ಮಂಡ್ಯ (Mandya): ಮಂಡ್ಯದಲ್ಲಿ ಇಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambreesh) ಅಧ್ಯಕ್ಷತೆಯ ದಿಶಾ ಸಭೆ ನಡೆಯಲಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಭವನದಲ್ಲಿ ಬೆಳಿಗ್ಗೆ 11:30ಕ್ಕೆ ಸಭೆ ನಡೆಯಲಿದ್ದು, ಸುಮಲತಾ ಅವರು ತಮ್ಮ ಅಧಿಕಾರ ಅವಧಿಯ ಕೊನೆ ದಿಶಾ ಸಭೆ ನಡೆಸಲಿದ್ದಾರೆ.
ಎಂಪಿ ಚುನಾವಣೆ ಹೊಸ್ತಿಲಲ್ಲಿ ಸುಮಲತಾ ಅವರ ಕೊನೆಯ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ಜನರ ಗಮನ ಸೆಳೆಯುವ ವಿಚಾರಗಳಾದ ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್, KRS ಅಣೆಕಟ್ಟೆ, ಕಾವೇರಿ ನೀರು ಕುರಿತು ಸುಮಲತಾ ಅವರು ಚರ್ಚಿಸುವ ಸಾಧ್ಯತೆಯಿದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿಯಾಗಿ ಜನರ ವಿಶ್ವಾಸ ಗಿಟ್ಟಿಸುವ ಕಡೆ ಪ್ರಯತ್ನ ಮಾಡುತ್ತಿದ್ದು, ಆ ಮೂಲಕ ಟಿಕೆಟ್ಗಾಗಿ ಮತ್ತೊಂದು ಸುತ್ತಿನ ಹೋರಾಟ ನಡೆಸಲಿದ್ದಾರೆ.
ಸಂಸದೆ ಸುಮಲತಾ ಅವರು ಬಿಜೆಪಿ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದು, ಜೆಡಿಎಸ್ಗೆ ಮಂಡ್ಯ ಕ್ಷೇತ್ರ ಉಳಿಸಿಕೊಳ್ಳಲು ದೆಹಲಿಗೆ ದಳಪತಿಗಳಯ ದೌಡಾಯಿಸಿದ್ದಾರೆ. ಮೈತ್ರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ನಿಂದಲೂ ಸಿದ್ಧತೆ ನಡೆಸಿದೆ. ಇವೆಲ್ಲದರ ಮಧ್ಯೆ ಯಾರಿಗೆ ಟಿಕೆಟ್ ಸಿಗಲಿದೆ ಕಾದು ನೋಡಬೇಕು.
#karnataka #mandya #mp #mpelection #sumalatha