
ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಾಚಾರಿಯ ಬಂಧನ ಆಗಿದೆ.. ಕೇಂದ್ರ ಗುಪ್ತದಳ ಹಾಗೂ ಮಿಲಟರಿ ಇಂಟಲಿಜೆನ್ಸ್ ಬೆಂಗಳೂರಿನಲ್ಲಿ ಓರ್ವನನ್ನು ಬಂಧನ ಮಾಡಿದೆ.. ಬಿಇಎಲ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ದೀಪ್ ರಾಜ್ ಚಂದ್ರ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.
ಬಿಇಎಲ್ನಲ್ಲಿ PIDC ಆಗಿದ್ದ ದೀಪ್ ರಾಜ್ ಚಂದ್ರ, ಬಿಇಎಲ್ನ ರಕ್ಷಣಾ ವಿಚಾರಗಳನ್ನ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಎನ್ನುವುದು ತನಿಖಾ ಸಂಸ್ಥೆಗಳಿಗೆ ಗೊತ್ತಾಗಿದೆ. ಉತ್ತರ ಪ್ರದೇಶ ಗಾಜಿಯಾಬಾದ್ ಮೂಲದ ಆರೋಪಿ ದೀಪ್ ರಾಜ್ ಚಂದ್ರನ ಚಲನವಲನ ಆಧರಿಸಿ ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ಮಾಡಿ ಬಂಧಿಸಿವೆ..

ಬೆಂಗಳೂರಿನಲ್ಲಿ ಪಾಕಿಸ್ತಾನ್ ಏಜೆಂಟ್ ಬಂಧನ ಆಗಿರುವ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದ್ದು, ಮೂರು ವರ್ಷದಿಂದ ಪಾಕಿಸ್ತಾನದ ಐಎಸ್ಐ ಲೇಡಿ ಜೊತೆ ಸಂಪರ್ಕದಲ್ಲಿದ್ದ ದೀಪ್ ರಾಜ್ ಚಂದ್ರ, ಈ ವೇಳೆ ಆರೋಪಿ ಖಾತೆಗೆ ಲಕ್ಷಾಂತರ ರೂಪಾಯಿ ಹಣವೂ ವರ್ಗಾವಣೆ ಆಗಿರೋ ಮಾಹಿತಿ ಸಿಕ್ಕಿದೆ. ಪಾಕಿಸ್ತಾನಿ ಏಜೆಂಟ್ನ ಭೇಟಿಯಾಗಿರುವ ದೀಪ್ ರಾಜ್ ಚಂದ್ರ. ಬಿಇಎಲ್ ಕ್ಯಾಂಪಸ್ನಲ್ಲೆ ವಾಸವಿದ್ದನು.
ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಮಿಲಟರಿ ಮಾಹಿತಿಗಳನ್ನ ನೀಡಿರುವ ಆರೋಪಿಯನ್ನು ಬಂಧಿಸಿ, ಸದ್ಯ ಆರೋಪಿಯ ಪೋನ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿರುವ ಮಿಲಟರಿ ಇಂಟಲಿಜೆನ್ಸ್, ತನಿಖೆ ನಡೆಸುತ್ತಿದೆ. ಸಂಪೂರ್ಣ ಪ್ರಕರಣವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಮಿಲಟರಿ ಇಂಟಲಿಜೆನ್ಸ್, ಆರೋಪಿಯನ್ನ ದೆಹಲಿಗೆ ಶಿಫ್ಟ್ ಮಾಡುವ ನಿರ್ಧಾರ ಮಾಡಿದೆ.
ಈ ಬಗ್ಗೆ ಗೃಹ ಸಚಿವ ಡಾ ಜಿ.ಪರಮೇಶ್ವರ್ ಮಾತನಾಡಿ, ಭಾರತಿಯ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿಯಲ್ಲಿ ದೀಪ್ ರಾಜ್ ಚಂದ್ರ 36 ವರ್ಷದ ಸೀನಿಯರ್ ಇಂಜಿನಿಯರ್. ಪಾಕಿಸ್ತಾನದ ಇಂಟೆಲಿಜೆನ್ಸ್ ಸಂಪರ್ಕ ಇಟ್ಟುಕೊಂಡು ಮಾಹಿತಿಯನ್ನ ತಲುಪಿಸ್ತಿದ್ರು. ಸ್ಟೇಟ್ ಹಾಗೂ ಸೆಂಟ್ರಲ್ ಇಂಟೆಲಿಜೆನ್ಸ್ ನವರು ಅವರನ್ನ ವಶಕ್ಕೆ ಪಡೆದಿದ್ದಾರೆ. ಅವರಿಂದ ಅನೇಕ ಮಾಹಿತಿಯನ್ನ ಕಲೆಹಾಕಿದ್ದಾರೆ ಎಂದಿದ್ದಾರೆ.
ಉತ್ತರ ಪ್ರದೇಶದಿಂದ ಬಂದು ಬಿಇಎಲ್ ನಲ್ಲಿ ಕೆಲಸ ಮಾಡೋಕೆ ಸೇರಿದ್ರು. ಇದು ಇಡೀ ದೇಶಕ್ಕೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ. ಮಿಲ್ಟ್ರಿ ಇಂಟೆಲಿಜೆನ್ಸ್ ನವರು ಅವರನ್ನ ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕ್ತಿದ್ದಾರೆ. ಇದು ಆತಂಕಕಾರಿ ವಿಚಾರ.ಅನೇಕ ಪ್ರಮುಖ ತೀರ್ಮಾನಗಳು, ನಮ್ಮಲ್ಲಿ ಉತ್ಪಾದನೆ ಆಗುತ್ತಿದ್ದ ಎಕ್ಯುಪೆಂಟ್ಸ್ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಮುಂದೆ ತನಿಖೆ ಆದ್ಮೆಲೆ ಏನ್ ಬರುತ್ತೆ ಅನ್ನೊದು ಗೊತ್ತಿಲ್ಲ ಎಂದಿದ್ದಾರೆ.