• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

Uttar Pradesh Election Results 2022 Live Updates: ಮ್ಯಾಜಿಕ್‌ ನಂಬರ್‌ ದಾಟಿದ ಬಿಜೆಪಿ

Any Mind by Any Mind
March 10, 2022
in ದೇಶ
0
Uttar Pradesh Election Results 2022 Live Updates: ಮ್ಯಾಜಿಕ್‌ ನಂಬರ್‌ ದಾಟಿದ ಬಿಜೆಪಿ
Share on WhatsAppShare on FacebookShare on Telegram

ಉತ್ತರಪ್ರದೇಶ ವಿಧಾನಸಭ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮ್ಯಾಜಿಕ್‌ ನಂಬರ್‌ ಗಡಿ ದಾಟಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಕೇಸರಿ ಪಕ್ಷವು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ADVERTISEMENT

ಮಪದಲನೇ ಸುತ್ತಿನ ಮತ ಎಣಿಕೆಯಲ್ಲಿ ಚುನಾವಣಾ ಆಯೋಗವು ಹಂಚಿಕೊಂಡ ಮಾಹಿತಿ ಪ್ರಕಾರ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕ್ಷೇತ್ರವಾದ ಕರ್ಹಾಲ್‌ನಲ್ಲಿ ಮುನ್ನಡೆಯಲ್ಲಿದ್ದಾರೆ ಮತ್ತು ಬಿಜೆಪಿಯ ಎಸ್‌ಪಿ ಸಿಂಗ್ ಬಘೇಲ್ ಎರಡನೇ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಎಕ್ಸಿಟ್ ಪೋಲ್‌ಗಳು ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರಕ್ಕೆ ವಿಜಯ ಎಂಬ ಭವಿಷ್ಯ ನುಡಿದಿದ್ದರೂ, ರಾಷ್ಟ್ರೀಯ ಲೋಕದಳದೊಂದಿಗಿನ ಮೈತ್ರಿಯಲ್ಲಿ ಎಸ್‌ಪಿ ತೀವ್ರ ಹೋರಾಟವನ್ನು ನಡೆಸಿತು, ಪಶ್ಚಿಮ ಬಂಗಾಳದ ಮುಖ್ಯಸ್ಥ ಸಚಿವೆ ಮಮತಾ ಬ್ಯಾನರ್ಜಿ ರಿಂದ ಬೆಂಬಲವನ್ನು ಪಡೆದಿತ್ತು.

ಗಮನಿಸಬೇಕಾದ ಕೆಲವು ಕ್ಷೇತ್ರಗಳು: ರಾಯ್ ಬರೇಲಿ – ಕಾಂಗ್ರೆಸ್ ಭದ್ರಕೋಟೆ – ಅಲ್ಲಿ ಹಾಲಿ ಶಾಸಕಿ ಅದಿತಿ ಸಿಂಗ್ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದಾರೆ; ಲಕ್ನೋ, ಯುಪಿ ರಾಜಕೀಯದ ಹೃದಯ; ವಾರಣಾಸಿ, ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ; ಮತ್ತು ಸಿರತು, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಎಸ್‌ಪಿಯ ಪಲ್ಲವಿ ಪಟೇಲ್ ವಿರುದ್ಧ ಸ್ಪರ್ಧಿಸಿದ್ದಾರೆ.

ಯುಪಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸಜ್ಜು – 01:30PM

  • 🔴 ಮಧ್ಯಾಹ್ನ 1.30ರ ವೇಳೆಗೆ ಭಾರತೀಯ ಜನತಾ ಪಕ್ಷ 267 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಏತನ್ಮಧ್ಯೆ, ಸಮಾಜವಾದಿ ಪಕ್ಷವು 131 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಕೇವಲ ಒಂದು ಸ್ಥಾನದಲ್ಲಿ ಮತ್ತು ಬಿಎಸ್ಪಿ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಬುಲ್ಡೋಜರ್ ಮುಂದು ಹೋರಾಡಲು ಅಸಾಧ್ಯ  : ಬಿಜೆಪಿ ಸಂಸದೆ ಹೇಮಾ ಮಾಲಿನಿ – 01:20PM

  • 🔴 ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿರುವಾಗ, ಸಂಸದೆ ಹೇಮಾ ಮಾಲಿನಿ, “ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು … ಬುಲ್ಡೋಜರ್ ಮುಂದೆ ಏನೂ ಬರಲು ಸಾಧ್ಯವಿಲ್ಲ .  ಸೈಕಲ್ ಅಥವಾ ಇನ್ನೇನೇ ಆದರೂ ಒಂದು ನಿಮಿಷದಲ್ಲಿ ಎಲ್ಲವನ್ನೂ ಮುಗಿಸಬಹುದು. .” ಎಂದು ಹೇಳಿದ್ದಾರೆ.

ಮೊದಲ ಮಹಿಳಾ ದಲಿತ ಸಿಎಂ, ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷ ಕಳಪೆ ಪ್ರದರ್ಶನ  – 01:15PM

  • 🔴 ದೇಶದ ಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ಮಾಯಾವತಿ ಅವರು ಉತ್ತರ ಪ್ರದೇಶ ರಾಜಕೀಯದಲ್ಲಿ ಅತ್ಯಂತ ಕಳಪಡ ಪ್ರದರ್ಶನ ಮಾಡಿದ್ದು ಮಧ್ಯಾಹ್ನದ ವೇಳೆಗೆ, BSP ಕೇವಲ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಅದರ ಮತ ಹಂಚಿಕೆ ಕೇವಲ 12.84% ಇದೆ.

ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಎಸ್‌ಪಿ  ಅಭ್ಯರ್ಥಿ ಪಲ್ಲವಿ ಪಟೇಲ್ ಅವರನ್ನು ಹಿಂದಿಕ್ಕಿದ್ದಾರೆ – 12:59PM

  • 🔴 ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರತು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಪಲ್ಲವಿ ಪಟೇಲ್ ಅವರನ್ನು 3,000 ಕ್ಕೂ ಹೆಚ್ಚು ಮತಗಳಿಂದ ಹಿಂದಿಕ್ಕಿದ್ದಾರೆ.

ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲುಗೆ ಹಿನ್ನಡೆ – 12:55PM

  • 🔴 ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಕುಶಿನಗರ ಜಿಲ್ಲೆಯ ತಮ್ಕುಹಿ ರಾಜ್ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಬಿಜೆಪಿಯ ಅಸೀಮ್ ಕುಮಾರ್ ಮುನ್ನಡೆಯಲ್ಲಿದ್ದರೆ, ಎಸ್ಪಿಯ ಉದಯ್ ನಾರಾಯಣ್ ನಂತರದ ಸ್ಥಾನದಲ್ಲಿದ್ದಾರೆ.

UP | ವಿಜಯೋತ್ಸವ ಮೆರವಣಿಗೆಗಳ ಮೇಲಿನ ನಿಷೇಧವನ್ನು ಹಿಂಪಡೆದ ಚುನಾವಣೆ ಆಯೋಗ – 12:45PM

  • 🔴 ಇತ್ತೀಚೆಗಷ್ಟೇ ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ವಿಜಯೋತ್ಸವ ಮೆರವಣಿಗೆಗೆ ವಿಧಿಸಿದ್ದ ನಿಷೇಧವನ್ನು ಚುನಾವಣಾ ಆಯೋಗ ಗುರುವಾರ ಹಿಂಪಡೆದಿದೆ.
  • 🔴 ಈ ರಾಜ್ಯಗಳಲ್ಲಿ ಕೋವಿಡ್ -19ರ ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಸಮಿತಿ, “ಎಣಿಕೆ ಸಮಯದಲ್ಲಿ ಮತ್ತು ನಂತರ ವಿಜಯ ಮೆರವಣಿಗೆಗಳ ಮಾರ್ಗಸೂಚಿಗಳನ್ನು ಸಡಿಲಿಸಲು ನಿರ್ಧರಿಸಿದೆ ಮತ್ತು ವಿಜಯಯಾತ್ರೆಯ ಮೇಲಿನ  ನಿಷೇಧವನ್ನು ಹಿಂತೆಗೆದುಕೊಂಡಿದೆ” ಎಂದು ಹೇಳಿದೆ.
  • 🔴 ಈ ಸಡಿಲಿಕೆಯು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ಅಸ್ತಿತ್ವದಲ್ಲಿರುವ ಸೂಚನೆಗಳಿಗೆ ಮತ್ತು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು ವಿಧಿಸುವ ತಡೆಗಟ್ಟುವ ಕ್ರಮಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ. (ಪಿಟಿಐ)

ಬಿಜೆಪಿ ಮುನ್ನಡೆ, ಕಾರ್ಯಕರ್ತರಿಂದ ಹೋಳಿ ಸಂಭ್ರಮಾಚಾರಣೆ –

  • 🔴 ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಲಕ್ನೋದಲ್ಲಿ ಪಕ್ಷದ ಕಚೇರಿಯ ಹೊರಗೆ ಜಮಾಯಿಸಿ ಸಂಭ್ರಮಾಚರಣೆ ನಡೆಸಿದರು.

https://twitter.com/ANINewsUP/status/1501805343114153986?s=20&t=IbPfTevB4EFewH9viIqSBw

ಜೇವರ್ನಲ್ಲಿ ಬಿಜೆಪಿಗೆ ಮುನ್ನಡೆ – 12:35 PM

  • 🔴 13ನೇ ಸುತ್ತಿನ ಮತ ಎಣಿಕೆಯ ನಂತರ ಚುನಾವಣಾ ಆಯೋಗವು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಬಿಜೆಪಿ ಶಾಸಕ ಧೀರೇಂದ್ರ ಸಿಂಗ್ ಜೇವರ್‌ನಲ್ಲಿ ಮುನ್ನಡೆಯಲ್ಲಿದ್ದಾರೆ. ರಾಷ್ಟ್ರೀಯ ಲೋಕದಳದ ಅವತಾರ್ ಸಿಂಗ್ ಭದಾನ ಅವರು 14,000 ಮತಗಳಿಂದ ಹಿನ್ನಡೆ.

ಬಿಜೆಪಿ ಟರ್ನ್ ಕೋಟ್ ಸ್ವಾಮಿ ಪ್ರಸಾದ್ ಮೌರ್ಯ 11,000 ಮತಗಳಿಂದ  ಹಿನ್ನಡೆ – 12:30PM

  • 🔴 ಒಬಿಸಿ ಸಮುದಾಯದ ನಾಯಕ ಎಂದೇ ಕರೆಯಲ್ಪಟ್ಟ ಶಾಸಕ  ಸ್ವಾಮಿ ಪ್ರಸಾದ್ ಮೌರ್ಯ ಅವರು ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಎಸ್‌ಪಿ ಸೇರಿದ್ದರು.  ಸದ್ಯ ಈಗ ಫಾಜಿಲ್‌ನಗರದಲ್ಲಿ 11,000 ಮತಗಳಿಂದ ಹಿನ್ನಡೆಯಲ್ಲಿದ್ದಾರೆ. ಬಿಜೆಪಿಯ ಸುರೇಂದ್ರ ಕುಮಾರ್ ಕುಶ್ವಾಹ ಮುನ್ನಡೆಯಲ್ಲಿದ್ದಾರೆ.

ಲಖಿಂಪುರ ಖೇರಿ | ಬಿಜೆಪಿ 8 ಸ್ಥಾನಗಳಲ್ಲಿ 7ರಲ್ಲಿ ಮುನ್ನಡೆ – 12:15PM

  • 🔴 ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಚಲಾಯಿಸಿ ಹತ್ಯೆ ಮಾಡಿದ್ದಾರೆ ಎನ್ನಲಾದ ಲಖಿಂಪುರ ಖೇರಿಯಲ್ಲಿ, ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸಮಾಜವಾದಿ ಪಕ್ಷವು ಒಂದು ಸ್ಥಾನದಲ್ಲಿ ಮುಂದಿದೆ.
  • 🔴 ರೈತರನ್ನು ಒಳಗೊಂಡ ಘಟನೆ ನಡೆದ ಟಿಕುನಿಯಾದಲ್ಲಿ ನಿಘಸನ್, ಬಿಜೆಪಿಯ ಶಶಾಂಕ್ ವರ್ಮಾ 39,975 ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಎಸ್‌ಪಿಯ ಆರ್‌ಎಸ್ ಕುಶ್ವಾಹಾ 24,527 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
  • 🔴 ಪಕ್ಕದ ಪಾಲಿಯಾದಲ್ಲಿ ಬಿಜೆಪಿಯ ಹರ್ವಿಂದರ್ ಕುಮಾರ್ ಸಾಹ್ನಿ ಅಲಿಯಾಸ್ ರೋಮಿ ಸಾಹ್ನಿ 35,805 ಮತಗಳಿಂದ ಮುನ್ನಡೆಯಲ್ಲಿದ್ದರೆ, ಎಸ್‌ಪಿಯ ಪ್ರಿತೀಂದರ್ ಸಿಂಗ್ ಕಾಕ್ಕು 34,830 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಉತ್ತರ ಪ್ರದೇಶ | ಪ್ರಮುಖ ಮುಸ್ಲಿಂ ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಮುನ್ನಡೆ – 12:00PM

ಉತ್ತರ ಪ್ರದೇಶದ ಹಲವಾರು ಪ್ರಮುಖ ಮುಸ್ಲಿಂ ಅಭ್ಯರ್ಥಿಗಳು ಗುರುವಾರ ವಿಧಾನಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಜೈಲಿನಲ್ಲಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್ ರಾಜ್ಯದ ರಾಮ್‌ಪುರ ಕ್ಷೇತ್ರದಲ್ಲಿ ಗಣನೀಯ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

  • 🔴  ರಾಂಪುರ ಕ್ಷೇತ್ರದಲ್ಲಿ ಅಜಂ ಖಾನ್ 11,083 ಮತಗಳನ್ನು ಪಡೆದರೆ, ಬಿಜೆಪಿಯ ಆಕಾಶ್ ಸಕ್ಸೇನಾ 1,198 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
  • 🔴 ಸುವಾರ್‌ನಲ್ಲಿ ಅಜಂ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ 9,367 ಮತಗಳಿಂದ ಮುನ್ನಡೆಯಲ್ಲಿದ್ದರೆ, ಬಿಜೆಪಿ ಮಿತ್ರ ಪಕ್ಷವಾದ ಅಪ್ನಾ ದಳದ ಹೈದರ್ ಅಲಿ ಖಾನ್ ಅಲಿಯಾಸ್ ಹಮ್ಜಾ ಮಿಯಾನ್ 7,598 ಮತಗಳನ್ನು ಗಳಿಸಿದ್ದಾರೆ.
  • 🔴 ಕೈರಾನಾದಲ್ಲಿ ಎಸ್‌ಪಿಯ ನಹಿದ್ ಹಸನ್ 13,486 ಮತಗಳಿಂದ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ಮೃಗಾಂಕಾ ಸಿಂಗ್ 12,515 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
  • 🔴 ಮೌ ಕ್ಷೇತ್ರದಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಚಿಹ್ನೆಯಲ್ಲಿ ಸ್ಪರ್ಧಿಸಿದ್ದ ಮಾಫಿಯಾ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ 6,585 ಮತಗಳಿಂದ ಹಿಂದುಳಿದಿದ್ದರೆ, ಬಿಜೆಪಿಯ ಅಶೋಕ್ ಕುಮಾರ್ ಸಿಂಗ್ 7,591 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
  • 🔴 ಮೊಹಮ್ಮದಾಬಾದ್‌ನಲ್ಲಿ ಎಸ್‌ಪಿ ಚಿಹ್ನೆಯಲ್ಲಿ ಸ್ಪರ್ಧಿಸಿದ್ದ ಮುಖ್ತಾರ್ ಅನ್ಸಾರಿ ಅವರ ಸೋದರಳಿಯ ಮತ್ತು ಮಾಜಿ ಶಾಸಕ ಸಿಬಗ್ತುಲ್ಲಾ ಅನ್ಸಾರಿ ಅವರ ಪುತ್ರ ಸುಹೈಬ್ ಅಲಿಯಾಸ್ ಮಣ್ಣು ಅನ್ಸಾರಿ 6,211 ಮತಗಳಿಂದ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ಹಾಲಿ ಶಾಸಕಿ ಅಲ್ಕಾ ರೈ 4,241 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
  • 🔴 ನಿಜಾಮಾಬಾದ್‌ನಲ್ಲಿ ಎಸ್‌ಪಿಯ 85 ವರ್ಷದ ಅನುಭವಿ ಆಲಂ ಬಾಡಿ 6,015 ಮತಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ಮನೋಜ್ 3,473 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬಿಎಸ್‌ಪಿಯ ಪಿಯೂಷ್ ಕುಮಾರ್ ಸಿಂಗ್ 3,413 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿ ಕ್ಯಾಂಟ್ ಮತ್ತು ಉತ್ತರದಲ್ಲಿ ಬಿಜೆಪಿ ಮುನ್ನಡೆ  ಸಾಧಿಸಿದ್ದು, ದಕ್ಷಿಣದಲ್ಲಿ ಹಿನ್ನಡೆ ಸಾಧಿಸಿದೆ – 11:45AM

  • 🔴 ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ್ದು, ವಾರಣಾಸಿ ಕಂಟೋನ್ಮೆಂಟ್ ಮತ್ತು ವಾರಣಾಸಿ ಉತ್ತರದ ಎರಡು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ, ಆದರೆ ವಾರಣಾಸಿ ದಕ್ಷಿಣದಲ್ಲಿ ಪಕ್ಷವು ಹಿನ್ನಡೆ ಅನುಭವಿಸಿದೆ.
  • 🔴 ಹೊಸದಾಗಿ ವಿಸ್ತರಿಸಿದ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ ಇತ್ತೀಚೆಗೆ ವಾರಣಾಸಿ ದಕ್ಷಿಣದಲ್ಲಿ ಚಿನ್ನದ ಲೇಪನವನ್ನು ಮಾಡಲಾಗಿದೆ.
  • 🔴 ವಾರಣಾಸಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ನೀಲಕಂಠ ತಿವಾರಿ ಅವರು 2017 ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಯೋಗಿ ಆದಿತ್ಯನಾಥ್-ಕ್ಯಾಬಿನೆಟ್ಗೆ ಕೂಡ ಸೇರ್ಪಡೆಗೊಂಡಿದ್ದರು. ಎಸ್‌ಪಿ ಅಭ್ಯರ್ಥಿ ಕಿಶನ್ ದೀಕ್ಷಿತ್ 6,146 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ತಿವಾರಿ ಅವರು ಆಡಳಿತ ವಿರೋಧಿಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ ಮತ್ತು ತಿವಾರಿ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು RSS ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿದೆ ಎಂದು ಮೂಲಗಳು ತಿಳಿಸಿವೆ.
  • 🔴 ವಾರಣಾಸಿ ಕಂಟೋನ್ಮೆಂಟ್‌ನಲ್ಲಿ ಬಿಜೆಪಿಯ ಸೌರಭ್ ಶ್ರೀವಾಸ್ತವ 2,770 ಮತಗಳಿಂದ ಮುನ್ನಡೆಯಲ್ಲಿದ್ದರೆ, ವಾರಣಾಸಿ ಉತ್ತರದಲ್ಲಿ ಪಕ್ಷದ ರವೀಂದ್ರ ಜೈಸ್ವಾಲ್ 10,153 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

Tags: BJPCongress PartyCovid 19Election Results 2022Uttar Pradeshಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿಮ್ಯಾಜಿಕ್‌ ನಂಬರ್‌ ದಾಟಿದ ಬಿಜೆಪಿ
Previous Post

Election Result | 4 ರಾಜ್ಯದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ಪಕ್ಕ!

Next Post

ಪಂಚರಾಜ್ಯ ಚುನಾವಣೆ 2022 | ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ಸಾಧ್ಯತೆ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಪಂಚರಾಜ್ಯ ಚುನಾವಣೆ 2022 | ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ಸಾಧ್ಯತೆ

ಪಂಚರಾಜ್ಯ ಚುನಾವಣೆ 2022 | ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ಸಾಧ್ಯತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada