ಗೋರಖ್ಪುರ : ಉತ್ತರ ಪ್ರದೇಶದಲ್ಲಿ (Uttarapradesh CM) ಬುಲ್ಡೋಜರ್ ಬಾಬಾ ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಇಂದಿಗೆ 51 ವರ್ಷ ತುಂಬಿದೆ. ಇವರು ತಮ್ಮ ಜನ್ಮದಿನದ ಸಂದರ್ಭದಲ್ಲಿ ಗೋರಖ್ನಾಥ್ ದೇವಾಲಯಕ್ಕೆ (Gorakhnath Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defense Minister Rajnath Singh), ( ಗೃಹ ಸಚಿವ ಅಮಿತ್ (Amith shah) ಮತ್ತು ಬಿಜೆಪಿಯ ಪ್ರಮುಖ ನಾಯಕರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

“ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿಜೀ (up cm) ಅವರಿಗೆ ಜನ್ಮದಿನದ ಶುಭಾಶಯಗಳು (Birthday). ಅವರು ಸಂಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಉತ್ತರ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಅವರು ರಾಜ್ಯದಲ್ಲಿ ತಮ್ಮ ನೆಲವನ್ನು ಸಿದ್ಧಪಡಿಸಿದ್ದಾರೆ. ದೇವರು ಅವರಿಗೆ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ,” ಎಂದು ರಾಜನಾಥ್ ಸಿಂಗ್ (Rajnath Singh) ಟ್ವೀಟ್ ಮಾಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಹಿನ್ನೆಲೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರಾಖಂಡದ (Uttarakhand) ಹಳ್ಳಿಯೊಂದರಲ್ಲಿ ಜೂನ್ 5, 1972 ರಂದು ಜನಿಸಿದರು. ಅವರು ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ ಚಳುವಳಿಯಲ್ಲಿ ಸೇರಲು ತಮ್ಮ ಮನೆಯನ್ನು ತೊರೆದು ಗೋರಖ್ಪುರದ ಗೋರಖ್ನಾಥ್ ದೇವಾಲಯದ ಮಹಂತ್ ಅವೈದ್ಯನಾಥರ ಶಿಷ್ಯರಾದರು. ಮಹಂತ್ ಅವೈದ್ಯನಾಥರ ಮರಣದ ನಂತರ ಅವರನ್ನು ಗೋರಖ್ನಾಥ್ ಮಠದ (Gorakhnath Math) ಪ್ರಧಾನ ಅರ್ಚಕರೂ ಆದರು. ಯೋಗಿ 1998ರಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದು ಗೋರಖ್ಪುರದಿಂದ ಸಂಸದರಾಗಿ ಆಯ್ಕೆಯಾದರು. ಅವರು 1998ರಿಂದ 2017 ರವರೆಗೆ ಸತತ ಐದು ಅವಧಿಗೆ ಗೋರಖ್ಪುರ ಸಂಸದರಾಗಿದ್ದರು.






