• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾಯಿ ಪಲ್ಲವಿ ವಿರುದ್ಧ ಮತ್ತೆ ಭುಗಿಲೆದ್ದ ಆಕ್ರೋಶ: ಅಮರನ್‌, ರಾಮಾಯಣ ಚಿತ್ರಕ್ಕೂ ಕಂಟಕ?

ಪ್ರತಿಧ್ವನಿ by ಪ್ರತಿಧ್ವನಿ
October 28, 2024
in Top Story, ದೇಶ, ಸಿನಿಮಾ
0
ಸಾಯಿ ಪಲ್ಲವಿ ವಿರುದ್ಧ ಮತ್ತೆ ಭುಗಿಲೆದ್ದ ಆಕ್ರೋಶ: ಅಮರನ್‌, ರಾಮಾಯಣ ಚಿತ್ರಕ್ಕೂ ಕಂಟಕ?
Share on WhatsAppShare on FacebookShare on Telegram

2022 ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಬಹುಭಾಷಾ ನಟಿ ಸಾಯಿ ಪಲ್ಲವಿ ನೀಡಿದ್ದ ಸಂದರ್ಶನವೊಂದರ ತುಣುಕು ಮತ್ತೆ ಮುನ್ನಲೆಗೆ ಬಂದಿದ್ದು, ವಿವಾದವನ್ನು ಹುಟ್ಟು ಹಾಕಿದೆ.

ADVERTISEMENT

ಬಲಪಂಥೀಯ ನೆಟ್ಟಿಗರು ನಟಿಯ ಚಿತ್ರಗಳ ವಿರುದ್ಧ ಬಾಯ್ಕಾಟ್‌ ಕರೆ ನೀಡಿದ್ದು, ಹಿಂದೂ ವಿರೋಧಿ ನಟಿ ರಾಮಾಯಣ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಬಾರದೆಂಬ ಕೂಗು ಕೇಳಿ ಬಂದಿದೆ. ಅಲ್ಲದೆ, ನಟಿ ಅಭಿನಯಿಸಿದ ಭಾರತೀಯ ಸೈನಿಕರ ಕುರಿತಾದ ಚಿತ್ರ ʼಅಮರನ್ʼ ಬಹಿಷ್ಕಾರಕ್ಕೂ ಆನ್‌ಲೈನ್‌ ನಲ್ಲಿ ಅಭಿಯಾನ ಆರಂಭವಾಗಿದೆ.

ಈ ಹಿಂದೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಕುರಿತು ಮಾತನಾಡಿದ್ದ ನಟಿ, ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾದ ಭಯೋತ್ಪಾದನೆ ಮತ್ತು ಗೋ ಸಾಗಾಟಗಾರರು ಎಂಬ ಅನುಮಾನದಲ್ಲಿ ಮುಸ್ಲಿಮರ ಮೇಲೆ ನಡೆಯುವ ಹಲ್ಲೆಗಳೂ ತಪ್ಪು ಎಂದು ಹೇಳಿದ್ದರು. ಗೋಸಾಗಣಿಕೆದಾರನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆತನ ಹತ್ಯೆ ನಡೆದ ಘಟನೆಯನ್ನು ಉಲ್ಲೇಖಿಸಿದ್ದ ನಟಿ ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಈ ಘಟನೆಗೂ ಏನು ವ್ಯತ್ಯಾಸವಿದೆ? ಎಲ್ಲಾ ರೀತಿಯ ಹಿಂಸೆಯೂ ತಪ್ಪು ಎಂದು ಹೇಳಿದ್ದರು.

Why Andhbhakts Are Giving Unnecessary Hate towards #SaiPallavi ?
B cuz As per My Understanding She didn't say anything wrong abt our Army she just said According to Pakistanis not her view..
And She's against to Violence
What's wrong in this? Why #BoycottSaiPallavi ? pic.twitter.com/JTSaKtYeaf

— Dhruv (Parody) (@_dhruv_101) October 28, 2024

ಮಾತ್ರವಲ್ಲದೆ, ಪಾಕಿಸ್ತಾನ ಸೇನೆಯನ್ನು ಭಾರತೀಯರು ಭಯೋತ್ಪಾದಕರು ಎಂದು ಭಾವಿಸುವ ಹಾಗೆ, ಭಾರತೀಯ ಸೇನೆಯನ್ನು ಪಾಕಿಸ್ತಾನಿಗಳು ಉಗ್ರರು ಎಂದು ಭಾವಿಸುತ್ತಾರೆ. ಇದೆಲ್ಲಾ ದೃಷ್ಟಿಕೋನದ ಬದಲಾವಣೆ ಎಂದು ನಟಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಭಜರಂಗದಳ ಮುಖಂಡರೊಬ್ಬರು ನಟಿಯ ವಿರುದ್ಧ ದೂರು ಕೂಡಾ ನೀಡಿದ್ದರು.

ನಂತರ ಸ್ಪಷ್ಟನೆ ನೀಡಿದ್ದ ನಟಿ ಸಾಯಿ ಪಲ್ಲವಿ, ಯಾರನ್ನೂ ನೋಯಿಸುವ ಉದ್ದೇಶದಲ್ಲಿ ನಾನು ಹೇಳಿರಲಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಲ್ಲಾ ರೀತಿಯ ಹಿಂಸೆಯೂ ತಪ್ಪೇ ಎಂದು ಹೇಳಲು ನಾನು ಬಯಸಿದ್ದೆ ಎಂದು ಹೇಳಿದ್ದರು.

ಅದಾಗಿ ಎರಡು ವರ್ಷಗಳ ಬಳಿಕ ಇದೀಗ ಮತ್ತೆ ವಿವಾದಿತ ವಿಡಿಯೋ ತುಣುಕು ಮತ್ತೆ ಮುನ್ನಲೆಗೆ ಬಂದಿದ್ದು, ಸಾಯಿ ಪಲ್ಲವಿ ಅವರ ಚಿತ್ರಗಳನ್ನು ಬಹಿಷ್ಕರಿಸಬೇಕೆಂದು ಟ್ವಿಟರ್‌ ಬಳಕೆದಾರರು ಮತ್ತೊಮ್ಮೆ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿದ್ದಾರೆ.

I wanted to visit the #NationalWarMemorial before starting the promotions for #Amaran. This sacred temple, houses thousands of “brick-like-tablets” in the memory of every Braveheart, who has laid down their lives for us. I was brimming with emotions while paying respect to Major… pic.twitter.com/OdUk1m9685

— Sai Pallavi (@Sai_Pallavi92) October 27, 2024

ಶಿವಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತಮಿಳು ಚಿತ್ರ ʼಅಮರನ್‌ʼ ಅಕ್ಟೋಬರ್‌ 31 ಕ್ಕೆ ಬಿಡುಗಡೆಯಾಗಲಿದ್ದು, ಈ ಚಿತ್ರವು ಭಾರತೀಯ ಸೈನಿಕರ ಕುರಿತ ಕಥೆಯನ್ನು ಹೊಂದಿದೆ. ಈ ಚಿತ್ರದ ಪ್ರಮೋಷನ್‌ ಭಾಗವಾಗಿ ನಟಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಿದ್ದಾರೆ. ಅಲ್ಲದೆ, ದಂಗಲ್‌ ಖ್ಯಾತಿಯ ನಿತೀಶ್‌ ತಿವಾರಿ ನಿರ್ದೇಶನದ ʼರಾಮಾಯಣʼ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಿಂದ ನಟಿಯನ್ನು ಕೈಬಿಡಬೇಕೆಂದು ನೆಟ್ಟಿಗರ ಆಗ್ರಹಿಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್‌ ಕಪೂರ್‌, ಯಶ್‌ ಕೂಡಾ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆಂದು ಹೇಳಲಾಗಿದೆ.

Tags: amaranBJPBoycottSaiPallaviRamayanasai pallavitamil
Previous Post

ಮುಡಾ ಪ್ರಕರಣದ A4 ವಿಚಾರಣೆ – ED ಕಚೇರಿಗೆ ಬಂದ ದೇವರಾಜು !

Next Post

ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ,ರಾಜ್ಯಾಧ್ಯಕ್ಷರಿಂದ ಶಾಸಕ ಪ್ರಭು ಚವ್ಹಾಣರಿಗೆ ಸನ್ಮಾನ

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ,ರಾಜ್ಯಾಧ್ಯಕ್ಷರಿಂದ ಶಾಸಕ ಪ್ರಭು ಚವ್ಹಾಣರಿಗೆ ಸನ್ಮಾನ

ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ,ರಾಜ್ಯಾಧ್ಯಕ್ಷರಿಂದ ಶಾಸಕ ಪ್ರಭು ಚವ್ಹಾಣರಿಗೆ ಸನ್ಮಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada