿ 18 ಲಕ್ಷ ಖಾತೆಗಳು ಸ್ಥಗಿತ

August 19, 2026
Next Post
ಸಾಧನೆಯ ಹಾದಿಯಲ್ಲಿ  ಕೊಡಗಿನ  ಬಹುಮುಖ ಪ್ರತಿಭೆ  ಮಿಲನ ಭರತ್‌

ಸಾಧನೆಯ ಹಾದಿಯಲ್ಲಿ ಕೊಡಗಿನ ಬಹುಮುಖ ಪ್ರತಿಭೆ ಮಿಲನ ಭರತ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada