ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರ ಭಾರತ ಪ್ರವಾಸ ಎರಡನೇ ದಿನಕ್ಕೆ ಕಾಲಿಟ್ಟಿದ್ದೆ. ಇಂದು ಬೆಳಗ್ಗೆಯೇ ರಾಜ್ಘಾಟ್ಗೆ ತೆರಳಿದ ಪುಟಿನ್, ಮಹಾತ್ಮ ಗಾಂಧಿಗೆ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದಾರೆ. ಬಳಿಕ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi murmu) ಮತ್ತು ಪ್ರಧಾನಿ ಮೋದಿ(Narendra Modi) ಅವರು ಸ್ವಾಗತಿಸಿಕೊಂಡಿದ್ದಾರೆ.

ಇಂದು ವ್ಲಾಡಿಮಿರ್ ಪುಟಿನ್ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರು, ́ಉಕ್ರೇನ್ ಸಂಘರ್ಷ ಆರಂಭವಾದ ದಿನದಿಂದ ನೀವು ನಿಜವಾದ ಸ್ನೇಹಿತರಾಗಿ ಎಲ್ಲವನ್ನೂ ನಮಗೆ ಮಾಹಿತಿ ನೀಡಿದ್ದೀರಿ. ಭಾರತ ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತದೆ. ನಾನು ಈ ವಿಷಯವನ್ನು ನಿಮ್ಮೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ. ರಾಷ್ಟ್ರಗಳ ಕಲ್ಯಾಣವು ಶಾಂತಿಯ ಹಾದಿಯಲ್ಲಿದೆ. ಒಟ್ಟಾಗಿ, ನಾವು ಜಗತ್ತನ್ನು ಆ ಹಾದಿಯತ್ತ ಕೊಂಡೊಯ್ಯುತ್ತೇವೆ. ಭಾರತ ಶಾಂತಿಯ ಪರವಾಗಿ ದೃಢವಾಗಿ ನಿಲ್ಲುತ್ತದೆʼ ಎಂದು ಹೇಳಿದ್ದಾರೆ.

ಇನ್ನು ʼನಾವಿಬ್ಬರು ಸುಮಾರು ಇಪ್ಪತ್ತೈದು ವರ್ಷಗಳಿಂದ ಪರಸ್ಪರ ಗೊತ್ತಿರುವವರು. ನಮ್ಮ ನಡುವೆ ಉತ್ತಮವಾದ ಸ್ನೇಹವಿದೆ. ನಮ್ಮ ನಂಬಿಕೆ ಒಂದು ದೊಡ್ಡ ಶಕ್ತಿ ಎಂದು ನಾನು ನಂಬುತ್ತೇನೆ. ಹೀಗಾಗಿ ರಷ್ಯಾ-ಉಕ್ರೇನ್ ಬಿಕ್ಕಟ್ಟು ಶಾಂತಿ ಹಾದಿಯಲ್ಲಿ ಸಾಗುತ್ತದೆ ಎನ್ನುವ ನಂಬಿಕೆ ಇದೆʼ ಎಂದು ಪ್ರಧಾನಿ ಮೋದಿ, ವ್ಲಾಡಿಮಿರ್ ಪುಟಿನ್ಗೆ ಹೇಳಿದ್ದಾರೆ.






