Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸಿದ್ದರಾಮಯ್ಯ ಸ್ಪರ್ಧೆಗೆ ಬೆಚ್ಚಿ ಬಿದ್ದ ವರ್ತೂರು ಪ್ರಕಾಶ್:‌ ಒಕ್ಕಲಿಗ, ದಲಿತ, ಕುರುಬರನ್ನು ಎತ್ತಿ ಕಟ್ಟುವ ಹುನ್ನಾರ.!

Shivakumar A

Shivakumar A

January 18, 2023
Share on FacebookShare on Twitter

ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬುದು ಬಹುತೇಕ ಅಧಿಕೃತಗೊಂಡ ಬಳಿಕ ವರ್ತೂರು ಪ್ರಕಾಶ್‌ ಹತಾಶರಾಗಿರುವ ಹಾಗೆ ವರ್ತಿಸುತ್ತಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಬರುವುದಾದರೆ ಕೋಲಾರಕ್ಕೆ ಬರಲಿ ಎಂದು ಸಾರ್ವಜನಿಕವಾಗಿ ತೊಡೆ ತಟ್ಟಿದ್ದ ವರ್ತೂರು ಈಗ ತಮ್ಮ ವರಸೆಯನ್ನು ಬದಲಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದಿರುವ ವರ್ತೂರು, ತಾನು ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸದಂತೆ ತನಗೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ವಿಮಾನ ನಿಲ್ದಾಣಕ್ಕೆ ಯಾರ ಹೆಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿ.ಕೆ. ಶಿವಕುಮಾರ್

D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews

ಬ್ರಾಹ್ಮಣ ಸಮೂಹವನ್ನು ನಾನು ನಿಂದಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಸಿದ್ಧರಾಮಯ್ಯ ಸ್ಪರ್ಧೆಗೆ ಬೆದರಿದಂತೆ ವರ್ತಿಸಿದ ವರ್ತೂರು ಪ್ರಕಾಶ್‌, ದಲಿತ, ಒಕ್ಕಲಿಗರನ್ನು ಸಿದ್ಧರಾಮಯ್ಯ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪರ ಸಹಾನುಭೂತಿ ತೋರಿ ಒಕ್ಕಲಿಗರ ಮನಸ್ಸು ಗೆಲ್ಲಲು ಪ್ರಯತ್ನಿಸಿರುವ ವರ್ತೂರು, ಖರ್ಗೆ, ಪರಮೇಶ್ವರ್‌ ಪರ ಬ್ಯಾಟಿಂಗ್‌ ಮಾಡಿ ದಲಿತರ ಮನಸೆಳೆಯಲು ಪ್ರಯತ್ನಿಸಿದ್ದಾರೆ.

ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವರ್ತೂರು ಪ್ರಕಾಶ್‌, “ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ತೇಜೋವದೆ ಮಾಡಲಾಗುತ್ತಿದೆ. ತಾನು ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸದಂತೆ ತನಗೆ ಒತ್ತಡ ಹಾಕಲಾಗುತ್ತಿದೆ” ಎಂದು ಹೇಳಿದ್ದಾರೆ.

“ಯಾವ ಯಾವ ಪಕ್ಷದವರು ಎಲ್ಲೆಲ್ಲಿ ಹೋಗ್ತಿದ್ದಾರೆ ಅಂತ ಗೊತ್ತು.ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಗ್ರಾಮಗಳಲ್ಲಿ ವರ್ತೂರು ಪ್ರಕಾಶ್ ಮೇಲೆ ಪ್ರೀತಿಯಿಂದ ವಲಸೆ ಬರುತ್ತಿದ್ದಾರೆ, ಅದರಲ್ಲಿ ಹೆಚ್ಚಾಗಿ ಜೆಡಿಎಸ್ ನವರು ಬಿಜೆಪೆ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ನನಗೆ ಈ ಕ್ಷಣದವರೆಗೂ ಯಾರು ರಾಜಕೀಯ ಗುರು ಇಲ್ಲ. ನನ್ನ ಸ್ವಂತ ಶಕ್ತಿ ಇಂದ ನಾನು ಗೆದ್ದಿದ್ದು,  ಮಂತ್ರಿಯಾಗಿದ್ದೇನೆ” ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸ್ವಂತ ನಿರ್ದಾರದಿಂದ ಕೋಲಾರಕ್ಕೆ ಬರುತ್ತಿದ್ದಾರೆ.ನಾನೇನು ಅವರನ್ನ ಕೋಲಾರಕ್ಕೆ ಬನ್ನಿ ಎಂದು ಕರೆದಿಲ್ಲ. ಕೋಲಾರಕ್ಕೆ ಬರುವ ಮೊದಲು ಅವರ ಮೇಲೆ ಅಪಾರ ಗೌರವ ಇತ್ತು, ಜ.೯ ರಂದು ಅವರ ಮೇಲೆ ಇದ್ದ ಗೌರವ  ಕಳೆದುಕೊಂಡ್ರು ಕೋಲಾರ ಕ್ಷೇತ್ರದಲ್ಲಿ ಕುರುಬ ಸಮುದಾಯ ವರ್ತೂರು ಪ್ರಕಾಶ್ ಜೊತೆ ಇದ್ದಾರೆ, ನಾನು   ೨೦೦೮ ರಲ್ಲಿ ಕೋಲಾರಕ್ಕೆ ಬಂದಾಗ ೧೦% ನಮ್ಮ ಸಮುದಾಯ ನನ್ನ ಜೊತೆಗಿತ್ತು. ಕೆಲವರು ನನಗೆ  ವಿರೋಧಾನೇ, ನನಗೆ ಮತಗಳು  ಇರುವುದು ಹಳ್ಳಿಗಳಲ್ಲಿ. ನನಗೀಗ ಮೂರು ದಿನದಿಂದ ಆನೆ ಬಂದಿದೆ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ರನ್ನು ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದ ವರ್ತೂರು, “ಸಿದ್ದರಾಮಯ್ಯ ವಿರುದ್ದ ದಲಿತ ಸಂಘಟನೆಗಳು ಹ್ಯಾಡ್ ಬಿಲ್ ಹಂಚುತ್ತಿದ್ದಾರೆ. ಪರಮೇಶ್ವರ, ಖರ್ಗೆ, ಸೇರಿದಂತೆ ಇತರ ದಲಿತರ ನಾಯಕರನ್ನು ತುಳಿದ ಸಿದ್ದರಾಮಯ್ಯ ವಿರುದ್ದ ಕರಪತ್ರ ಹಂಚುತ್ತಿದ್ದಾರೆ, ವಿಎಲ್.ಪಾಟೀಲ್, ಅವರ ಮಗ ಹನುಮಂತರಾವ್ ಪಾಟೀಲ್ ವಿವೇಕ್ ರಾವ್ ಪಾಟೀಲ್ ತಲೆ ಎತ್ತದೇ ಮಾಡಿದ್ದು ಸಿದ್ದರಾಮಯ್ಯ. ದಲಿತರಿಗೆ ಗೊಲ್ಲರಿಗೆ, ಕುರುಬರಿಗೆ ಮೋಸ ಮಾಡಿದ್ದು ಸಿದ್ದರಾಮಯ್ಯ. ಇವರ್ಯಾರು ಸಿದ್ದರಾಮಯ್ಯರಿಗೆ ಓಟ್ ಹಾಕೋದಿಲ್ಲ” ಎಂದು ಹೇಳಿದ್ದಾರೆ.

ಇದರ ನಡುವೆ ಸಿದ್ದರಾಮಯ್ಯರಿಗೆ ಸವಾಲು ಹಾಕಿದ ಪ್ರಕಾಶ್‌, “ಯೂ ಟರ್ನ್ ಹೊಡಿಬಾರದು. ನಿಮ್ಮ ತಾಕತ್ ತೋರಿಸಬೇಕು. ನನ್ನ ಪರವಾಗಿ ಪ್ರಚಾರಕ್ಕೆ ಇಡೀ ರಾಜ್ಯದಿಂದ ೫೦ ಸಾವಿರ ಜನ  ನಮ್ಮ ಸಮಾಜದ ಜನ ಬರ್ತಾರೆ” ಎಂದು ಹೇಳಿದ್ದಾರೆ.

ಒಕ್ಕಲಿಗರ ಗಮನ ಸೆಳೆಯಲು ನಿಖಿಲ್‌ರನ್ನು ಎಳೆದು ತಂದಿರುವ ವರ್ತೂರು, “ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ  ಮುಗಿಸಿದ್ದು ಸಹ ಇದೇ ಸಿದ್ದರಾಮಯ್ಯ. ಮೊಳಕೆಯಲ್ಲೇ ನಿಖೀಲ್ ಕುಮಾರಸ್ವಾಮಿನಾ ತುಳಿದಿದ್ದಾರೆ “ ಎಂದು ಜೆಡಿಎಸ್ ಪರ ಸಹಾನುಭೂತಿಯನ್ನು  ವರ್ತೂರು ಪ್ರಕಾಶ್ ತೋರಿದ್ದಾರೆ.

ರಾಜಕೀಯ ಪ್ರಾರಂಭ ಮಾಡಿ ಬೆಳೆದ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದಿಸೋ ತೀರ್ಮಾನ ಸ್ವಂತದ್ದು.ನನ್ನನ್ನ ಮುಗಿಸಬೇಕು ಅಂತನೇ ವೈಯುಕ್ತಿವಾಗಿ ಕೋಲಾರಕ್ಕೆ  ಬರ್ತಿದ್ದಾರೆ, ಕೋಲಾರದಲ್ಲಿ ಅಲ್ಲದೇ ರಾಜ್ಯದಲ್ಲೇ ಈ ಬಾರಿ ಸಿದ್ದರಾಮಯ್ಯರಿಗೆ ರಾಜಕೀಯ ಅಂತ್ಯ ಹಾಗುತ್ತೆ, ಇಲ್ಲಿನ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯ ಗೆ ಮಾಹಿತಿ ಈಗಾಗಲೇ ಹೋಗಿರುತ್ತದೆ ಹಾಗಾಗಿ ಕೋಲಾರದಿಂದ ಯೂ ಟರ್ನ್ ಹೊಡಿತಾರೆ  ಅಂತ ನನ್ನ ಅನಿಸಿಕೆ, ಸಿದ್ದರಾಮಯ್ಯ ನೀನು ಕೋಲಾರಕ್ಕೆ ಬಂದು ಬೆಂಕಿ ಇಟ್ಟಿದ್ದೀಯಾ, ಚುನಾವಣೆಗೆ ಯೂ ಟರ್ನ್ ಹೊಡಿಯದೇ ಕೋಲಾರದಲ್ಲಿ ನೀನೇ ಇಟ್ಟಿರುಬ ಬೆಂಕಿಯಲ್ಲಿ ಬೇಯಬೇಕು, ನಮ್ಮ ಸಮುದಾಯದಲ್ಲಿ ಒಡಕು ಇಲ್ಲ‌,  ಸಿದ್ದರಾಮಯ್ಯ ಪರ ಯಾರು ಹೋಗಲ್ಲ, ನಾನು ಹೈವೋಲ್ಟೇಜ್ ಹಾಗೂ ಹಸಿದ ಹೆಬ್ಬುಲಿ,  ನನ್ನ ಬಳಿ ಯಾರು ಬರೋಕೆ ಜಾನ್ಸೇ ಇಲ್ಲ, ರಾಜಿ ಸಂಧಾನನೇ ಇಲ್ಲ ಮಾತೂ ಸಹ ಇಲ್ಲ ಎಂದು ವರ್ತೂರು ಪ್ರಕಾಶ್‌ ಹೇಳಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

D. K. Shivakumar : ಕೆಲವೊಂದು ಕ್ಷೇತ್ರದಲ್ಲಿ ನೀವು ಗೆಲ್ಲೋದು ಸವಾಲಾಗಿದ್ಯಾ..! | Pratidhvani
ರಾಜಕೀಯ

D. K. Shivakumar : ಕೆಲವೊಂದು ಕ್ಷೇತ್ರದಲ್ಲಿ ನೀವು ಗೆಲ್ಲೋದು ಸವಾಲಾಗಿದ್ಯಾ..! | Pratidhvani

by ಪ್ರತಿಧ್ವನಿ
February 2, 2023
ನಾಗರಿಕ ಮೌಲ್ಯಗಳು ವ್ಯಕ್ತಿಗತ ನೈತಿಕತೆಗಳ ನಡುವೆ
ಅಂಕಣ

ನಾಗರಿಕ ಮೌಲ್ಯಗಳು ವ್ಯಕ್ತಿಗತ ನೈತಿಕತೆಗಳ ನಡುವೆ

by ನಾ ದಿವಾಕರ
February 3, 2023
ಟರ್ಕಿ, ಸಿರಿಯಾದಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರಬಲ ಮೂರು ಭೂಕಂಪ | TARKI | SIRIYA |
ವಿಡಿಯೋ

ಟರ್ಕಿ, ಸಿರಿಯಾದಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರಬಲ ಮೂರು ಭೂಕಂಪ | TARKI | SIRIYA |

by ಪ್ರತಿಧ್ವನಿ
February 7, 2023
ಮೈಸೂರು ಜಿಲ್ಲೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನಕ್ಕೆ ಶ್ರಮಿಸೋಣ: ಡಾ. ಕೆ.ವಿ.ರಾಜೇಂದ್ರ
Top Story

ಮೈಸೂರು ಜಿಲ್ಲೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನಕ್ಕೆ ಶ್ರಮಿಸೋಣ: ಡಾ. ಕೆ.ವಿ.ರಾಜೇಂದ್ರ

by ಪ್ರತಿಧ್ವನಿ
February 8, 2023
ಟಾಂಗ್ ಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟ ಗುಡುಗಿದ ಮೋದಿ..!
ಅಂಕಣ

ಟಾಂಗ್ ಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟ ಗುಡುಗಿದ ಮೋದಿ..!

by ಪ್ರತಿಧ್ವನಿ
February 9, 2023
Next Post
ನಾವು ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತ ಅಕ್ಕಿ: ಸಿದ್ದರಾಮಯ್ಯ

ನಾವು ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತ ಅಕ್ಕಿ: ಸಿದ್ದರಾಮಯ್ಯ

CM Basavaraj Bommai : ಲಂಬಾಣಿ ಜನಾಂಗಕ್ಕೆ ಹಕ್ಕು ಪಾತ್ರ ನೀಡುವ ಬೃಹತ್ ಕಾರ್ಯಕ್ರಮ..! | Lambani | Pratidhavni

CM Basavaraj Bommai : ಲಂಬಾಣಿ ಜನಾಂಗಕ್ಕೆ ಹಕ್ಕು ಪಾತ್ರ ನೀಡುವ ಬೃಹತ್ ಕಾರ್ಯಕ್ರಮ..! | Lambani | Pratidhavni

Siddaramaiah : ಸಿದ್ದು ಟ್ರೋಲ್​ ಆದ ವಿಡಿಯೋ ಬಗ್ಗೆ ಫಸ್ಟ್ ರಿಯಾಕ್ಷನ್..! | Pratidhvani

Siddaramaiah : ಸಿದ್ದು ಟ್ರೋಲ್​ ಆದ ವಿಡಿಯೋ ಬಗ್ಗೆ ಫಸ್ಟ್ ರಿಯಾಕ್ಷನ್..! | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist