• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಿದ್ದರಾಮಯ್ಯರನ್ನು ತೆಗಳುತ್ತಾ ಯಡಿಯೂರಪ್ಪಗೂ ತಿವಿದ್ರಾ B.L ಸಂತೋಷ್​..?

ಕೃಷ್ಣ ಮಣಿ by ಕೃಷ್ಣ ಮಣಿ
April 24, 2023
in ಅಂಕಣ
0
ಸಿದ್ದರಾಮಯ್ಯರನ್ನು ತೆಗಳುತ್ತಾ ಯಡಿಯೂರಪ್ಪಗೂ ತಿವಿದ್ರಾ B.L ಸಂತೋಷ್​..?
Share on WhatsAppShare on FacebookShare on Telegram

ಸಿದ್ದರಾಮಯ್ಯರನ್ನು ತೆಗಳುತ್ತಾ ಯಡಿಯೂರಪ್ಪಗೂ ತಿವಿದ್ರಾ B.L ಸಂತೋಷ್​..?

ADVERTISEMENT

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ 2018 ರಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ ಶಾಸಕ ಡಾ ಯತೀಂದ್ರ ಈ ಬಾರಿ ಸಿದ್ದರಾಮಯ್ಯಗೆ ಸೇಫ್​ ಎನ್ನುವ ಕಾರಣದಿಂದ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಇದನ್ನು ಸಿದ್ದರಾಮಯ್ಯ ತ್ಯಾಗ ಮಾಡಿದ್ದಾನೆ ಎಂದು ಎಲ್ಲಿಯೂ ಬಣ್ಣಿಸಿಲ್ಲ ಅದು ಬೇರೆ ವಿಚಾರ. ಇದೇ ರೀತಿ ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಎಸ್​ ಯಡಿಯೂರಪ್ಪ ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರವನ್ನು ತನ್ನ ಮಗ ಬಿ.ವೈ ವಿಜಯೇಂದ್ರಗೆ ಬಿಟ್ಟು ಕೊಟ್ಟಿದ್ದಾರೆ. ಬಿ.ಎಸ್​ ಯಡಿಯೂರಪ್ಪ ಕೂಡ ನಾನು ತ್ಯಾಗ ಮಾಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿದ್ದಿಲ್ಲ. ನನಗೆ ಹೇಗೆ ಬೆಂಬಲವಾಗಿ ನಿಂತ್ತಿದ್ದಿರೋ ಅದೇ ರೀತಿ ವಿಜಯೇಂದ್ರನನ್ನು ಬೆಳೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ಬಿ.ಎಲ್​ ಸಂತೋಷ್​ ಮಾತ್ರ ಯಡಿಯೂರಪ್ಪ ಮೇಲೆ ಕತ್ತಿ ಮಸೆಯುವಂತೆಯೇ ಕಾಣಿಸುತ್ತಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಯತೀಂದ್ರ ತ್ಯಾಗ ಮಾಡಿದ್ರಾ..?

ಅವರ ಮಗನ ಬಗ್ಗೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು ನಾವು. ಅವನೇನು ದೇಶ ಕಟ್ಟಿದ್ದಾರೆ. ಗಡಿಯಲ್ಲಿ ಹೋರಾಟ ಮಾಡಿದ್ದಾರೆ. ಒಲಿಂಪಿಕ್ಸ್​ನಲ್ಲಿ ಮೆಡಲ್​ ಗೆದ್ದಿದ್ದಾನೆ. ಜ್ಯೂಡೋ ವರ್ಲ್ಡ್​ ಚಾಂಪಿಯನ್​ಶಿಪ್​ನಲ್ಲಿ ಮೆಡಲ್​ ಗೆದ್ದಿದ್ದಾನೆ ಎನ್ನುವಂತೆ ಅಪ್ಪನಿಗೆ ಸೀಟ್​ ಗತಿ ಇರಲಿಲ್ಲ ಅಂತಾ ಇಲ್ಲಿ ನಿಂತ್ಕೊ ಅಂದ್ರೆ ತ್ಯಾಗ ಅಂತೆ ಎಂದು ಸಿದ್ದರಾಮಯ್ಯ ಹಾಗು ಡಾ ಯತೀಂದ್ರ ಅವರನ್ನು ಟೀಕಿಸಿದ್ದಾರೆ. ಆದರೆ ಮಾಧ್ಯಮಗಳು ಸಿದ್ದರಾಮಯ್ಯಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ, ತ್ಯಾಗವೂ ಅಲ್ಲ ಏನು ಅಲ್ಲ. ಪಕ್ಷದ ಅದೆಷ್ಟೋ ನಾಯಕರು ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ಮುಂದಾಗಿದ್ದಾರೆ. ಇದರಲ್ಲಿ ನನ್ನದು ಯಾವ ಲೆಕ್ಕ ಎಂದಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯಗೆ ಹೊಡೆಯುವಂತೆ ಮಾಡಿ ಯಡಿಯೂರಪ್ಪಗೆ ಸಂತೋಷ್​ ಕಲ್ಲು ಹೊಡೆದಿದ್ದ ಎನ್ನುವುದು ರಾಜಕೀಯವಾಗಿ ಚರ್ಚೆ ಹುಟ್ಟು ಹಾಕಿದೆ.

ತ್ಯಾಗ ಎಂದರೆ ಏನು..? ಬಿ.ಎಲ್​ ಸಂತೋಷ್​ ಬಣ್ಣನೆ..!

ರಾಜಕೀಯದಲ್ಲಿ ತ್ಯಾಗ ಎಂದರೆ ಕೆ.ಎಸ್​ ಈಶ್ವರಪ್ಪ ಅವರು ತಮ್ಮ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟು ಕೊಟ್ಟಿದ್ದಾರೆ. ತನಗೆ ಅಥವಾ ತನ್ನ ಮಗನಿಗೆ ಟಿಕೆಟ್​ ಸಿಗದಿದ್ದರೂ ಪಕ್ಷಕ್ಕಾಗಿ ದುಡಿಯುವ ತೀರ್ಮಾನ ಮಾಡಿದ್ದಾರೆ. ತ್ಯಾಗ ಎಂದರೆ ಇದು. ಮೈಸೂರಿನ ಕೆ.ಆರ್​ ಕ್ಷೇತ್ರದಲ್ಲಿ ಎಸ್​.ಎ ರಾಮದಾಸ್​​ಗೆ ಟಿಕೆಟ್​ ಸಿಗದಿದ್ದರೂ ನಾನು ಪಕ್ಷ ಬಿಟ್ಟು ಹೋಗಲ್ಲ. ನಾನು ಪಕ್ಷದಲ್ಲೇ ಉಳಿಯುತ್ತೇನೆ ಎಂದು ಹೇಳಿದ್ದಾರೆ. ತ್ಯಾಗ ಎಂದರೆ ಇದು. ಉಡುಪಿ ಜಿಲ್ಲೆಯ ಕಾಪು ವಿಧಾನಸಭೆಯಲ್ಲಿ ಗೆದ್ದು ಶಾಸಕರಾಗಿದ್ದ ಲಾಲಾಜಿ ಮೆಂಡನ್​​ ಅವರನ್ನು ತ್ಯಾಗ ಎನ್ನಬಹುದು. ಕಳೆದ ಬಾರಿ ನನಗಾಗಿ ಕೆಲಸ ಮಾಡಿದ್ದಾರೆ. ನಾನು ಈ ಬಾರಿ ಅವರನ್ನು ಗೆಲ್ಲಿಸುವ ಕೆಲಸ ಮಾಡ್ತೇನೆ ಎಂದಿದ್ದಾರೆ. ಇದನ್ನು ತ್ಯಾಗ ಎನ್ನಬಹುದು. ಅದೇ ರೀತಿ ಉಡುಪಿ ಶಾಸಕ ರಘುಪತಿ ಭಟ್​, ನಾನು ಸತ್ತ ಮೇಲೂ ನನ್ನ ಶವದ ಮೇಲೆ ಬಿಜೆಪಿ ಬಾವುಟವನ್ನೇ ಹಾಕಬೇಕು ಎಂದು ಹೇಳಿದ್ದಾರೆ. ಇದನ್ನು ತ್ಯಾಗ ಎನ್ನಬಹುದು ಎಂದಿದ್ದಾರೆ.

ಯಡಿಯೂರಪ್ಪಗೆ ಬಿ.ಎಲ್​ ಸಂತೋಷ್​ ತಿವಿದಿದ್ದು ಹೇಗೆ..?

ಮೊದಲು ಸಿದ್ದರಾಮಯ್ಯ ಅವರನ್ನು ಹಾಗು ಡಾ ಯತೀಂದ್ರ ಅವರನ್ನು ಟೀಕಿಸಿದ್ದ ಬಿ.ಎಲ್​ ಸಂತೋಷ್​ ತನ್ನ ಪಕ್ಷದ ನಾಯಕರು ತ್ಯಾಗ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇರಲ್ಲಿ ಯಡಿಯೂರಪ್ಪ ಅವರನ್ನು ಟೀಕಿಸಿದ್ದು ಹೇಗೆ ಎನ್ನುವ ಪಗ್ರಶ್ನೆ ಬರುವುದು ಸಹಜ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಒಂದೇ ವರ್ಷಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದು ತ್ಯಾಗ ಅಲ್ಲವೋ..? ತಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಘೋಷಣೆ ಮಾಡಿದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ತಾನು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ರಾಜ್ಯ ಸುತ್ತುತ್ತಿರುವುದು ತ್ಯಾಗ ಅಲ್ಲವೋ..? ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಹೈಕಮಾಂಡ್​ನಿಂದ ಸಾಕಷ್ಟು ತೊಂದರೆ ಎದುರಾದರೂ ಪಕ್ಷಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ. ಇದು ತ್ಯಾಗ ಅಲ್ಲವೋ ಎನ್ನುವುದು ಯಡಿಯೂರಪ್ಪ ಅಭಿಮಾನಿ ಬಳಗದ ಪ್ರಶ್ನೆ. ಈ ಪ್ರಶ್ನೆಗೆ ಬಿ.ಎಲ್​ ಸಂತೋಷ್​ ಉತ್ತರ ಕೊಡ್ತಾರಾ..? ಯಡಿಯೂರಪ್ಪ ಅವರದ್ದೂ ತ್ಯಾಗ ಎಂದು ಹೇಳುತ್ತಾರಾ..? ಗೊತ್ತಿಲ್ಲ. ಯಾಕಂದ್ರೆ ಸಂತೋಷ್​ ಇಲ್ಲೀವರೆಗೂ ಯಾವುದೇ ಮಾಧ್ಯಮಗಳ ಎದುರು ಹೇಳಿಲ್ಲ. ಕನಿಷ್ಟ ಪಕ್ಷ ಕಾರ್ಯಕರ್ತರ ಎದುರಲ್ಲಿ ಆದರೂ ಹೇಳಿಕೆ ನೀಡಿದರೆ ಯಡಿಯೂರಪ್ಪ ಬೆಂಬಲಿಗರಿಗೆ ಖುಷಿ ತರುವುದು ಸತ್ಯ.

ಕೃಷ್ಣಮಣಿ

Tags: BJPBL SanthoshBY VijayendraShikaripurasiddaramaiahVarunaYathindra SiddaramaiahYeddyurappaಕಾಂಗ್ರೆಸ್​ಬಿಎಲ್​ ಸಂತೋಷ್​ಬಿಜೆಪಿಬಿವೈ ವಿಜಯೇಂದ್ರಯಡಿಯೂರಪ್ಪಯತೀಂದ್ರ ಸಿದ್ದರಾಮಯ್ಯವರುಣಶಿಕಾರಿಪುರಸಿದ್ದರಾಮಯ್ಯ
Previous Post

ʻಈ ಸಲ ಕಪ್‌ ನಮ್ದೆʼ… ಜಗದೀಶ್‌ ಶೆಟ್ಟರ್‌ಗೆ ಟಕ್ಕರ್‌ ಕೊಟ್ಟ ಪ್ರಹ್ಲಾದ್‌ ಜೋಶಿ..!  

Next Post

ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ್ರೆ ಇವರೇ ಮಿನಿಸ್ಟರ್ಸ್​…! ಯಾರು ಗೊತ್ತಾ..?

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025
Next Post
ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ್ರೆ ಇವರೇ ಮಿನಿಸ್ಟರ್ಸ್​…! ಯಾರು ಗೊತ್ತಾ..?

ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ್ರೆ ಇವರೇ ಮಿನಿಸ್ಟರ್ಸ್​…! ಯಾರು ಗೊತ್ತಾ..?

Please login to join discussion

Recent News

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada