ADVERTISEMENT
  • Home
  • About Us
  • ಕರ್ನಾಟಕ
Sunday, May 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ಕುರಿತ ಸುಳ್ಳು ಮಾಹಿತಿಗಳ ಕಾಟ; ದಿನ ಪತ್ರಿಕೆಗಳಿಗೆ ಸಂಕಷ್ಟ

by
March 28, 2020
in ದೇಶ
0
ಕರೋನಾ  ಕುರಿತ ಸುಳ್ಳು ಮಾಹಿತಿಗಳ ಕಾಟ; ದಿನ ಪತ್ರಿಕೆಗಳಿಗೆ ಸಂಕಷ್ಟ
Share on WhatsAppShare on FacebookShare on Telegram

ಸಮಾಜದ ಸ್ವಾಸ್ಥ್ಯ  ಹಾಳುಗೆಡುವುದರಲ್ಲಿ ಕರೋನಾಕ್ಕಿಂತಾ ಸಾಮಾಜಿಕ ಜಾಲತಾಣಗಳೇ ಮುಂದಿವೆ. ಅದು ಎಷ್ಟರ ಮಟ್ಟಿಗೆ ಎಂದರೆ ಗಾಳಿಯಲ್ಲೂ ಕರೋನಾ ಹರಡುತ್ತಂತೆ. ಧರ್ಮಸ್ಥಳದ ದೀಪ ಆರಿಬಿಟ್ಟಿದೆಯಂತೆ, ಆಘಾತ, ಅಪಚಾರ..!!! ಇಂತಹ ವೈರಲ್ ಪೋಸ್ಟ್ ಗಳ ನಡುವೆ ಪತ್ರಿಕೋದ್ಯಮವನ್ನ ಜೀವಂತ ಇಟ್ಟಿದ್ದ ದಿನಪತ್ರಿಕೆಗಳಿಗೂ ಕುತ್ತು ಬಂದಿದೆ.

ADVERTISEMENT

ಮನೆಯಲ್ಲೇ ಆರಾಮಾಗಿ ಪತ್ರಿಕೆಗಳನ್ನ ಓದುತ್ತಾ ಕುಳಿತುಕೊಳ್ಳಬೇಕಿದ್ದ ಜನರು ಅವುಗಳ ಗೋಜಿಗೇ ಹೋಗುತ್ತಿಲ್ಲ. ಪತ್ರಿಕೆಯಿಂದ ಕರೋನಾ ವೈರಸ್ ಹರಡುತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ ಪೋಸ್ಟ್ ನಿಂದ ಸಾಕಷ್ಟು ಹೊಡೆತ ಬಿದ್ದಿದೆ. ಇಂಥಹ ಸಮಯದಲ್ಲಿ ಲಾಠಿ ಹಿಡಿದು ಜನರನ್ನ ಬೆದರಿಸುತ್ತಿರುವ ಪೊಲೀಸರು ಪೇಪರ್ ಹಾಕುವ ಹುಡುಗರನ್ನ, ವಿತರಕರನ್ನ ಬೆದರಿಸುತ್ತಿದ್ದಾರೆ. ಪೇಪರ್ ವಾಹನಗಳನ್ನ ತಡೆದು ತೊಂದರೆ ನೀಡಿದ್ದಾರೆ. ವಾರ್ತಾ ಇಲಾಖೆಯ ಸುತ್ತೋಲೆಯಲ್ಲೇ ಸ್ಪಷ್ಟವಾಗಿ ನಿಯಮಗಳನ್ನ ಪಾಲಿಸಲು ಕೋರಲಾಗಿದೆ. ದುರಂತ ಎಂದರೆ ಯಾವುದೇ ರಾಜ್ಯ ಸರ್ಕಾರ ಪತ್ರಿಕೆಗಳಿಗೆ ಬೆಂಬಲವಾಗಿ ನಿಂತಿಲ್ಲ.

ಕಿರಾಣಿ ಅಂಗಡಿಯಿಂದ ಪತ್ರಿಕೆ ಕೊಂಡು ಓದುತ್ತಿದ್ದ ಜನರಂತೂ ಬೀದಿಗೆ ಬರುತ್ತಿಲ್ಲ. ಕೆಲವರು ಪಟ್ಟಣ ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಒಂದು ತಿಂಗಳು ಪೇಪರ್ ಹಾಕಬೇಡಿ ಎಂದಿದ್ದಾರೆ. ಉಳಿದ ಓದುಗರಲ್ಲಿ ಅರ್ಧದಷ್ಟು ಜನರಿಗೆ ಕರೋನಾ ಭೀತಿ. ಇಂಥಹ ಪರಿಸ್ಥಿತಿಯಲ್ಲಿ ಪತ್ರಿಕೆ ಮುದ್ರಣ ಮಾಡುವುದನ್ನ ತಾತ್ಕಾಲಿಕವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಹಲವು ಮೀಡಿಯಾ ಹೌಸ್ ಗಳು ಚಿಂತಿಸಿವೆ.

ನ್ಯೂಸ್ ಚಾನೆಲ್ ಗಳ ಭರಾಟೆ ಹಾಗೂ ಡಿಜಿಟಲ್ ಕ್ರಾಂತಿ ಯಲ್ಲೂ ಓದುಗರನ್ನ ಹಿಡಿದಿಟ್ಟುಕೊಂಡು ಪತ್ರಿಕೋದ್ಯಮ ಸತ್ವ ಉಳಿಸಿಕೊಂಡಿದ್ದ ಪತ್ರಿಕೆಗಳಿಗೆ ಈಗ ಸಂಕಷ್ಟದ ಕಾಲ. 1995ರಲ್ಲಿ ಆರಂಭವಾದ ಔಟ್ ಲುಕ್ ಇಂಗ್ಲೀಷ್ ಮ್ಯಾಗಜೀನ್ ತನ್ನ ಮುದ್ರಣವನ್ನ ಅಧಿಕೃತವಾಗಿ ನಿಲ್ಲಿಸಿದೆ. ಔಟ್ ಲುಕ್ ಮ್ಯಾಗಜೀನ್ ಸಂಪಾದಕ ಆರಿಂದಮ್ ಮುಖರ್ಜಿ ಈ ಕುರಿತು ಬರೆದುಕೊಂಡಿದ್ದಾರೆ. ಈಗ ಪತ್ರಿಕೋದ್ಯಮಕ್ಕೂ ಸಂಕಷ್ಟದ ಕಾಲ. ನಮಗೆಲ್ಲಾ ದಿಕ್ಕುತೋಚದಂತಾಗಿದೆ. ನಮ್ಮದು ಗುಹೆಯೊಳಗಿನ ಪಯಣ , ಗುಹೆಯಾಚೆ ತುದಿಯಲ್ಲಿನ ಆಶಾಕಿರಣಕ್ಕಾಗಿ ಹಂಬಲಿಸುತ್ತಿದ್ದೇವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಓದುಗರಿಗೆ ಯಾವುದೇ ತೊಂದರೆಯಾಗಬಾರದು. 21 ದಿನಗಳ ವನವಾಸದಲ್ಲಿ ಮುದ್ರಣದಿಂದ ಪ್ರಸರಣದವರೆಗೆ ಎಲ್ಲವೂ ಸಮಸ್ಯೆಯಾಗಿದೆ. ದೇಶಾದ್ಯಂತ ಹಲವು ಪತ್ರಿಕೆಗಳ ನಿಯತಕಾಲಿಕೆಗಳು ತಾತ್ಕಾಲಿಕವಾಗಿ ಮುದ್ರಣ ನಿಲ್ಲಿಸಿವೆ. ನಾವೂ ಸಹ ಔಟ್ ಲುಕ್  ಮುದ್ರಣವನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಹಾಗೂ ನಿಯತಕಾಲಿಕೆಯ ಆನ್ ಲೈನ್ ಆವೃತ್ತಿ ಓದಬಹುದು ಎಂದು ತಮ್ಮ ಓದುಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹಾಗಾದರೆ ಪತ್ರಕರ್ತರ ನೌಕರಿಗೆ ಕುತ್ತು ಬರುತ್ತಾ..? ಸದ್ಯಕ್ಕಿಲ್ಲ ಅಂತಾರೆ. ಕನ್ನಡದ ಕೆಲವು ಪತ್ರಿಕೆಗಳ ಪತ್ರಕರ್ತರು. ಆದರೆ ಸಮೂಹ ಸಂಸ್ಥೆಗಳ ಮಾಲೀಕರಿಗೆ ನಡುಕ ಉಂಟಾಗಿದೆ. ಒಂದು ಹಂತಕ್ಕೆ ಪತ್ರಿಕೆಗಳ ಮುದ್ರಣ ಮಾಡುವುದೇ ಬೇಡ ಎಂಬ ಲೆಕ್ಕಾಚಾರಕ್ಕೂ ಬಂದಿದ್ದಾರಂತೆ.

ಕೊಡಗು, ಮಂಗಳೂರು, ಶಿವಮೊಗ್ಗ , ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಕಲಬುರಗಿ, ಮೈಸೂರು ಇಲ್ಲೆಲ್ಲಾ ಪತ್ರಿಕೆಗಳ ಪ್ರಸರಣವೇ ಕುಗ್ಗಿದೆ. ಸಾಕಷ್ಟು ಪತ್ರಿಕೆಗಳು ಬಸ್ ನಿಲ್ದಾಣದ ಗಡಿ ದಾಟಲು ಹರಸಾಹಸ ಪಡುತ್ತಿವೆ. ಪೊಲೀಸರೂ ಕೂಡ ಮುಖ ಮೂತಿ ನೋಡದೇ ಲಾಠಿ ಎತ್ತಿರುವುದು ಕೂಡ ಬಿಕ್ಕಟ್ಟಿಗೆ ಕಾರಣವಾಗಿದೆ.

ಪ್ರಧಾನಿ ಮೋದಿ ಕರೋನಾ ಜನತಾಕರ್ಫ್ಯೂ ವಿಧಿಸಿದ ದಿನದಂದೇ ಪತ್ರಿಕೆಗಳ ಮಾಲೀಕರ ಉಸಿರು ಲಬ್ ಡಬ್ ಎನ್ನತೊಡಗಿತ್ತು. ಪುನಃ ಪ್ರಧಾನಿಗಳು 21 ದಿನ ಲಾಕ್ ಡೌನ್ ಎಂದಾಗ ಸಮಸ್ಯೆ ಉಲ್ಭಣಿಸಿತು. ಒಳಗೇ ಮುಸಿ ಮುಸಿ ಮಾಡುತ್ತಿದ್ದ ಎಲ್ಲಾ ಕನ್ನಡ ಪತ್ರಿಕೆಗಳು ಒಂದೇ ಸಂಪಾದಕೀಯವನ್ನ ಬರೆಸಿ ಜನರಿಗೆ ಮನವರಿಕೆ ಮಾಡಲು ಪ್ರಯತ್ನಪಟ್ಟವು. ಆದರೆ ಪತ್ರಿಕೆ ಸಾಗಾಟಕ್ಕೂ ತೊಂದರೆಯಾಗಿತ್ತಲ್ಲ ಅದನ್ನ ಸರಿಪಡಿಸಲಾಗಲಿಲ್ಲ. ಕನ್ನಡ ಪತ್ರಿಕೆ ಹಾಗೂ ಅದರ ಆಂಗ್ಲ ಆವೃತ್ತಿಗಳು ಮುದ್ರಣ ಹಾಗೂ ಪ್ಯಾಕಿಂಗ್ ವಿಡಿಯೋ ಚಿತ್ರೀಕರಿಸಿ ನಾವು ಸುರಕ್ಷಿತ ಎಂದು ಸಾರಿದವು. ಆದರೂ ಪತ್ರಿಕೆಗಳ ಪ್ರಸರಣಕ್ಕೆ ಕರೋನಾ ಬಲವಾದ ಪೆಟ್ಟು ನೀಡಿದೆ.

ಬಾಂಬೆ ವೃತ್ತಪತ್ರಿಕೆ ವಿತರಕರ ಸಂಘ ಹಾಗೂ ಪತ್ರಿಕಾ ಸಂಸ್ಥೆಗಳು ಮುಂಬೈ ಎಡಿಷನ್ ಮುದ್ರಣ ಹಾಗೂ ಪ್ರಸರಣ ನಿಲ್ಲಿಸಿವೆ. ಟೈಂಸ್ ಆಫ್ ಇಂಡಿಯಾ ಮುಂಬೈ ಆವೃತ್ತಿ, ಮಿಡ್ ಡೇ ಮುದ್ರಣ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕೆಗಳು ಪ್ರತಿದಿನ ಪ್ರಸರಣವಾಗುತ್ತಿಲ್ಲ, ಗಾಜಿಯಾಬಾದ್ ಹಾಗೂ ನೋಯ್ಡಾದಲ್ಲಿ ಸಾಕಷ್ಟು ಪತ್ರಿಕೆಗಳ ಮುದ್ರಣಕ್ಕೆ ಬ್ರೇಕ್ ಬಿದ್ದಿದೆ. ಕೆಲವೆಡೆ ಮುದ್ರಣಗೊಂಡ ಪತ್ರಿಕೆಗಳ ಬಂಡಲ್ ಗಳನ್ನ ವಿತರಕರು ಪಿಕ್ ಅಪ್ ಪಾಯಿಂಟ್ ನಿಂದ ಎತ್ತಿಕೊಳ್ಳುತ್ತಿಲ್ಲ. ಲುಧಿಯಾನದಲ್ಲಿ ಒಂದೂ ಪತ್ರಿಕೆ ಸಿಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಮಾತ್ರ ಪತ್ರಿಕೆಗಳು ಕೊಂಚ ನಿಟ್ಟುಸಿರು ಬಿಟ್ಟಿವೆ.

ಕನ್ನಡ ಪತ್ರಿಕೆಗಳು ಕೂಡ ಒಂದು ವಾರದಲ್ಲಿ ತಮ್ಮ ನಿರ್ಧಾರಗಳನ್ನ ಪ್ರಕಟಿಸಲಿವೆ. ಕೆಲವು ದಿನಗಳ ಕಾಲ ಪಿಡಿಎಫ್ ಹಾಗೂ ಡಿಜಿಟಲ್ ಕಾಪಿಗಳ ಮೂಲಕ ಸುದ್ದಿಗಳನ್ನ ಓದಬೇಕಿದೆ. ಶಿವಮೊಗ್ಗದಲ್ಲಿ ಕನಿಷ್ಟ ನಲವತ್ತು ಲೋಕಲ್ ಪತ್ರಿಕೆಗಳಿದ್ದವು, ಅವುಗಳಲ್ಲಿ ಸಾಲಷ್ಟು ಕೇವಲ ಹತ್ತಿಪ್ಪತ್ತು ಪತ್ರಿಕೆ ಮುದ್ರಿಸುತ್ತಾ ಸರ್ಕಾರಿ ಜಾಹೀರಾತು ನಂಬಿಕೊಂಡಿದ್ದವು ಅವೆಲ್ಲಾ ಈಗ ಸ್ಥಗಿತ ಮಾಡಲೇಬೇಕು. ಮೈಸೂರಿನ ಪ್ರಾದೇಶಿಕ ಪತ್ರಿಕೆಗಳಾದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ವಿತರಣೆ ಸ್ಥಗಿತಗೊಂಡಿದೆ. ಈ ವೀಕೆಂಡ್ ನಂತರ ಸಾಕಷ್ಟು ಪತ್ರಿಕೆಗಳು ಅಧಿಕೃತವಾಗಿಯೇ ಘೋಷಿಸಲಿವೆ.

ಪತ್ರಿಕೆಗಳ ಕಥೆ ಇಷ್ಟಾದರೆ ಆಸೆಗಣ್ಣಿನಿಂದ ನೋಡಿದ್ದ ಟಿವಿ ಚಾನೆಲ್ ಗಳೂ ಸಹ ನಿರೀಕ್ಷಿತ TRP ಸಿಗದೇ ಚಿಂತಿಸತೊಡಗಿವೆ. ಜನರೆಲ್ಲಾ ಮನೆ ಸೇರಿ ಟಿವಿಯನ್ನೇ ನೋಡುತ್ತಿದ್ದಾರೆ ಎಂಬುದು ಸದ್ಯಕ್ಕೆ ಹುಸಿಯಾಗಿದೆ. ಮುಂದಿನ ಎರಡು ವಾರ ಪತ್ರಿಕಗೆಳ ಅನುಪಸ್ಥಿತಿಯಲ್ಲಿ ಪ್ರಾಬಲ್ಯ ಸಾಧಿಸಿಕೊಳ್ಳಬಹುದು. ಆದರೆ ಅವುಗಳಿಗಿರುವ ದೊಡ್ಡ ಸಮಸ್ಯೆ ಸಾಮಾಜಿಕ ಜಾಲತಾಣಗಳು. ಏನೇ ಆಗಲಿ ಆದಷ್ಟು ಬೇಗ ಕರೋನಾ ಗುಮ್ಮ ಮರೆಯಾಗಿ ಮೌಲ್ಯಾಧಾರಿತ ಪತ್ರಿಕೋದ್ಯಮ ಉಳಿಸಿಕೊಂಡಿರುವ ಪತ್ರಿಕೆಗಳು ಚಿಗುರಿಕೊಳ್ಳಲಿ ಎಂಬುದೇ ನಮ್ಮ ಆಶಯ.

Tags: Corona VirusFake NewsNewspapersಕರೋನಾ ವೈರಸ್‌ದಿನ ಪತ್ರಿಕೆ
Previous Post

ಆರ್ಥಿಕ ತುರ್ತು ಪರಿಸ್ಥಿತಿ ಎಂದರೆ ಏನು? ಅಷ್ಟಕ್ಕೂ ಆರ್ಥಿಕ ತುರ್ತು ಪರಿಸ್ಥಿತಿಯ ಅವಶ್ಯಕತೆ ಇದೆಯೇ?

Next Post

ಸಜ್ಜಾಗದ ವೈದ್ಯಕೀಯ ವ್ಯವಸ್ಥೆಯ ನಡುವೆ ಕರೋನಾ ಸುನಾಮಿಗೆ ಕ್ಷಣಗಣನೆ ಆರಂಭ!

Related Posts

ಕರ್ನಾಟಕ

ಅಧ್ಯಕ್ಷ ಸ್ಥಾನಕ್ಕೆ DKಸುರೇಶ್ ನಾಮಪತ್ರ ಸಲ್ಲಿಕೆ

by ಪ್ರತಿಧ್ವನಿ
May 17, 2025
0

https://youtu.be/1PWjkUhCOwo

Read moreDetails

ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಎಡವಿಬಿದ್ದ ಸಿಎಂ ಸಿದ್ದರಾಮಯ್ಯ

May 17, 2025

Operation Sindoora ಹಾಗೂ ಸೇನೆ ಬಗ್ಗೆ ಹಗುರವಾಗಿ ಮಾತನಾಡಿದಲ್ಲ

May 17, 2025

ಸಿಎಂಗೆ ಪತ್ರ ಬರೆದ ಸಂಸದ ಸಿಎನ್ ಮಂಜುನಾಥ

May 17, 2025
ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

May 17, 2025
Next Post
ಸಜ್ಜಾಗದ ವೈದ್ಯಕೀಯ ವ್ಯವಸ್ಥೆಯ ನಡುವೆ ಕರೋನಾ ಸುನಾಮಿಗೆ ಕ್ಷಣಗಣನೆ ಆರಂಭ!

ಸಜ್ಜಾಗದ ವೈದ್ಯಕೀಯ ವ್ಯವಸ್ಥೆಯ ನಡುವೆ ಕರೋನಾ ಸುನಾಮಿಗೆ ಕ್ಷಣಗಣನೆ ಆರಂಭ!

Please login to join discussion

Recent News

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 
Top Story

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

by Chetan
May 18, 2025
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 
Top Story

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

by Chetan
May 18, 2025
ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 
Top Story

ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

by Chetan
May 18, 2025
ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 
Top Story

ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 

by Chetan
May 18, 2025
ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..
Top Story

ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

by ಕೃಷ್ಣ ಮಣಿ
May 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

May 18, 2025
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

May 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada