• Home
  • About Us
  • ಕರ್ನಾಟಕ
Sunday, July 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವಾಚ್ಯ ಶಬ್ಧ ಬಳಕೆ​ ಬಗ್ಗೆ ಸಿ.ಟಿ ರವಿ ಪತ್ನಿ ಏನಂದ್ರು..?

ಕೃಷ್ಣ ಮಣಿ by ಕೃಷ್ಣ ಮಣಿ
December 21, 2024
in Top Story, ಕರ್ನಾಟಕ, ರಾಜಕೀಯ, ಶೋಧ
0
ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವಾಚ್ಯ ಶಬ್ಧ ಬಳಕೆ​ ಬಗ್ಗೆ ಸಿ.ಟಿ ರವಿ ಪತ್ನಿ ಏನಂದ್ರು..?
Share on WhatsAppShare on FacebookShare on Telegram

ಚಿಕ್ಕಮಗಳೂರು: ಮಾಜಿ ಸಚಿವ ಹಾಲಿ ಪರಿಷತ್​ ಸದಸ್ಯ ಸಿ.ಟಿ ರವಿಗೆ ಜಾಮೀನು ಮಂಜೂರು ಆಗ್ತಿದ್ದಂತೆ, ಚಿಕ್ಕಮಗಳೂರಲ್ಲಿ ಸಂಭ್ರಮ ಮನೆ ಮಾಡಿತ್ತು. ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು. ಈ ವೇಳೆ ಪೊಲೀಸರು ಹಾಗು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೀತು. ಈ ವೇಳೆ ಸಿ.ಟಿ ರವಿ ಪತ್ನಿ ಪಲ್ಲವಿ ರವಿ ಮಾಧ್ಯಮಗಳ ಜೊತೆಗೆ ಮಾತನಾಡಿ ಸಂತಸ ಹಂಚಿಕೊಂಡರು.

ADVERTISEMENT
Darshan: ಮಗ ದರ್ಶನ್‌ ನ ಭೇಟಿ ಮಾಡಿದ ತಾಯಿ..! #darshanwife #mother #sister #mysore #pratidhvani

ಸಿ.ಟಿ ರವಿ ಬಂಧನದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನನಗೆ ಇರಲಿ, ನಮ್ಮ ಕುಟುಂಬಕ್ಕೂ ಯಾವುದೇ ಮಾಹಿತಿ ಇರಲಿಲ್ಲ. ನಾನು ಮಂಗಳೂರು ಹೋಗಿದ್ದೆ. TVಯಲ್ಲಿ ನ್ಯೂಸ್ ನೋಡಿದ ಬಳಿಕ ನನಗೆ ಮಾಹಿತಿ ಗೊತ್ತಾಯ್ತು ಎಂದಿದ್ದಾರೆ. ಇನ್ನು ಗುರುವಾರ ರಾತ್ರಿಯೆಲ್ಲಾ ಪೊಲೀಸರು ಜೀಪ್​ನಲ್ಲಿ ಕೂರಿಸಿಕೊಂಡು ಸುತ್ತಿಸಿದ್ದಾರೆ. ನಾನು ರಾತ್ರಿ ಕಾಲ್ ಮಾಡಿದ್ದೆ. ಅವರು ಪ್ರತಿ ಸ್ಥಳದ ಲೊಕೇಶನ್ ಕಳಿಸಿದ್ದಾರೆ. ಯಾವುದೋ ಕಾಡು, ಯಾವುದೋ ಡ್ಯಾಂ, ಫಾರ್ಮ್​ ಹೌಸ್ ಬಳಿ ಎಲ್ಲಾ ಕರೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.

ನನ್ನ ಗಂಡ ಮಹಿಳೆಯರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ನಮ್ಮ ಮನೆಗೆ ಬರುವ ಪ್ರತಿ ಹೆಣ್ಣು ಮಕ್ಕಳನ್ನು ಗೌರವದಿಂದ ಮಾತನಾಡಿಸಿ, ಉತ್ತಮವಾಗಿ ನಡೆದುಕೊಳ್ಳುತ್ತಾರೆ. ಮಹಿಳೆಯರಿಗೆ ಗೌರವ ಕೊಡದೆ ಇರುವುದಿಲ್ಲ ಎಂದಿದ್ದಾರೆ. ಇನ್ನು ಇದೇ ವೇಳೆ ಸಿ.ಟಿ ರವಿ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಜೀವರಾಜ್​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

1989 ರಿಂದ ಸಿ.ಟಿ ರವಿಯವರನ್ನ ನಾನು ನೋಡಿದ್ದೇನೆ. ಈ ತರದ ಪದ ಬಳಸುತ್ತಾರೆಂದು ಕನಸಿನಲ್ಲೂ ನಂಬಲು ಸಾಧ್ಯವಿಲ್ಲ. ಅಧಿವೇಶನ ಮುಗಿದ ಬಳಿಕವೂ ಲೈವ್ ಕ್ಯಾಮೆರಾ ಆನ್ ಇರುತ್ತವೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ರೂ ಫೋರೆನ್ಸಿಕ್ ಲ್ಯಾಬ್ ನಿಂದ ವರದಿ ಬಂದ ಮೇಲೆ ನೋಡ್ತೀವಿ ಅನ್ನೋ ಸರ್ಕಾರ ಸಿ.ಟಿ ರವಿ ವಿಚಾರದಲ್ಲಿ ಹೇಗೆ ನಡೆದುಕೊಳ್ತಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಇಷ್ಟು ದೊಡ್ಡ ರಾಜಕಾರಣಿ, ಇಷ್ಟು ಕೆಟ್ಟ ಮಟ್ಟಕ್ಕೆ ಇಳಿಯುತ್ತಾರಾ..? ಎಂದು ಪ್ರಶ್ನಿಸಿದ್ದು, ಈ ಹಿಂದೆ ನೋಡಿದ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರಾ..? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಿ.ಟಿ ರವಿ ಮೇಲೆ 4 ಜನ ಸುಳ್ಳು ಆರೋಪ ಮಾಡ್ತಾರೆ. ಅವರೆಲ್ಲ ಕಾಂಗ್ರೆಸ್ ಸದಸ್ಯರು ಎಂದಿರುವ ಜೀವರಾಜ್​, ರವಿಯನ್ನ ಮಾನಸಿಕವಾಗಿ ಕುಗ್ಗಿಸುವ‌ ಪ್ರಯತ್ನ ಮಾಡಿದ್ದಾರೆ.. ಇಡೀ ಕರ್ನಾಟಕದ ಜನ, ಬಿಜೆಪಿ ಹಾಗು ಸಿ.ಟಿ ರವಿ ಪರ ನಿಲ್ಲುತ್ತೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ತಪ್ಪು ಮಾಡದಿರುವ ರಾಮ , ಧರ್ಮರಾಯರೇ ವನವಾಸಕ್ಕೆ ಹೋಗಿದ್ದಾರೆ. ಮನಸಿಗೆ ಬಂದಂತೆ ಮಾಡಬಹುದು ಎಂಬ ಕಲ್ಪನೆಯಲ್ಲಿದ್ದವರಿಗೆ ನ್ಯಾಯಾಲಯ ಸರಿಯಾದ ಪಾಠ ಕಲಿಸಿದೆ. ಅನಿವಾರ್ಯ ಕಾರಣಗಳಿಂದ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಸರ್ಕಾರ ಹೀಗೆಯೇ ಇರಲ್ಲ ಇದನ್ನ ಪೊಲೀಸ್ ಅಧಿಕಾರಿಗಳು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಹಣೆಯಲ್ಲಿ ರಕ್ತ ಬರ್ತಿದ್ರೂ ಟೆರರಿಸ್ಟ್​ಗಳಿಗೆ ಬಿರಿಯಾನಿ ‌ಕೊಡೋದನ್ನ ನೋಡಿದ್ದೆ. ಅವರ ಅಣ್ತಮ್ಮಂದಿರೇ ಬಾಂಬ್ ಇಟ್ಟವರು. ರವಿ ದೇಶ ಬಿಟ್ಟು ಹೋಗುವ ಕ್ಯಾರೆಕ್ಟರ್ ಏನು ಅಲ್ಲ. ಗಡಿಬಿಡಿಯಲ್ಲಿ ಎಳೆದೊಯ್ಯುವ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನ ದೃಷ್ಟಿಯಲ್ಲಿ ಇದೊಂದು ಹಕ್ಕು ಚ್ಯುತಿ ಮಂಡಿಸಲು ಯೋಗ್ಯವಾದ ಪ್ರಕರಣ. ಇದನ್ನ ಸರ್ಕಾರವೇ ಮಾಡಿಸಿದೆ, ಮಂತ್ರಿಗಳೇ ಶಾಮೀಲಾಗಿದ್ದಾರೆ. ಸರ್ಕಾರ ಹಾಗೂ ಕಾಂಗ್ರೆಸ್ ಸಂಸ್ಕೃತಿಯೇ ಆ ರೀತಿ ಇದೆ ಎಂದು ಮಾಜಿ ಸಚಿವ‌ ಡಿ.ಎನ್ ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: Arrestbjp mlc arrestc t ravi arrestCT Ravict ravi arrestct ravi arrest newsct ravi arrest videosct ravi arrestedct ravi lakshmi hebbalkarct ravi latest newsct ravi on darshan arrestct ravi on lakshmi hebbalkarct ravi protestct ravi statement on lakshmi hebbalkarct ravi vs lakshmi hebbalkarlakshmi hebbalkar allegation on ct ravipolice arrest ct ravipolice arrest ct ravi in suvarna soudha
Previous Post

C.T ರವಿಗೆ ಹೈಕೋರ್ಟ್​ನಿಂದ ಜಾಮೀನು.. ಸರ್ಕಾರಕ್ಕೆ ಮುಜುಗರನಾ..?

Next Post

ಪೊಲೀಸರ ಬಂಧನದಿಂದ ಮುಕ್ತಿ ಪಡೆದ ಸಿ.ಟಿ ರವಿ ಹೇಳಿದ್ದೇನು..?

Related Posts

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ  ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 
Top Story

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 

by Chetan
July 20, 2025
0

ಬೆಂಗಳೂರಿನ (Bengaluru) ಭಾರತಿನಗರದಲ್ಲಿ ನಡೆದ ರೌಡಿಶೀಟರ್ (Rowdysheetar ) ಬಿಕ್ಲು ಶಿವ (Biklu shiva) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ತನಿಖೆ ನಡೆಸುತ್ತಿರುವ ಪೊಲೀಸರು ಜಗ್ಗ ಮತ್ತು...

Read moreDetails
ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

July 20, 2025
ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 

ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 

July 20, 2025
ಡಿಸಿಎಂ ದೆಹಲಿಗೆ ಬಂದಿದ್ದೇಕೆ..?! ಹೈಕಮ್ಯಾಂಡ್ ತಲೆ ಕೆಡಿಸಿದ ಡಿಕೆ ನಿಗೂಢ ನಡೆ..! 

ಧಿಡೀರ್ ದೆಹಲಿ ಪ್ರವಾಸ  – ಮಧ್ಯರಾತ್ರಿ ಬೆಂಗಳೂರಿಗೆ ವಾಪಸ್..! – ಡಿಕೆಶಿ ಭೇಟಿ ರಹಸ್ಯ ಟಾಪ್ ಸೀಕ್ರೆಟ್..?!

July 20, 2025
ಸಮಾಜ ಸುಧಾರಣೆಯತ್ತ ಹೊಸ ಹೆಜ್ಜೆ –ಅರಿವು ಭಾರತ

ಸಮಾಜ ಸುಧಾರಣೆಯತ್ತ ಹೊಸ ಹೆಜ್ಜೆ –ಅರಿವು ಭಾರತ

July 20, 2025
Next Post
ಪೊಲೀಸರ ಬಂಧನದಿಂದ ಮುಕ್ತಿ ಪಡೆದ ಸಿ.ಟಿ ರವಿ ಹೇಳಿದ್ದೇನು..?

ಪೊಲೀಸರ ಬಂಧನದಿಂದ ಮುಕ್ತಿ ಪಡೆದ ಸಿ.ಟಿ ರವಿ ಹೇಳಿದ್ದೇನು..?

Recent News

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ  ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 
Top Story

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 

by Chetan
July 20, 2025
ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ
Top Story

ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

by ಪ್ರತಿಧ್ವನಿ
July 20, 2025
ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 
Top Story

ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 

by Chetan
July 20, 2025
ಡಿಸಿಎಂ ದೆಹಲಿಗೆ ಬಂದಿದ್ದೇಕೆ..?! ಹೈಕಮ್ಯಾಂಡ್ ತಲೆ ಕೆಡಿಸಿದ ಡಿಕೆ ನಿಗೂಢ ನಡೆ..! 
Top Story

ಧಿಡೀರ್ ದೆಹಲಿ ಪ್ರವಾಸ  – ಮಧ್ಯರಾತ್ರಿ ಬೆಂಗಳೂರಿಗೆ ವಾಪಸ್..! – ಡಿಕೆಶಿ ಭೇಟಿ ರಹಸ್ಯ ಟಾಪ್ ಸೀಕ್ರೆಟ್..?!

by Chetan
July 20, 2025
ಸಮಾಜ ಸುಧಾರಣೆಯತ್ತ ಹೊಸ ಹೆಜ್ಜೆ –ಅರಿವು ಭಾರತ
Top Story

ಸಮಾಜ ಸುಧಾರಣೆಯತ್ತ ಹೊಸ ಹೆಜ್ಜೆ –ಅರಿವು ಭಾರತ

by ಪ್ರತಿಧ್ವನಿ
July 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ  ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 

July 20, 2025
ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

July 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada