• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಫುಟ್‌ಪಾತ್‌ ತೆರವಿಗೆ ಜೆಸಿಬಿ ಘರ್ಜನೆ..ರಾಜಕಾಲುವೆ ಒತ್ತುವರಿಗೆ VIP ಟ್ರೀಟ್‌ಮೆಂಟ್‌?: ಏನಿದು ಸರ್ಕಾರದ ಡಬಲ್‌ ಸ್ಟ್ಯಾಂಡರ್ಡ್?

ಪ್ರತಿಧ್ವನಿ by ಪ್ರತಿಧ್ವನಿ
July 2, 2026
in Top Story, ಕರ್ನಾಟಕ, ರಾಜಕೀಯ
0
ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಹಲವೆಡೆ ಘರ್ಜಿಸಿದ ಜೆಸಿಬಿ
Share on WhatsAppShare on FacebookShare on Telegram

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ ವಹಿಸಿಕೊಂಡ ಬಳಿಕ ತೆಗೆದುಕೊಂಡ ಬಹಳ ಮಹತ್ವದ ನಿರ್ಧಾರವೇ ಬೆಂಗಳೂರಿನಲ್ಲಿ ಸೇಫ್‌ ಫುಟ್‌ಪಾತ್ ಅಭಿಯಾನ. ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆರಹಿತ ಕಾಲುದಾರಿಗಳನ್ನು ಒದಗಿಸುವ ಉದ್ದೇಶದಿಂದ ಸಚಿವ ಕೃಷ್ಣ ಬೈರೇಗೌಡ ಜಿಬಿಎ ಅಧಿಕಾರಿಗಳಿಗೆ ಖಡಕ್‌ ಸೂಚನೆ ಕೊಟ್ಟಿದ್ದು, ನಿನ್ನೆಯಿಂದ ಸೇಫ್‌ ಫುಟ್‌ಪಾತ್ ಅಭಿಯಾನ ಆರಂಭವಾಗಿದೆ.

ADVERTISEMENT
Street Vendors : ಕಾಡಿ ಬೇಡಿಕೊಂಡರು ಅಧಿಕಾರಿಗಳು ಡೋಂಟ್ ಕೇರ್.!   #pratidhvani

ಸಚಿವರು ಹಾಗೂ ಅಧಿಕಾರಿಗಳ ಸೂಚನೆ ಮೇರೆಗೆ ನಿನ್ನೆ ಬೆಳ್ಳಂಬೆಳಗ್ಗೆಯೇ ಕಾರ್ಯಪ್ರವೃತ್ತರಾದ ಜಿಬಿಎ ಸಿಬ್ಬಂದಿ ನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್‌ಗಳ ಮೇಲೆ ನಿರ್ಮಿಸಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳು, ಬೋರ್ಡ್‌ಗಳು ಹಾಗೂ ಅನಧಿಕೃತ ಕುಳಿತುಕೊಳ್ಳುವ ವ್ಯವಸ್ಥೆಗಳನ್ನು ತೆರವುಗೊಳಿಸಿದ್ದಾರೆ. ಕೆಲವು ಭಾಗಗಳಲ್ಲಿ ಜೆಸಿಬಿಯನ್ನೂ ಕೂಡ ಬಳಸಲಾಗಿದ್ದು, ಕೇಂದ್ರ ವಲಯದ ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ ಮತ್ತು ಚಾಮರಾಜಪೇಟೆ ಸೇರಿ ಒಟ್ಟು 16 ಸ್ಥಳಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವು ಹೋಟೆಲ್‌ಗಳು ಫುಟ್‌ಪಾತ್ ಮೇಲೆ ಗ್ರಾಹಕರಿಗಾಗಿ ಹಾಕಿದ್ದ ಕುರ್ಚಿ, ಟೇಬಲ್‌ಗಳು ಹಾಗೂ ತಾತ್ಕಾಲಿಕ ಟೀ ಅಂಗಡಿಗಳನ್ನೂ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಸ್ಥಳೀಯರು ಮನವಿ ಮಾಡಿದರೂ ಕೂಡ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ.

Street Vendors : ಕಾಲಿ ಮಾಡಿಸ್ತೀನಿ ಅಂತಿದ್ದಾರೆ ಏನ್ ಮಾಡೋದು.?  #pratidhvani

ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತಗೆ ರಾಜ್ಯ ಸರ್ಕಾರ, ಸಚಿವರು, ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಈ ಕಾರ್ಯಾಚರಣೆ ಮೆಚ್ಚಲೇಬೇಕಾದದ್ದು. ಆದರೆ ಇದೇ ರೀತಿಯ ಚುರುಕು ಅಥವಾ ತ್ವರಿತ ಕಾರ್ಯಾಚರಣೆ ರಾಜಕಾಲುವೆ ಒತ್ತುವರಿ ತೆರವಿನಲ್ಲಿ ಯಾಕಿಲ್ಲ.. ಈಗಲೂ ಅದೆಷ್ಟೋ ಜನರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಸ್ವಂತ ಜಾಗ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಲ್ಲಿ ಉಳ್ಳವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೀದಿ ಬದಿ ವ್ಯಾಪಾರಿಗಳ ಅಂಗಡಿ ಮುಚ್ಚಿಸಿದಂತೆ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರ ಮೇಲೆ ತ್ವರಿತವಾದ ಕಠಿಣ ಕ್ರಮ ಯಾಕಿಲ್ಲ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Street Vendors : ಬೇರೆ ವ್ಯವಸ್ಥೆ ಮಾಡಿ ಕಾಲಿ ಮಾಡ್ಸಿ.! #pratidhvani

ಇನ್ನು ನಗರದಲ್ಲಿ ಬೀದಿ ವ್ಯಾಪಾರಿಗಳು ಜೀವನ ನಡೆಸಲು ಮುಕ್ತ ಅವಕಾಶವಿದೆ. ಪಾಲಿಕೆ ಗುರುತಿಸುವ ನಾನ್-ವೆಂಡಿಂಗ್ ವಲಯಗಳ ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮುಕ್ತವಾಗಿ ವ್ಯಾಪಾರ ನಡೆಸಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರೂ ಕೂಡ ಕೆಲ ಬದಿ ವ್ಯಾಪಾರಿಗಳಿಗೆ ಈ ಬಗ್ಗೆ ಮಾಹಿತಿ ಕೊರತೆಯಿದ್ದು, ಅಧಿಕಾರಿಗಳು ಅಂಗಡಿ ತೆರವುಗೊಳಿಸಿದ ದಿನದಿಂದ ವ್ಯಾಪಾರ ಮಾಡಲಾಗದೇ, ಜೀವನ ನಡೆಸಲು ಸಂಪಾದನೆ ಇಲ್ಲದೇ ಅಲೆದಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ, ವ್ಯಾಪಾರಕ್ಕೆ ಸೂಕ್ತ ಸ್ಥಳವಾಕಾ ದೈನಂದಿನ ಬದುಕಿಗೆ ತೊಂದರೆಯಾಗದಂತೆ ಕೂಡಲೇ ಕ್ರಮ ವಹಿಸಬೇಕಿದೆ.

Previous Post

ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Next Post

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

Related Posts

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು
Top Story

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

by ಪ್ರತಿಧ್ವನಿ
July 2, 2026
0

ಬೆಂಗಳೂರು: ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನೋಂದಣಿ ವಿಚಾರದ ಸುತ್ತ ರಾಜಕೀಯ ವಾಗ್ವಾದ ತೀವ್ರಗೊಂಡಿರುವ ಬೆನ್ನಲ್ಲೇ, ಸಂಘದ ಉನ್ನತ ಮಟ್ಟದ ಸಭೆಯಲ್ಲಿ (ಬೈಠಕ್) ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ...

Read moreDetails
ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

July 2, 2026
ಒತ್ತುವರಿದಾರರಿಗೆ ಪಾಲಿಕೆಯ ಶಾಕ್; ಫುಟ್‌ಪಾತ್‌ಗಳಿಂದ ಶೆಡ್, ಪೆಟ್ಟಿ ಅಂಗಡಿ, ತಳ್ಳುಗಾಡಿಗಳ ತೆರವು

ಒತ್ತುವರಿದಾರರಿಗೆ ಪಾಲಿಕೆಯ ಶಾಕ್; ಫುಟ್‌ಪಾತ್‌ಗಳಿಂದ ಶೆಡ್, ಪೆಟ್ಟಿ ಅಂಗಡಿ, ತಳ್ಳುಗಾಡಿಗಳ ತೆರವು

July 2, 2026
Na Divakar Article

ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ  ಸ್ವ-ಪ್ರಜ್ಞೆ

July 2, 2026
ರಾಮಮಂದಿರ ಕಾಣಿಕೆ ಹಣ ಕಳ್ಳತನ: ಟ್ರಸ್ಟಿ ಹೆಸರು ಪ್ರಸ್ತಾಪ, ವಿಚಾರಣೆಯಲ್ಲಿ ಹೊಸ ರಹಸ್ಯ ಬಯಲು

ರಾಮಮಂದಿರ ಕಾಣಿಕೆ ಹಣ ಕಳ್ಳತನ: ಟ್ರಸ್ಟಿ ಹೆಸರು ಪ್ರಸ್ತಾಪ, ವಿಚಾರಣೆಯಲ್ಲಿ ಹೊಸ ರಹಸ್ಯ ಬಯಲು

July 1, 2026
Next Post
ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada