Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ದೊಡ್ಡವರು ಅಂದ್ರೆ ಯಾರು..? ಚೈತ್ರಾ ವಂಚನೆ ಪ್ರಕರಣದಲ್ಲಿ ಯಾರ್ಯಾರು ಇದ್ದಾರೆ..?

ಕೃಷ್ಣ ಮಣಿ

ಕೃಷ್ಣ ಮಣಿ

September 15, 2023
Share on FacebookShare on Twitter

ಚೈತ್ರಾ ಕುಂದಾಪುರ ಬರೋಬ್ಬರಿ 5 ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಬಂಧನ ಆಗಿದ್ದಾರೆ. ಸೆಪ್ಟೆಂಬರ್‌ 12ರ ರಾತ್ರಿ ಉಡುಪಿಯ ಶ್ರೀ ಕೃಷ್ಣ ಮಠದ ಆವರಣದಲ್ಲಿ ಅರೆಸ್ಟ್‌ ಮಾಡಿದ ಬಳಿಕ ಬೆಂಗಳೂರಿಗೆ ಕರೆತಂದಿದ್ದ ಸಿಸಿಬಿ ಪೊಲೀಸ್ರು, ಕೋರ್ಟ್‌ಗೆ ಹಾಜರುಪಡಿಸಿ, ಸೆಪ್ಟೆಂಬರ್‌ 23ರ ತನಕ ವಶಕ್ಕೆ ಪಡೆದಿದ್ದಾರೆ. ಗುರುವಾರ ಬೆಳಗ್ಗೆ ಸಿಸಿಬಿ ಕಚೇರಿಗೆ ಕರೆ ತರುವಾಗ ಮಾಧ್ಯಮಗಳ ಎದುರು ಮಾತನಾಡಿರುವ ಚೈತ್ರಾ ಕುಂದಾಪುರ, ಅಭಿನವ ಹಾಲಾಶ್ರೀ ಸ್ವಾಮಿಜಿಯನ್ನು ಬಂಧಿಸಿದ ಬಳಿಕ ದೊಡ್ಡ ದೊಡ್ಡವರ ಹೆಸರು ಹೊರಕ್ಕೆ ಬರುತ್ತೆ ನೋಡಿ ಎಂದು ಹೇಳಿ ಹೋಗಿದ್ದಾಳೆ. ಅಂದರೆ ಚೈತ್ರಾ ಕುಂದಾಪುರ ಕೊಟ್ಟ ಸುಳಿವಿನಲ್ಲಿ ಇರುವ ದೊಡ್ಡ ದೊಡ್ಡವರು ಯಾರು ಅನ್ನೋ ಪ್ರಶ್ನೆ ಕುತೂಹಲ ಮೂಡಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಸ್ವಾತಂತ್ರ್ಯ ದೊರೆತು 76 ವರ್ಷಗಳಾದರೂ ಅನೇಕ ಜಾತಿಗಳು ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂಸಾಚಾರ: 60 ಮಂದಿ ಬಂಧನ

ವಂದೇ ಭಾರತ್‌ ರೈಲು ಫುಲ್ ಕ್ಲೀನ್

ಅಭಿನವ ಹಾಲಶ್ರೀ ಉತ್ತಮ ವಾಗ್ಮಿ, ಹಿಂದುತ್ವ ಭಾಷಣಕಾರ..!

ಚೈತ್ರಾ ಕುಂದಾಪುರ ಹಿಂದುತ್ವದ ಬಗ್ಗೆ ಮಾತನಾಡುತ್ತ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೇ ರೀತಿ ಹಿಂದುತ್ವದ ಪರ ಅಭಿನವ ಹಾಲಶ್ರೀ ಕೂಡ ಉತ್ತಮ ಭಾಷಣಕಾರ. ಕರ್ನಾಟಕದಲ್ಲಿ ಭಾಷಣಕಾರ ಎಂದು ಖ್ಯಾತಿ ಪಡೆದಿರುವ ಮಿಥುನ್​ ಚಕ್ರವರ್ತಿ ಅಲಿಯಾಸ್​ ಚಕ್ರವರ್ತಿ ಸೂಲಿಬೆಲೆ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇದೀಗ ಅಭಿನವ ಹಾಲಶ್ರೀ ಸಿಸಿಬಿ ಕೈಗೆ ಸಿಕ್ಕಿಬಿದ್ದರೆ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪ್ರಮುಖ ಹೆಸರು ಹೊರಕ್ಕೆ ಬರುವ ಸಾಧ್ಯತೆಗಳು ಇವೆ ಅನ್ನೋ ಸುದ್ದಿ ಹರಿದಾಡುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ಒಂದೇ ವೇದಿಕೆಯಲ್ಲಿ ಮಾಡಿದ್ದ ಭಾಷಣ ವೈರಲ್​ ಆಗುತ್ತಿದೆ.

ಸತೀಶ್​ ಜಾರಕಿಹೊಳಿ ವಿರುದ್ಧ ಸಿಡಿದೆದ್ದಿದ್ದ ಟೀಂ..

ಹಾಲಿ ಸಚಿವರಾಗಿರುವ ಸತೀಶ್​ ಜಾರಕಿಹೊಳಿ ಹಿಂದೂ ಪದದ ಅರ್ಥ ಏನು ಅನ್ನೋ ಬಗ್ಗೆ ವ್ಯಾಖ್ಯಾನ ಮಾಡಿದ್ದರು. ಆ ಹೇಳಿಕೆ ವಿರುದ್ಧ ಗುಟುರು ಹಾಕಿದ್ದ ಮಿಥುನ್​ ಚಕ್ರವರ್ತಿ ಅಲಿಯಾಸ್​ ಚಕ್ರವರ್ತಿ ಸೂಲಿಬೆಲೆ ಸತೀಶ್​ ಜಾರಕಿಹೊಳಿ ಕ್ಷೇತ್ರದಲ್ಲೇ ಬೃಹತ್​ ಸಭೆ ನಡೆಸಿ ಖಂಡಿಸಲಾಗುವುದು ಎಂದಿದ್ದರು. ಈ ಕಾರ್ಯಕ್ರಮದ ಹೊಣೆಗಾರಿಕೆ ವಹಿಸಿಕೊಂಡಿದ್ದು ಇದೇ ಅಭಿನವ ಹಾಲಶ್ರೀ ಎನ್ನಲಾಗಿದೆ. ಇನ್ನು ಡೀಲ್​ನಲ್ಲಿ ಬಂದಿರುವ ಎಲ್ಲಾ ಹಣವನ್ನು ಹೆಂಡತಿ ತಂದೆ ಹೆಸರಿನಲ್ಲಿ 10 ಎಕರೆ ಜಮೀನು ಖರೀದಿ ಮಾಡಿ ಕಬ್ಬು ಬೆಳೆದಿದ್ದಾರೆ. ಇನ್ನು ಪೆಟ್ರೋಲ್​ ಬಂಕ್​ ಮಾಡಿದ್ದಾರೆ. ಮನೆ ನಿರ್ಮಾಣ ಮಾಡಿದ್ದಾರೆ ಅನ್ನೋದು ಗೊತ್ತಾಗಿದ್ದು, ಚಕ್ರವರ್ತಿ ಸೂಲಿಬೆಲೆ ಹಾಗು ಸ್ವಾಮೀಜಿ ಜೊತೆಗಿರುವ ಹಲವಾರು ಫೋಟೋಗಳು ವೈರಲ್​ ಆಗ್ತಿವೆ.

ಚೈತ್ರಾ ಪಾತ್ರಧಾರಿ ಮಾತ್ರ.. ಸೂತ್ರಧಾರಿ ಬೇರೆ ಇದ್ದಾರಾ..?

ಚೈತ್ರಾ ಕುಂದಾಪುರ ಸದ್ಯಕ್ಕೆ ಫಿಡ್ಸ್​ನಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಆಸ್ಪತ್ರೆಗೆ ಸೇರುವ ಮೊದಲು ಸಿಸಿಬಿ ವಿಚಾರಣೆಯಲ್ಲಿ ಮಾತನಾಡಿದ್ದ ಚೈತ್ರಾ ಕುಂದಾಪುರ. ನನ್ನ ಮುಖ ನೋಡಿ ಯಾರು ಹಣ ಕೊಡ್ತಾರೆ ಮೇಡಂ, ಗಗನ್​ ಕಡೂರು ಹೇಗೆ ಹೇಳುತ್ತಿದ್ದನೋ ಹಾಗೆ ನಾನು ಮಾಡುತ್ತಿದ್ದೆ ಅಷ್ಟೆ. ಇದರ ಹಿಂದೆ ಬೇರೆ ಬೇರೆಯವರು ಇದ್ದಾರೆ ಎಂದಿದ್ದಾಳೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಅಭಿನವ ಹಾಲಶ್ರೀ ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದು, ಗುರುವಾರ ಸಂಜೆ ಕೋರ್ಟ್​ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇನ್ನೊಂದು ಕಡೆ ಸ್ವಾಮೀಜಿ ಬಂಧನ ಮಾಡದೆ ಚೈತ್ರಾ ಕುಂದಾಪುರಳ ಹೇಳಿಕೆ ಮೇಲೆ ತನಿಖೆ ನಡೆಸುವಂತೆ ಸಿಸಿಬಿ ಮೇಲೆ ಒತ್ತಡ ಕೂಡ ಆರಂಭವಾಗಿ ಎನ್ನುವ ಮಾತುಗಳು ಹರಿದಾಡುತ್ತಿವೆ. 

ಕೃಷ್ಣಮಣಿ

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ನಾಳೆ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತ
Top Story

ನಾಳೆ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತ

by ಪ್ರತಿಧ್ವನಿ
September 28, 2023
ಕೃಷ್ಣರಾಜ ಸಾಗರ ಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು: ವಾಟಾಳ್‌ ನಾಗರಾಜ್‌
Top Story

ಕೃಷ್ಣರಾಜ ಸಾಗರ ಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು: ವಾಟಾಳ್‌ ನಾಗರಾಜ್‌

by ಪ್ರತಿಧ್ವನಿ
September 29, 2023
ಹಳಿತಪ್ಪಿದ ಮೆಟ್ರೋ ರೈಲು : ಸಂಚಾರದಲ್ಲಿ ವ್ಯತ್ಯಯ
Top Story

ಹಳಿತಪ್ಪಿದ ಮೆಟ್ರೋ ರೈಲು : ಸಂಚಾರದಲ್ಲಿ ವ್ಯತ್ಯಯ

by ಪ್ರತಿಧ್ವನಿ
October 3, 2023
ಖ್ಯಾತ ಬಸ್ ಟ್ರಾವೆಲ್ಸ್ ಮಾಲೀಕನ ಅಂತಿಮ‌ಯಾತ್ರೆ – ತನ್ನ ಒಡೆಯನನ್ನು ನೋಡಲು ಸರತಿಸಾಲಿನಲ್ಲಿ ಬಂದ ಮಹೇಶ್ ಬಸ್ಸುಗಳು
Top Story

ಖ್ಯಾತ ಬಸ್ ಟ್ರಾವೆಲ್ಸ್ ಮಾಲೀಕನ ಅಂತಿಮ‌ಯಾತ್ರೆ – ತನ್ನ ಒಡೆಯನನ್ನು ನೋಡಲು ಸರತಿಸಾಲಿನಲ್ಲಿ ಬಂದ ಮಹೇಶ್ ಬಸ್ಸುಗಳು

by ಪ್ರತಿಧ್ವನಿ
October 2, 2023
ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಜಾರ್ಖಂಡ್‌ನ ಬುಡಕಟ್ಟುಗಳ ಪ್ರತಿಭಟನೆ
ಅಂಕಣ

ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಜಾರ್ಖಂಡ್‌ನ ಬುಡಕಟ್ಟುಗಳ ಪ್ರತಿಭಟನೆ

by ಡಾ. ಬಿ ಶ್ರೀಪಾದ್ ಭಟ್
October 3, 2023
Next Post
ಗೌರಿ ಗಣೇಶ ಹಬ್ಬಕ್ಕೆ ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ರಿಲೀಸ್

ಗೌರಿ ಗಣೇಶ ಹಬ್ಬಕ್ಕೆ ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ರಿಲೀಸ್

ಇಸ್ರೋ ಚಾರಿತ್ರಿಕ ನಡಿಗೆಯೂ ಚಂದ್ರಯಾನದ ಕನಸೂ- ಭಾಗ 7

ಇಸ್ರೋ ಚಾರಿತ್ರಿಕ ನಡಿಗೆಯೂ ಚಂದ್ರಯಾನದ ಕನಸೂ- ಭಾಗ 7

ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸೂಚನೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್‌

ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸೂಚನೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist