ಐಪಿಎಲ್ 2025 ರ (ipl 2024) ಚಾಂಪಿಯನ್ಸ್ ಆಗಿ ರಾಯಲ್ ಚಾಲೆಂಜರ್ಸ್ (Royal challengers) ಹೊರಹೊಮ್ಮಿರುವ ಹಿನ್ನಲೆಯಲ್ಲಿ ಬೆಂಗಳೂರಲ್ಲಿ (Bengaluru) ಭರ್ಜರಿ ಸಂಭ್ರಮಾಚರಣೆ ನಡೆಯುತ್ತಿದೆ. ನಿನ್ನೆ ರಾತ್ರಿಯಿಂದಲೇ ನಗರದಾದ್ಯಂತ ಪಟಾಕಿ ಸಿಡಿಸಿ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ರು.ಇಂದು ಈ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ. ಇದಕ್ಕೆ ಕಾರಣ ಐಪಿಎಲ್ ಟ್ರೋಫಿ (Ipl trophy) ಬೆಂಗಳೂರಿಗೆ ಆಗಮಿಸುತ್ತಿದೆ.

ಹೌದು ಇಂದು ಮಧ್ಯಾನ್ಹ ಆರ್.ಸಿ.ಬಿ ಆಟಗಾರರು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಿಗ್ಗೆ 10:30 ಕ್ಕೆ ತಂಡ ಅಹ್ಮದಾಬಾದ್ ನಿಂದ ಹೊರಟಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಹೆಚ್.ಎ.ಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ.ಆ ಬಳಿಕ ವಿಶೇಷ ಬಸ್ ನಲ್ಲಿ ವಿಧಾನಸೌಧ ತಲುಪಲಿದ್ದಾರೆ.
ಇನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರದಿಂದ ಕಾರ್ಯಕ್ರಮ ಆಯೋಜನೆಗೊಂಡಿದ್ದು ಎಲ್ಲಾ ಆಟಗಾರರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ.ಆ ನಂತರ ಅದೇ ಬಸ್ ನಲ್ಲಿ ಎಲ್ಲಾ ಆಟಗಾರರು ಚಿನ್ನಸ್ವಾಮಿ ಸ್ಟೇಡಿಯಂ ತಲುಪಲಿದ್ದು, ಪಾಸ್ ಇರುವ ಅಭಿಮಾನಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಆದ್ರೆ ಈ ಮಧ್ಯೆ ಆರ್.ಸಿ.ಬಿ ಅಭಿಮಾನಿಗಳಿಗೆ ಒಂದು ನಿರಾಸೆಯಾಗಿದೆ. ತೆರೆದ ವಾಹನದಲ್ಲಿ ಆಟಗಾರರು ಕಪ್ ಹಿಡಿದು ವಿಕ್ಟರಿ ಪರೇಡ್ ನಡೆಸುಬ ನಿರೀಕ್ಷೆಯಿತ್ತು. ಇದರಲ್ಲಿ ಭಾಗಿಯಾಗಲು ಸಾಕಷ್ಟು ಅಭಿಮಾನಿಗಳು ಕೂಡ ಕಾತುರರಾಗಿದ್ರು. ಆದ್ರೆ ಭದ್ರತೆಯ ಹಿತ ದೃಷ್ಟಿಯಿಂದ ಈ ಪ್ಲಾನ್ ಕ್ಯಾನ್ಸಲ್ ಆಗಿದ್ದು, ಯಾವುದೇ ಓಪನ್ ವಿಕ್ಟರಿ ಪರೇಡ್ ಇರೋದಿಲ್ಲ ಎನ್ನಲಾಗಿದೆ.