Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಗಾಂಧೀಜಿಯ ಆ ಒಂದು ಪತ್ರ ವೃದ್ಧ ಜೀವವನ್ನೇ ಬದುಕಿಸಿತು

ಗಾಂಧೀಜಿಯ ಆ ಒಂದು ಪತ್ರ ವೃದ್ಧ ಜೀವವನ್ನೇ ಬದುಕಿಸಿತು
ಗಾಂಧೀಜಿಯ ಆ ಒಂದು  ಪತ್ರ ವೃದ್ಧ ಜೀವವನ್ನೇ ಬದುಕಿಸಿತು

January 30, 2020
Share on FacebookShare on Twitter

ಗಾಂಧೀಜಿಯವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ ಮೇಲೆ ಇಲ್ಲಿಯ ಜನರ ಜೀವನ ಮೇಲೆ ಸತ್ಪರಿಣಾಮ ಉಂಟಾಯಿತು ಎಂಬುದು ಎಲ್ಲರಿಗೂ ಗೊತ್ತು. ಆದರೆ ಗಾಂಧೀಜಿ ತಮಗೆ ಬಂದ ಪತ್ರಕ್ಕೆ ಸ್ಪಂದಿಸಿ, ತಾವೂ ಒಂದು ಪತ್ರ ಬರೆದು ಅಂದಾನಪ್ಪ ದೊಡ್ಡಮೇಟಿ ಅವರ ತಾಯಿಯ ಜೀವ ಉಳಿಸಿದ್ದು ಹಲವರಿಗೆ ಗೊತ್ತಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

ಆ ಕತೆ ಹೀಗಿದೆ,

1940 ಡಿಸೆಂಬರ್ 8 ಮಹಾತ್ಮಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹದ ಆಂದೋಲನಕ್ಕೆ ಕರೆನೀಡಿದ ದಿನಗಳವು.. ಇಡೀ ರಾಷ್ಟ್ರದ ತುಂಬೆಲ್ಲಾ ಈ ಸತ್ಯಾಗ್ರಹ ಕಾವು ಪಡೆದುಕೊಂಡು.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಬಿರುಸು ಪಡೆಯಿತು.. ಜಕ್ಕಲಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ಬಯಲಿನಲ್ಲಿ ಈ ಭಾಗದ ಆಂದೋಲನದ ಕರ್ಣಧಾರತ್ವ ವಹಿಸಿದ್ದ ಅಂದಾನಪ್ಪ ದೊಡ್ಡಮೇಟಿ ಯವರನ್ನು ಅವರ ಅನೇಕ ಸಂಗಡಿಗರನ್ನು ಕೈದು ಮಾಡಿ ಧಾರವಾಡ ದ ವಿಶೇಷ ನ್ಯಾಯಾಧೀಶರ ಮುಂದೆ ಖಟ್ಲೆ ನಡಿಸಿದರು.. ಅಂದಾನಪ್ಪ ದೊಡ್ಡಮೇಟಿ ಯವರಿಗೆ ಒಂದು ವರ್ಷದ ಶಿಕ್ಷೆ ವಿಧಿಸಲು ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಲಾಯಿತು.

ಆಗ ಅಂದಾನಪ್ಪ ದೊಡ್ಡಮೇಟಿ ಯವರು. ಸೇವಾಗ್ರಾಮದಲ್ಲಿದ್ದ ಮಹಾತ್ಮ ಗಾಂಧೀಜಿಯವರಿಗೆ
ತಮ್ಮ ತಾಯಿ ಬಸಮ್ಮನವರ ಆರೋಗ್ಯ ವಿಷಮಿಸಿದ ಬಗ್ಗೆ ಬರೆಯುತ್ತಾ, “ಒಬ್ಬನೇ ಮಗನಾದ ನನ್ನನ್ನು ನೋಡಲು ನನ್ನ ತಾಯಿ ಆಕಾಂಕ್ಷೆ ಹೊಂದಿದ್ದರೂ.. ಬಿಡುಗಡೆ ಗಾಗಿ ನಾನು ಸರಕಾರವನ್ನು ಕೇಳಬಾರದೆಂದೇ ನಿರ್ಧರಿಸಿರುವೆ.. ಇದೇಡಿಸೆಂಬರ್ 10 ಕ್ಕೆ(1941) ನನ್ನ ಬಿಡುಗಡೆ ಯ ಅವಧಿಯು ಮುಗಿಯುವದು. ತಾಯಿಗೆ ನಿಮ್ಮಲ್ಲಿ ತುಂಬಾ ವಿಶ್ವಾಸ.. ಚೈತನ್ಯ ದಾಯಕ ಸಂದೇಶವನ್ನು ಕಳುಹಿಸಬೇಕಾಗಿ ವಿನಂತಿ, ಎಂದು ಕಾಗದವನ್ನು.,ಜೊತೆಗೆ ತಂತಿ ಯನ್ನು ಮಹಾತ್ಮಗಾಂಧೀಜಿಯವರಿಗಕಳಿಸಿದರು.

ಮಹಾತ್ಮ ಗಾಂಧೀಜಿಯವರು, ಸ್ವಾತಂತ್ರ್ಯ ಯೋಧ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಹಾಗೂ ಅವರ ತಾಯಿ ಶ್ರೀಮತಿ ಬಸಮ್ಮ ಜ್ಞಾನಪ್ಪ ದೊಡ್ಡಮೇಟಿ ಯವರಿಗೆ ಬರೆದ ಸ್ವ ಹಸ್ತಾಕ್ಷರ ರದ ಪತ್ರ.

ಅದಕ್ಕೆ ತೀವ್ರ ವಾಗಿ ಸ್ಪಂದಿಸಿದ ಮಹಾತ್ಮಾಜಿಯವರು.. ದೊಡ್ಡ ಮೇಟಿಯವರ ತಂತಿಗೆ ಉತ್ತರವಾಗಿ 1.10.1940.ರಂದು ಸ್ವಹಸ್ತಾಕ್ಷರಗಳಲ್ಲಿ.. ಅಂದಾನಪ್ಪದೊಡ್ಡ ಮೇಟಿಯವರ ತಾಯಿ ಶ್ರೀಮತಿ ಬಸಮ್ಮನವರಿಗೆ ಪತ್ರ ಬರೆದು ಧೈರ್ಯ ಹಾಗು ಅಭಯದ ಬಗ್ಗೆ ವಿಶ್ವಾಸ ತುಂಬಿದರು..
ಅದರಂತೆ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಸಂತೋಷ ವ್ಯಕ್ತಪಡಿಸಿ ಪತ್ರವನ್ನು ಬರೆದರು..
ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಲ್ಲಿ ಭಾಗವಹಿಸಿದವರ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿಗಳು.. ಅವರ ಕುಟುಂಬದ ಇತರ ಸದಸ್ಯರ ಬಗ್ಗೆ ಇರುವ ಗೌರವವಗಳಿಗೆ ಇದು ಸಾಕ್ಷಿಯಾಗಿದೆ. ಮಹಾತ್ಮ ಗಾಂಧೀಜಿಯವರ ದು ಮಾತೃಹೃದಯ ತಮ್ಮೊಡನಾಡಿಗಳ ನೋವುಗಳನ್ನು ಕಂಡು ತೀವ್ರ ವಾಗಿ ಸ್ಪಂದಿಸಿದ್ದರಿಂದ ಅವರೊಂದಿಗೆ ಜನಸಾಮಾನ್ಯರೂ ಐತಿಹಾಸಿಕ ಭಾರತೀಯ ರಾಷ್ಟ್ರೀ ಆಂದೋಲನದ ಭಾಗವಾದರು…ಮಹಾತ್ಮಜಿವರಿಗೆ ಸಾವು ಇಲ್ಲವೇ ಇಲ್ಲ..!.ಅವರು ಸದಾ ಇರುತ್ತಾರೆ ಜಗತ್ತಿನಲ್ಲಿ ಪ್ರೀತಿ.. ಅಹಿಂಸೆ ಯ ಸತ್ಯದ ಪ್ರತಿ ಪಾದಕರಾಗಿ ಹರಡುತ್ತಾರೆ..
ಮಹಾತ್ಮ ಗಾಂಧೀಜಿಯವರ ಈ ಪತ್ರ ದೊಡ್ಡ ಮೇಟಿ ಯವರ ತಾಯಿಯವರಿಗೆ ಬದುಕಲು ಸಂಜೀವಿನಿಯಾಯಿತು ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಬಸಮ್ಮನವರು ತಮ್ಮಮಗ ಜೈಲಿನಿಂದ ಬಿಡುಗಡೆಯಾಗುವವರೆಗೂ ನಂತರ ಕೆಲವರ್ಷ ಜೀವಹಿಡಿದುಕೊಂಡಿದ್ದರು!

ಇದನ್ನು ‘ಪ್ರತಿಧ್ವನಿ’ ತಂಡಕ್ಕೆ ತಿಳಿಸಿದ ಅದೇ ಕುಟುಂಬದವರಾದ ರವೀಂದ್ರ ದೊಡ್ಡಮೇಟಿ ಆ ಪತ್ರವನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ರವೀಂದ್ರನಾಥ ಅವರು, “ಗಾಂಧೀಜಿ ಬರೀ ಒಬ್ಬ ವ್ಯಕ್ತಿ ಅಥವಾ ಹೆಸರು ಅಲ್ಲ, ಅವರೆಂದರೆ ಒಂದು ಶಕ್ತಿ. ನಮ್ಮ ಭಾಗದ ಜನರು ಗಾಂಧೀಜಿ ಭೇಟಿ ಕೊಟ್ಟು ಹೋಗುವಾಗ ಅವರ ತುಳಿದ ಹೋದ ಹೆಜ್ಜೆಯ ಗುರುತಿದ್ದ ಮಣ್ಣನ್ನು ತಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದರು. ಗಾಂಧೀಜಿ ಹುತಾತ್ಮರಾದ ದಿನದಂದು ಕೆಲವರು ಚಪ್ಪಲಿ ಧರಿಸುವುದಿಲ್ಲವೆಂದು ನಿರ್ಧರಿಸಿದರು, ಕೆಲವರು ಸಿಹಿ ತಿನ್ನುವುದು ನಿಲ್ಲಿಸಿದರು, ಇವತ್ತಿಗೂ ಗಾಂಧೀಜಿ ಬಗ್ಗೆ ನಮ್ಮ ಹಿರಿಯರು ಹೇಳಿದ ಮಾತು ಗುಂಗು ಹಿಡಿಸುತ್ತಲೇ ಇವೆ”.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ನಾಳೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿರುವ ಕೋಲಾರದ ಒಕ್ಕಲಿಗ ಸಮುದಾಯ..! VOkkaliga Community
ಇದೀಗ

ನಾಳೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿರುವ ಕೋಲಾರದ ಒಕ್ಕಲಿಗ ಸಮುದಾಯ..! VOkkaliga Community

by ಪ್ರತಿಧ್ವನಿ
March 20, 2023
PRATAP SIMHA | ಪುಕ್ಸಟ್ಟೆ ಏನಾದ್ರು ಕೊಡ್ತಿವಿ ಅಂದ್ರೆ ಬಿಜೆಪಿ ಪಕ್ಷನೂ ನಂಬಬೇಡಿ ಅಂದಿದ್ಯಾಕೆ ಪ್ರತಾಪ್ ಸಿಂಹ?
ಇದೀಗ

PRATAP SIMHA | ಪುಕ್ಸಟ್ಟೆ ಏನಾದ್ರು ಕೊಡ್ತಿವಿ ಅಂದ್ರೆ ಬಿಜೆಪಿ ಪಕ್ಷನೂ ನಂಬಬೇಡಿ ಅಂದಿದ್ಯಾಕೆ ಪ್ರತಾಪ್ ಸಿಂಹ?

by ಪ್ರತಿಧ್ವನಿ
March 23, 2023
ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code
ಕರ್ನಾಟಕ

ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code

by ನಾ ದಿವಾಕರ
March 18, 2023
ಕರ್ನಾಟಕದ ಬಿಜೆಪಿಯಲ್ಲಿ ಬ್ರಾಹ್ಮಣರ ಆಟಾಟೋಪ : ಮೂಲೆಗುಂಪಾದ ಲಿಂಗಾಯತರು : B.S.YEDIYURAPPA v/s B.L SANTHOSH
ಇದೀಗ

ಕರ್ನಾಟಕದ ಬಿಜೆಪಿಯಲ್ಲಿ ಬ್ರಾಹ್ಮಣರ ಆಟಾಟೋಪ : ಮೂಲೆಗುಂಪಾದ ಲಿಂಗಾಯತರು : B.S.YEDIYURAPPA v/s B.L SANTHOSH

by ಪ್ರತಿಧ್ವನಿ
March 18, 2023
ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!
ಸಿನಿಮಾ

ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ ʻಕಬ್ಜʼ.. ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ..?

by Prathidhvani
March 18, 2023
Next Post
ಪುತ್ರನ ಕಾರಣಕ್ಕೆ ಮೆತ್ತಗಾದ ರಾಜಾಹುಲಿ

ಪುತ್ರನ ಕಾರಣಕ್ಕೆ ಮೆತ್ತಗಾದ ರಾಜಾಹುಲಿ

ದೆಹಲಿಯಲ್ಲಿ ಕೇಜ್ರಿವಾಲ್ ಬೆನ್ನಿಗೆ ದೀದಿ..! ಮೋದಿಗೆ ಭೀತಿ..!

ದೆಹಲಿಯಲ್ಲಿ ಕೇಜ್ರಿವಾಲ್ ಬೆನ್ನಿಗೆ ದೀದಿ..! ಮೋದಿಗೆ ಭೀತಿ..!

ಅಪಾಯಕಾರಿ ಕರೋನಾಗೆ ಯುನಾನಿ

ಅಪಾಯಕಾರಿ ಕರೋನಾಗೆ ಯುನಾನಿ, ಹೊಮಿಯೋಪತಿ ಮದ್ದು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist