Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪ್ರಕೃತಿ ವಿಕೋಪದಲ್ಲಿ ಕೇಂದ್ರದಿಂದ ತಕ್ಷಣ ಪರಿಹಾರ ಬಂದಿದ್ದೇ ಇಲ್ಲ

ಪ್ರಕೃತಿ ವಿಕೋಪದಲ್ಲಿ ಕೇಂದ್ರದಿಂದ ತಕ್ಷಣ ಪರಿಹಾರ ಬಂದಿದ್ದೇ ಇಲ್ಲ
ಪ್ರಕೃತಿ ವಿಕೋಪದಲ್ಲಿ ಕೇಂದ್ರದಿಂದ ತಕ್ಷಣ ಪರಿಹಾರ ಬಂದಿದ್ದೇ ಇಲ್ಲ

October 4, 2019
Share on FacebookShare on Twitter

ಯಾವ ಪಕ್ಷವೇ ಅಧಿಕಾರದಲ್ಲಿದ್ದರೂ, ಎಷ್ಟೇ ಒತ್ತಡ ಹಾಕಿದರೂ ಆಡಳಿತದ ನಿಯಮಗಳು, ಕಾರ್ಯವಿಧಾನಗಳು ಬದಲಾಗುವುದಿಲ್ಲ. ಅದು ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ವಿಚಾರವೇ ಆಗಿರಲಿ, ಅಧಿಕಾರಿಗಳು ನಿಯಮ, ಕಾಯ್ದೆಗಳನ್ನು ಉಲ್ಲಂಘಿಸುವುದಿಲ್ಲ. ನಿಯಮಗಳ ಮುಂದೆ ಮಾನವೀಯತೆಯೂ ಗೌಣವಾಗುತ್ತದೆ. ಅದು ಬಿಜೆಪಿ ಸರ್ಕಾರವಿರಲಿ, ಕಾಂಗ್ರೆಸ್ ಸರ್ಕಾರವೇ ಆಗಿರಲಿ. ರಾಜಕಾರಣಿಗಳು ಹೇಳಿದರೂ ಅಧಿಕಾರಿಗಳು ನಿಯಮ ಮೀರಿ ಕೆಲಸ ಮಾಡಲು ಒಪ್ಪುವುದಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಲಿಫ್ಟ್ ಕೊಡುವ ನೆಪದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಬಾಲಕನಿಗೆ ಲೈಂಗಿಕ ಕಿರುಕುಳ..!

BJP protests about guarantee schemes : ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪ್ರತಿಭಟನೆ..!

BREAKING : ಗ್ಯಾರಂಟಿ ಬೆನ್ನಲ್ಲೇ ಮತ್ತೊಂದು ಬೇಡಿಕೆ ಈಡೇರಿಕೆಗೆ ಹೆಚ್ಚಾಯಿತು ಒತ್ತಡ.!

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಬಂದು ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿ ಜನ ಬೀದಿಗೆ ಬಂದಿದ್ದರೂ ಕೇಂದ್ರ ಸರ್ಕಾರದಿಂದ ಇದುವರೆಗೆ ಪರಿಹಾರ ಬಿಡುಗಡೆಯಾಗದೇ ಇರಲು ಇದುವೇ ಕಾರಣ. ಇದರಿಂದಾಗಿಯೇ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದೆ. ಕೇಳಿದ ಕೂಡಲೇ ಕೇಂದ್ರ ಸರ್ಕಾರ ನೆರವಿಗೆ ಬರುತ್ತದೆ ಎಂಬ ಬಿಜೆಪಿ ನಾಯಕರ ಮಾತುಗಳು ಸುಳ್ಳಾಗಿ ಜನ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಯಾರೆಷ್ಟೇ ಬೊಬ್ಬೆ ಹಾಕಿದರೂ, ಪರಿ ಪರಿಯಾಗಿ ಕೇಳಿಕೊಂಡರೂ ನಿಯಮಾವಳಿಗಳ ಎದುರು ಕುರುಡಾಗಿರುವ ಅಧಿಕಾರಶಾಹಿ ಅದನ್ನು ಕೇಳಿಸಿಕೊಳ್ಳುವುದಿಲ್ಲ. ಬದಲಾಗಿ ನಿಯಮಗಳು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತಾರೆ.

ರಾಜ್ಯದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದಾಗಿ ಅಂದಾಜು 38,000 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ (ಎನ್‌ಡಿಆರ್‌ಎಫ್‌) ನಿಯಮಾವಳಿ ಅನ್ವಯ 3,500 ಕೋಟಿ ರೂಪಾಯಿ ನೆರವು ನೀಡಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದ್ದರೂ ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸುತ್ತಾ, ಸ್ಪಷ್ಟೀಕರಣಗಳನ್ನು ಕೇಳುತ್ತಾ ಇದುವರೆಗೆ ಹಣ ಬಿಡುಗಡೆ ಮಾಡದೇ ಇರಲು ಕಾರಣ ಈ ನಿಯಮಾವಳಿಗಳೇ ಆಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಒಂದೇ ಪಕ್ಷವಿರಲಿ, ಪರಸ್ಪರ ಸ್ನೇಹಿತರೇ ಆಗಿರಲಿ, ನಿಯಮಗಳ ಮುಂದೆ ಅವೆಲ್ಲವೂ ಗೌಣವಾಗುತ್ತವೆ.

Also Read: ಪ್ರಕೃತಿ ವಿಕೋಪ ಪರಿಹಾರ: ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಈ ಬಾರಿ ನೆರವು ನೀಡದೇ ಇರುವುದನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು, ಬಿ. ಎಸ್. ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ರಾಜ್ಯಕ್ಕೆ ಕೇಂದ್ರದಿಂದ ನೆರವು ಸಿಗುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಇದುವರೆಗೆ ಯಾವತ್ತೂ ಪ್ರವಾಹ ಅಥವಾ ಬರ ಬಂದಾಗ ತಕ್ಷಣಕ್ಕೆ ಕೇಂದ್ರದಿಂದ ಪರಿಹಾರ ಬಂದ ಉದಾಹರಣೆ ಇಲ್ಲ. ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ (ಬೇರೆ ಬೇರೆ ಇಲಾಖೆಗಳಿಗೆ ಹಂಚಿಕೆ ಮಾಡಿದ ಅನುದಾನವನ್ನು ತಿರುಗಿಸಿ) ಹಣ ಖರ್ಚು ಮಾಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಮೂರ್ನಾಲ್ಕು ತಿಂಗಳ ನಂತರ ಕೇಂದ್ರ ಸರ್ಕಾರದಿಂದ ಪರಿಹಾರದ ಮೊತ್ತ ಬಂದ ಬಳಿಕ ಅದನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಇದು ನಡೆದುಕೊಂಡು ಬಂದಿರುವ ಪದ್ಧತಿ.

ಪರಿಹಾರ ಪ್ರಸ್ತಾವನೆಗಳಿಗೆ ಸ್ಪಷ್ಟೀಕರಣ ಕೇಳುವುದು ಸಹಜ ಪ್ರಕ್ರಿಯೆ

ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ 38 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ನಷ್ಟವಾಗಿದ್ದು, ಎನ್. ಡಿ. ಆರ್. ಎಫ್. ನಿಯಮಾವಳಿಯಡಿ 3500 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆ ಸ್ಪಷ್ಟೀಕರಣ ಕೇಳಿದ್ದ ಕೇಂದ್ರ, ತನ್ನದೇ ಆದ ಲೆಕ್ಕಾಚಾರಗಳ ಪ್ರಕಾರ ಅಷ್ಟೊಂದು ಹಾನಿಯಾಗಿಲ್ಲ. ಪ್ರಸ್ತಾವನೆಯನ್ನು ಪರಿಷ್ಕರಿಸಿ ಎಂದು ಹೇಳಿತ್ತು. ಅದರಂತೆ ಸುಮಾರು 35,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿ ರಾಜ್ಯ ಸರ್ಕಾರ ಪರಿಷ್ಕೃತ ಪ್ರಸ್ತಾವನೆ ಕಳುಹಿಸಿತ್ತು. ಇದೀಗ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರದ ಅಧಿಕಾರಿಗಳ ತಂಡ ನೀಡಿದ್ದ ವರದಿಯು ರಾಜ್ಯ ಸರ್ಕಾರ ಸಲ್ಲಿಸಿರುವ ನಷ್ಟದೊಂದಿಗೆ ತಾಳೆಯಾಗುತ್ತಿಲ್ಲ. ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ 2.5 ಲಕ್ಷ ಮನೆಗಳು ನೆಲಕಚ್ಚಿವೆ ಎಂದು ಹೇಳಲಾಗಿದೆ. ಆದರೆ, ಕೇಂದ್ರದ ಅಧ್ಯಯನ ತಂಡದ ವರದಿ ಪ್ರಕಾರ 1.15 ಲಕ್ಷ ಮನೆಗಳು ಮಾತ್ರ ನೆಲಕಚ್ಚಿವೆ. ನೆಲಕಚ್ಚಿದ ಮನೆಗಳೆಲ್ಲವೂ 5 ಲಕ್ಷ ರೂ. ಬೆಲೆ ಬಾಳುತ್ತಿದ್ದವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಾಮಾನ್ಯವಾಗಿ ಕೇಂದ್ರ ಅಧ್ಯಯನ ತಂಡದ ವರದಿಗಳು ಮತ್ತು ರಾಜ್ಯ ಸರ್ಕಾರ ಸಲ್ಲಿಸುವ ವರದಿಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಮನೆಗಳು ಸಂಪೂರ್ಣ ನೆಲಕಚ್ಚಿದರೆ ಮಾತ್ರವಲ್ಲ, ಶೇ. 75ಕ್ಕಿಂತ ಹೆಚ್ಚು ಹಾನಿಗೊಂಡಿದ್ದರೆ ರಾಜ್ಯ ಸರ್ಕಾರ ಅದನ್ನು ಸಂಪೂರ್ಣ ನೆಲಕಚ್ಚಿದೆ ಎಂದು ನಿರ್ಧರಿಸಿ ವರದಿ ನೀಡುತ್ತದೆ. ಆದರೆ, ಕೇಂದ್ರದ ಅಧ್ಯಯನ ತಂಡ ಸಂಪೂರ್ಣ ಕುಸಿದ ಮನೆಗಳನ್ನು ಮಾತ್ರ ಲೆಕ್ಕ ಹಾಕಿದೆ. ಅದೇ ರೀತಿ ರಾಜ್ಯ ಸರ್ಕಾರ ಕುಸಿದ ಪ್ರತಿ ಮನೆಗೆ 5 ಲಕ್ಷ ರೂ. ಪರಿಹಾರ ಕೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನೆಲಕಚ್ಚಿದ ಮನೆಗಳೆಲ್ಲವೂ 5 ಲಕ್ಷ ರೂ. ಬೆಲೆ ಬಾಳುತ್ತದೆಯೇ ಎಂಬುದನ್ನು ಪ್ರಮಾಣೀಕರಿಸುವಂತೆ ಸೂಚಿಸಿದೆ. ಇಲ್ಲಿ ಕೆಲವು ಮನೆಗಳ ಮೌಲ್ಯ 5 ಲಕ್ಷಕ್ಕಿಂತ ಕಮ್ಮಿ ಇದ್ದರೆ, ಇನ್ನು ಕೆಲವು ಮನೆಗಳ ಮೌಲ್ಯ 5 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಸರಾಸರಿ ಅಂದಾಜು ಹಾಕಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿರುತ್ತದೆ. ಹೀಗಾಗಿ ಈ ಕುರಿತು ಸ್ಪಷ್ಟೀಕರಣಗಳನ್ನು ಕೇಂದ್ರ ಸರ್ಕಾರ ಕೇಳಿದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

ಕೇಂದ್ರ ಪರಿಹಾರ ವಿಳಂಬ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಈ ಹಿಂದೆ ಪ್ರವಾಹ ಬಂದು ಮನೆಗಳು ಕುಸಿದಾಗ ರಾಜ್ಯ ಸರ್ಕಾರ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಸ್ಪಷ್ಟೀಕರಣಗಳನ್ನು ಕೇಳಿತ್ತು. ಪರಿಹಾರ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ 2-3 ಬಾರಿ ಈ ರೀತಿಯ ಸಂವಹನ ನಡೆಯುತ್ತದೆ. ಏನೇ ಮಾಡಿದರೂ ಅಧ್ಯಯನ ತಂಡದ ವರದಿಗೂ ರಾಜ್ಯ ಸರ್ಕಾರದ ಪ್ರಸ್ತಾವನೆಗೂ ಹೊಂದಾಣಿಕೆಯಾಗುವುದಿಲ್ಲ. ಅಂತಿಮವಾಗಿ ಎರಡೂ ವರದಿಗಳನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಪರಿಹಾರದ ಮೊತ್ತವನ್ನು ನಿರ್ಧರಿಸಿ ರಾಜ್ಯಕ್ಕೆ ಬಿಡುಗಡೆ ಮಾಡುತ್ತದೆ.

ಈ ಪ್ರಕ್ರಿಯೆಗಳು ನಡೆಯಲು ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. 2018ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡ ಬರಗಾಲಕ್ಕೆ 2019ರ ಸೆಪ್ಟೆಂಬರ್ ತಿಂಗಳಲ್ಲಿ ಪರಿಹಾರ ಬಂದಿದ್ದೇ ಇದಕ್ಕೆ ಉದಾಹರಣೆ. ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಬಂದು ಸಾವಿರಾರು ಕೋಟಿ ರೂ. ನಷ್ಟವಾದಾಗಲೂ ಕೇಂದ್ರದಿಂದ ಪರಿಹಾರ ಬರುವುದು ವಿಳಂಬವಾಗಿತ್ತು. ಅದು ಯು. ಪಿ. ಎ. ಸರ್ಕಾರವಿರಲಿ, ಎನ್. ಡಿ. ಎ. ಸರ್ಕಾರವಿರಲಿ, ನಿಯಮಗಳು ಬದಲಾಗುವುದಿಲ್ಲ ಎಂದೂ ಅವರು ಹೇಳುತ್ತಾರೆ.

ಹೀಗಾಗಿ ಯಾವ ಪಕ್ಷದ ಸರ್ಕಾರವೇ ಅಧಿಕಾರದಲ್ಲಿರಲಿ, ಕಾಯ್ದೆ, ನಿಯಮಗಳ ಮುಂದೆ ಪರಿಸ್ಥಿತಿಯ ಜಟಿಲತೆ, ಜನರ ಸಂಕಷ್ಟಗಳಿಗೆ ಸ್ಪಂದನೆ ಸಿಗುವುದಿಲ್ಲ. ಪ್ರಕೃತಿ ವಿಕೋಪ ಸಂಭವಿಸಿದಾಗ ಕೇಂದ್ರ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕಾದರೆ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಂಬಂಧಿಸಿದ ನಿಯಮಾವಳಿಗಳಿಗೆ ತಿದ್ದುಪಡಿಯಾಗಬೇಕೇ ಹೊರತು ಬೇರೆ ಯಾವ ಮಾರ್ಗವೂ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

RS 500
RS 1500

SCAN HERE

Pratidhvani Youtube

«
Prev
1
/
4567
Next
»
loading
play
Live ; ಉಚಿತ ವಿದ್ಯುತ್‌ ಗೊಂದಲಕ್ಕೆ ತೆರೆ ಎಳೆದ ಸರ್ಕಾರ..! | CM Siddaramaiah | Congress Guarantees
play
Live ; ಉಚಿತ ವಿದ್ಯುತ್‌ ಗೊಂದಲಕ್ಕೆ ತೆರೆ ಎಳೆದ ಸರ್ಕಾರ..! | CM Siddaramaiah | Congress Guarantees
«
Prev
1
/
4567
Next
»
loading

don't miss it !

ಭಾಗ-೧:  ದೇಶವನ್ನು ಖಾಸಗೀಕರಣಗೊಳಿಸುತ್ತಿರುವ ಅರ್ಬನ್ ಮತ್ತು ಅಗ್ರಹಾರ ನಾಜಿಗಳು
ಅಂಕಣ

ಭಾಗ-೧: ದೇಶವನ್ನು ಖಾಸಗೀಕರಣಗೊಳಿಸುತ್ತಿರುವ ಅರ್ಬನ್ ಮತ್ತು ಅಗ್ರಹಾರ ನಾಜಿಗಳು

by ಡಾ | ಜೆ.ಎಸ್ ಪಾಟೀಲ
June 5, 2023
Congress Guarantee | ಬಹು ಬೇಡಿಕೆಯ ಗ್ಯಾರಂಟಿ ನಾಳೆ ಫೈನಲ್, ಗುರುವಾರದಿಂದಲೇ ಗ್ಯಾರಂಟಿ..!
Top Story

Congress Guarantee | ಬಹು ಬೇಡಿಕೆಯ ಗ್ಯಾರಂಟಿ ನಾಳೆ ಫೈನಲ್, ಗುರುವಾರದಿಂದಲೇ ಗ್ಯಾರಂಟಿ..!

by ಪ್ರತಿಧ್ವನಿ
May 30, 2023
Leelavathi : ಗಾಂಧಿ ನಗರಕ್ಕೆ ಹೃದಯವಿಲ್ಲ ಎಂಬ ಮಾತಿದೆ ಆದರೆ ಇಂದು ಆ ಮಾತನ್ನು ಸುಳ್ಳು ಮಾಡಿದ್ದಾರೆ ಗಾಂಧಿ ನಗರದ ಹಿರಿಯ ಕಲಾವಿದರು
Top Story

Leelavathi : ಗಾಂಧಿ ನಗರಕ್ಕೆ ಹೃದಯವಿಲ್ಲ ಎಂಬ ಮಾತಿದೆ ಆದರೆ ಇಂದು ಆ ಮಾತನ್ನು ಸುಳ್ಳು ಮಾಡಿದ್ದಾರೆ ಗಾಂಧಿ ನಗರದ ಹಿರಿಯ ಕಲಾವಿದರು

by ಪ್ರತಿಧ್ವನಿ
May 31, 2023
BREAKING : Odisha Train Accident : ಭೀಕರ ರೈಲು ಅಪಘಾತ, ಸಾವಿನ ಸಂಖ್ಯೆ 50ಕ್ಕೆ ಏರಿಕೆ 179 ಮಂದಿಗೆ ಗಾಯ
Top Story

BREAKING : Odisha Train Accident : ಭೀಕರ ರೈಲು ಅಪಘಾತ, ಸಾವಿನ ಸಂಖ್ಯೆ 50ಕ್ಕೆ ಏರಿಕೆ 179 ಮಂದಿಗೆ ಗಾಯ

by ಪ್ರತಿಧ್ವನಿ
June 2, 2023
ಹಾಲಿ ಪಶುಸಂಗೋಪನೆ ಸಚಿವ ವೆಂಕಟೇಶ್ ಮೆಂಟಲ್ ಆಗಿದ್ದಾರೆ : ಪ್ರಭು ಚೌವ್ಹಾಣ್
ರಾಜಕೀಯ

ಹಾಲಿ ಪಶುಸಂಗೋಪನೆ ಸಚಿವ ವೆಂಕಟೇಶ್ ಮೆಂಟಲ್ ಆಗಿದ್ದಾರೆ : ಪ್ರಭು ಚೌವ್ಹಾಣ್

by Prathidhvani
June 6, 2023
Next Post
ಸಕ್ರೆಬೈಲು ಆನೆಗಳ ಸರಣಿ ಸಾವು: ಹರ್ಪಿಸ್‌ ವೈರಸ್‌ ಕಾರಣ?

ಸಕ್ರೆಬೈಲು ಆನೆಗಳ ಸರಣಿ ಸಾವು: ಹರ್ಪಿಸ್‌ ವೈರಸ್‌ ಕಾರಣ?

ದಲಿತರ ಮೇಲೆ ದೌರ್ಜನ್ಯ ತಡೆ ಕಾಯಿದೆ- ತಪ್ಪು ತಿದ್ದಿಕೊಂಡ ಸುಪ್ರೀಂ ಕೋರ್ಟು

ದಲಿತರ ಮೇಲೆ ದೌರ್ಜನ್ಯ ತಡೆ ಕಾಯಿದೆ- ತಪ್ಪು ತಿದ್ದಿಕೊಂಡ ಸುಪ್ರೀಂ ಕೋರ್ಟು

ಕೊಚ್ಚಿ ಘಟನೆ ಮನೆ ಖರೀದಿಸುವವರಿಗೆ ಎಚ್ಚರಿಕೆಯ ಗಂಟೆ 

ಕೊಚ್ಚಿ ಘಟನೆ ಮನೆ ಖರೀದಿಸುವವರಿಗೆ ಎಚ್ಚರಿಕೆಯ ಗಂಟೆ 

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist