• Home
  • About Us
  • ಕರ್ನಾಟಕ
Sunday, November 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

1960ರ ಬಳಿಕ‌ ಮೊದಲ ಬಾರಿ‌ ಕುಸಿದ ಚೀನಾದ ಜನಸಂಖ್ಯೆ: ಸದ್ಯದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ

ಫಾತಿಮಾ by ಫಾತಿಮಾ
January 18, 2023
in ದೇಶ
0
1960ರ ಬಳಿಕ‌ ಮೊದಲ ಬಾರಿ‌ ಕುಸಿದ ಚೀನಾದ ಜನಸಂಖ್ಯೆ: ಸದ್ಯದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ
Share on WhatsAppShare on FacebookShare on Telegram

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾ ಕಳೆದ ವರ್ಷ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಳೆದ ವರ್ಷ ತನ್ನ ಜನಸಂಖ್ಯೆಯಲ್ಲಿ ಇಳಿಕೆಯನ್ನು ದಾಖಲಿಸಿದೆ ಎಂದು  ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ (ಎನ್‌ಬಿಎಸ್) ಮಂಗಳವಾರ ಬಹಿರಂಗಪಡಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, ಚೀನಾದ ಜನಸಂಖ್ಯೆಯು 2022 ರ ಕೊನೆಯಲ್ಲಿ ಸುಮಾರು 1,411,750,000 (1.4 ಶತಕೋಟಿ) ಇತ್ತು.  ಇದು ಹಿಂದಿನ ವರ್ಷದ ಅಂತ್ಯಕ್ಕಿಂತ ಸುಮಾರು 8,50,000 ಕಡಿಮೆ.

ADVERTISEMENT

ಈ ಕುಸಿತವು ಚೀನಾ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ  ಸಾಧ್ಯತೆಗಳಿವೆ. ಇದಕ್ಕೆ ಪ್ರಬಲ ಪುರಾವೆಯಾಗಿ ಜನಸಂಖ್ಯಾ ಪ್ರಮಾಣ ಕುಸಿದ 2022ರಲ್ಲಿ ಚೀನಾ ಕೇವಲ 3 ಪ್ರತಿಶತದಷ್ಟು ಅಭಿವೃದ್ಧಿಯನ್ನು ಮಾತ್ರ ದಾಖಲಿಸಿದೆ. ಇದು ಈ ನಲುವತ್ತು ವರ್ಷಗಳಲ್ಲಿ ಅತ್ಯಂತ ದುರ್ಬಲ ಪ್ರಗತಿಯಾಗಿರುತ್ತದೆ ಎಂದು ಸರ್ಕಾರದ ಅಧಿಕೃತ  ಅಂಕಿಅಂಶಗಳು ಹೇಳಿವೆ. ಜೊತೆಗೆ ಪ್ರಸ್ತುತ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ  ರಾಷ್ಟ್ರವಾಗಿರುವ ಭಾರತವು ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದೆ ಎಂದೂ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

 ರಾಯಿಟರ್ಸ್ ವರದಿಯ ಪ್ರಕಾರ, ಚೀನಾದ ಬೈದು (Baidu) ಸರ್ಚ್ ಇಂಜಿನ್‌ನಲ್ಲಿ ಬೇಬಿ ಸ್ಟ್ರಾಲರ್‌ಗಳಿಗಾಗಿ 2022ರಲ್ಲಿ ಮಾಡಿರುವ ಆನ್ ಲೈನ್ ಹುಡುಕಾಟಗಳು ಶೇಕಡಾ 17 ರಷ್ಟು ಕಡಿಮೆಯಾಗಿದೆ ಮತ್ತು 2018ಕ್ಕೆ ಹೋಲಿಸಿದರೆ ಇದು ಶೇಕಡಾ 41 ರಷ್ಟು ಕಡಿಮೆ. ಇದಲ್ಲದೆ, ಮಗುವಿನ ಬಾಟಲಿಗಳ ಹುಡುಕಾಟಗಳು 2018 ಕ್ಕೆ ಹೋಲಿಸಿದರೆ ಅದರ  ಮೂರನೇ ಒಂದು ಭಾಗದಷ್ಟೂ ಇಲ್ಲ ಎಂದು ವರದಿಯು ಬೊಟ್ಟು ಮಾಡಿದೆ. ಅದೇ ಹೊತ್ತಿಗೆ ಭಾರತದಲ್ಲಿ, ಗೂಗಲ್ ಟ್ರೆಂಡ್‌ ಹೇಳುವಂತೆ 2022 ರಲ್ಲಿ ಬೇಬಿ ಬಾಟಲ್‌ಗಳ ಹುಡುಕಾಟದಲ್ಲಿ  15 ಪ್ರತಿಶತದಷ್ಟು ಜಿಗಿತವನ್ನು ತೋರಿಸಿದೆ.  ಈ ಮಧ್ಯೆ ಚೀನಾದಲ್ಲಿ ವೃದ್ಧಾಶ್ರಮಗಳಿಗಾಗಿ ನಡೆಸಿದ ಆನ್‌ಲೈನ್  ಹುಡುಕಾಟಗಳು ಕಳೆದ ವರ್ಷ ಎಂಟು ಪಟ್ಟು ಹೆಚ್ಚಾಗಿವೆ ಎನ್ನಲಾಗಿದೆ.

ಚೀನಾದ ಜನಸಂಖ್ಯಾ ಶಾಸ್ತ್ರದ ಇತಿಹಾಸವನ್ನು ಗಮನಿಸಿದರೆ  ‘ಗ್ರೇಟ್ ಲೀಪ್ ಫಾರ್ವರ್ಡ್’ ಎಂದು ಕರೆಯಲ್ಪಡುವ ಮಾವೋ ಝೆಡಾಂಗ್ ಕೃಷಿ ನೀತಿಯಿಂದ ಉಂಟಾದ ಮಹಾ ಕ್ಷಾಮವನ್ನು ದೇಶವು 1960 ರಲ್ಲಿ ಎದುರಿಸಿದಾಗ ಕೊನೆಯ ಬಾರಿಗೆ ಚೀನಾದ ಜನಸಂಖ್ಯೆಯು ಕುಸಿದಿತ್ತು. ಈಗ ಅಂತಹ ಯಾವುದೇ ಅವಘಡಗಳು ಸಂಭವಿಸದೇ ಇದ್ದರೂ 2022 ರಲ್ಲಿ ಚೀನಾವು ಪ್ರತಿ 1,000 ಜನರಿಗೆ 6.77 ಜನನ ಪ್ರಮಾಣವನ್ನು ಮಾತ್ರ ದಾಖಲಿಸಿದ್ದು ಹಿಂದಿನ ವರ್ಷದಲ್ಲಿ 7.52ಕ್ಕೆ ಹೋಲಿಸಿದರೆ ಇದು 0.75ಅಷ್ಟು ಕಡಿಮೆ ಎಂದು NBS ಹೇಳಿದೆ. ಅದೇ ರೀತಿ ಚೀನಾವು 2022ರಲ್ಲಿ  1974 ರ ನಂತರ ಹೆಚ್ಚು ಸಾವಿನ ಪ್ರಮಾಣವನ್ನು ದಾಖಲಿಸಿದ್ದು ಪ್ರತಿ 1,000 ಜನರಿಗೆ 7.37 ಸಾವುಗಳಾಗಿವೆ.  2021 ರಲ್ಲಿ ಈ ದರ 7.18 ರಷ್ಟಿತ್ತು. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು 2050 ರ ವೇಳೆಗೆ ಚೀನಾದ ಜನಸಂಖ್ಯೆಯು 109 ಮಿಲಿಯನ್‌ಗೆ ಕುಗ್ಗಲಿದೆ ಎಂದು ಯುಎನ್ ತಜ್ಞರು ಹೇಳಿದ್ದಾರೆ, ಇದು 2019 ರಲ್ಲಿ ಅವರು ಅಂದಾಜು ಮಾಡಿದ್ದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು. 

ಈ ರೀತಿಯ ಜನಸಂಖ್ಯೆಯ ಕುಸಿತಕ್ಕೆ 1980 ರ ದಶಕದಲ್ಲಿ ಹೇರಲ್ಪಟ್ಟ  ಕಟ್ಟುನಿಟ್ಟಾದ ‘ಒಂದು ಮಗುವಿನ ನೀತಿ’ ಕಾರಣವೆಂದು ಹೇಳಲಾಗಿದೆ. ಅದರ ಜೊತೆಗೆ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಮತ್ತು ಕಳೆದ ವರ್ಷ ತೆಗೆದುಹಾಕಲಾದ ‘ಶೂನ್ಯ-ಕೋವಿಡ್’ ನೀತಿಯು ಹಾನಿಯನ್ನು ಮತ್ತಷ್ಟು ಹೆಚ್ಚಿಸಿತು. ಚೀನಾದಲ್ಲಿರುವ ಜೀವನ ವೆಚ್ಚದ ಏರಿಕೆ, ಉನ್ನತ ಶಿಕ್ಷಣದ ಬೇಡಿಕೆಯೂ ಜನಸಂಖ್ಯೆಯ ಇಳಿಕೆಯಲ್ಲಿ ತನ್ನ ಕೊಡುಗೆ ನೀಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ಚೀನಾದ ಕೆಲ ಸ್ಥಳೀಯ ಸರ್ಕಾರಗಳು  ಕಡಿಮೆ ಜನನ ಪ್ರಮಾಣವನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿವೆ.  ಇವುಗಳಲ್ಲಿ ತೆರಿಗೆ ವಿನಾಯಿತಿಗಳು, ದೀರ್ಘಾವಧಿಯ ಮಾತೃತ್ವ ರಜೆ ಮತ್ತು ವಸತಿ ಸಬ್ಸಿಡಿಗಳು ಸೇರಿವೆ.  ಉದಾಹರಣೆಗೆ, ಚೀನಾದ ದಕ್ಷಿಣ ನಗರವಾದ ಶೆನ್‌ಜೆನ್ ಈಗ ಮಗುವಿಗೆ ಮೂರು ವರ್ಷ ವಯಸ್ಸಿನವರೆಗೆ ಜನನ  ಭತ್ಯೆಗಳನ್ನು ನೀಡುತ್ತದೆ.  ಪೂರ್ವದ ನಗರವಾದ ಜಿನಾನ್ ಜನವರಿ 1 ರಿಂದ ಎರಡನೇ ಮಗುವನ್ನು ಹೊಂದಿರುವ ಪ್ರತಿ ದಂಪತಿಗಳಿಗೆ ಮಾಸಿಕ 600 ಯುವಾನ್‌ಗಳನ್ನು ಪಾವತಿಸಲು ಪ್ರಾರಂಭಿಸಿದೆ.

Tags: ಜನಸಂಖ್ಯೆಭಾರತ
Previous Post

ʼನಾವು ನಮ್ಮ ಪಾಠ ಕಲಿತಿದ್ದೇವೆʼ: ಪ್ರಧಾನಿ ಮೋದಿಗೆ ಪಾಕ್‌ ಪ್ರಧಾನಿ ನೀಡಿದ ಕರೆಯೇನು?

Next Post

ಸಿದ್ದರಾಮಯ್ಯ ಸ್ಪರ್ಧೆಗೆ ಬೆಚ್ಚಿ ಬಿದ್ದ ವರ್ತೂರು ಪ್ರಕಾಶ್:‌ ಒಕ್ಕಲಿಗ, ದಲಿತ, ಕುರುಬರನ್ನು ಎತ್ತಿ ಕಟ್ಟುವ ಹುನ್ನಾರ.!

Related Posts

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ
Top Story

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

by ಪ್ರತಿಧ್ವನಿ
November 15, 2025
0

  https://youtu.be/Y21a0uwLDB8 ದೆಹಲಿ, ಅ.15: "ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಯಲ್ಲಿ...

Read moreDetails
ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

November 15, 2025
ಜಮ್ಮು-ಕಾಶ್ಮೀರದ ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ: 9 ಮಂದಿ ಸಾ**

ಜಮ್ಮು-ಕಾಶ್ಮೀರದ ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ: 9 ಮಂದಿ ಸಾ**

November 15, 2025
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎಗೆ ಭರ್ಜರಿ ಜಯಭೇರಿ..!!

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎಗೆ ಭರ್ಜರಿ ಜಯಭೇರಿ..!!

November 14, 2025

ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 14, 2025
Next Post
ಸಿದ್ದರಾಮಯ್ಯ ಸ್ಪರ್ಧೆಗೆ ಬೆಚ್ಚಿ ಬಿದ್ದ ವರ್ತೂರು ಪ್ರಕಾಶ್:‌ ಒಕ್ಕಲಿಗ, ದಲಿತ, ಕುರುಬರನ್ನು ಎತ್ತಿ ಕಟ್ಟುವ ಹುನ್ನಾರ.!

ಸಿದ್ದರಾಮಯ್ಯ ಸ್ಪರ್ಧೆಗೆ ಬೆಚ್ಚಿ ಬಿದ್ದ ವರ್ತೂರು ಪ್ರಕಾಶ್:‌ ಒಕ್ಕಲಿಗ, ದಲಿತ, ಕುರುಬರನ್ನು ಎತ್ತಿ ಕಟ್ಟುವ ಹುನ್ನಾರ.!

Please login to join discussion

Recent News

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ
Top Story

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

by ಪ್ರತಿಧ್ವನಿ
November 15, 2025
ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು
Top Story

ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

by ಪ್ರತಿಧ್ವನಿ
November 15, 2025
ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು
Top Story

ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

by ಪ್ರತಿಧ್ವನಿ
November 15, 2025
ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ
Top Story

ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

by ಪ್ರತಿಧ್ವನಿ
November 15, 2025
ಕನ್ನಡ ಚಿತ್ರರಂಗದ ನಟಿಗೆ ಕಿರುಕುಳ: ನಿರ್ಮಾಪಕ ಅರವಿಂದ್ ವೆಂಕಟೇಶ  ರೆಡ್ಡಿ ಅರೆಸ್ಟ್‌
Top Story

ನಟಿಗೆ ಕಿರುಕುಳ ಆರೋಪ: ವಿಚಾರಣೆ ವೇಳೆ ಅರವಿಂದ್ ರೆಡ್ಡಿ ಹೇಳಿದ್ದೇನು..?

by ಪ್ರತಿಧ್ವನಿ
November 15, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

November 15, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada