ಮಳವಳ್ಳಿ ಶಾಸಕರಿಗೆ ಮಂತ್ರಿ ಪಟ್ಟ? ಸಿದ್ದರಾಮಯ್ಯ(Siddaramaiah) ಸಂಪುಟ ಸೇರಲಿದ್ದಾರೆ ನರೇಂದ್ರ ಸ್ವಾಮಿ(Narendra Swamy)? ಈ ಪ್ರಶ್ನೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಟ್ಟಿದ್ದಾರೆ.
ಮಂಡ್ಯ(Mandya) ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಗ್ಯಾರೆಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಷಣದ ಮಧ್ಯೆ ನರೇಂದ್ರ ಸ್ವಾಮಿ ಅವರನ್ನ ಮಂತ್ರಿ ಮಾಡಿ ಎಂದ ಜನರು ಘೋಷಣೆ ಕೂಗಿದರು. ಇದಕ್ಕೆ ಉತ್ತರಿಸಿದ ಸಿಎಂ, ʻನರೇಂದ್ರ ಸ್ವಾಮಿ ಅವರನ್ನ ಕ್ಷೇತ್ರದ ಜನರು ಮಂತ್ರಿ(Minister) ಮಾಡಿ ಅಂತಿದ್ದಾರೆ.
![](https://pratidhvani.com/wp-content/uploads/2024/02/DSC_4992-1024x592.webp)
ಆದರೆ ಮಂತ್ರಿ ಮಾಡೋಕ್ಕೆ ಸೀಟು ಖಾಲಿ ಇಲ್ಲ, ಮುಂದೆ ಸಂಪುಟ ಪುನರ್ ರಚನೆ ವೇಳೆ ಅವಕಾಶ ಸಿಗುತ್ತೆ. ನೀವು ಮಾಡ್ತಿರೋ ಒತ್ತಾಯ ನ್ಯಾಯಯುತವಾಗಿದ್ದರೂ, ಇದು ಸಮಯವಲ್ಲ ಎನ್ನುವ ಮೂಲಕ ನರೇಂದ್ರ ಸ್ವಾಮಿ ಸಂಪುಟ ಸೇರುತ್ತಾರೆ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
![](https://pratidhvani.com/wp-content/uploads/2024/02/DSC_5060-1024x602.webp)
ನರೇಂದ್ರ ಸ್ವಾಮಿ ಶಾಸಕರಾಗಿ ಮಳವಳ್ಳಿ ಕ್ಷೇತ್ರವನ್ನ ಸಮರ್ಥವಾಗಿ ಪ್ರತಿನಿಧಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯೇ ಇಂದಿನ ಕಾರ್ಯಕ್ರಮವಾಗಿದ್ದು, ನರೇಂದ್ರ ಸ್ವಾಮಿ ಎಲ್ಲ ಸಚಿವರೊಂದಿಗೆ ಚೆನ್ನಾಗಿದ್ದಾರೆ. ಆ ಸ್ನೇಹ ಬಳಿಸಿಕೊಂಡು ಕ್ಷೇತ್ರಕ್ಕೆ ಅಭಿವೃದ್ದಿ ಕೆಲಸಗಳನ್ನ ಮಂಜೂರು ಮಾಡಿಸುತ್ತಿದ್ದಾರೆ. ನೀವು ಆಶೀರ್ವಾದ ಮಾಡಿದ ಕಾರಣಕ್ಕೆ ಕಾಂಗ್ರೆಸ್ ಗೆದ್ದಿದೆ. ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಳವಳ್ಳಿ ಕ್ಷೇತ್ರ ನನ್ನ ಕ್ಷೇತ್ರವಿದ್ದಂತೆ. ಬಿಜೆಪಿ, ಜೆಡಿಎಸ್ ಆಮೀಷ ತೋರಿಸಿದ್ರು ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿದ್ದಕ್ಕೆ ಕೃತಜ್ಞತೆ ಎಂದರು.
#Mandya #Siddaramaiah #CMofKarnataka #Mandya #MalavalliMLA #NarendraSwamy