ಬೆಂಗಳೂರು : ಭಾರತ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ ಎ ಸರಣಿಯ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾದ ಎದುರು ಸೋಲಿಗೆ ಶರಣಾಗಿದೆ. ಇದಾದ ಬಳಿಕ ಪೆವಿಲಿಯನ್ಗೆ ವಾಪಸ್ಸಾಗುತ್ತಿದ್ದ ಭಾರತ ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಶ್ರೀಲಂಕಾದ ಆಟಗಾರನ ನಡುವೆ ಗಲಾಟೆ ನಡೆದಿದೆ.

ದಂಬುಲ್ಲಾದಲ್ಲಿ ನಡೆದ ಪಂದ್ಯವು ಟೈನಲ್ಲಿ ಕೊನೆಗೊಂಡಿದ್ದರಿಂದ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ ನಲ್ಲಿ ಭಾರತ ಸೋಲು ಕಂಡಿದೆ. ಈ ಪಂದ್ಯದ ಸಮಯದಲ್ಲಿ ವೈಭವ್ ಕೋಪಗೊಂಡು ಶ್ರೀಲಂಕಾ ಆಟಗಾರನೊಂದಿಗೆ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ಉಲ್ಬಣಗೊಂಡು ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಂತರ ಪರಿಸ್ಥಿತಿಯನ್ನು ಶಾಂತಗೊಳಿಸಲು ಇತರ ಆಟಗಾರರು ಮಧ್ಯಪ್ರವೇಶ ಮಾಡಿದರು.
ಇದನ್ನೂ ಓದಿ : ಮೈಸೂರಿನ ಪಬ್ನಲ್ಲಿ ಭೀಕರ ಅಗ್ನಿ ಅವಘಡ : ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ
ಆದರೆ ಆರಂಭದಲ್ಲಿ ವೈಭವ್ ಸೂರ್ಯವಂಶಿ ಆಟದ ಬಳಿಕ ವಾಪಸ್ ಪೆವಿಲಿಯನ್ಗೆ ತೆರಳುತ್ತಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಲಂಬ ವೈಭವ್ನನ್ನು ’ಪಂದ್ಯ ಮುಗೀತು, ಇನ್ನು ಮನೆಯ ಕಡೆಗೆ ಹೋಗು’ಎಂದು ಕೆಣಕಿದ್ದಾರೆ. ಈ ವೇಳೆ ಕೋಪಗೊಂಡ ಭಾರತೀಯ ಆಟಗಾರ ಹಲಂಬ ಮೇಲೆ ಆಕ್ರೋಶ ವ್ಯಕ್ತಪಡಿಸಿ ಮುಂದೆ ಸಾಗುತ್ತಿದ್ದ ವೇಳೆ ಸ್ಥಳದಲ್ಲಿದ್ದ ಆಟಗಾರರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ಇನ್ನೂ ಆಟದ ಬಳಿಕವೂ ಕೈ ಕುಲುಕಿದಾಗಲೂ, ಸೂರ್ಯವಂಶಿ ಅಸಮಾಧಾನಗೊಂಡಂತೆ ಇದ್ದರು. ತಂಡದ ಸದಸ್ಯರು ಅವರನ್ನು ಶಾಂತಗೊಳಿಸಿ ಪೆವಿಲಿಯನ್ಗೆ ಕಳುಹಿಸಿದರು. ಪ್ರಮುಖವಾಗಿ ಐಸಿಸಿ ನಿಯಮಾವಳಿಗಳ ಪ್ರಕಾರ ಈ ರೀತಿಯ ವಿಚಾರಗಳಲ್ಲಿ ಮಂಡಳಿಯು ತಲೆ ಹಾಕುವುದಿಲ್ಲ. ಆದರೆ ಈ ಗಲಾಟೆಯು ಕ್ರೀಡಾಂಗಣದಲ್ಲಿ ನಡೆದಿರುವುದರಿಂದ ಐಸಿಸಿಯು ಇಬ್ಬರೂ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.






