Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮಾದರಿ ಚುನಾವಣಾ ಸೂತ್ರ ರೂಪಿಸಿದ ಶಿವಲಿಂಗೇಗೌಡ..!

ಮಾದರಿ ಚುನಾವಣಾ ಸೂತ್ರ ಹೆಣೆದ ಶಿವಲಿಂಗೇಗೌಡ..!
ಮಾದರಿ ಚುನಾವಣಾ ಸೂತ್ರ ರೂಪಿಸಿದ ಶಿವಲಿಂಗೇಗೌಡ..!

March 18, 2020
Share on FacebookShare on Twitter

ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳೇ ಸಾರ್ವಭೌಮರು. ಪ್ರತಿ 5 ವರ್ಷಕ್ಕೆ ಒಮ್ಮೆ ಎದುರಾಗುವ ಚುನಾವಣೆಯಲ್ಲಿ ತಮ್ಮನ್ನು ಆಳುವ ಜನನಾಯರು ಯಾರಾಗಬೇಕು ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. 5 ವರ್ಷದಲ್ಲಿ ಆಯ್ಕೆ ಮಾಡಿದ ನಾಯಕ ಸರಿಯಾಗಿ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಇದ್ದರೆ ಮುಂದಿನ ಬಾರಿ ಸೋಲಿಸುವ ಸಿದ್ಧ ಸೂತ್ರವೂ ಜನರ ಬಳಿಯೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ನಾಯಕ ಕೆಲಸ ಮಾಡಲಿ, ಅಪ್ರಯೋಜಕ ಆಗಿರಲಿ, ದೇಶಭಕ್ತಿ, ರಾಷ್ಟ್ರರಕ್ಷಣೆ, ಧರ್ಮ, ಜಾತಿ ಆಧಾರದಲ್ಲಿ ಆಯ್ಕೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಒಂದು ಪಕ್ಷದ ನಾಯಕನು ಸಮರ್ಥ ಎನಿಸಿಬಿಟ್ಟರೆ, ಸ್ಥಳೀಯವಾಗಿ ಆಯ್ಕೆಯಾಗುವ ವ್ಯಕ್ತಿ ಅಸಮರ್ಥ ಎನ್ನುವುದು ಗೊತ್ತಿದ್ದರೂ ಜನರು ಮತ ಹಾಕಿಸಿ ಗೆಲ್ಲಿಸುತ್ತಿದ್ದಾರೆ. ಗೆದ್ದು ಹೋದವರು ಸಂಸತ್‌ ಹಾಗು ವಿಧಾನಸಭೆಯಲ್ಲಿ ಎದ್ದು ಮಾತನಾಡಲು ಆಗದವರಾಗಿದ್ದರೂ ಗೆಲ್ಲಿಸುವ ಮೂರ್ಖತನವನ್ನು ಇದೇ ಪ್ರಜಾಪ್ರಭುತ್ವದ ಸಾರ್ವಭೌಮನೇ ಮಾಡುತ್ತಿರುವುದು ವಿಶೇಷ.

ಹೆಚ್ಚು ಓದಿದ ಸ್ಟೋರಿಗಳು

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

RAHUL GANDHI | ರಾಹುಲ್ ಗಾಂಧಿಗೋಸ್ಕರ ಬೀದಿಗಿಳಿದ ಯುವ ಕಾಂಗ್ರೆಸ್ #PRATIDHVANI

ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರ ಭ್ರಷ್ಟನಾಗಿದ್ದಾನೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿದೆ. ಮತದಾರನೂ ಕೂಡ ಭ್ರಷ್ಟ ರಾಜಕಾರಣಿ ಲಂಚ ಪಡೆದು ಕೋಟಿ ಕೋಟಿ ಆಸ್ತಿ ಮಾಡಿದ್ದಾನೆ. ಕೊಡಲಿ ಬಿಡು ಎನ್ನುವ ಉದಾಸಿನದಿಂದ ಚುನಾವಣೆ ವೇಳೆ ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದಾನೆ. ಚುನಾವಣಾ ಆಯೋಗ ಚುನಠಾವಣಾ ವೆಚ್ಚಕ್ಕೆ ನಿಗದಿ ಮಾಡಿರುವ ಹಣದಲ್ಲಿ ಚುನಾವಣೆ ನಡೆಯುತ್ತಿಲ್ಲ ಎನ್ನುವುದು ಚುನಾವನಾ ಆಯೋಗಕ್ಕೂ ಗೊತ್ತು. ಆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಚುನಾವಣಾ ಆಯೋಗ ಯಾವುದೇ ಪರಿಹಾರ ಕ್ರಮದ ಬಗ್ಗೆ ಚಿಂತನೆ ನಡೆಸುತ್ತಿಲ್ಲ.

ಸುಧಾರಣಾ ಕ್ರಮ ಕೈಗೊಳ್ಳುವ ಬದಲು, ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿರುವ ಆರೋಪ ಪ್ರತಿಸಲವೂ ಕೇಳಿಬರುತ್ತದೆ. ಆಡಳಿತರೂಢ ಪಕ್ಷ ತನಗೆ ಎದುರಾಳಿಯಾದ ಪಕ್ಷದ ಅಭ್ಯರ್ಥಿಗಳ ಮೇಲೆ ಅಧಿಕಾರಿಗಳನ್ನು ಬಳಸಿಕೊಂಡು ರೇಡ್‌ ಮಾಡುವುದು. ಚುನಾವಣೆಯಲ್ಲಿ ಎದುರಾಳಿಯನ್ನು ಕಟ್ಟಿ ಹಾಕುವುದು ಸಹಜ ಎನ್ನುವಂತಾಗಿದೆ. ಅಧಿಕಾರದಲ್ಲಿದ್ದವರ ಪರವಾಗಿ ಚುನಾವಣೆ ನಡೆಸ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ ಎನ್ನುವಂತಾಗಿದೆ.

ಆದ್ರೆ, ಅದೇ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಶಾಸಕರು ಚರ್ಚೆ ನಡೆಸುತ್ತಿದ್ದಾರೆ. ಅದರಲ್ಲಿ ಹಾಸನ ಜಿಲ್ಲೆ ಅರಸೀಕೆರೆಯಿಂದ ಆಯ್ಕೆಯಾಗಿರುವ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಚುನಾವಣಾ ಹೇಗೆ ನಡೆಯುತ್ತಿದೆ..? ಸುಧಾರಣೆ ಮಾಡುವ ಅಗತ್ಯತೆ ಬಗ್ಗೆ ಗಮನ ಸೆಳೆದಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು ಎನ್ನುವ ಇಚ್ಛಾಶಕ್ತಿ ಇದ್ದರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಂದಾಗಿ ಮೊದಲು ಚುನಾವಣಾ ಸುಧಾರಣೆಗೆ ಕಾನೂನು ತರಬೇಕು. ಪ್ರತಿ ಗ್ರಾಮದಲ್ಲೂ ಒಂದೊಂದು ಸ್ಕ್ರೀನ್‌ ಹಾಕುವುದು. ತಾಲೂಕು ಮಟ್ಟದಲ್ಲಿ ಕುಳಿತು ಚುನಾವಣೆ ಪ್ರಚಾರ ಮಾಡುವುದು.

ಎಲ್ಲಾ ಪಕ್ಷಗಳಿಗೂ ಇಂತಿಷ್ಟು ಸಮಯ ನಿಗದಿ ಮಾಡಿ, ನಮ್ಮ ಅಭಿವೃದ್ಧಿ, ಪ್ರಣಾಳಿಕೆ ಬಗ್ಗೆ ಹೇಳುವುದು. ಯಾವುದೇ ಊರಿಗೆ ಹೋಗುವಂತಿಲ್ಲ, ಯಾರಿಗೂ 5 ರೂಪಾಯಿ ಕೊಡುವಂತಿಲ್ಲ. ನಾವು ಯಾರ ಬಳಿಯೂ ಕಮಿಷನ್‌ ಪಡೆಯುವಂತಿಲ್ಲ. ಚುನಾವಣೆ ಮುಗಿದ ಬಳಿಕ ಅಭಿವೃದ್ಧಿ ಮಾಡದಿದ್ರೆ ಜನರೇ ಕೊರಳುಪಟ್ಟಿ ಹಿಡಿದು ಕೇಳ್ತಾರೆ. ಚುನಾವಣಾ ಭೂತವನ್ನು ಸರಿ ಮಾಡದಿದ್ದರೆ ಎಲ್ಲರೂ ಭ್ರಷ್ಟಾಚಾರಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಬೇಕು ಎನ್ನುವುದಾದರೆ ಚುನಾವಣಾ ಸುಧಾರಣೆ ತಂದರೆ ಶೇಕಡ 90ರಷ್ಟು ಕಡಿಮೆ ಆಗುತ್ತದೆ. ಕೇವಲ ಶಾಸಕಾಂಗ ಅಷ್ಟೇ ಅಲ್ಲ, ಕಾರ್ಯಾಂಗ, ನ್ಯಾಯಂಗ ಜೊತೆಗೆ ನಾಲ್ಕನೇ ಅಂಗವೂ ಭ್ರಷ್ಟಾಚಾರಿಗಳಾಗಿದ್ದಾರೆ ಎನ್ನುವ ಮೂಲಕ ಮಾಧ್ಯಮಗಳಲ್ಲೂ ಕೆಲವರು ಭ್ರಷ್ಟಾಚಾರಿಗಳಿದ್ದಾರೆ ಟೀಕಿಸಿದ್ದಾರೆ.

ಶಿವಲಿಂಗೇಗೌಡ ಅವರು ಹೇಳಿರುವ ಮಾತಿನಲ್ಲಿ ಬಹುತೇಕ ಸತ್ಯಾಂಶವಿದೆ. ಇದೀಗ ಸಂವಿಧಾನದ ಅಧಿಕೃತ ಮೂರು ಅಂಗಗಳು ಭ್ರಷ್ಟಾಚಾರವನ್ನು ಹಾಸುಹೊದ್ದು ಮಲಗಿವೆ. ಅನಧಿಕೃತವಾಗಿದ್ದರೂ ಸಂವಿಧಾನದ ನಿಜವಾದ ಕಾವಲು ನಾಯಿ ಮಾಧ್ಯಮ ಕೂಡ ಭ್ರಷ್ಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಜವಾದ ಪತ್ರಕರ್ತ ಭ್ರಷ್ಟನಲ್ಲ. ಆದರೆ ಬಂಡವಾಳಶಾಹಿ ವರ್ಗದ ಹಿಡಿತಕ್ಕೆ ಒಳಗಾಗಿರುವ ಮಾಧ್ಯಮ, ಕೆಲವೊಮ್ಮೆ ಮಾಲೀಕರು ಹೇಳಿದಂತೆ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಈ ಪರಿಸ್ಥಿತಿಯಿಂದ ಹೊರಗೆ ಬರಬೇಕಾದರೆ ಕೆಲವೊಂದಷ್ಟು ಸಮಯ ಹಿಡಿಯುತ್ತದೆ. ಆದರೆ ಶಾಸಕ ಶಿವಲಿಂಗೇಗೌಡರು ಹೇಳಿರುವಂತೆ ಚುನಾವಣಾ ಸುಧಾರಣಾ ಕ್ರಮ, ಕೈಗೊಂಡರೆ, ಬಹುತೇಕ ಭ್ರಷ್ಟಾಚಾರವನ್ನು ಮಟ್ಟ ಹಾಕಬಹುದು. ಕಾರಣ ಎಂದರೆ ಚುನಾವಣಾ ವೆಚ್ಚಕ್ಕೆ ಸುಮಾರು 50 ರಿಂದ 60 ಕೋಟಿ ರೂಪಾಯಿ ವೆಚ್ಚ ಮಾಡಿ ಗೆದ್ದು ಬರುವ ಓರ್ವ ಶಾಸಕ ಅಥವಾ ಸಂಸದ ಅದರ ಎರಡರಷ್ಟು ಹಣವನ್ನು ವಾಪಸ್‌ ಪಡೆಯುವ ಹಪಾಹಪಿಯಲ್ಲಿ ಇರುತ್ತಾನೆ. ಒಂದು ವೇಳೆ ಚುನಾವಣೆಯಲ್ಲಿ ಕಾಸು ಖರ್ಚು ಮಾಡಿಲ್ಲದಿದ್ದರೆ, ಹಣವನ್ನೇ ಮಾಡುವುದಿಲ್ಲ ಎನ್ನಲಾಗದು.

ಆದರೆ, ಜನರು ನೇರವಾಗಿ ಪ್ರಶ್ನೆ ಮಾಡುವ ಅವಕಾಶ ಹೊಂದಿರುತ್ತಾನೆ. ಆದರೆ, ಇದೀಗ ನಮ್ಮೂರಿನ ರಸ್ತೆಗೆ ಡಾಂಬಾರ್‌ ಹಾಕಿಸಿ ಎಂದು ಓರ್ವ ಸ್ಥಳೀಯ ನಾಯಕ ಪ್ರಶ್ನೆ ಮಾಡಲು ಹೋದರೆ, ಚುನಾವಣೆ ವೇಳೆ ಖರ್ಚು ಮಾಡಿರುವ ಹಣ ಸಂಪಾದಿಸಬೇಕು. ರಸ್ತೆಯನ್ನೇ ಮಾಡದೆ ಬಿಲ್‌ ಪಾಸ್‌ ಮಾಡಿಸಿ ಎನ್ನುತ್ತಾನೆ ಶಾಸಕ. ಆಡಳಿತ ವರ್ಗದ ಜೊತೆ ಸೇರಿಕೊಂಡು ನಕಲಿ ಫೋಟೋ ತೋರಿಸಿ ಕೋಟಿ ಕೋಟಿ ಹಣವೂ ಬಿಡುಗಡೆ ಆಗುತ್ತದೆ. ಇದೀಗ ಹಳ್ಳಿಗಳಲ್ಲಿ ಅದೆಷ್ಟೋ ರಸ್ತೆಗಳು ಡಾಂಬಾರ್‌ ಎಂದು ವರದಿಯಲ್ಲಿದೆಯೋ ಯಾರು ಬಲ್ಲರು. ಇಲ್ಲ ಎಂದುಕೊಳ್ಳುವುದು ನಿಮ್ಮ ಮೂರ್ಖತನ. ಬೇಕಿದ್ದರೆ, ತಾಲೂಕು ಕಚೇರಿಗೆ ಹೋಗಿ ಸಂಪೂರ್ಣ ಮಾಹಿತಿ ಪಡೆಯಿರಿ, ಪರಿಶೀಲಿಸಿ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

HD KUMARASWAMY | ಸಿದ್ದರಾಮಯ್ಯ ಅವರ ಶಕ್ತಿ ಕುಂದಿದೆ ಎಂಬುದಕ್ಕೆ ಅವರು ಕ್ಷೇತ್ರ ಹುಟುಕಾಟವೆ ಸಾಕ್ಷಿ..!
ಇದೀಗ

HD KUMARASWAMY | ಸಿದ್ದರಾಮಯ್ಯ ಅವರ ಶಕ್ತಿ ಕುಂದಿದೆ ಎಂಬುದಕ್ಕೆ ಅವರು ಕ್ಷೇತ್ರ ಹುಟುಕಾಟವೆ ಸಾಕ್ಷಿ..!

by ಪ್ರತಿಧ್ವನಿ
March 18, 2023
DBOSS FANS | ವಿನೋದ್ ಪ್ರಭಾಕರ್ ಖಡಕ್ ಡೈಲಾಗ್ ಗೆ ಶಿಳ್ಳೆ, ಕೇಕೆ ಹಾಕಿದ ಅಭಿಮಾನಿಗಳು | VINOD PRABHAKAR
ಇದೀಗ

DBOSS FANS | ವಿನೋದ್ ಪ್ರಭಾಕರ್ ಖಡಕ್ ಡೈಲಾಗ್ ಗೆ ಶಿಳ್ಳೆ, ಕೇಕೆ ಹಾಕಿದ ಅಭಿಮಾನಿಗಳು | VINOD PRABHAKAR

by ಪ್ರತಿಧ್ವನಿ
March 20, 2023
Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi

by ಪ್ರತಿಧ್ವನಿ
March 20, 2023
ಚುನಾವಣೆ ಕರ್ತವ್ಯ ನಿರ್ಲಕ್ಷ ತೋರಿದ ಇಬ್ಬರು ಅಧಿಕಾರಿಗಳ ಅಮಾನತ್ತು..! : Suspension of Two Officials Who Neglected Election Duty..!
Top Story

ಚುನಾವಣೆ ಕರ್ತವ್ಯ ನಿರ್ಲಕ್ಷ ತೋರಿದ ಇಬ್ಬರು ಅಧಿಕಾರಿಗಳ ಅಮಾನತ್ತು..! : Suspension of Two Officials Who Neglected Election Duty..!

by ಪ್ರತಿಧ್ವನಿ
March 19, 2023
ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ : Siddaramaiah Says He won’t be Able to Win in Kolar
Top Story

ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ : Siddaramaiah Says He won’t be Able to Win in Kolar

by ಪ್ರತಿಧ್ವನಿ
March 20, 2023
Next Post
ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕರಾವಳಿಯಲ್ಲಿ ʼಸರ್ಜಿಕಲ್‌ ಸ್ಟ್ರೈಕ್‌ʼ..!?

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕರಾವಳಿಯಲ್ಲಿ ʼಸರ್ಜಿಕಲ್‌ ಸ್ಟ್ರೈಕ್‌ʼ..!?

ನೀವು ಕರೋನಾ ಸನ್ನಿಗೆ ಒಳಗಾಗಿರುವಾಗ ಸರ್ಕಾರ ನಿಮ್ಮ ಮೇಲೆ ಕಣ್ಗಾವಲು ಆರಂಭಿಸಿದೆ!

ನೀವು ಕರೋನಾ ಸನ್ನಿಗೆ ಒಳಗಾಗಿರುವಾಗ ಸರ್ಕಾರ ನಿಮ್ಮ ಮೇಲೆ ಕಣ್ಗಾವಲು ಆರಂಭಿಸಿದೆ!

ಡಾಲರ್ ವಿರುದ್ಧ ಸರ್ವಕಾಲಿಕ ಕೆಳಮಟ್ಟ 75ಕ್ಕೆ ಇಳಿದ ರುಪಾಯಿ ಮೌಲ್ಯ

ಡಾಲರ್ ವಿರುದ್ಧ ಸರ್ವಕಾಲಿಕ ಕೆಳಮಟ್ಟ 75ಕ್ಕೆ ಇಳಿದ ರುಪಾಯಿ ಮೌಲ್ಯ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist