• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೋವಿಡ್-19: ವಾರ್ಡುಗಳ ಆಧಾರದಲ್ಲಿ ಕಂಟೈನ್ಮೆಂಟ್ ವಲಯವನ್ನು ಗುರುತಿಸಲು ಕೇಂದ್ರಕ್ಕೆ ದೆಹಲಿಯ ಕೋರಿಕೆ

by
May 2, 2020
in ದೇಶ
0
ಕೋವಿಡ್-19: ವಾರ್ಡುಗಳ ಆಧಾರದಲ್ಲಿ ಕಂಟೈನ್ಮೆಂಟ್ ವಲಯವನ್ನು ಗುರುತಿಸಲು ಕೇಂದ್ರಕ್ಕೆ ದೆಹಲಿಯ ಕೋರಿಕೆ
Share on WhatsAppShare on FacebookShare on Telegram

ಕೆಂಪು ವಲಯವೆಂದು ಘೋಷಿಸಿರುವ ದೆಹಲಿ ಸಂಪೂರ್ಣ ಕೆಂಪು ವಲಯದಲ್ಲಿಲ್ಲ, ಹಾಗಾಗಿ NCR ದೆಹಲಿಯ ಸ್ಥಳೀಯಾಡಳಿತ ಕೋವಿಡ್‌-19 ಪ್ರಕರಣಗಳನ್ನು ಜಿಲ್ಲಾವಾರು ವಿಂಗಡಿಸದೆ ವಾರ್ಡುಗಳ ಆಧಾರದಲ್ಲಿ ವಿಂಗಡಿಸುವ ಕುರಿತು ಯೋಚಿಸುತ್ತಿದೆಯೆಂದು ಮೂಲಗಳು ತಿಳಿಸಿವೆ. ಹಾಗಾದಲ್ಲಿ ಕಠಿಣ ಲಾಕ್‌ಡೌನ್‌ನಿಂದ ತತ್ತರಿಸುವ ಸ್ಥಳೀಯ ನಿವಾಸಿಗಳಿಗೆ ಕೆಲವು ಅನುಕೂಲವಾಗಲಿವೆ.

ADVERTISEMENT

ಕರೋನಾ ಸೋಂಕು ಪೀಡಿತವಾಗಿರುವವರ ಸಂಖ್ಯೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಹೊಸ 223 ಪ್ರಕರಣಗಳು ದಾಖಲಾಗಿ ಒಟ್ಟು ದಾಖಲಾದ ಪ್ರಕರಣಗಳ ಸಂಖ್ಯೆ 3,738 ತಲುಪಿದೆ. ಒಟ್ಟು ಅಸುನೀಗಿದವರ ಸಂಖ್ಯೆ 61ಕ್ಕೇರಿದೆ. ಒಟ್ಟು 11 ಜಿಲ್ಲೆಗಳಿರುವ ದೆಹಲಿಯಲ್ಲಿ 272 ವಾರ್ಡುಗಳಿವೆ. ವಲಯವಾರು ವಿಂಗಡಣೆಯಲ್ಲಿ ದೆಹಲಿಯ ಹನ್ನೊಂದು ಜಿಲ್ಲೆಗಳನ್ನೂ ಕೆಂಪು ವಲಯದ ಪಟ್ಟಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೇರಿಸಿದೆ.

ವಾರ್ಡುಗಳನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳೆಂದು ವಿಂಗಡಿಸುವ ಸಂಪೂರ್ಣ ಯೋಜನೆಯನ್ನು ತಯಾರುಗೊಳಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆಂದು ಮೂಲಗಳು ತಿಳಿಸಿವೆ. ಮೂರಕ್ಕಿಂತ ಹೆಚ್ಚು ಕರೋನಾ ಪ್ರಕರಣಗಳಿರುವ ವಲಯವನ್ನು ಕೆಂಪು ವಲಯವೆಂದು, ಒಂದು ಅಥವಾ ಎರಡು ಪ್ರಕರಣಗಳು ದಾಖಲಾದ ವಾರ್ಡುಗಳನ್ನು ಕಿತ್ತಳೆ ವಲಯವೆಂದು ಗುರುತಿಸಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.

ಮೇ ನಾಲ್ಕರ ಬಳಿಕವೂ ಎರಡು ವಾರಗಳ ಕಾಲ ಅಂತರಾಜ್ಯ ಪ್ರಯಾಣ, ರೈಲು ಮತ್ತು ವಾಯು ಸಂಚಾರವನ್ನು ಈಗಿರುವಂತೆಯೇ ತಡೆ ಹಿಡಿಯಲಾಗುವುದು, ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಗುರುತಿಸಿದ ನಂತರ ಕೆಲವು ಚಟುವಟಿಕೆಗಳಿಗೆ ಈಗ ಇರುವ ಕೆಲವು ಕಠಿಣ ನಿರ್ಬಂಧಗಳನ್ನು ತೆಗೆಯಲಾಗುವುದೆಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿತ್ತು.

ಅನಿಲ್‌ ಬೈಜಾಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ಪದ್ಮಿನಿ ಸಿಂಘ್ಲಾ ಕೋವಿಡ್‌ 19 ಪ್ರಕರಣದ ಕಂಟೈನ್‌ಮೆಂಟ್ ವಲಯ ಸೇರಿ ಕೆಂಪು, ಕಿತ್ತಳೆ, ಹಸಿರು ವಲಯಗಳ ಪ್ರಾದೇಶಿಕ ವಿಂಗಡಣೆಯ ಕುರಿತು ವಿವರವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ʼಕೇಂದ್ರ ಆರೋಗ್ಯ ಸಚಿವಾಲಯ ಜಿಲ್ಲೆಯ ಆಧಾರದಲ್ಲಿ ಕೆಂಪು,ಕಿತ್ತಳೆ,ಹಸಿರು ವಲಯವೆಂದು ವಿಂಗಡಿಸುತ್ತದೆ. ದೆಹಲಿಯಲ್ಲಿ ಇರುವ ಎಲ್ಲಾ 11 ಜಿಲ್ಲೆಗಳೂ ಕೆಂಪುವಲಯದಲ್ಲಿ ಗುರುತಿಸಿಕೊಂಡಿದೆ, ವಾರ್ಡ್‌ ಆಧಾರದಲ್ಲಿ ವಿಂಗಡಿಸುವ ಯೋಜನೆ ತಯಾರಿಸಿ ಸಚಿವಾಲಯಕ್ಕೆ ಕಳುಹಿಸಲಾಗುವುದು, ಅಲ್ಲಿ ಅನುಮೋದನೆ ಸಿಕ್ಕರೆ ಬಳಿಕ ಸಂಪೂರ್ಣ ದೆಹಲಿ ಕೆಂಪು ವಲಯದಲ್ಲಿರುವುದಿಲ್ಲ, ಕಿತ್ತಳೆ ಮತ್ತು ಹಸಿರು ವಲಯಗಳೂ ದೆಹಲಿಯಲ್ಲಿ ಇರುತ್ತದೆ.ʼ ಎಂದು ಅವರು ಹೇಳಿದ್ದಾರೆ.

ಬೇರೆಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕಿಂತ ಭೌಗೋಳಿಕವಾಗಿ ಭಿನ್ನವಾಗಿರುವ ದೆಹಲಿಯಲ್ಲಿ ಸದ್ಯ 100 ಕಂಟೈನ್‌ಮೆಂಟ್ ವಲಯಗಳಿವೆ. ಕಂಟೈನ್‌ಮೆಂಟ್ ವಲಯಗಳನ್ನು ವಾರ್ಡುವಾರು ಗುರುತಿಸಿದರೆ 37 ಕಿತ್ತಳೆ ವಲಯವೆಂದು, 67 ಕೆಂಪು ವಲಯವೆಂದು ವಿಂಗಡಿಸಬಹುದೆಂದು ಮೂಲಗಳು ಹೇಳಿವೆ.

Tags: Central Health MinisterDelhiLockdownncr
Previous Post

ಅಳಿವಿನಂಚಿನಲ್ಲಿರುವ ‘ಮಹಶೀರ್’ ಮೀನು ಸಂತತಿ

Next Post

ಗೌಡರನ್ನು ಸೋಲಿಸಿದ್ದ ಹೇಮಾವತಿ ತುಮಕೂರಿಗೆ ಹೇಗೆ ಹೊರಡುತ್ತಾಳೆ..!?

Related Posts

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?
ದೇಶ

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

by ಪ್ರತಿಧ್ವನಿ
July 5, 2025
0

ಪ್ರಶ್ನೆಯೊಂದಿಗೆ ಕನ್ನಡದ ಎಎಂಆರ್‌ ರಮೇಶ್ ರಾಜೀವ್‌ ಗಾಂಧಿ ಹತ್ಯೆ ಕುರಿತು ಚಿತ್ರ/ ವೆಬ್‌ ಸೀರೀಸ್‌ ಮಾಡಲು ಕಳೆದ ಮೂವತ್ತು ವರ್ಷಗಳಿಂದ ಕನಸುತ್ತಿರುವ ಕನ್ನಡದ ಎಎಂಆರ್‌ ರಮೇಶ್‌ ಈಗ...

Read moreDetails

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
Next Post
ಗೌಡರನ್ನು ಸೋಲಿಸಿದ್ದ ಹೇಮಾವತಿ ತುಮಕೂರಿಗೆ ಹೇಗೆ ಹೊರಡುತ್ತಾಳೆ..!?

ಗೌಡರನ್ನು ಸೋಲಿಸಿದ್ದ ಹೇಮಾವತಿ ತುಮಕೂರಿಗೆ ಹೇಗೆ ಹೊರಡುತ್ತಾಳೆ..!?

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada