• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ತಾಲಿಬಾನ್‌ ಸೇನಾ ಮುಖ್ಯಸ್ಥನಾಗಿ ಆಯ್ಕೆಯಾದ ಉಗ್ರ ಖಾರಿ ಫಾಸೀಹುದ್ದೀನ್ ಯಾರು?

ನಚಿಕೇತು by ನಚಿಕೇತು
September 21, 2021
in ರಾಜಕೀಯ, ವಿದೇಶ
0
ತಾಲಿಬಾನ್‌ ಸೇನಾ ಮುಖ್ಯಸ್ಥನಾಗಿ ಆಯ್ಕೆಯಾದ ಉಗ್ರ ಖಾರಿ ಫಾಸೀಹುದ್ದೀನ್ ಯಾರು?
Share on WhatsAppShare on FacebookShare on Telegram


ಅಮೆರಿಕಾ ತನ್ನ ಸಂಪೂರ್ಣ ಸೇನೆಯನ್ನು ವಾಪಸ್ಸು ಕರೆಸಿಕೊಂಡ ಮೇಲೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿರುವ ತಾಲಿಬಾನಿಗಳು ಮತ್ತೊಂದು ಮಜಲನ್ನ ಏರಿದ್ದಾರೆ. ಖಾರಿ ಫಾಸೀಹುದ್ದೀನ್ಗೆ ಸೇನಾ ಮುಖ್ಯಸ್ಥನ ಪಟ್ಟ ಕಟ್ಟಿದ್ದಾರೆ. 2015ರಲ್ಲಿ ಸತ್ತನೆಂದು ಸುದ್ದಿಯಾಗಿದ್ದ ಫಾಸೀಹುದ್ದೀನ್ ಈಗ ಅಫ್ಘಾನ್ ಸೇನಾ ಮುಖ್ಯಸ್ಥ.

ADVERTISEMENT

ಬಂದೂಕು ತೋರಿಸಿ, ಅಮಾಯಕರ ನೆತ್ತರು ಹರಿಸಿ ವಿರಾಜಮಾನರಾಗಿರುವ ಉಗ್ರರು ತಾಲಿಬಾನ್ ಸೇನೆಯ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಒಂದು ಕಾಲದಲ್ಲಿ ಭಾರೀ ಘರ್ಜಿಸಿದ್ದ, ಐದು ಸಿಂಹಗಳನ್ನ ಜಯಿಸಿದ ಶೂರ ಎಂದು ಬಿರುದಾಂಕಿತನಾಗಿದ್ದ ಖಾರಿ ಫಾಸೀಹುದ್ದೀನ್‌ಗೆ ಸೇನಾ ಮುಖ್ಯಸ್ಥನ ಪಟ್ಟ ಕಟ್ಟಿದ್ದಾರೆ. ಈ ಮೂಲಕ ಅಧಿಕೃತವಾಗಿ ತಾಲಿಬಾನ್ ಸರ್ಕಾರದ ಸೇನಾ ಪಡೆಯ ಮುಖ್ಯಸ್ಥನಾಗಿ ಫಾಸೀಹುದ್ದೀನ್ ಅಧಿಕಾರ ವಹಿಸಿಕೊಂಡಿದ್ದಾನೆ.

ಇನ್ನು ತಾಲಿಬಾನ್ ಮಧ್ಯಂತರ ಸರ್ಕಾರದ ಸೇನಾ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ಖಾರಿ ಫಾಸೀಹುದ್ದೀನ್ ಸೇನೆಯ ಬಲಿಷ್ಠತೆ ಬಗ್ಗೆ ಭರವಸೆ ಬಿತ್ತಿದ್ದಾರೆ. ಶೀಘ್ರದಲ್ಲೇ ತಾಲಿಬಾನ್ ಸರ್ಕಾರದ ಹೊಸ ಸೇನಾ ಪಡೆ ರಚನೆ ಆಗಲಿದೆ. ತುಂಬ ಬಲಿಷ್ಠವಾದ ಸೇನಾ ಪಡೆಯ ಸೇನಾಳುಗಳು ದೇಶದ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲಲಿದ್ದಾರೆ ಅನ್ನೋ ಭರವಸೆ ನೀಡಿದ್ದಾರೆ. ಹೀಗಾಗಿ ತಾಲಿಬಾನ್ ಸರ್ಕಾರದ ಈ ನೂತನ ಸೇನಾ ಸುದ್ದಿ ವಿಶ್ವದ ರಾಷ್ಟ್ರಗಳನ್ನ ಮತ್ತಷ್ಟೂ ಅಲರ್ಟ್ ಮಾಡಿದೆ.

ಖಾರಿ ಫಾಸೀಹುದ್ದೀನ್ ತಾಲಿಬಾನ್ ಸೇನಾ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ತನ್ನ ಸೇನೆ ಬಗ್ಗೆ ಇಸ್ಲಾಮಿಕ್ ಎಮಿರೇಟ್ಸ್‌ ಸರ್ಕಾರಕ್ಕೆ ಭರವಸೆ ಬಿತ್ತಿದ್ದಾರೆ. ಶೀಘ್ರದಲ್ಲೇ ತಾಲಿಬಾನ್ ಸರ್ಕಾರದ ಹೊಸ ಸೇನಾ ಪಡೆ ರಚನೆ ಆಗಲಿದೆ ಅಂದಿದ್ದಾರೆ. ಶಿಸ್ತು, ಬದ್ಧತೆ, ಬಲಿಷ್ಠತೆಯೊಂದಿಗೆ ಸೇನೆಯನ್ನ ರಚನೆ ಮಾಡೋದಕ್ಕೆ ಈಗಾಗಲೇ ತಯಾರಿ ನಡೆಸಲಾಗಿದೆ. ಸರ್ಕಾರಕ್ಕೆ ಪೂರಕವಾಗಿ ಸೇನೆ ರಚನೆ ಮಾಡೋದಕ್ಕಾಗಿ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಅಂತ ಹೇಳಿದ್ದಾರೆ. ದೇಶ ರಕ್ಷಣೆಗಾಗಿ ಶೀಘ್ರದಲ್ಲೇ ತಾಲಿಬಾನ್ ಸೇನೆ ಕಾರ್ಯಾರಂಭ ಮಾಡಲಿದೆ ಅಂತ ಫಾಸೀಹುದ್ದೀನ್ ಸರ್ಕಾರಕ್ಕೆ ತಿಳಿಸಿದ್ದಾರೆ.

ಖಾರಿ ಫಾಸೀಹುದ್ದೀನ್ ಐದು ಸಿಂಹಗಳನ್ನ  ಗೆದ್ದ ವಿಜಯಶಾಲಿ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಿನಿಂದ ತಾಲಿಬಾನಿಗಳಿಗೆ ಸೆಡ್ಡು ಹೊಡೆದ ಪಂಜ್‌ಶೀರ್‌ ವಶಕ್ಕೆ ಪಡೆದುಕೊಳ್ಳುವಲ್ಲಿಯೂ ಖಾರಿ ಫಾಸೀಹುದ್ದೀನ್ ಪ್ರಮುಖವಾದ ಪಾತ್ರವನ್ನ ವಹಿಸಿಕೊಂಡಿದ್ದ. ಇನ್ನೂ ಬದಾಕ್ಷಾನ್ ಪ್ರಾಂತ್ಯದ ಶ್ಯಾಡೋ ಗವರ್ನರ್ ಆಗಿಯೂ ಖಾರಿ ಕಾರ್ಯನಿರ್ವಹಿಸಿದ್ದ. ತಜಿಕ್-ಎತ್ನಿಕ್ ಗುಂಪಿನಲ್ಲಿ ಪಾಸೀಹುದ್ದೀನ್ ಪ್ರಮುಖ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ತಾಲಿಬಾನ್ ಮಿಲಿಟರಿ ಹುದ್ದೆ ಪಡೆದುಕೊಂಡ ಮೊದಲ ತಜಿಕ್ ವ್ಯಕ್ತಿ ಅನ್ನೋ ಹೆಗ್ಗಳಿಕೆಗೂ ಈತ ಪಾತ್ರನಾಗಿದ್ದಾರೆ.

ಇನ್ನು ಕಳೆದ 2015ರಲ್ಲಿ ಫಾಸೀಹುದ್ದಿನ್ ಹತ್ಯೆ ಆಗಿದ್ದಾರೆ ಅಂತ ಅಫ್ಘಾನ್ ಸರ್ಕಾರ ಘೋಷಣೆ ಮಾಡಿತ್ತು. 40 ಮಂದಿಯ ಹತ್ಯೆಯಲ್ಲಿ ಫಾಸೀಹುದ್ದಿಯನ್ನ ಕೂಡ ಮೃತಪಟ್ಟಿದ್ದ ಅಂತ ಹೇಳಲಾಗಿತ್ತು. ಆಗ ಇಲ್ಲ ನಾನು ಸತ್ತಿಲ್ಲ ಬದುಕಿದ್ದೇನೆ ಅಂತ ಫಾಸೀಹುದ್ದೀನ್ ಹೇಳಿಕೆಯೊಂದನ್ನ ಬಿಡುಗಡೆಗೊಳಿಸಿದ್ದ. ಹೀಗೆ ಅಂದು ಸತ್ತು ಸುದ್ದಿಯಾಗಿದ್ದ ಖಾರಿ ಫಾಸೀಹುದ್ದೀನ್ ಈಗ ತಾಲಿಬಾನ್ ಸರ್ಕಾರದ ಮಹತ್ವದ ಸೇನಾ ಪಡೆಯ ಮುಖ್ಯಸ್ಥನಾಗಿ ಅಧಿಕಾರ ಸ್ವಿಕರಿಸಿದ್ದಾರೆ.

ಈ ನಡುವೆ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್ ಸರ್ಕಾರದಲ್ಲಿ ಯಾವುದೇ ಒಳ ಜಗಳ ಇಲ್ಲ. ನಾನೂ ಯಾರೊಂದಿಗೂ ಅಸಮಾಧಾನ ಹೊಂದಿಲ್ಲ ಅಂತ ಹೇಳಿದ್ದಾರೆ.

ಕೆಲವು ದಿನಗಳಿಂದ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಕಾಣಿಸಿಕೊಳ್ಳದೇ ಇರೋದಕ್ಕೆ ಹತ್ಯೆ ಆಗಿದ್ದಾರೆ ಅಂತ ಹೇಳಲಾಗುತ್ತಿತ್ತು. ಅಲ್ಲದೇ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಹೀಗಾಗಿ ಬರಾದಾರ್ ಅಸಮಾಧಾನಗೊಂಡಿದ್ದಾರೆ ಅಂತಲೂ ವರದಿಗಳಾಗುತ್ತಿದ್ದವು. ಆದ್ರೆ ಈಗ ಈ ವರದಿಗಳು ಸುಳ್ಳು, ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ನಾನೂ ಸರ್ಕಾರದೊಂದಿಗೆ ಸರಿಯಿದ್ದೇನೆ ಅಂತ ಹೇಳಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಅಮಾಯಕರ ಹೆಣಗಳ ಮೇಲೆ ಸರ್ಕಾರ ಕಟ್ಟಿ ವಿಜೃಂಭಿಸುತ್ತಿರೋ ತಾಲಿಬಾನಿಗಳ ಸೇನೆ ಅದ್ಹೇಗೆ ಜನರನ್ನ ರಕ್ಷಣೆ ಮಾಡುತ್ತೋ.

Tags: AfghanistanAfghanistanCrisisDefenceTalibanterrorists
Previous Post

99% ಸ್ಪೀಡ್ ಬ್ರೇಕರ್‌ಗಳು ಅವೈಜ್ಞಾನಿಕ: ರಸ್ತೆ ಉಬ್ಬು ಕುರಿತು ಸದನದಲ್ಲಿ ಚರ್ಚೆ

Next Post

ಸದನದಲ್ಲಿ ವಸತಿ ಸಚಿವ ಸೋಮಣ್ಣರನ್ನು ತರಾಟೆಗೆ ತೆಗೆದುಕೊಂಡ : Siddaramaiah

Related Posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
0

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನಿವೃತ್ತ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ...

Read moreDetails
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಸದನದಲ್ಲಿ ವಸತಿ ಸಚಿವ ಸೋಮಣ್ಣರನ್ನು ತರಾಟೆಗೆ ತೆಗೆದುಕೊಂಡ  : Siddaramaiah

ಸದನದಲ್ಲಿ ವಸತಿ ಸಚಿವ ಸೋಮಣ್ಣರನ್ನು ತರಾಟೆಗೆ ತೆಗೆದುಕೊಂಡ : Siddaramaiah

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada