• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಗಡಿ ಸಂಘರ್ಷದಲ್ಲಿ ನಿಜಕ್ಕೂ ನಡೆದಿದೆಯಾ 43 ಚೀನಿ ಸೈನಿಕರ ಸಾವು-ನೋವು..!?

by
June 17, 2020
in ದೇಶ
0
ಗಡಿ ಸಂಘರ್ಷದಲ್ಲಿ ನಿಜಕ್ಕೂ ನಡೆದಿದೆಯಾ 43 ಚೀನಿ ಸೈನಿಕರ ಸಾವು-ನೋವು..!?
Share on WhatsAppShare on FacebookShare on Telegram

ಜೂನ್‌ 15 ರ ತಡರಾತ್ರಿ ಭಾರತ ಹಾಗೂ ಚೀನಾ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿರುವ ವಿಚಾರ ಈಗಾಗಲೇ ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಅಲ್ಲದೇ 17 ಮಂದಿ ಗಂಭಿರ ಗಾಯಗೊಂಡಿದ್ದು, ಗಾಯಾಳುಗಳ ಸಂಖ್ಯೆ ಅಧಿಕವಾಗುವ ಬಗ್ಗೆಯೂ ಸೇನೆ ತಿಳಿಸಿದೆ. ಅಂತೆಯೇ 43 ರಿಂದ 45 ರಷ್ಟು ಮಂದಿ ಚೀನಾ ಸೈನಿಕರು ಸಾವು ಇಲ್ಲವೇ ಗಾಯಗೊಂಡಿದ್ದಾಗಿಯೂ ಸೇನೆಯ ಹೇಳಿಕೆ ಆಧರಿಸಿ ANI ವರದಿ ಮಾಡಿತ್ತು. ಆದರೆ ಭಾರತದ ಮಾಧ್ಯಮಗಳಲ್ಲಿ ಒಂದಿಷ್ಟು ವೈರುಧ್ಯದ ಹೇಳಿಕೆಗಳು ಬರುತ್ತಿದ್ದು, ಜನರಲ್ಲಿ ಸಹಜವಾದ ಗೊಂದಲವೂ ಎದುರಾಗಿದೆ.

ಆರಂಭದಲ್ಲಿ ಓರ್ವ ಕರ್ನಲ್‌ ಸಹಿತ ಮೂರು ಮಂದಿ ಹುತಾತ್ಮರಾಗಿದ್ದಾರೆ ಎನ್ನಲಾಗಿತ್ತಾದರೂ, ನಂತರ ಆ ಸಂಖ್ಯೆ 20ಕ್ಕೇರಿದ್ದು ದೇಶದ ನಿವಾಸಿಗಳಲ್ಲಿ ಆಕ್ರೋಶ ಹೆಚ್ಚುವಂತೆ ಮಾಡಿದೆ. ಆದರೆ ಚೀನಾ ಸೈನಿಕರ ಕಡೆಯಿಂದ ಎಷ್ಟು ಮಂದಿ ಸಾವೀಗೀಡಾಗಿದ್ದಾರೆ ಅನ್ನೋದು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಭಾರತದ ಮಾಧ್ಯಮಗಳಲ್ಲಿ 43, 45 ಹೀಗೆ ಅಂಕಿ ಅಂಶಗಳನ್ನ ಮುಂದಿಡಲಾಗುತ್ತಿದೆ. ʼಡಿಡಿ ನ್ಯೂಸ್‌ʼ ಕೂಡಾ ತನ್ನ ಟ್ವಿಟ್ಟರ್‌ ನಲ್ಲಿ 43 ಮಂದಿ ಚೀನಿ ಯೋಧರ ಹತ್ಯೆ ಆಗಿರುವುದಾಗಿ ತಿಳಿಸಿದೆ. ಮಾತ್ರವಲ್ಲದೇ ರಾಷ್ಟ್ರೀಯ ಮಾಧ್ಯಮಗಳೂ ಇದನ್ನೇ ಬಿತ್ತರಿಸಿದ್ದವು.

Indian intercepts reveal that Chinese side suffered 43 casualties including dead and seriously injured in face-off in the Galwan valley: Sources confirm to ANI pic.twitter.com/xgUVYSpTzs

— ANI (@ANI) June 16, 2020


And exposed to sub-zero temperatures in the high altitude terrain have succumbed to their injuries, taking the total that were killed in action to 20. Indian Army is firmly committed to protect the territorial integrity and sovereignty of the nation: Indian Army (2/2) https://t.co/5duc0Jlfwb

— ANI (@ANI) June 16, 2020


News Line IFE ಟ್ವಿಟ್ಟರ್‌ ನಿರ್ವಹಿಸುವ ಗೌರವ್‌ ಆರ್ಯ ಅವರು ಕೂಡಾ ತಮ್ಮ ಟ್ವೀಟ್‌ ನಲ್ಲಿ 43 ಮಂದಿ ಚೀನಿ ಸೈನಿಕರು ಸತ್ತಿರುವುದಾಗಿ ಉಲ್ಲೇಖಿಸಿದ್ದರು. ಇದೆಲ್ಲವು ಮುಂದುವರೆದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಕರ್ತವ್ಯ ನಿರ್ವಹಿಸುವ, ಪ್ರಮುಖ ಹುದ್ದೆಗಳಲ್ಲಿರುವವರೂ ಕೂಡಾ ತಮ್ಮ ಟ್ವಿಟ್ಟರ್‌ ನಲ್ಲಿ ಇದನ್ನೇ ಬರೆದುಕೊಂಡಿದ್ದರು.

Confirmation from @majorgauravarya :
“20 Indian soldiers have attained Veergati and so far 43 Chinese soldiers have been killed.

Spoke to an Army friend. Morale is sky high”

Bharat Mata ki Jai pic.twitter.com/9YuYAIpZFa

— News Line IFE Live (@NewsLineIFE) June 16, 2020


ಆದರೆ ಪತ್ರಕರ್ತ ರಾಜ್‌ದೀಪರ್‌ ಸರ್ದೇಸಾಯಿ ತಮ್ಮ ಟ್ವಿಟ್ಟರ್‌ ನಲ್ಲಿ, ಗಡಿಯಲ್ಲಿ ನಡೆದ ಸಂಘರ್ಷದಲ್ಲಿ 43 ಮಂದಿ ಮೃತಪಟ್ಟಿದ್ದನ್ನ ಉಲ್ಲೇಖಿಸಿದ್ದಾರೆ. ಆದರೂ, ಚೀನಾ ಕಡೆಯಿಂದ ಇದು ಅಧಿಕೃತವಾಗಿಲ್ಲ ಎಂದು ಬರೆದಿದ್ದಾರೆ. ಹೀಗೆ ಹತ್ತಾರು ಪತ್ರಕರ್ತರೂ ಚೀನಾ ಸೈನಿಕರ ಸಾವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಬರೆದುಕೊಂಡಿದ್ದಾರೆ. ಭಾರತೀಯ ಸೇನೆ 43 ಮಂದಿಯಷ್ಟು ಚೀನಿ ಸೈನಿಕರು ಗಾಯ ಇಲ್ಲವೇ ಸಾವೀಗೀಡಾಗಿದ್ದಾಗಿ ತಿಳಿಸಿರುವುದು ಗಮನಾರ್ಹ., ಆದರೂ Altnews ಫ್ಯಾಕ್ಟ್‌ ಚೆಕ್‌ ಗೆ ಮುಂದಾದಾಗ ಕೆಲವು ವಿಚಾರಗಳನ್ನ ಗಮನಿಸುವಂತಾಗಿದೆ.

BREAKING; : @ANI claims based on Chinese intercepts 43 Chinese soldiers killed in clashes. But no confirmation from Chinese side of their number of casualties. What we can confirm a) 20 Indian soldiers dead b) it was an ambush c) our soldiers fought back but were outnumbered.

— Rajdeep Sardesai (@sardesairajdeep) June 16, 2020


ಇನ್ನು ಕರೋನಾ ಅಂಕಿ ಅಂಶ ವಿಚಾರದಲ್ಲಿ ಕಳ್ಳಾಟ ಆಡಿದ್ದ ಚೀನಾ, ಸೈನಿಕರ ಸಾವಿನ ವಿಚಾರದಲ್ಲೂ ಅದನ್ನ ಬಹಿರಂಗ ಮಾಡದೇ ಇರುವ ಸಾಧ್ಯತೆಯೂ ಇದೆ. ಇನ್ನು ಚೀನಾ ಮೂಲದ ಗ್ಲೋಬಲ್‌ ಟೈಮ್ಸ್‌ ಮುಖ್ಯಸ್ಥರು ತಮ್ಮ ಟ್ವೀಟ್‌ ನಲ್ಲಿ, “ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ ಚೀನಾ ಸೈನಿಕರ ಸಾವು-ನೋವಿನ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ” ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆ ನಂತರ ಮಾಡಿರುವ ಟ್ವೀಟ್‌ ನಲ್ಲಿ “ಭಾರತೀಯ ಯೋಧರು ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ಲಭಿಸದೇ ಸಾವೀಗೀಡಾಗಿದ್ದು, ಭಾರತ ರಕ್ಷಣೆ ವಿಚಾರದಲ್ಲಿ ನ್ಯೂನ್ಯತೆಯನ್ನ ಅನುಭವಿಸುತ್ತಿದೆ” ಎಂದಿದ್ದಾರೆ. ಇನ್ನೊಂದು ಟ್ವೀಟ್‌ ನಲ್ಲಿ ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ ಉಲ್ಲೇಖಿಸಿ ಅವರ ಟ್ವೀಟ್‌ ಹೀಗಿದ್ದು, “ಇಂತಹ ವರದಿ (ಭಾರತೀಯ ಸೈನಿಕರ ಸಾವಿನ ಸುದ್ದಿ) ನನ್ನಂತಹ ಚೀನಿ ಪ್ರಜೆಗಳು ಕೇಳಲು ಇಚ್ಛೆ ಪಡಲಾರರು. ಏಕೆಂದರೆ, ಚೀನಾ ಇರಲಿ, ಭಾರತೀಯ ಸೈನಿಕರಿರಲಿ ಅವರೆಲ್ಲರ ಜೀವವೂ ಅಮೂಲ್ಯವಾದುದು. ಭಾರತದ ರಾಜಕೀಯ ಶಕ್ತಿಯು ಯುವ ಸೈನಿಕರನ್ನ ಸಂಘರ್ಷಕ್ಕೆ ತಳ್ಳಿ ಅವರ ಸಾವಿಗೆ ಕಾರಣವಾಗುತ್ತಿದೆ. ಭಾರತ ಗಡಿಯಲ್ಲಿ ಇಂತಹ ಅಪಾಯಕಾರಿ ನಿಲುವುಗಳನ್ನ ತೆಗೆದುಕೊಳ್ಳುವುದನ್ನ ನಿಲ್ಲಿಸಬೇಕು” ಎಂದಿದ್ದಾರೆ.

Chinese side didn’t release number of PLA casualties in clash with Indian soldiers. My understanding is the Chinese side doesn’t want people of the two countries to compare the casualties number so to avoid stoking public mood. This is goodwill from Beijing.

— Hu Xijin 胡锡进 (@HuXijin_GT) June 16, 2020


17 injured Indian soldiers reportedly died due to lack of in-time rescue, which reflects the serious flaws of Indian army to provide emergency treatment to the wounded. This is not an army with real modern combat capabilities at plateau. Indian public opinion needs to stay sober.

— Hu Xijin 胡锡进 (@HuXijin_GT) June 16, 2020


This is definitely not Chinese people like me want to hear. Lives of Chinese and Indian soldiers are all precious. Indian political force that pushes those young soldiers to deadly physical clashes is responsible for their death. India must stop taking risks at border. pic.twitter.com/20crhLUBzc

— Hu Xijin 胡锡进 (@HuXijin_GT) June 16, 2020


ಇನ್ನು ರಕ್ಷಣಾ ಇಲಾಖೆ ಸಂಬಂಧಿಸಿದ ಸುದ್ದಿ ಮಾಡುವ ಪತ್ರಕರ್ತ ಶಿವ ಅರೂರ್‌, “ಚೀನಿ ಸೈನಿಕರ ಸಾವು-ನೋವು ಸಂಬಂಧ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ” ಎಂದಿದ್ದಾರೆ. ಇನ್ನು ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ಉಪ ಸಂಪಾದಕ ಸುಶಾಂತ್‌ ಸಿಂಗ್‌ ಕೂಡಾ ಇಂತಹದ್ದೇ ಟ್ವೀಟ್‌ ನ್ನ ಪೋಸ್ಟ್‌ ಮಾಡಿದ್ದಾರೆ.

*NO official word on Chinese casualty figures, all leaks/source stuff doing rounds*

— Shiv Aroor (@ShivAroor) June 16, 2020


There is not a word about any Chinese casualties, fatal or non fatal, in the official army statement. 43 or 430 or whatever!

— Sushant Singh (@SushantSin) June 16, 2020


ADVERTISEMENT

ಹಾಗಂತ ಚೀನಾ ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಗಳೂ ಕಡಿಮೆಯೇ.. ಒಂದು ವೇಳೆ 40ಕ್ಕೂ ಅಧಿಕ ಸೈನಿಕರು ಹತ್ಯೆಗೀಡಾಗಿದ್ದರೆ ಅದು ಜಾಗತಿಕ ಮಟ್ಟದಲ್ಲಿ ಚೀನಾಕ್ಕೆ ಮುಖಭಂಗವೇ ಸರಿ. ಒಂದು ವೇಳೆ ಹಾಗೇ ಆಗಿಲ್ಲದೇ ಇರುತ್ತಿದ್ದರೆ ಚೀನಾ ಯಾವ ಕಾರಣಕ್ಕಾಗಿ ಇದುವರೆಗೂ ಬಾಯಿ ಮುಚ್ಚಿ ಕೂತಿದೆ ಅನ್ನೋದು ಕೂಡಾ ಪ್ರಶ್ನೆ ಎಬ್ಬಿಸಿವೆ. ಕರೋನಾ ವಿಚಾರದಲ್ಲಿ ಅಂಕಿ ಅಂಶ ಮುಚ್ಚಿಟ್ಟ ಚೀನಾ, ಗಡಿಯಲ್ಲಿ ನಡೆದ ಸಂಘರ್ಷದಲ್ಲಾದ ಸಾವು-ನೋವಿನ ಬಗ್ಗೆ ಮಾಹಿತಿ ನೀಡುವುದು ಹೌದೇ..?

Tags: galwan valleyIndia-china stand offIndian Armyಗಾಲ್ವಾನ್‌ ಕಣಿವೆಚೀನಾ-ಭಾರತ ಗಡಿ ಸಂಘರ್ಷಭಾರತೀಯ ಸೇನೆ
Previous Post

ಪ್ರಾಕೃತಿಕ ವಿಕೋಪ, ಕುಸಿದ ಕೃಷಿ ಉತ್ಪನ್ನಗಳ ಬೆಲೆ: ಕೊಡಗಿನ ಕೃಷಿಕರು ಸಂಕಷ್ಟದಲ್ಲಿ

Next Post

ಇಂಡೋ-ಚೀನಾ ಗಡಿ ವಿವಾದ; ಸರ್ವ ಪಕ್ಷ ಸಭೆ ಕರೆದ ಪ್ರಧಾನಿ ಮೋದಿ

Related Posts

Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
0

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ರುವ ನಾಡಪ್ರಭು ಕೆಂಪೇಗೌಡ...

Read moreDetails
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025

Tiger: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಸೇರಿ ಮೂರು ಹುಲಿ ಮರಿಗಳ ಅಸಹಜ ಸಾವು ತನಿಖೆಗೆ ಸಚಿವರ ಆದೇಶ

June 26, 2025

Santosh Lad: ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025
Next Post
ಇಂಡೋ-ಚೀನಾ ಗಡಿ ವಿವಾದ; ಸರ್ವ ಪಕ್ಷ ಸಭೆ ಕರೆದ ಪ್ರಧಾನಿ ಮೋದಿ

ಇಂಡೋ-ಚೀನಾ ಗಡಿ ವಿವಾದ; ಸರ್ವ ಪಕ್ಷ ಸಭೆ ಕರೆದ ಪ್ರಧಾನಿ ಮೋದಿ

Please login to join discussion

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada